ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮೂವರು ಕನ್ನಡಿಗರಿಗೆ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪ್ರದಾನ
ನವದೆಹಲಿ, ಜನವರಿ 17: ಮೂವರು ಕನ್ನಡಿಗರು ಸೇರಿ 49 ಜನರಿಗೆ ಇಂದು 2016ನೇ ಸಾಲಿನ ಕೇಂದ್ರ ಸಂಗೀತ ಮತ್ತು ನಾಟಕ ಅಕಾಡೆಮಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ರಾಷ್ಟ್ರಪತಿ ಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಪ್ರಶಸ್ತಿ ಪ್ರದಾನ ಮಾಡಿದರು.
4 ಜನ ಸಾಧಕರಿಗೆ ಫೆಲೋಶಿಪ್ (ಅಕಾಡೆಮಿ ರತ್ನ) ಹಾಗೂ 45 ಜನ ಸಾಧಕರಿಗೆ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ (ಅಕಾಡೆಮಿ ಪುರಸ್ಕಾರ)ವನ್ನು ಪ್ರದಾನ ಮಾಡಲಾಯಿತು.
ಇವರಲ್ಲಿ ಥಿಯೇಟರ್ ವಿಭಾಗದಲ್ಲಿ ಕರ್ನಾಟಕದ ಯಕ್ಷಗಾನ ಕಲಾವಿದ ಕೆ. ಗೋವಿಂದ ಭಟ್, ಸಂಗೀತ ವಿಭಾಗದಲ್ಲಿ ಸುಗಮ ಸಂಗೀತ ಕಲಾವಿದೆ ರತ್ನಮಾಲಾ ಪ್ರಕಾಶ್, ವಯೋಲಿನ್ ವಾದಕ ಮೈಸೂರು ಮಂಜುನಾಥ್ ರಾಷ್ಟ್ರಪತಿಗಳಿಂದ ಅಕಾಡೆಮಿ ಪುರಸ್ಕಾರಗಳನ್ನು ಸ್ವೀಕರಿಸಿದರು.
ಕಲಾವಿದರು, ಗುರುಗಳು ಮತ್ತು ವಿಧ್ವಾಂಸರಿಗೆ ಈ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಯನ್ನು ಪ್ರತೀ ವರ್ಷ ನೀಡಲಾಗುತ್ತದೆ.
Comments
English summary
The President of India, Shri Ram Nath Kovind, presented the Sangeet Natak Akademi’s Fellowships (Akademi Ratna) and Sangeet Natak Akademi Awards (Akademi Puraskar) for the year 2016 at a function held at Rashtrapati Bhavan today (January 17, 2018). Ratnamala Prakash, Mysore M Manjunath and K Govind Bhat form Karnataka recieved the award.
Story first published: Wednesday, January 17, 2018, 20:36 [IST]