Get Updates
Get notified of breaking news, exclusive insights, and must-see stories!

PM Modi Rally Cancelled: ಚಿತ್ತಾಪುರ ಕಳಂಕಿತ ಬಿಜೆಪಿ ಅಭ್ಯರ್ಥಿ ಸಂಬಂಧ ಪ್ರಧಾನಿ ಮೋದಿ ರೋಡ್ ಶೋ ರದ್ದು

ಬೆಂಗಳೂರು, ಮೇ 04: ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ಮೇ 6ರಂದು ನಡೆಯಬೇಕಿದ್ದ ಪ್ರಧಾನಿ ನರೇಂದ್ರ ಮೋದಿಯವರ ಬೃಹತ್ ಸಮಾವೇಶ, ಮತಪ್ರಚಾರ ರದ್ದಾಗಿದೆ. ಇಲ್ಲಿ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಥೋಡ್ ಅವರ ಮೇಲಿನ ಕಳಂಕ ಋಜುವಾತಾದ ಕಾರಣ ಪ್ರಧಾನಿ ಕಾರ್ಯಕ್ರಮವನ್ನು ಬಿಜೆಪಿ ರದ್ದುಗೊಳಿಸಿತೆಂದು ಹೇಳಲಾಗುತ್ತಿದೆ.

ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (NDR) ಮಾಡಿದ್ದ ಇತ್ತೀಚಿನ ವರದಿಲ್ಲಿ ರಾಷ್ಟ್ರೀಯ ಮೂರು ಪಕ್ಷಗಳ ಅಭ್ಯರ್ಥಿಗಳಲ್ಲಿ ಶೇಕಡಾ 45 ರಷ್ಟು ನಾಯಕರ ಮೇಲೆ ಕ್ರಿಮಿನಲ್ ಪ್ರಕರಣಗಳು ಬಾಕಿ ಉಳಿದಿವೆ. ಆ ಪೈಕಿ ಚಿತ್ತಾಪುರದ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಥೋಡ್ ವಿರುದ್ಧ 43 ಪ್ರಕರಣಗಳಿವೆ. ಈ ಅಭ್ಯರ್ಥಿ ಪರ ಬೃಹತ್ ರ್ಯಾಲಿಯಲ್ಲಿ ಪ್ರಧಾನಿ ಮೋದಿ ಭಾಗವಹಿಸಬೇಕಿತ್ತು. ಅದರ ರದ್ದಾಗಿದೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.

PM Modi Rally Cancelled: BJP have Cancelled PM Modi Rally due to Tainted Candidate of Chittapur

ಅಂಗನವಾಡಿಯಲ್ಲಿ ಮಕ್ಕಳಿಗೆ ನೀಡುವ ಹಾಲಿನ ಪುಡಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡಿದ ಪ್ರಕರಣದಲ್ಲಿ ಸತ್ಯ ಬಯಲಾಗಿತ್ತು, ಈ ಸಂಬಂಧ ಶಿಕ್ಷೆಗೆ ಗುರಿಯಾಗಿದ್ದ ರಾಥೋಡ್ ಇತ್ತೀಚೆಗೆ ಮೇಲ್ಮನವಿ ಸಲ್ಲಿಸಿದ್ದರು. ಆದರೆ ರಾಥೋಡ್ ಮೇಲಿನ ಕಳ್ಳತನ ಆರೋಪ ಸಾಬೀತಾಗಿದ್ದರಿಂದ ಪ್ರಧಾನಿ ಮೋದಿ ಸಮಾವೇಶ ರದ್ದಾಗಿದೆ.

458 ಅಭ್ಯರ್ಥಿಗಳಿಂದ ಕ್ರಿಮಿನಲ್ ಕೇಸ್ ಘೋಷಣೆ

ಇತ್ತೀಚೆಗೆ ಪ್ರಧಾನಮಂತ್ರಿಗಳು ಮಂಡ್ಯದಲ್ಲಿ 'ಫೈಟರ್' ರವಿ ಅವರಿಗೆ ಶುಭಾಶಯ ಕೋರಿದ್ದರು. ಈ ಮೂಲಕ ದೊಡ್ಡ ಹುನ್ನಾರವನ್ನು ತಪ್ಪಿಸಬಹುದು ಎಂಬ ಲೆಕ್ಕಾಚಾರದಲ್ಲಿದ್ದ ಬಿಜೆಪಿಗೆ ಅಭ್ಯರ್ಥಿಗಳ ಕ್ರಿಮಿನಲ್ ಪ್ರಕರಣಗಳ ಪಟ್ಟಿಯು ಬೇರೆ ಪಕ್ಷದವರಿಗಿಂತ ಭಿನ್ನವಾಗಿಲ್ಲ. 119 ಪಕ್ಷೇತರ ಅಭ್ಯರ್ಥಿಗಳು ಸೇರಿದಂತೆ ಒಟ್ಟು 458 ಅಭ್ಯರ್ಥಿಗಳು ತಮ್ಮ ಮೇಲೆ ಎಷ್ಟು ಕ್ರಿಮಿನಲ್ ಪ್ರಕರಣಗಳಿವೆ ಎಂದು ಘೋಷಿಸಿದ್ದರು ಎಂದು ಎಡಿಆರ್ ವರದಿ ತಿಳಿಸಿದೆ.

ಇದರಲ್ಲಿ ಒಂದಷ್ಟು ಪ್ರಕರಣಗಳಲ್ಲಿ ಆರೋಪಪಟ್ಟಿ ಸಲ್ಲಿಸಿರುವ ಕೇಸುಗಳು ಇವೆ. ಕನಿಷ್ಠ 49 ಅಭ್ಯರ್ಥಿಗಳು ಮಹಿಳೆಯರ ವಿರುದ್ಧದ ಅಪರಾಧಗಳಿಗೆ ಸಂಬಂಧಿಸಿದ ಆರೋಪಗಳನ್ನು ಹೊಂದಿದ್ದಾರೆ. ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ವೇಳೆ ಘೋಷಿಸಿದ್ದ ಪ್ರಕರಣಗಳಲ್ಲಿ ಎಂಟು ಕೊಲೆಯ ಪ್ರಕರಣಗಳು (IPC 302) ಮತ್ತು 35 ಕೊಲೆ ಯತ್ನದ (IPC 307) ಪ್ರಕರಣಗಳು ಸೇರಿದಂತೆ ಎಂಬುದು ಆಘಾತಕಾರಿ ವಿಷಯವಾಗಿದೆ.

PM Modi Rally Cancelled: BJP have Cancelled PM Modi Rally due to Tainted Candidate of Chittapur

ಬಿಜೆಪಿ ಅಭ್ಯರ್ಥಿ ವಿರುದ್ಧ ಗರಿಷ್ಠ ಪ್ರಕರಣಗಳು
ಬಿಜೆಪಿ ಅಭ್ಯರ್ಥಿ ರಾಥೋಡ್ ವಿರುದ್ಧ ಗರಿಷ್ಠ ಸಂಖ್ಯೆಯ ಪ್ರಕರಣಗಳಿವೆ. ಇತ್ತ ಕಾಂಗ್ರೆಸ್‌ನ ವಿನಯ್ ಕುಲಕರ್ಣಿ (ಧಾರವಾಡ ಕ್ಷೇತ್ರ) ಮೂರು ಅತ್ಯಾಚಾರ ಮತ್ತು ಎರಡು ಕೊಲೆ ಆರೋಪಗಳನ್ನು ಎದುರಿಸುತ್ತಿದ್ದಾರೆ. ಕಾಂಗ್ರೆಸ್ ಮತ್ತೊಬ್ಬ ನಾಯಕ ಬಿ.ನಾಗೇಂದ್ರ ಅವರ ವಿರುದ್ಧದ 42 ಕ್ರಿಮಿನಲ್ ಪ್ರಕರಣಗಳು ಬಾಕಿ ಇವೆ.

ರಾಜ್ಯವನ್ನಾಳಲು ಭಯಸುವ ಅಭ್ಯರ್ಥಿಗಳ ವಿರುದ್ಧ ಹಲ್ಲೆ, ಕೊಲೆ ಮತ್ತು ಅತ್ಯಾಚಾರ, 5ವರ್ಷಕ್ಕೂ ಹೆಚ್ಚು ವರ್ಷಗಳ ಶಿಕ್ಷೆ, ಜಾಮೀನು ರಹಿತವಾದ ಮತ್ತು ಚುನಾವಣೆ ಸಂಬಂಧ ಅಪರಾಧ ಪ್ರಕರಣಗಳು ಇವೆ. ಪ್ರಮುಖ ಪಕ್ಷಗಳ ಪೈಕಿ, ಕಾಂಗ್ರೆಸ್‌ನ 221 ಅಭ್ಯರ್ಥಿಗಳ ಪೈಕಿ 69 ಮಂದಿ ಇಂತಹ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ, ಬಿಜೆಪಿಯ 224 ರಲ್ಲಿ 66, ಜೆಎಸ್‌ನ ನ 52 ಅಭ್ಯರ್ಥಿಗಳು 208 ಹಾಗೂ ಆಮ್ ಆದ್ಮಿ ಪಕ್ಷದ 208 ಅಭ್ಯರ್ಥಿಗಳಲ್ಲಿ 30 ಮಂದಿ ವಿರುದ್ಧ ಗಂಭೀರ ಕ್ರಿಮಿನಲ್ ಕೇಸ್‌ಗಳಿವೆ.

ರಾಜಕೀಯ ಪಕ್ಷಗಳು ಯಾಕೆ ಇಂತಹ ಅಪರಾಧ ಹಿನ್ನೆಲೆವುಳ್ಳವರಿಗೆ ಟಿಕೆಟ್ ನೀಡುತ್ತಿದೆ ಎಂಬುದು ಪ್ರಶ್ನೆಯಾಗಿದೆ. ರಾಜ್ಯ ಒಟ್ಟು ಕ್ಷೇತ್ರಗಳಲ್ಲಿ ಶೇಕಡಾ 25 ಕ್ಷೇತ್ರಗಳಲ್ಲಿ ಗಂಭೀರ ಪ್ರಕರಣಗಳನ್ನು ಹೊಂದಿರದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಅವಕಾಶಗಳೇ ಇಲ್ಲದಾಗಿದೆ. ಅಂದರೆ ಅಷ್ಟು ಕ್ಷೇತ್ರಗಳಲ್ಲಿ ಕ್ರಿಮಿನಲ್ ಹಿನ್ನೆಲೆ ಇರುವವರು ಚುನಾವಣೆ ಸ್ಫರ್ಧೆಗೆ ನಿಂತಿದ್ದಾರೆನ್ನಲಾಗಿದೆ. ಆದ್ದರಿಂದ ಜನರು ಅಭ್ಯರ್ಥಿಗಳ ಹಿನ್ನೆಲೆ ಅರಿತು ಮತ ಹಾಕಬೇಕು.

ಕೊಲೆ, ಅತ್ಯಾಚಾರ ಮತ್ತು ಡಕಾಯಿತಿಯಂತಹ ಘೋರ ಅಪರಾಧಗಳಲ್ಲಿ ಶಿಕ್ಷೆಗೊಳಗಾದ ಅಭ್ಯರ್ಥಿಗಳನ್ನು ಶಾಶ್ವತವಾಗಿ ಅನರ್ಹಗೊಳಿಸುವಂತೆ ಎಡಿಆರ್ ಶಿಫಾರಸು ಮಾಡಿದೆ. ರಾಜಕಾರಣಿಗಳು ಆರೋಪಿಯಾಗಿರುವ ಪ್ರಕರಣಗಳ ವಿಚಾರಣೆಯನ್ನು ಕಾಲಮಿತಿಯಲ್ಲಿ ಮುಕ್ತಾಯಗೊಳಿಸುವುದನ್ನು ಖಚಿತಪಡಿಸಿಕೊಳ್ಳಿ ಎಂದು ತಿಳಿಸಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+