ಡಿಸೆಂಬರ್ 9ರೊಂದಿಗೆ ಬಿಎಸ್ ವೈ ನಂಟೇನು?
ಬೆಂಗಳೂರು, ಡಿ. 1 : ಡಿಸೆಂಬರ್ 9 ಕ್ಕೂ ಮಾಜಿ ಸಿಎಂ, ಬಿಜೆಪಿ ಉಪಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೂ ಎನೋ ಸಂಬಂಧವಿದೆ. ಇದಕ್ಕೆ ಮತ್ತಷ್ಟು ಪುರಾವೆಗಳು ಸಿಗಬೇಕೆಂದರೆ ಎರಡು ವರ್ಷದ ಹಿಂದೆ ಹೋಗಬೇಕು.
ಬಿಜೆಪಿಯಿಂದ ಸಿಡಿದೆದ್ದ ಬಿಎಸ್ ವೈ 2012 ರ ಡಿಸೆಂಬರ್ 9 ರಂದು ಕರ್ನಾಟಕ ಜನತಾ ಪಕ್ಷ ಕಟ್ಟಿದ್ದರು. ಹಾವೇರಿಯಲ್ಲಿ ಭರ್ಜರಿ ಸಮಾವೇಶ ಮಾಡಿ ಮಾತೃ ಪಕ್ಷ ಬಿಜೆಪಿ ಮತ್ತು ಕಾಂಗ್ರೆಸ್ ಗೆ ಪೆಟ್ಟು ನೀಡುವ ಮಾತುಗಳನ್ನಾಡಿದ್ದರು.[ಬಿಜೆಪಿಯಿಂದ ಬೆಳಗಾವಿ ಸುವರ್ಣ ಸೌಧಕ್ಕೆ ಮುತ್ತಿಗೆ]

ನಂತರ ನಡೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಯಡಯೂರಪ್ಪಗೆ ಸಿಕ್ಕಿದ್ದು ಕೇವಲ 'ಆರು ತೆಂಗಿನಕಾಯಿ'. ಬಿಜೆಪಿ ಒಡೆದ ಮನೆಯಾಗಿದ್ದನ್ನು ತನ್ನ ಲಾಭಕ್ಕೆ ಬಳಸಿಕೊಂಡ ಕಾಂಗ್ರೆಸ್ ಅಧಿಕಾರದ ಗದ್ದುಗೆ ಮೇಲೆ ಪ್ರತಿಷ್ಠಾಪನೆಗೊಂಡಿದ್ದು ಇತಿಹಾಸ.
ಕಳೆದ ಅಂದರೆ 2013 ಡಿಸೆಂಬರ್ 9ರ ವೇಳೆಗೆ ಬಿಎಸ್ ವೈ ಮತ್ತೆ ಸುದ್ದಿಯಲ್ಲಿದ್ದರು. ಕಟ್ಟಿದ್ದ ಕೆಜೆಪಿಗೆ ಕರ್ನಾಟಕದ ಜನ ಮಣೆ ಹಾಕುವುದಿಲ್ಲ ಎಂಬುದು ಅರಿವಾಗಿತ್ತು. ಇತ್ತ ಲೋಕಸಭಾ ಚುನಾವಣೆಯೂ ಎದುರಾಗಿತ್ತು. ಎಲ್ಲವನ್ನು ಮನಗಂಡ ಬಿಎಸ್ ವೈ ಮತ್ತೆ ಬಿಜೆಪಿಗೆ ಹಿಂದಿರುಗಿದರು.[ಯಡಿಯೂರಪ್ಪಗೆ ಮತ್ತೆ ಶನಿಕಾಟ]

ಈಗ ಮತ್ತೆ ಡಿಸೆಂಬರ್ 9 ಎದುರಾಗಿದೆ. ಯಡಿಯೂರಪ್ಪ ಸುದ್ದಿಯಲ್ಲಿದ್ದಾರೆ. 50 ಸಾವಿರ ಬಿಜೆಪಿ ಕಾರ್ಯಕರ್ತರೊಂದಿಗೆ ಬೆಳಗಾವಿ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕುವುದಾಗಿ ಹೇಳಿದ್ದಾರೆ.
ತೀರ್ಥಹಳ್ಳಿ ನಂದಿತಾ ಸಾವಿನ ವೇಳೆ ಸ್ವಲ್ಪ ಮಾತಾಡಿದ್ದ ಯಡಿಯೂರಪ್ಪ ಸುಮ್ಮನೆ ಕುಳಿತುಕೊಂಡಿದ್ದರು. ಆದರೆ ಇದೀಗ ಡಿಸೆಂಬರ್ 9 ಬರುತ್ತಿದ್ದಂತೆ ಥಟ್ಟನೆ ಎದ್ದು ನಿಂತಿದ್ದಾರೆ.
ಡಿಸೆಂಬರ್ 9 ಸೋನಿಯಾ ಹುಟ್ಟುಹಬ್ಬ
ಮತ್ತೊಂದು ವಿಷಯ ಗಮನಿಸಬೇಕಾಗಿದೆ. ಡಿಸೆಂಬರ್ 9 ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಹುಟ್ಟುಹಬ್ಬ. ಯಡಿಯೂರಪ್ಪ ಕೆಜೆಪಿ ಕಟ್ಟಿದ್ದ ವೇಳೆ ಕೆಲ ಬಿಜೆಪಿ ನಾಯಕರು ಇದನ್ನಿಟ್ಟುಕೊಂಡೆ ಕುಹಕವಾಡಿದ್ದರು.
-
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
Karnataka Weather: ಕರ್ನಾಟಕದಲ್ಲಿ ಹೆಚ್ಚಿದ ಬಿಸಿಲ ಧಗೆ: ಬಳ್ಳಾರಿಯಲ್ಲಿ ಗರಿಷ್ಠ ತಾಪಮಾನ ದಾಖಲು, ಬೀದರ್ನಲ್ಲಿ ಚಳಿ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Expenses: ಬೆಂಗಳೂರು ಎಷ್ಟು ದುಬಾರಿ, ಅಮೆಜಾನ್ ಉದ್ಯೋಗಿ ಹಂಚಿಕೊಂಡ ವಾರಾಂತ್ಯದ ವೆಚ್ಚದ ವಿಡಿಯೋ ವೈರಲ್ -
Gold Rate: ಸತತ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ವಿವರ ಇಲ್ಲಿದೆ ನೋಡಿ -
Vijay Divorce: ನನ್ನ ಸಮಸ್ಯೆಗಳ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ: ಡಿವೋರ್ಸ್ ಬಗ್ಗೆ ಕೊನೆಗೂ ಮೌನ ಮುರಿದ ನಟ ದಳಪತಿ ವಿಜಯ್ -
Horoscope March 8: ಈ ರಾಶಿಯವರಿಗೆ ಉದ್ಯೋಗದಲ್ಲಿ ಒಳಿತು, ಹೂಡಿಕೆಗಳಿಂದ ಲಾಭ, ದಿನ ಭವಿಷ್ಯ -
Kamal Haasan: ನಿಮ್ಮ ಕೆಲಸ ಎಷ್ಟಿದೆಯೋ ಅಷ್ಟು ನೋಡಿಕೊಳ್ಳಿ; ಭಾರತ ಸಾರ್ವಭೌಮ ರಾಷ್ಟ್ರ: ಟ್ರಂಪ್ಗೆ ಕಮಲ್ ಹಾಸನ್ ತಿರುಗೇಟು -
ಚಿಕ್ಕಬಳ್ಳಾಪುರದ ಜಿಲ್ಲೆಯ ಸತ್ಯಸಾಯಿ ಗ್ರಾಮಕ್ಕೆ ನಟ ರಿಷಬ್ ಶೆಟ್ಟಿ ಭೇಟಿ: ಮಾನವೀಯ ಕಾರ್ಯಗಳಿಗೆ ಶ್ಲಾಘನೆ -
Kiccha Sudeep: ಸುದೀಪ್ ನಂ 1 ಅಂತ ಗೂಗಲ್ನಲ್ಲಿ ಬರುತ್ತಾ, ನಟ ಆದ್ರೆ ತಲೆ ಮೇಲೆ ಕೊಂಬು ಇದ್ಯಾ: ಡಾಗ್ ಸತೀಶ್, ವೈರಲ್ ವಿಡಿಯೋ -
IMD Weather Forecast: ಭಾರತ vs ನ್ಯೂಜಿಲೆಂಡ್ ಟಿ20 ವಿಶ್ವಕಪ್ ಫೈನಲ್: ಅಹಮದಾಬಾದ್ನಲ್ಲಿ ಹವಾಮಾನ ಹೇಗಿದೆ, ಮಳೆ ಭೀತಿ ಇದೆಯೇ -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು












Click it and Unblock the Notifications