10 ವರ್ಷಗಳ ನಂತರ ಪುನರಾವರ್ತನೆ: ಪ್ರಜಾಪ್ರಭುತ್ವದ ದೇಗುಲ 'ಸದನ'ದಲ್ಲಿ ಜನಪ್ರತಿನಿಧಿಗಳ ಗೂಂಡಾಗಿರಿ
ಚಿಂತಕರ ಚಾವಡಿ, ಹಿರಿಯರ ಸದನ ಎಂದೇ ಕರೆಯಲ್ಪಡುವ ವಿಧಾನ ಪರಿಷತ್ತಿನಲ್ಲಿ ಮಂಗಳವಾರ (ಡಿ 15) ನಡೆದ ವಿದ್ಯಮಾನಗಳನ್ನು ನೋಡಿದಾಗ ಇವರಾ ನಮ್ಮ ಜನಪ್ರತಿನಿಧಿಗಳು ಎಂದು ಸಾರ್ವಜನಿಕರಿಗೆ ಬೇಸರ ಮೂಡುವುದು ಸಹಜ.
ಪರಿಷತ್ತಿನ ಇತಿಹಾಸಕ್ಕೆ ಕಳಂಕ ತಂದ ಜನಪ್ರತಿನಿಧಿಗಳ ಗೂಂಡಾ ವರ್ತನೆ, ರಾಜ್ಯದ ಮಾನ ಮರ್ಯಾದೆಯನ್ನು ಮಣ್ಣುಪಾಲು ಮಾಡಿತು. ಎರಡು ರಾಷ್ಟ್ರೀಯ ಪಕ್ಷಗಳು ತಮ್ಮ ರಾಜಕೀಯ ಮೇಲಾಟಕ್ಕಾಗಿ ವಿಧಾನ ಪರಿಷತ್ತಿನ ಘನ ಇತಿಹಾಸಕ್ಕೆ ಕಪ್ಪುಚುಕ್ಕೆ ಇಟ್ಟರು.
ಮೇಲ್ಮನೆ ಸಂಪ್ರದಾಯವನ್ನು ಅರಿಯದ ಮತ್ತು ನಡೆದ ಘಟನೆಯ ಬಗ್ಗೆ ಕಿಂಚಿತ್ತೂ ಬೇಸರ ತೋರದ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ಈ ವಿಚಾರದಲ್ಲಿ ವಾಗ್ಯುದ್ದಕ್ಕೆ ಇಳಿದಿದ್ದಾರೆ. ಮೂರೂ ಪಕ್ಷಗಳು ಕನಿಷ್ಠ ಆತ್ಮಾವಲೋಕನ ಮಾಡುವ ಕೆಲಸವನ್ನು ಮಾಡಲಿಲ್ಲ.
ಸುಮಾರು ಹತ್ತು ವರ್ಷದ ನಂತರ ಸದನದಲ್ಲಿ ಈ ರೀತಿಯ ಗೂಂಡಾ ವರ್ತನೆ ನಡೆದಿದೆ. ಕಳೆದ ಬಾರಿ ನಡೆದ ಘಟನೆಯೂ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದ ವೇಳೆ ಎನ್ನುವುದು ಗಮನಿಸಬೇಕಾದ ವಿಚಾರ. ಆ ಘಟನೆಯ ಫ್ಲ್ಯಾಷ್ ಬ್ಯಾಕ್:

110 ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಿತ್ತು
2008ರ ಅಸೆಂಬ್ಲಿ ಚುನಾವಣೆಯಲ್ಲಿ 110 ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಿತ್ತು. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದರು. ಮೊದಮೊದಲು ಸುಸೂತ್ರವಾಗಿ ನಡೆಯುತ್ತಿದ್ದ ಯಡಿಯೂರಪ್ಪನವರ ಸರಕಾರದಲ್ಲಿ ಬಿಕ್ಕಟ್ಟು ತೋರಿ, ಹದಿನಾರು ಶಾಸಕರು ಯಡಿಯೂರಪ್ಪನವರ ಮೇಲೆ ವಿಶ್ವಾಸವಿಲ್ಲ ಎಂದು ರಾಜ್ಯಪಾಲರಿಗೆ ಪತ್ರ ನೀಡಿದ್ದರು. ಹಾಗಾಗಿ, ವಿಶ್ವಾಸಮತ ಯಾಚನೆ ಸಂದರ್ಭ ಎದುರಾಗಿತ್ತು.

ಹದಿನಾರು ಜನರನ್ನು ಸ್ಪೀಕರ್ ಅನರ್ಹಗೊಳಿಸಿದ್ದರು
ಅಕ್ಟೋಬರ್ 11, 2010ರಲ್ಲಿ ಸದನ ಆರಂಭವಾಗಿ ವಿಶ್ವಾಸಮತಯಾಚನೆಗೆ ಮುನ್ನ 16 ಶಾಸಕರನ್ನು ಸ್ಪೀಕರ್ ಆಗಿದ್ದ ಕೆ.ಜೆ.ಬೋಪಯ್ಯ ಅನರ್ಹಗೊಳಿಸಿದ್ದರು. ಇದರಿಂದಾಗಿ, ಇಡೀ ಸದನ ರಣರಂಗದಂತೆ ಮಾರ್ಪಟ್ಟಿತ್ತು ಬೇಳೂರು ಗೋಪಾಲಕೃಷ್ಣ, ಬಾಲಚಂದ್ರ ಜಾರಕಿಹೊಳಿ, ಆನಂದ್ ಅಸ್ನೋಟಿಕರ್, ವೈ.ಸಂಪಂಗಿ, ಶಿವರಾಜ ತಂಗಡಗಿ, ಗೂಳಿಹಟ್ಟಿ ಶೇಖರ್ ಸೇರಿದಂತೆ ಸೇರಿದಂತೆ ಹದಿನಾರು ಜನರನ್ನು ಸ್ಪೀಕರ್ ಅನರ್ಹಗೊಳಿಸಿದ್ದರು.

ಸಿದ್ದರಾಮಮ್ಮ ಮತ್ತು ಇತರ ಮುಖಂಡರು ಬಿದರಿ ವಿರುದ್ದ ತಿರುಗಿಬಿದ್ದರು
ಸದನದಲ್ಲಿ ಸಂಘರ್ಷ ಮಿತಿಮೀರಿದಾಗ ಅಂದಿನ ನಗರ ಪೊಲೀಸ್ ಆಯುಕ್ತರಾಗಿದ್ದ ಶಂಕರ್ ಮಹಾದೇವ ಬಿದರಿ ವಿಧಾನಸಭೆಗೆ ಪ್ರವೇಶಿಸಿದರು. ಪ್ರತಿಪಕ್ಷಗಳು ಪ್ರವೇಶಿಸುವ ಬಾಗಿಲನ್ನು ಬಿದರಿ ಮುಚ್ಚಿದ್ದರು. ಇದರಿಂದ ಸಿದ್ದರಾಮಮ್ಮ ಮತ್ತು ಇತರ ಮುಖಂಡರು ಬಿದರಿ ವಿರುದ್ದ ತಿರುಗಿಬಿದ್ದರು. ಕೊನೆಗೆ, ಶಂಕರ್ ಬಿದರಿ ಬಾಗಿಲನ್ನು ತೆರೆದರು.
Recommended Video

ಗೂಳಿಹಟ್ಟಿ ಶೇಖರ್
ಅಷ್ಟೊತ್ತಿಗೆ ವಿಶ್ವಾಸಮತ ಯಾಚನೆ ಮುಗಿದಿತ್ತು. ಇದರಿಂದ ಸಿಟ್ಟಿಗೆದ್ದ ಶಾಸಕರು ಮನಬಂದಂತೆ ವಿಧಾನಸಭೆಯಲ್ಲಿ ವರ್ತಿಸಿದ್ದರು. ಗೂಳಿಹಟ್ಟಿ ಶೇಖರ್ ಅವರಂತೂ ಅಂಗಿ ಹರಿದುಕೊಂಡು ಕುರ್ಚಿಯ ಮೇಲೆ ನಿಂತು ಧಿಕ್ಕಾರ ಧಿಕ್ಕಾರ ಕೂಗುತ್ತಿದ್ದರು. ಅಧಿವೇಶನ ನಡೆಯುವ ಹೊರಗಡೆ ಹೂಕುಂಡಗಳನ್ನು ಪ್ರತಿಪಕ್ಷದ ಮುಖಂಡರು ಸಿಕ್ಕಸಿಕ್ಕಲ್ಲಿ ಬಿಸಾಕಿದರು. ಮಾರ್ಷಲ್ ಗಳೂ ಗಾಯಗೊಂಡಿದ್ದರು. ಹತ್ತು ವರ್ಷದ ಆ ಘಟನೆಯ ನಂತರ, ಒಂದು ದಿನದ ಹಿಂದೆ ವಿಧಾನ ಪರಿಷತ್ತಿನಲ್ಲಿ ಆಗಬಾರದ್ದು ಮತ್ತೆ ನಡೆದು ಹೋಗಿದೆ.
-
ಮಗುವನ್ನ ಸಾಕಲು ಹಣ ಬೇಕಾದ್ರೆ ಯಾರ ಜೊತೆ ಬೇಕಿದ್ರೂ ಮಲಗುವೆ: ಬಿಗ್ಬಾಸ್ ಖ್ಯಾತಿಯ ಚಂದ್ರಿಕಾ ದೀಕ್ಷಿತ್ -
Karnataka Weather: ಬೆಂಗಳೂರು ಸೇರಿದಂತೆ ರಾಜ್ಯದ 17 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
ಸಿನಿಮಾ ಕಥೆಗೆ ವಿರುದ್ಧವಾಗಿ ಕುಂಭಮೇಳ ಮೊನಾಲಿಸಾ ಮದುವೆ, 10 ಕೋಟಿ ರೂ. ಸಾಲ ಮಾಡಿದ್ದೇನೆ: ನಿರ್ದೇಶಕ ಸನೋಜ್ ಮಿಶ್ರಾ ಆತಂಕ -
"ಕೆಡಿ" ಸಿನಿಮಾದ ಹಾಡು ಅಶ್ಲೀಲವಾಗಿದ್ರೆ ಕೂಡಲೇ ಎಲ್ಲ ಕಡೆ ತೆರವು ಮಾಡಿ: ಸೆನ್ಸಾರ್ ಮಂಡಳಿಗೆ ಕೇಂದ್ರ ಸರ್ಕಾರ ಸೂಚನೆ -
Byadagi Chilli: ಕರ್ನಾಟಕದ ಕೆಂಪು ಚಿನ್ನ ಬ್ಯಾಡಗಿ ಮೆಣಸಿನಕಾಯಿಗೆ ಹೊಸ ಸಂಕಷ್ಟ, ರೈತರು ಕಂಗಾಲು -
ಸರಕು ಖಾಲಿಯಾಯ್ತಾ ಪ್ರೇಮ್, ಇಡೀ ದೇಶದ ಮುಂದೆ ಕನ್ನಡಿಗರು ತಲೆತಗ್ಗಿಸುವಂತೆ ಮಾಡಿದಿರಿ: ಸೆರಗ ಸರ್ಸೆ ಹಾಡಿಗೆ ವಿರೋಧ -
Bengaluru Second Airport: ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ: ದೆಹಲಿಯಲ್ಲಿ ಕೇಂದ್ರ ಸಚಿವರ ಭೇಟಿಯಾದ ಡಿ.ಕೆ.ಶಿವಕುಮಾರ್ -
Nora Fatehi: ಸರ್ಸೆ ನಿನ್ನ ಸೆರಗ ಹಾಡು ವಿವಾದ: ಹೇಳಿದ್ದೊಂದು- ಮಾಡಿದ್ದು ಇನ್ನೊಂದು, ನನ್ನ ನಂಬಿ ಪ್ಲೀಸ್ -
SSLC ವಿದ್ಯಾರ್ಥಿಗಳ ಗಮನಕ್ಕೆ: ಮಾರ್ಚ್ 18ಕ್ಕೆ ಪ್ರಥಮ ಭಾಷೆ ಕನ್ನಡ ಪರೀಕ್ಷೆ; ಪಾಸಾಗಲು ಈ ಪ್ರಮುಖ ಅಂಶಗಳನ್ನು ಗಮನಿಸಿ -
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ












Click it and Unblock the Notifications