ರಾಮಚಂದ್ರಾಪುರ ಮಠದಿಂದ 550 ಟನ್ ಮೇವು ಪೂರೈಕೆ
ಮಲೆಮಹದೇಶ್ವರ ಬೆಟ್ಟದ ತಪ್ಪಲಲ್ಲಿ ಹಸುಗಳು ಮೇವಿಲ್ಲದೆ ಸಾಯುತ್ತಿರುವ ಘಟನೆ ಬೆಳಕಿಗೆ ಬರುತ್ತಿದ್ದಂತೆ ರಾಮಚಂದ್ರಾಪುರ ಮಠ ಮೇವು ಪೂರೈಕೆಯ ಘೋಷಣೆಯನ್ನು ಮಾಡಿದ್ದು, ಇದುವರೆಗೆ ಮಠದ ವತಿಯಿಂದ 550 ಟನ್ ಮೇವು ಪೂರೈಕೆಯಾಗಿದೆ.
ಕೊಳ್ಳೇಗಾಲ, ಏ 23: ತೀವ್ರವಾದ ಬರಗಾಲ ಹಾಗೂ ಅರಣ್ಯದಲ್ಲಿ ದೊಡ್ಡಿ ಹಾಕಲು ಬಿಡದ ಕಾರಣ ಮಲೆಮಹದೇಶ್ವರ ಬೆಟ್ಟದ ತಪ್ಪಲಲ್ಲಿ ಹಸುಗಳು ಮೇವಿಲ್ಲದೆ ಸಾಯುತ್ತಿರುವ ಘಟನೆ ಬೆಳಕಿಗೆ ಬರುತ್ತಿದ್ದಂತೆ ರಾಮಚಂದ್ರಾಪುರ ಮಠ ಮೇವು ಪೂರೈಕೆಯ ಘೋಷಣೆಯನ್ನು ಮಾಡಿದೆ.
ಮಠದ ವತಿಯಿಂದ ಇದುವರೆಗೆ ಈಗಾಗಲೇ 550 ಟನ್ ಮೇವು ಪೂರೈಕೆಯಾಗಿದೆ. ಮಲೆಮಹದೇಶ್ವರ ಬೆಟ್ಟದ ತಪ್ಪಲಿನ ಕೌದಳ್ಳಿ, ಎರಂಬಾಡಿ, ಕೆವಿಎಂ ದೊಡ್ಡಿ, ಎಂ ಟಿ ದೊಡ್ಡಿ, ಪಚ್ಚೆದೊಡ್ಡಿ, ಮೀಣ್ಯಂ, ಗುಂಡಾಪುರ, ಚೆನ್ನೂರು, ಚೆಂಗಡಿ, ತೋಕರೆ, ದೊಡ್ಡಾಣಿ, ಪುದುನಗರ, ನಾಲರೋಡ್ ಸೇರಿ 13 ಕಡೆಯಲ್ಲಿ ಮೇವು ವಿತರಣಾ ಕೇಂದ್ರಗಳನ್ನು ಮಠದ ವತಿಯಿಂದ ವಿವಿಧ ಸ್ಥರದಲ್ಲಿ ನಡೆಸಲಾಗುತ್ತಿದೆ. (ಮೇವು ಒದಗಿಸಲಾಗುವುದಿಲ್ಲ, ಗೋವುಗಳನ್ನು ಮಾರಿಬಿಡ್ರೀ)

ಏಪ್ರಿಲ್ 3ರಿಂದ ಏಪ್ರಿಲ್ 10ರವರೆಗೆ ಎರಂಬಾಡಿಯಲ್ಲಿ ಮೇವು ವಿತರಣೆ ಮಾಡಿದ್ದು, ಆ ಬಳಿಕ ನಿತ್ಯ ಮೂರಕ್ಕೂ ಅಧಿಕ ಕೇಂದ್ರದಲ್ಲಿ ವಿವಿಧ ರೀತಿಯ ಮೇವನ್ನು ವಿತರಿಸಲಾಗಿದೆ ಎಂದು ಮಠದ ಅಧಿಕಾರಿಗಳು ತಿಳಿಸಿದ್ದಾರೆ.
ಏಪ್ರಿಲ್ 22ರವರೆಗೆ 461.87 ಟನ್ ಜೋಳ, 138.70 ಟನ್ ಕಬ್ಬಿನ ದಂಡು, 14.25ಟನ್ ಹಾಳೆ ಸೇರಿ 614.82 ಟನ್ ಮೇವು ವಿತರಣೆಯನ್ನು ಮಾಡಲಾಗಿದೆ.
ನಿತ್ಯವೂ ವಿತರಣೆ ಕಾರ್ಯ ನಡೆಯುತ್ತಿದ್ದು, ಬೇರೆ ಬೇರೆ ಜಿಲ್ಲೆಗಳ ಕಾರ್ಯಕರ್ತರು ತಂಡೋಪ ತಂಡವಾಗಿ ಆಗಮಿಸಿ ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ದೇಸೀ ಗೋವುಗಳ ರಕ್ಷಣೆಗಾಗಿ 1 ಸಾವಿರ ಟನ್ ಮೇವು ವಿತರಿಸಬೇಕೆಂಬ ರಾಘವೇಶ್ವರ ಶ್ರೀಗಳವರ ಕಲ್ಪನೆ ಎಂದು ಮಠ ತಿಳಿಸಿದೆ.

ಇದುವರೆಗೆ ನಿತ್ಯ ವಿತರಣೆ ಪೂರೈಕೆ ಮಾಡಿರುವ ಮೇವಿನ ವಿವರ ಹೇಗಿದೆ. ಏ3 - 7.5 ಟನ್, ಏ4 - 8.13 ಟನ್, ಏ5 - 10.37 ಟನ್, ಏ6 - 7.4 ಟನ್, ಏ7 - 9.43 ಟನ್, ಏ8 - 10.96 ಟನ್, ಏ9 - 8.57 ಟನ್, ಏ10 - 9.14 ಟನ್.
ಏ11 - 31.45 ಟನ್, ಏ12 - 18.3 ಟನ್, ಏ13 - 25ಟನ್, ಏ14 -29.43 ಟನ್, ಏ15 - 26.59 ಟನ್, ಏ16 - 43.51 ಟನ್, ಏ17 - 44.26 ಟನ್, ಏ18 - 42.34 ಟನ್, ಏ19 - 67.45 ಟನ್, ಏ20 - 59.19 ಟನ್, ಏ21 - 79.12 ಟನ್, ಏ22 - 76.63 ಟನ್ ವಿತರಣೆ ಮಾಡಲಾಗಿದೆ ಎಂದು ಮಠದ ಪ್ರಕಟಣೆ ತಿಳಿಸಿದೆ.
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications