ರಾಜಕೀಯ ಪ್ರಾತಿನಿಧ್ಯಕ್ಕಾಗಿ ಒತ್ತಾಯಿಸಿ ಸಿಎಂ, ಡಿಸಿಎಂಗೆ ಪತ್ರ ಬರೆದ ಲೈಂಗಿಕ ಅಲ್ಪಸಂಖ್ಯಾತರ ಒಕ್ಕೂಟ
ಬೆಂಗಳೂರು, ಮೇ. 11: ಲಿಂಗತ್ವ ಅಲ್ಪಸಂಖ್ಯಾತ ಸಮುದಾಯವನ್ನು ರಾಜ್ಯಸಭೆಗೆ ಹಾಗೂ ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರಾಗಿ ಗುರುತಿಸಬೇಕು ಎಂದು ಕರ್ನಾಟಕ ರಾಜ್ಯ ಲಿಂಗತ್ವ ಹಾಗೂ ಲೈಂಗಿಕತೆ ಅಲ್ಪಸಂಖ್ಯಾತರ ಒಕ್ಕೂಟ ಒತ್ತಾಯಿಸಿದೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಪತ್ರ ಬರೆದಿದೆ.
ಪತ್ರದಲ್ಲೇನಿದೆ..?
ಭಾರತವು ಇಡೀ ಜಗತ್ತಿನಲ್ಲಿ LGBTQIA+ (ಲಿಂಗತ್ವ ಹಾಗೂ ಲೈಂಗಿಕ ಅಲ್ಪಸಂಖ್ಯಾತರು) ಸಮುದಾಯದ ಹಕ್ಕುಗಳ ವಿಷಯದಲ್ಲಿ ಮುಂಚೂಣಿಯಲ್ಲಿದೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 377ನ್ನು ರದ್ದು ಪಡಿಸಿದಂತಹ ಸುಪ್ರೀಂ ಕೋರ್ಟ್ 2018ರ ಆದೇಶವನ್ನು ಜಾಗತಿಕವಾಗಿ ಒಂದು ಮೈಲಿಗಲ್ಲು ಎಂದು ಪರಿಗಣಿಸಲಾಗಿದೆ. ತೃತೀಯ ಲಿಂಗಿಗಳಿಗೆ ಅಧಿಕೃತ ಮಾನ್ಯತೆ ನೀಡಿರುವ ಜಗತ್ತಿನ ಕೇವಲ 16 ದೇಶಗಳಲ್ಲಿ ಭಾರತವೂ ಒಂದು.

ಈ ಬದಲಾವಣೆಗಳು ಮತ್ತು ಆಧುನಿಕ ಮನೋಭಾವವು ಕೇವಲ ನ್ಯಾಯಾಲಯದ ಪ್ರಬುದ್ಧತೆಯಿಂದ ಆದದ್ದಲ್ಲ. ಬದಲಿಗೆ ದಶಕಗಳ ಕಾಲದಿಂದ LGBTQIA+ ಕಾರ್ಯಕರ್ತರು ತಳಹಂತದಿಂದ ನಡೆಸಿಕೊಂಡು ಬಂದಿರುವ ಹೋರಾಟದ ಫಲವಾಗಿದೆ. ತಮ್ಮನ್ನು ಸಮಾಜದ ಭಾಗವಾಗಿ ಒಳಗೊಳ್ಳಿಸಿಕೊಳ್ಳಬೇಕು ಎಂಬ ಅವರ ಅವಿರತ ಹೋರಾಟದಿಂದ ಇಂದು ಭಾರತೀಯ ಸಮಾಜವು ಹೊಸ ಚೈತನ್ಯವನ್ನು ಪಡೆದಿದೆ.
ಆದರೂ, ಭಾರತದ ಪ್ರಜಾಪ್ರಭುತ್ವವು ಆಳವಾದ ಪ್ರತ್ಯೇಕತೆಯ ಮನೋಭಾವದ ಮೇಲೆ ರೂಪುಗೊಂಡಿದೆ. ರಾಜ್ಯಗಳ ವಿಧಾನಸಭೆ, ವಿಧಾನ ಪರಿಷತ್ತುಗಳಿಂದ ಹಿಡಿದು ಸಂಸತ್ತಿನ ಲೋಕಸಭೆ, ರಾಜ್ಯಸಭೆಗಳವರೆಗಿನ ಜನಪತ್ರಿನಿಧಿ ಸಭೆಗಳಲ್ಲಿರುವ ಸಾವಿರಾರು ಸ್ಥಾನಗಳಲ್ಲಿ ಕೇವಲ ಒಬ್ಬರಾದರೂ ಘೋಷಿತ LGBTQIA+ ಸಮುದಾಯದ ಪ್ರತಿನಿಧಿ ಇಲ್ಲ.
ಯಾವುದೇ ಪಕ್ಷದ ಅಥವಾ ಈ ದೇಶದ ಹಿರಿಮೆಯನ್ನು ಎತ್ತಿ ಹಿಡಿಯುವ ಕಾರಣಕ್ಕಾಗಿ ನಮ್ಮ ಸಮುದಾಯದ ಪ್ರತಿನಿಧಿಗಳಿಗೆ ಸಾಂಕೇತಿಕವಾಗಿ ಸದಸ್ಯತ್ವ ನೀಡಲು ನಾವು ಸಂತ್ರಸ್ಥರಲ್ಲ, ನಾವು ನಮ್ಮದೇ ಶಕ್ತಿ-ಸಾಮರ್ಥ್ಯವನ್ನು ಅವಲಂಬಿಸಿದ ಮುಖಂಡರಿದ್ದೀವಿ. ಭಾರತದ ಜನಸಂಖ್ಯೆಯಲ್ಲಿ LGBTQIA+ ಸಮುದಾಯ ಗಣನೀಯ ಸಂಖ್ಯೆಯಲ್ಲಿದೆ. ಇತ್ತೀಚಿನ ಒಂದು ಜಾಗತಿಕ ಸಮೀಕ್ಷೆಯಲ್ಲಿ ಭಾರತದಲ್ಲಿ ಶೇ.2ರಷ್ಟು ಜನರು "ಟ್ರಾನ್ಸ್ಜೆಂಡರ್", 'ನಾನ್-ಬೈನಂ" ಅಥವಾ "ಜೆಂಡರ್ ಫ್ಲೋಯಿಡ್" ವರ್ಗಕ್ಕೆ ಸೇರಿದ್ದಾರೆಂದು ಹಾಗೂ ಶೇ.17ರಷ್ಟು ಜನರು ಸಲಿಂಗ ಆಕರ್ಷಿತರು ಎಂದು ಹೇಳಲಾಗಿದೆ.
ಭಾರತೀಯ ಸಮಾಜದ ಎಲ್ಲ ಆಯಾಮಗಳೂ LGBTQIA+ ಸಮುವಾಯ ಕೇಂದ್ರಿತವಾಗಿವೆ. ಅದರೂ ಈ ಸಮುದಾಯವನ್ನು ಭಾರತದ ಎಲ್ಲ ಪ್ರಜಾಸತ್ತಾತ್ಮಕ ಸಂಸ್ಥೆಗಳಿಂದಲೂ ಸಂಪೂರ್ಣವಾಗಿ ಹೊರಗಿಡಲಾಗಿದೆ. ಭಾರತದ ರಾಜಕೀಯ ನಾಯಕತ್ವದಲ್ಲಿ ನಮ್ಮ ಗೈರುಹಾಜರಿಯು ಪ್ರಾತಿನಿದಿತ್ವದ ಪ್ರಶ್ನೆ ಮಾತ್ರವಲ್ಲ, ಭಾರತದ ಪ್ರಜಾಪ್ರಭುತ್ವದಲ್ಲಿರುವ ಲೋಪ ಇದು. 'ಸಾಮಾಜಿಕ ಪ್ರಜಾಪ್ರಭುತ್ವ ಇಲ್ಲವಾದರೆ ಪ್ರಜಾಪ್ರಭುತ್ವದ ಚೌಕಟ್ಟಿಗೆ ಯಾವುದೇ ಮೌಲ್ಯವಿಲ್ಲ ಹಾಗೂ ಅದು ಅಸಮರ್ಪಕ ಪ್ರಜಾಪಭುತ್ವವಾಗುತ್ತದೆ" ಎಂದಿದ್ದಾರೆ ಬಾಬಾಸಾಹೇಬ್ ಅಂಬೇಡ್ಕರ್.
ಅವರು ಹೇಳಿದಂತೆ, "ಸಮಾಜದ ಇತರ ಸಹಚರರ ಕುರಿತು ಪರಸ್ಪರ ಗೌರವ ಮತ್ತು ಸಮಾನತೆಯ ಭಾವ ಇಲ್ಲವಾದರೆ" ಹಾಗೂ ಸಾಮಾಜಿಕ ಅಡೆತಡೆಗಳಿಂದ ಮುಕ್ತವಾಗದ ಹೊರತು ರಾಜಕೀಯ ಪ್ರಜಾಪ್ರಭುತ್ತ ಅಸಾಧ್ಯ. LGBTQIA+ ಸಮುದಾಯದ ಬಹಿಷ್ಕಾರವು ನಮ್ಮ ರಾಜಕೀಯದ ಸಾಮಾಜಿಕ ಬಹಿಷ್ಕಾರ ಪರಂಪರೆಯ ಭಾಗವಾಗಿದೆ. ಇತ್ತೀಚೆಗೆ ಕಾನೂನುಗಳು ನಮ್ಮ ಸಮುದಾಯದ ಕುರಿತು ಪ್ರಗತಿಪರವಾಗಿದ್ದರೂ, ನಮ್ಮ ಸಮುದಾಯಗಳನ್ನು ಮುಖ್ಯವಾಹಿನಿ ಸಾಮಾಜಿಕ ವಲಯದಿಂದ ಹೊರಗಿಡಲಾಗಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಅಪರಾಧಿಗಳು ಮತ್ತು ಕಳಂಕಿತರಂತೆ ನೋಡಲಾಗುತ್ತಿದೆ. ಶಿಕ್ಷಣ, ಆರ್ಥಿಕ ಸ್ವಾವಲಂಬನೆ ಮತ್ತು ರಾಜಕೀಯದಲ್ಲಿ ಸಮಾನ ಅವಕಾಶಗಳಿಂದ ವಂಚಿಸಲಾಗಿದೆ. LGBTQIA+ ಸಮುದಾಯದ ಜನರು ದಿನನಿತ್ಯ ದೈಹಿಕ, ಸಾಮಾಜಿಕ ಮತ್ತು ಭಾವನಾತ್ಮಕ ಹಿಂಸೆಗೆ ಗುರಿಯಾಗುತ್ತಿದ್ದಾರೆ.

ಈ ಸಾಮಾಜಿಕ ಬಹಿಷ್ಕಾರದ ಪರಿಣಾಮವಾಗಿ ನಾವು ಎದುರಿಸುತ್ತಿರುವ ರಾಜಕೀಯ ಬಹಿಷ್ಕಾರವನ್ನು ಸರಪಡಿಸಲು ಸರ್ಕಾರ ಯಾವ ಕ್ರಮವನ್ನೂ ಕೈಗೊಂಡಿಲ್ಲ. 2023ರಲ್ಲಿ ಸುಪ್ರೀಂ ಕೋರ್ಟ್ ಮುಂದೆ ಬಂದ ಸುಪ್ರಿಯೊ ವರ್ಸಸ್ ಯೂನಿಯನ್ ಆಫ್ ಇಂಡಿಯಾ ನಡುವಿನ ವೈವಾಹಿಕ ಸಮಾನತೆಗೆ ಸಂಬಂಧಿಸಿದ ಪ್ರಕರಣದಲ್ಲಿ ಒಕ್ಕೂಟ ಸರ್ಕಾರವು LGBTQIA+ ಸಮುದಾಯದ ವಿವಾಹದ ಹಕ್ಕನ್ನು ಸಂಸತ್ತಿನಲ್ಲಿ ನಿರ್ಣಯಿಸಬೇಕು ಎಂದು ಒತ್ತಿ ಒತ್ತಿ ಹೇಳಿತು. ಆದರೆ ನಮ್ಮ ಸಂಸತ್ತಿನಲ್ಲಿ ಒಬ್ಬ ಪ್ರತಿನಿಧಿಯೂ ಇಲ್ಲ. 2019 ಲಿಂಗಾತರಿ ವ್ಯಕ್ತಿಗಳ ಕಾಯಿದೆಯನ್ನು ಆಪ್ರಜಾಸತ್ತಾತ್ಮಕ ಹಾಗೂ ದೋಷಪೂರಿತ ಕ್ರಮಗಳಿಂದ ಸಂಸತ್ತಿನಲ್ಲಿ ಅಂಗೀಕರಿಸಲಾಯಿತು. ಇದು ಲಿಂಗಾತರಿ ಸಮುದಾಯದ ಹಕ್ಕುಗಳನ್ನು ವಿಸ್ತರಿಸುವ ಬದಲು ಮತ್ತಷ್ಟು ಸಂಕುಚಿತಗೊಳಿಸಿದೆ.
ಈ ಬಹಿಷ್ಕಾರ ಅಥವಾ ಹೊರಗಿಡುವಿಕೆಯು ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವಕ್ಕೆ ಶೋಭೆ ತರುವುದಿಲ್ಲ. LGBTQIA+ ಸಮುದಾಯದ ಬದುಕಿನ ಕುರಿತು ಅಥವಾ ಹಕ್ಕುಗಳ ಕುರಿತ ಯಾವುದೇ ಸರ್ಕಾರ ಎಂತಹುದೇ ನಿರ್ಣಯಗಳನ್ನು ಕೈಗೊಳ್ಳುವಾಗ ನಮ್ಮ ಸಮುದಾಯದ ಪ್ರತಿನಿಧಿಗಳನ್ನು ಒಳಗೊಳ್ಳಬೇಕು. ಇದುವರೆಗೂ ಯಾವ ಪಕ್ಷವೂ ಸರ್ಕಾರ ರಚನೆಯಲ್ಲಿ ನಮ್ಮ ಸಮುದಾಯಕ್ಕೆ ಸೂಕ್ತ ಪ್ರಾತಿನಿಧ್ಯ ನೀಡುವ ಬಗೆ ಬದ್ಧತೆಯನ್ನು ತೋರಿಸಿಲ್ಲ. ನಮ್ಮ ಪ್ರಾತಿನಿಧ್ಯ ಹಾಗೂ ಒಳಗೊಳ್ಳಾವಿಕೆಗಾಗಿ ನಾವು ಇಷ್ಟೆಲ್ಲ ಪ್ರಯತ್ನಗಳನ್ನು ನಡೆಸುತ್ತಿದ್ದಾಗಲೂ ಇದು ಸಾಧ್ಯವಾಗಿಲ್ಲ.
ಈ ಗಂಭೀರ ವೈಫಲ್ಯಗಳನ್ನು ಇನ್ನಾದರೂ ಸರಿಪಡಿಸಲು ಭಾರತೀಯ ನ್ಯಾಷನಲ್ ಕಾಂಗ್ರೆಸ್ ಪಕ್ಷವು LGBTQIA+ ಸಮುದಾಯದ ರಾಜಕೀಯ ಪ್ರಾತಿನಿಧ್ಯವನ್ನು ಪ್ರಧಾನ ಚರ್ಚೆಯ ವಿಷಯವನ್ನಾಗಿ ಪರಿಗಣಿಸಬೇಕು ಹಾಗೂ ಕರ್ನಾಟಕದ ವಿಧಾನ ಪರಿಷತ್ತಿನಲ್ಲಿ ನಮ್ಮ ಸಮುದಾಯಕ್ಕೆ ಪ್ರಾತಿನಿಧ್ಯ ಕಲ್ಪಿಸಬೇಕು. ಹೀಗೆ ಮಾಡಿದಲ್ಲಿ LGBTQIA+ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ನೀಡಿದ ಪ್ರಥಮ ಪಕ್ಷ ಎಂಬ ಹೆಗ್ಗಳಿಕ ಕಾಂಗ್ರೆಸ್ಗೆ ಸಲ್ಲುತ್ತದೆ. ಆ ಮೂಲಕ ಭಾರತದ ಬಹುತ್ವ ಪರಂಪರೆಯನ್ನು ತನ್ನ ಪಕ್ಷದಲ್ಲಿ ಮತ್ತು ರಾಜಕೀಯ ವಲಯದಲ್ಲಿ ಬಿಂಬಿಸುವ ಪಕ್ಷವಾಗಿ ಹೆಸರಾಗುತ್ತದೆ.
LGBTQIA+ ಸಮುದಾಯವು ಭಾರತೀಯ ಸಮಾಜ, ಮಾಧ್ಯಮಗಳು, ಸಂಸ್ಕೃತಿ, ಧರ್ಮ ಹಾಗೂ ಸಾರ್ವಜನಿಕ ವಲಯದಲ್ಲಿ ಹಾಸುಹೊಕ್ಕಾಗಿದೆ. ನಾವು ಪ್ರತಿಷ್ಠಿತ ಸಮುದಾಯವಲ್ಲ ಆದರೆ ಭಾರತೀಯ ಸಮಾಜದ ನೇಯ್ದೆಯಲ್ಲಿ ಹಾಸುಹೊಕ್ಕಾಗಿದ್ದೇವೆ. ನಾವು ಈ ನೆಲದ ಪರಂಪರೆಯನ್ನು ಹಾಗೂ ಭವಿಷ್ಯವನ್ನು ಪ್ರತಿನಿಧಿಸುತ್ತೇವೆ. ಭಾರತದ ರಾಜಕೀಯ ವಲಯವು ಸಮಾನ ಪ್ರಜೆಗಳಾಗಿ ಮತ್ತು ನಾಯಕರಾಗಿ ನಮ್ಮ ಸಂವರ್ತನೆಯ ಸಾಮರ್ಥ್ಯವನ್ನು ಮಾನ್ಯ ಮಾಡಲು ಇದು ತಕ್ಕ ಸಮಯವಾಗಿದೆ.
ಹಾಗಾಗಿ ತಾವುಗಳು ನಮ್ಮ ಸಮುದಾಯದಲ್ಲಿ ರಾಜಕೀಯ ಇಚ್ಛಾಶಕ್ತಿ ಇರುವವರನ್ನು ಗುರುತಿಸಿ ಆಯ್ಕೆ ಮಾಡಿದರೆ ಅಂಬೇಡ್ಕರ್ ಅವರು ಬರೆದ ಸಂವಿಧಾನದ ಘನತೆ ಮತ್ತು ನೈತಿಕತೆಯನ್ನು ಎತ್ತಿ ಹಿಡಿದಂತಾಗುತ್ತದೆ.
ಧನ್ಯವಾದಗಳು...
-
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕನ್ನಡಿಗರಿಗಿಂತ ಕೇರಳದವರೇ ಅದೃಷ್ಟವಂತರು: ವಯನಾಡಿಗೆ ಸಿದ್ದರಾಮಯ್ಯರಿಂದ 10 ಕೊಟಿ ರೂ ಅನುದಾನ: ಆಕ್ರೋಶ -
ನಟಿ ನೋರಾ ಫತೇಹಿ ವೃತ್ತಿಜೀವನಕ್ಕೆ ಕುತ್ತು ತಂದ 'ಸೆರಗ ಸರ್ಸೆ' ವಿವಾದ: ಗಡಿಪಾರು ಮಾಡುವಂತೆ ಗೃಹ ಸಚಿವಾಲಯಕ್ಕೆ ದೂರು -
Bengaluru: ಬಿಡಿಎಗೆ 50ರ ಸಂಭ್ರಮ; ಹೊಸ ಲೋಗೋ, ಟ್ಯಾಗ್ಲೈನ್ ವಿನ್ಯಾಸ ಮಾಡಿ 1 ಲಕ್ಷ ರೂ. ಬಹುಮಾನ ಗೆಲ್ಲಿ -
ಹಿಂದುಳಿದ, ದುರ್ಬಲ ವರ್ಗದ ಮಕ್ಕಳಿಗೆ ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಶೇ. 25 ರಷ್ಟು ಉಚಿತ ಪ್ರವೇಶಕ್ಕೆ ಅರ್ಜಿ ಆಹ್ವಾನ -
ಮಾರ್ಚ್ 23ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
"ಕಾಂಗ್ರೆಸ್ನಿಂದ ದಲಿತ ದ್ರೋಹ: 14,200 ಕೋಟಿ ರೂ ಎಸ್ಸಿಎಸ್ಪಿ/ಟಿಎಸ್ಪಿ ಹಣ ಗ್ಯಾರಂಟಿ ಪಾಲು'' -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ದಾವಣಗೆರೆ ದಕ್ಷಿಣದಲ್ಲಿ ಕಾಂಗ್ರೆಸ್ ಅಬ್ಬರ: ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸಮ್ಮುಖದಲ್ಲಿ ಸಮರ್ಥ್ ಶಾಮನೂರು ನಾಮಪತ್ರ ಸಲ್ಲಿಕೆ -
ಇಡೀ ಸರ್ಕಾರವೇ ಉಮೇಶ್ ಮೇಟಿ ಜೊತೆಗಿದೆ: ಬಾಗಲಕೋಟೆಯಲ್ಲಿ ನಾಮಪತ್ರ ಸಲ್ಲಿಕೆ ವೇಳೆ ಡಿ.ಕೆ.ಶಿವಕುಮಾರ್ ಅಭಯ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್












Click it and Unblock the Notifications