Breaking: ಕರ್ನಾಟಕದ ದಕ್ಷಿಣ ಒಳನಾಡಿಗೆ ಮಳೆ ಇಳಿಕೆ, ಬೇರೆಡೆ ಹೆಚ್ಚು
ಬೆಂಗಳೂರು ಸೆಪ್ಟಂಬರ್ 08: ಕೆಲವು ದಿನಗಳಿಂದ ಅಬ್ಬರದ ಮಳೆ ಕಂಡಿದ್ದ ಕರ್ನಾಟಕದ ದಕ್ಷಿಣ ಒಳನಾಡು ಜಿಲ್ಲೆಗಳಿಗೆ ಸಿಹಿ ಸುದ್ದಿಯೊಂದು ಸಿಕ್ಕಿದೆ. ಈ ಭಾಗದಲ್ಲಿ ಕೆಲವು ಜಿಲ್ಲೆಗಳಲ್ಲಿ ಮುಂದಿನ ಮೂರು ಸಾಧಾರಣದಿಂದ ಭಾರಿ ಮಳೆ ಆಗಿ ನಂತರ ಮಳೆ ಕಡಿಮೆ ಆಗುವ ಸಾಧ್ಯತೆ ದಟ್ಟವಾಗಿದೆ. ಕರಾವಳಿ ಮತ್ತು ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಮಳೆ ಮುಂದುವರಿಯಲಿದೆ.
ಒಟ್ಟು 16 ಜಿಲ್ಲೆಗಳನ್ನು ಒಳಗೊಂಡ ದಕ್ಷಿಣ ಒಳನಾಡು ಜಿಲ್ಲೆಗಳಿಗೆ ಎರಡು ವಾರದಿಂದ ನಿರಂತರವಾಗಿ ಗುಡುಗ ಸಹಿತಿ ಅತ್ಯಧಿಕ ಭಾರಿ ಮಳೆ ಸುರಿದಿತ್ತು. ಇದರಿಂದ ಕೆರೆ, ಕಟ್ಟೆಗಳ ಕೋಡಿ ಒಡೆದು ಸಾಕಷ್ಟು ಹಾನಿ ಸಂಭವಿಸಿದ್ದು, ಇನ್ನು ಸಹಜ ಸ್ಥಿತಿಗೆ ಬಂದಿಲ್ಲ. ಈ ಮಧ್ಯೆ ಭಾರತೀಯ ಹವಾಮಾನ ಇಲಾಖೆ ಈ ಭಾಗದ ಜಿಲ್ಲೆಗಳ ಜನರಿಗೆ ಸಿಹಿ ಸುದ್ದಿ ನೀಡಿದೆ.
ಬೆಂಗಳೂರು ನಮ್ಮದು, ಕನ್ನಡಿಗರಿಂದ #Leavebengaluru ಟ್ವಿಟ್ಟರ್ ಅಭಿಯಾನ ಆರಂಭ
ಗುರುವಾರದ ಮುನ್ಸೂಚನೆ ವರದಿ ಪ್ರಕಾರ ದಕ್ಷಿಣ ಒಳನಾಡಿನ ಹಾಸನ, ಕೊಡಗು, ಚಿಕ್ಕಮಗಳೂರು, ಚಾಮರಾಜನಗರ, ಶಿವಮೊಗ್ಗ, ತುಮಕೂರು, ಬಳ್ಳಾರಿಯ ಒಂದೆರಡು ಕಡೆಗಳಲ್ಲಿ ಮಾತ್ರ ಸೆ.11ರವರೆಗೆ ಸಾಧಾರಣದಿಂದ ಭಾರಿ ಮಳೆ ಆಗಲಿದೆ. ಇಷ್ಟು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ಇದೇ ಭಾಗದ ಉಳಿದೆಡೆ ತುಂತುರು ಮಳೆ ಆಗಬಹುದು ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.
ಕರಾವಳಿಗೆ,
ಉ.ಒಳನಾಡಿಗೆ
ಭಾರಿ
ಮಳೆ
ಕರ್ನಾಟಕದ
ಕರಾವಳಿ
ಜಿಲ್ಲೆಗಳು
ಮತ್ತು
ಉತ್ತರ
ಒಳನಾಡಿನ
ಜಿಲ್ಲೆಗಳಲ್ಲಿ
ಮಳೆ
ಕಡಿಮೆಯಾಗುವಂತೆ
ಕಾಣುತ್ತಿಲ್ಲ.
ಈ
ಭಾಗದ
ಜಿಲ್ಲೆಗಳಲ್ಲಿ
ಮುಂದಿನ
4-5ದಿನ
ಭಾರಿಯಿಂದ
ಅತಿ
ಭಾರೀ
ಮಳೆ
ಆಗುವ
ಸಾಧ್ಯತೆ
ಇದೆ.
ಉತ್ತರ
ಕನ್ನಡ,
ಉಡುಪಿ,
ದಕ್ಷಿಣ
ಕನ್ನಡ,
ಬೆಳಗಾವಿ,
ಗದಗ
ಹಾವೇರಿಗೆ
ಸೆ.10ರಂದು
ಶನಿವಾರ
ಒಂದು
ದಿನ
ಆರೆಂಜ್
ಅಲರ್ಟ್
ಎಚ್ಚರಿಕೆ
ನೀಡಲಾಗಿದೆ.
ಉಳಿದ
ದಿನಗಳಲ್ಲಿ
ಈ
ಜಿಲ್ಲೆಗಳು
ಸೇರಿದಂತೆ
ಬೀದರ್,
ಕಲಬುರಗಿ,
ಕೊಪ್ಪಳ,
ಯಾದಗಿರಿ,
ರಾಯಚೂರು
ಜಿಲ್ಲೆಗಳಿಗೆ
ದಿನಬಿಟ್ಟು
ದಿನ
ಯೆಲ್ಲೋ
ಅಲರ್ಟ್
ಘೋಷಿಸಲಾಗಿದೆ
ಎಂದು
ರಾಜ್ಯ
ಹವಾಮಾನ
ವರದಿ
ತಿಳಿಸಿದೆ.
ಎರಡು ವಾರದಿಂದ ನಿರಂತರವಾಗಿ ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳು ನಿರಂತರವಾಗಿ ಆರೆಂಜ್ ಅಲರ್ಟ್ ಮತ್ತು ರೆಡ್ ಅಲರ್ಟ್ ಪಡೆದಿದ್ದವು. ಇದೀಗ ಈ ಭಾಗದ ಪ್ರದೇಶಗಳು ಸಹಜ ಸ್ಥಿತಿಯತ್ತ ಮರಳುತ್ತಿದೆ. ಇಲ್ಲಿನ ಜನರು ನಿಟ್ಟುಸಿರುವ ಬಿಟ್ಟು ಯಥಾ ಸ್ಥಿತಿಯ ಬದುಕು ಕಟ್ಟಿಕೊಳ್ಳಲು ಪರಿತಪಿಸುತ್ತಿದ್ದಾರೆ.
ಕರ್ನಾಟಕ ಕರಾವಳಿ ತೀರದಲ್ಲಿ ಬೀರುಗಾಳಿಯ ವೇಗವು ಪ್ರತಿ ಘಂಟೆಗೆ ಅಂದಾಜು 45ರಿಂದ 55ರವರೆಗೆ ಇರಲಿದೆ. ಕೆಲವೊಮ್ಮೆ ಇಲ್ಲಿ ಗಾಳಿಯ ವೇಗ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ.