ಬಿಜೆಪಿ ಪ್ರಣಾಳಿಕೆಯಲ್ಲಿ ‘ನಂದಿನಿ’ಗೆ ಸ್ಪೆಷಲ್ ಸ್ಥಾನಮಾನ!
ಬೆಂಗಳೂರು: ಅಮುಲ್ & ನಂದಿನಿ ವಿಚಾರ ಜನವರಿಯಿಂದ ಸದ್ದು ಮಾಡುತ್ತಿದೆ. ಅದ್ರಲ್ಲೂ ಗುಜರಾತ್ನ ಅಮುಲ್ ಜೊತೆ ನಂದಿನಿ ವಿಲೀನ ಆಗುತ್ತೆ ಎಂಬ ಸುದ್ದಿ ಹರಡಿದ್ದೇ ತಡ ಬಿರುಗಾಳಿ ಎದ್ದಿತ್ತು. ಈ ಸುದ್ದಿ ನಿಜವೋ, ಸುಳ್ಳೋ ಗೊತ್ತಿಲ್ಲ. ನಂದಿನಿಯನ್ನ ಅಮುಲ್ ಜೊತೆ ವಿಲೀನ ಮಾಡಿದರೆ ಪರಿಣಾಮ ನೆಟ್ಟಗಿರಲ್ಲ ಎಂಬ ಸಂದೇಶ ಸಿಕ್ಕಿತ್ತು. ಹೋರಾಟದ ಎಫೆಕ್ಟ್ ಈಗ ರಿಫ್ಲೆಕ್ಟ್ ಆಗಿದೆಯಾ? ಅಂತಾ ಬಿಸಿಬಿಸಿ ಚರ್ಚೆ ಶುರುವಾಗಿದೆ.
ಹೀಗೆ ಮತ್ತೊಮ್ಮೆ ಅಮುಲ್ & ನಂದಿನಿ (Nandini Amul) ವಿಚಾರ ಚರ್ಚೆಗೆ ಬರಲು ಕಾರಣ ಬಿಜೆಪಿ ಇಂದು ಬಿಡುಗಡೆ ಮಾಡಿರುವ ಕರ್ನಾಟಕ ಚುನಾವಣಾ ಪ್ರಣಾಳಿಕೆ. ತಾವು ಅಧಿಕಾರಕ್ಕೆ ಬಂದರೆ ಮುಂದೆ ಏನೆಲ್ಲಾ ಕೆಲಸ ಮಾಡುತ್ತೇವೆ ಎಂಬ ಬಗ್ಗೆ ಬಿಜೆಪಿ ಈ ಪ್ರಣಾಳಿಕೆಯಲ್ಲಿ ಮಾಹಿತಿ ನೀಡಿದ್ದು, ಕನ್ನಡ ನಾಡಿನ ಹೆಮ್ಮೆಯ ಬ್ರಾಂಡ್ 'ನಂದಿನಿ' ವಿಚಾರ ಕೂಡ ಚರ್ಚೆಗೆ ಬಂದಿದೆ. ಈ ಮೂಲಕ ಹೋರಾಟದ ಕಿಚ್ಚಿನ ಬಿಸಿ ತಲುಪಿತಾ? ಎಂದು ವಿಪಕ್ಷಗಳ ನಾಯಕರು ಮತ್ತು ಸೋಷಿಯಲ್ ಮೀಡಿಯಾ ಬಳಕೆದಾರರು ಬಿಜೆಪಿ ನಾಯಕರನ್ನ ಪ್ರಶ್ನೆ ಮಾಡುತ್ತಿದ್ದಾರೆ.

ಬಡವರಿಗೆ 'ನಂದಿನಿ' ಉಚಿತ!
ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಈ ಬಾರಿ ಸಾಕಷ್ಟು ಉಚಿತ ಉಡುಗೊರೆ ನೀಡುವುದಾಗಿ ಆಶ್ವಾಸನೆ ನೀಡಿದೆ. ಈ ಬಾರಿ ಪ್ರಣಾಳಿಕೆಯಲ್ಲಿ ಬಿಜೆಪಿ, ಬಿಪಿಎಲ್ ಕುಟುಂಬಕ್ಕೆ ವರ್ಷಕ್ಕೆ 3 ಉಚಿತ ಅಡುಗೆ ಅನಿಲ ಸಿಲಿಂಡರ್ ನೀಡುವ ಭರವಸೆ ನೀಡಿದೆ. ಜೊತೆಗೆ BPL ಪಡಿತರ ಚೀಟಿ ಹೊಂದಿರುವವರಿಗೆ ಪ್ರತಿ ದಿನ ಅರ್ಧ ಲೀಟರ್ ನಂದಿನಿ ಹಾಲು ಉಚಿತ, 5 ಕೆಜಿ ತಿಂಗಳಿಗೆ ಸಿರಿಧಾನ್ಯ ನೀಡುವುದಾಗಿ ಘೋಷಣೆ ಮಾಡಿದೆ. ಆದರೆ ಅರ್ಧ ಲೀಟರ್ ನಂದಿನಿ ಹಾಲು ಉಚಿತವಾಗಿ ನೀಡುವ ವಿಚಾರದ ಸುತ್ತ ಬಿಸಿಬಿಸಿ ಚರ್ಚೆ ಆರಂಭವಾಗಿದೆ.
'ನಂದಿನಿ' ಪರ ಮತ್ತೆ ಅಭಿಯಾನ!
ನಂದಿನಿ ಮತ್ತು ಅಮುಲ್ ವಿಚಾರ ಚರ್ಚೆಗೆ ಬಂದಾಗ ಟ್ವಿಟ್ಟರ್ನಲ್ಲೇ ಅತಿಹೆಚ್ಚು ಚರ್ಚೆ ಶುರುವಾಗಿತ್ತು, ಈಗಲೂ ಅಷ್ಟೇ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಅರ್ಧ ಲೀಟರ್ ನಂದಿನಿ ಹಾಲು ಉಚಿತವಾಗಿ ಕೊಡುವ ಭರವಸೆ ನೀಡಿದ ಬಳಿಕ ಮತ್ತೊಮ್ಮೆ ಟ್ವಿಟ್ಟರ್ ಅಖಾಡ ಅಮುಲ್ & ನಂದಿನಿ ಚರ್ಚೆಗೆ ವೇದಿಕೆಯಾಗಿದೆ. ನಂದಿನಿ ಪರ ಟ್ವೀಟ್ಗಳ ಅಭಿಯಾನ ಶುರುವಾಗಿದ್ದು, ಆ ಬಗ್ಗೆ ಸಂಪೂರ್ಣ ವಿವರ ಮುಂದೆ ತಿಳಿಯೋಣ.
'ಇದು ಹೋರಾಟಗಾರರ ತಾಕತ್ತು..✌️'
ನಂದಿನಿ ಉಳಿಸಿ ಎಂದು ಹೋರಾಟ ಶುರು ಮಾಡಿದ್ದವರೇ ಈಗ ಬಿಜೆಪಿ ಪ್ರಣಾಳಿಕೆ ಪ್ರಸ್ತಾಪಿಸಿ ಚರ್ಚೆ ಆರಂಭಿಸಿದ್ದಾರೆ. ರೂಪೇಶ್ ರಾಜಣ್ಣ ಟ್ವಿಟ್ಟರ್ನಲ್ಲಿ 'ಇದು ಹೋರಾಟಗಾರರ ತಾಕತ್ತು..✌️ ತಮ್ಮ ವಾಲ್ ಮೇಲೆ ಅಮುಲ್ ಪೋಟೋ ಹಾಕೊಂಡ್ ಕನ್ನಡಿಗರ ಹೋರಾಟ ಅಣಕಿಸುತ್ತಿದ್ದ ಫೇಕ್ ವೀರರು ಬೆಳಗ್ಗಿನಿಂದ ನಾಪತ್ತೆ.. ಪಾಪ. ಹಾಗೆ ಬರೀ ಹಾಲು ಅನ್ನದೆ ನಂದಿನಿ ಹೆಸರನ್ನು ಬಳಸಿದ್ದಾರೆ ಅಂದ್ರೆ ನಂದಿನಿ ಹಾಲಿನ ಪರ ಹೋರಾಟ ಇಂದು ಆಳುವವರಿಗೆ ತಲುಪಿದೆ ಎಂದರ್ಥ. ನಂದಿನಿ ಹಾಲು ಎಂದೂ ಕನ್ನಡಿಗರ ಹೆಮ್ಮೆ..' ಎಂದು ಬರೆದುಕೊಂಡಿದ್ದಾರೆ.
ಇದು ಹೋರಾಟಗಾರರ ತಾಕತ್ತು..✌️
— ರೂಪೇಶ್ ರಾಜಣ್ಣ(RUPESH RAJANNA) (@rajanna_rupesh) May 1, 2023
ತಮ್ಮ ವಾಲ್ ಮೇಲೆ ಅಮುಲ್ ಪೋಟೋ ಹಾಕೊಂಡ್ ಕನ್ನಡಿಗರ ಹೋರಾಟ ಅಣಕಿಸುತ್ತಿದ್ದ ಫೇಕ್ ವೀರರು ಬೆಳಗ್ಗಿನಿಂದ ನಾಪತ್ತೆ..ಪಾಪ.
ಹಾಗೆ
ಬರೀ ಹಾಲು ಅನ್ನದೆ ನಂದಿನಿ ಹೆಸರನ್ನು ಬಳಸಿದ್ದಾರೆ ಅಂದ್ರೆ ನಂದಿನಿ ಹಾಲಿನ ಪರ ಹೋರಾಟ ಇಂದು ಆಳುವವರಿಗೆ ತಲುಪಿದೆ ಎಂದರ್ಥ.
ನಂದಿನಿ ಹಾಲು ಎಂದೂ ಕನ್ನಡಿಗರ ಹೆಮ್ಮೆ.. pic.twitter.com/W3X6FxKjzy
ಟ್ವೀಟ್ ವಿರುದ್ಧ ಟ್ವೀಟ್ ಶುರು!
ಮತ್ತೊಂದ್ಕಡೆ ನಂದಿನಿ ಪರ ಟ್ವೀಟ್ ಶುರುವಾಗಿರುವ ಹೊತ್ತಲ್ಲೇ, ಕಿತ್ತಾಟ ಕೂಡ ಶುರುವಾಗಿದೆ. ಈ ಹಿಂದೆ ಅಮುಲ್ ಪರವಾಗಿ ಧ್ವನಿ ಎತ್ತಿದ್ದವರೇ ಈಗ ನಂದಿನಿ ಪರ ಮಾತನಾಡುತ್ತಿದ್ದಾರೆ ಎಂದು ಕನ್ನಡಪರ ಹೋರಾಟಗಾರರು ಆರೋಪ ಮಾಡುತ್ತಿದ್ದಾರೆ. ಈ ತಿಕ್ಕಾಟದ ನಡುವೆ ಮತ್ತೊಮ್ಮೆ ಟ್ವಿಟ್ಟರ್ ಅಮುಲ್ ಹಾಗೂ ನಂದಿನಿಯ ಚರ್ಚೆಗೆ ಭಾರಿ ದೊಡ್ಡ ವೇದಿಕೆ ಒದಗಿಸಿದೆ. ಇದಕ್ಕೆ ರಾಜಕೀಯ ಪಕ್ಷಗಳು ಅಧಿಕೃತವಾಗಿ ಎಂಟ್ರಿಯಾದರೆ, ಚರ್ಚೆ ಇನ್ನೊಂದು ಲೆವೆಲ್ ರೀಚ್ ಆಗೋದು ಪಕ್ಕಾ. ಜೊತೆಗೆ ಚುನಾವಣಾ ಅಸ್ತ್ರವಾಗಿಯೂ ಬಳಕೆಯಾಗೋದು ಗ್ಯಾರಂಟಿ.
ಒಟ್ನಲ್ಲಿ ಚುನಾವಣೆ ಹೊತ್ತಲ್ಲೇ ಮತ್ತೊಮ್ಮೆ ಅಮುಲ್ & ನಂದಿನಿ ವಿಚಾರ ಮುನ್ನೆಲೆಗೆ ಬಂದಿದೆ. ಬಿಜೆಪಿ ಕೂಡ ನಂದಿನಿ ವಿಚಾರದಲ್ಲಿ ಭರ್ಜರಿ ಉಚಿತ ಕೊಡುಗೆ ನೀಡಲು ಮುಂದಾಗಿದೆ. ಆದರೆ ಇದೆಲ್ಲಾ ಯಾವ ರೀತಿ ವರ್ಕೌಟ್ ಆಗುತ್ತೆ ಅನ್ನೋದನ್ನ ಕಾದು ನೋಡಬೇಕಿದೆ. ಮೇ 10ರಂದು ವಿಧಾನಸಭಾ ಚುನಾವಣೆಗೆ ಮತದಾನ ನಡೆಯಲಿದ್ದು, ಮೇ 13ರಂದು ಫಲಿತಾಂಶ ಕೂಡ ಪ್ರಕಟವಾಗಲಿದೆ. ಅಂದೇ ಕನ್ನಡ ನಾಡಿನಲ್ಲಿ ಅಧಿಕಾರ ಹಿಡಿಯುವವರು ಯಾರು ಎಂಬ ಸತ್ಯ ಬಹಿರಂಗವಾಗಲಿದೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications