ಎರಡು ದಿನ ಬಂದ್ ಬಳಿಕ ಸಹಜ ಸ್ಥಿತಿಯತ್ತ ಉತ್ತರ ಕನ್ನಡ
ಉತ್ತರಕನ್ನಡ, ಡಿಸೆಂಬರ್ 13 : ಎರಡು ದಿನಗಳ ಕಾಲ ಕುಮಟಾ, ಶಿರಸಿಯಲ್ಲಿ ನಡೆದ ಕೋಮು ಗಲಭೆ ನಂತರ ಇದೀಗ ಶಾಂತ ರೂಪಕ್ಕೆ ಮರಳುತ್ತಿದೆ.
ಹೊನ್ನಾವರದಲ್ಲಿ ನಡೆದ ಕೋಮುಗಲಭೆ ನಂತರ ಪರೇಶ್ ಮೇಸ್ತ ಕಾಣೆಯಾಗಿದ್ದ, ನಂತರ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದ, ಕೊಲೆ ಖಂಡಿಸಿ ವಿಶ್ ಹಿಂದೂ ಪರಿಷತ್ತು ಮತ್ತು ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿದ್ದರು. ಅದರಿಂದಾಗಿ ಹೊನ್ನಾವರ, ಕುಮಟಾ, ಶಿರಸಿ ಬಂದ್ ಮಾಡಲಾಗಿತ್ತು.

ಮಂಗಳವಾರ ಸಿದ್ದಾಪುರದಲ್ಲಿ ಕೂಡ ಶಾಂತಿಯುತ ಬಂದ್ ಆಚರಿಸಲಾಗುತ್ತಿದೆ. ಕುಮಟಾ, ಶಿರಸಿ, ಹೊನ್ನಾವರ ಸಹಜ ಸ್ಥಿತಿಯತ್ತ ಮರಳುತ್ತಿದೆ. ಬಸ್ ಸಂಚಾರ, ವ್ಯಾಪಾರ ವಹಿವಾಟು ಆರಂಭವಾಗಿದೆ. ಅಹಿತಕರೆ ಘಟನೆ ನಡೆಯದಂತೆ ಮತ್ತಷ್ಟು ಪೊಲೀಸರನ್ನು ನಿಯೋಜಿಸಲಾಗಿದೆ. ವಿವಿಧ ಸಂಘಟನೆಗಳು ಜತೆಗೆ ಜಿಲ್ಲಾಧಿಕಾರಿಗಳು ಸಭೆ ಕರೆದಿದ್ದಾರೆ. ಸೂಕ್ಷ್ಮ ಪ್ರದೇಶದಲ್ಲಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ.












Click it and Unblock the Notifications