ಕೊರೊನಾ ಕುರಿತ ಗೊಂದಲವಿದ್ದರೆ ಒಂದೇ ಒಂದು ಕರೆ ಮಾಡಿ ಸಾಕು
ಬೆಂಗಳೂರು, ಏಪ್ರಿಲ್ 27:ಸಂವಾದ ಯುವ ಸಂಪನ್ಮೂಲ ಕೇಂದ್ರವು ಸಾರ್ವಜನಿಕರಿಗಾಗಿ ಕೊರೊನಾ ಸಹಾಯವಾಣಿಯನ್ನು ತೆರೆದಿದೆ.
ನಿಮ್ಮ ಮನಸ್ಸಿನಲ್ಲಿ ಕೊರೊನಾ ಕುರಿತ ಯಾವುದೇ ಗೊಂದಲಗಳಿದ್ದರೂ ಒಂದು ಕರೆ ಮಾಡುವುದರ ಮೂಲಕ ಬಗೆಹರಿಸಿಕೊಳ್ಳಬಹುದಾಗಿದೆ.ಕೊರೊನಾದಿಂದ ರಕ್ಷಣೆಗೆ ಅನುಸರಿಸಬೇಕಾದ ಕ್ರಮಗಳು, ಮಾನಸಿಕ ತಳಮಳದಿಂದ ಒತ್ತಡ ಅನುಭವಿಸುತ್ತಿರುವವರಿಗೆ ಮಾಹಿತಿ.
ನಿಮಗೆ ಆಹಾರ ಸಿಗುವುದು ಕಷ್ಟವಾಗುತ್ತಿದೆಯೇ?, ಸಾಮಾನ್ಯ ಆರೋಗ್ಯ ಸಮಸ್ಯೆಗೆ ವೈದ್ಯರ ತುರ್ತು ಸಲಹೆ ಬೇಕೇ?, ಸರ್ಕಾರದಿಂದ ನೀಡುವ ತರಕಾರಿ , ಧಾನ್ಯ, ದಿನಸಿ ಮತ್ತಿತರೆ ಸೌಲಭ್ಯಗಳ ಬಗ್ಗೆ ಮಾಹಿತಿ ಬೇಕೇ?, ಕೊರೊನಾ ಸಂದರ್ಭದಲ್ಲಿ ನೀವು ಕುಟುಂಬ ಹಿಂಸೆ ಅನುಭವಿಸುತ್ತಿದ್ದೀರಾ ಹಾಗಿದ್ದರೆ ತಪ್ಪದರೆ ಈ ನಂಬರ್ಗೆ ಕರೆ ಮಾಡಿ ಮಾಹಿತಿ ಪಡೆಯಿರಿ. ನಂಬರ್-8431390264.

ದೇಶದಲ್ಲಿ 27,892 ಕೊರೊನಾ ಸೋಂಕಿತ ಪ್ರಕರಣಗಳಿವೆ. 872 ಮಂದಿ ಮೃತಪಟ್ಟಿದ್ದಾರೆ. 6,185 ಮಂದಿ ಗುಣಮುಖರಾಗಿದ್ದಾರೆ.












Click it and Unblock the Notifications