Get Updates
Get notified of breaking news, exclusive insights, and must-see stories!

Pramod Mutalik: ಅಯೋಧ್ಯೆಗೆ ತೆರಳುವವರ ಮೇಲೆ ಮುಸ್ಲಿಂರಿಂದ ಗಲಭೆ ಮಾಡಿಸಲು ಹೇಳಿರಬಹುದು: ಮುತಾಲಿಕ್

ಬೆಂಗಳೂರು, ಜನವರಿ 04: ಕಾಂಗ್ರೆಸ್ ನಾಯಕರಿಂದ ಹಿಂದೂಗಳ ಮತ್ತು ಅಯೋಧ್ಯೆಗೆ ತೆರಳುವವರಲ್ಲಿ ಭೀತಿ ಮೂಡಿಸುವ ಕೆಲಸ ಆಗುತ್ತಿದೆ. ಗೋದ್ರಾ ಮಾದರಿಯಲ್ಲಿ ಗಲಭೆಯಾಗಲಿದೆ ಎನ್ನುವ ಮೂಲಕ ಹಿಂದೂಗಳನ್ನು ಹೆದರಿಸುವ ಕೆಲಸವಿದು ಎಂದು ಶ್ರೀರಾಮ್ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲೀಕ್ ಹೇಳಿದರು.

ರಾಮಜನ್ಮಭೂಮಿ ಪ್ರಕರಣದಲ್ಲಿ ಬಂಧಿತರಾಗಿರುವ ಶ್ರಿಕಾಂತ್ ಪೂಜಾರಿ ಅವರ ಹುಬ್ಬಳ್ಳಿಯಲ್ಲಿ ನಾರಾಯಣ ಪೇಟೆಯಲ್ಲಿನ ನಿವಾಸಕ್ಕೆ ಭೇಟಿ ನೀಡಿದರು. ಕುಟುಂಬಸ್ಥರಿಗೆ ಧೈರ್ಯ ತುಂಬಿದ ಬಳಿಕ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.

Muthalik Alleged BK Hariprasad May Have Provoked Muslims do Riots Against Ayodhya Devotees

ಕಾಂಗ್ರೆಸ್ ಹಿರಿಯ ನಾಯಕ ಹಾಗೂ ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಅವರ ಹೇಳಿಕೆಯೂ ಕೂಡ ಹಿಂದುಗಳು ಹಾಗೂ ಅಯೋಧ್ಯೆಗೆ ತೆರಳುವವರಲ್ಲಿ ಭೀತಿ ಮೂಡಿಸುತ್ತಿದೆ. ಗೋದ್ರಾ ಮಾದರಿಯಲ್ಲಿ ಗಲಭೆಯಾಗಲಿದೆ ಎನ್ನುವ ಮೂಲಕ ಹಿಂದೂಗಳನ್ನು ಹೆದರಿಸುವ ಕೆಲಸ ಮಾಡುತ್ತಿದ್ದಾರೆ. ಗೋದ್ರಾ ಘಟನೆಯಲ್ಲಿ ಪಾಲ್ಗೊಂಡವರು ಯಾರು? ಇದೀಗ ಅಯೋಧ್ಯಕ್ಕೆ ಹೋಗುವ ರೈಲಿನ ಮೇಲೆ ಮುಸ್ಲಿಂರ ಮೂಲಕ ಗಲಭೆ ಮಾಡಿಸುವ ಹೇಳಿಕೆ ಇರಬಹುದು ಎಂದು ತಿರುಗೇಟು ಕೊಟ್ಟ ಮುತಾಲಿಕ್, ಮೊದಲು ಇವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಸಿಎಂ, ಗೃಹ ಸಚಿವರು ದಾರಿ ತಪ್ಪಿಸುತ್ತಿದ್ದಾರೆ

ಶ್ರೀಕಾಂತ್ ಪೂಜಾರಿ ದುಡಿಯುವ ವ್ಯಕ್ತಿ. ಆತನ ಬಿಡುಗಡೆ ಕುರಿತು ಕುಟುಂಬದವರು ಆತಂಕದಲ್ಲಿದ್ದಾರೆ. ಕಾಂಗ್ರೆಸ್ ಆತನನ್ನು ಅಮಾನವೀಯವಾಗಿ ಬಂಧನ ಮಾಡಿದ್ದನ್ನು ಶ್ರೀರಾಮ್ ಸೇನೆ ಖಂಡಿಸುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಜಿ.ಪರಮೇಶ್ವರ ಅವರು ಸೇರಿ ಹಲವು ಸ್ಥಳೀಯ ನಾಯಕರು ದಾರಿ ತಪ್ಪಿಸುತ್ತಿದ್ದಾರೆ. ಅಬ್ಬಯ್ಯನೋ, ಅಬ್ದುಲ್ಲಾನೋ (ಪ್ರಸಾದ್ ಅಬ್ಬಯ್ಯ) ಅವರು ದಾರಿ ತಪ್ಪಿಸುತ್ತಿದ್ದಾರೆ ಎಂದು ಕಿಡಿ ಕಾರಿದರು.

ಶ್ರೀಕಾಂತ್ ಪೂಜಾರಿ ಅಪರಾಧಿ ಅಲ್ಲ

ಶ್ರೀಕಾಂತ್ ಪೂಜಾರಿ ಅವರು ಎಲ್ಲ ಕೇಸ್ ಗಳಲ್ಲೂ ಆತ ನೀರ್ದೋಷಿಯಾಗಿ ಹೊರ ಬಂದಿದ್ದಾರೆ. 1992 ನಂತರ 13 ಕೇಸ್ ಗಳು ಆಗಿವೆ. ನ್ಯಾಯಾಲಯ ಅವರನ್ನು ನಿರ್ದೋಷಿ ಎಂದು ಬಿಡುಗಡೆ ಮಾಡಿದೆ. ಹೀಗಿದ್ದರೂ ದಾರಿ ತಪ್ಪಿಸುವ ಕೆಲಸವಾಗುತ್ತಿದೆ.

Muthalik Alleged BK Hariprasad May Have Provoked Muslims do Riots Against Ayodhya Devotees

ಕಾಂಗ್ರೆಸ್ ವ್ಯವಸ್ಥಿತವಾಗಿ ಸುಳ್ಳು ಕೇಸ್ ಹಾಕಿ ಭ್ರಷ್ಟಾಚಾರ ಮಾಡುತ್ತಿದೆ ಎಂದು ಕಾಂಗ್ರೆಸ್‌ ವಿರುದ್ಧ ಹರಿಹಾಯ್ದರು.

ನನ್ನ ಮೇಲೆ 110 ಕೇಸ್ ಇವೆ, ನನ್ನನ್ನು ಗಲ್ಲಿಗೆ ಏರಿಸಬೇಕಿತ್ತು. ಹಾಗಾದ್ರೆ ನಾನು ಕೂಡ ಗುಂಡಾ ನಾ? ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ರಾಮಮಯ ಸಹಿಸದ ಕಾಂಗ್ರೆಸ್: ಮುತಾಲಿಕ್

ಬೇರೆಯವರು ದುಡ್ಡು ಕೊಟ್ಟಿದ್ದಾರೆ ಅದಕ್ಕೆ ಬಂಧನ ಅವರನ್ನು ಮಾಡಿಲ್ಲ. ಇವರಿಗೆ ದುಡ್ಡು ಕೊಡಲು ಆಗಿಲ್ಲ ಅದಕ್ಕೆ ಇವರನ್ನು ಬಂಧಿಸಿದ್ದಾರೆ. ದೊಂಬಿ ಕೇಸ್ ಅಂತಾ ಹಾಕಿದ್ದಾರೆ. ಯಾವ ಆಧಾರದ ಮೇಲೆ ದೊಂಬಿ ಪ್ರಕರಣ ಎಂದು ಹೇಳುತ್ತಿದ್ದಾರೆ. ದೇಶವೇ ರಾಮಮಯವಾಗುತ್ತಿದೆ. ಇದನ್ನು ಸಹಿಸಕೊಳ್ಳದೇ ಹೊಟ್ಟೆ ಉರಿಗೆ ಹೀಗೆಲ್ಲ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಇವರಿಗೆ ಲೋಕಸಭಾ ಚುನಾವಣೆ ಭಯ ಶುರುವಾಗಿದೆ. ಬಂಧಿತ ಪೂಜಾರಿ ರೌಡಿ ಶೀಟರ್ ಅಲ್ಲಾ, ಅಪರಾಧಿ ಅಲ್ಲಾ ಮುಖ್ಯಮಂತ್ರಿಗಳೇ ಆರೋಪಿ. ಕೋರ್ಟ್ ಇವರನ್ನು ಯಾವ ಪ್ರಕರಣದಲ್ಲೂ ಅಪರಾಧಿ ಎಂಧು ಹೇಳಿಲ್ಲ. ನಿಮ್ಮ ಟಾರ್ಗೆಟ್ ಟಾರ್ಗೆಟ್ ಹಿಂದುತ್ವ, ರಾಮ ಭಕ್ತರ ಮೇಲೆ ಎಂದು ತಿಳಿಸಿದರು.

ತಾಕತ್ತಿದ್ದವರು ಹಿಂದೂರಾಷ್ಟ್ರ ಮಾಡುವುದನ್ನು ತಡೆಯಿರಿ

ಅಪ್ಪನ ಲುಂಗಿ ಹಿಡಕೊಂಡು ಬಂದವರು ಇವರು. ಭಾರತವು ಸಹ ಪಾಕಿಸ್ತಾನ್, ಅಪಘಾನಿಸ್ಥಾನ ರೀತಿ ಆಗುತ್ತದೆ ಎಂದರೆ ಇಲ್ಲಿ ಆರ್ಥಿಕ ದಿವಾಳಿ ಆಗಿದೆ ಅಂತಾನಾ?. ನಾವು ಹಿಂದೂ ರಾಷ್ಟ್ರ ಮಾಡೇ ಮಾಡತ್ತೇವೆ. ತಾಕತ್ತು ಇರುವವರು ತಡೆಯಿರಿ ನೋಡೋಣ ಎಂದು ಮುತಾಲಿಕ್ ಸವಾಲು ಹಾಕಿದರು.

ಇನ್ನೂ ಈ ಪ್ರಕರಣ ಸಂಬಂಧ ಪೂಜಾರಿ ಅವರನ್ನು ಜೈಲಿಗೆ ಹೋಗಿ ಭೇಟಿ ಮಾಡುತ್ತೇನೆ. ಕೋರ್ಟ್ ಪ್ರೊಸೆಸ್ ಇರುವುದರಿಂದ ಯಾವ ಸರ್ಕಾರವು ಕೇಸ್‌ನ್ನು ಹಿಂಪಡೆಯಲಾಗಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಅಲ್ಲದೇ ಅವರಿಗೆ ಜಾಮೀನು ಸಿಕ್ಕ ನಂತರ ಕೇಸ್ ರದ್ದಿಗೆ ಮನವಿ ಮಾಡುತ್ತೇನೆ ಎಂದರು.

ನಂತರ ಅವರು ಹುಬ್ಬಳ್ಳಿಯ ಚನ್ನಪೇಟನಲ್ಲೆ ಇರುವ ಮತ್ತೊಬ್ಬ ಹೋರಾಟಗಾರನ ಮನೆಗೆ ಭೇಟಿ ನೀಡಿದರು. ಪ್ರಕರಣದಲ್ಲಿ ಎಂಟನೇ ಆರೋಪಿ ಎನ್ನಲಾಗುತ್ತಿರುವ 77 ವರ್ಷದ ವಯಸ್ಸಿನ ರಾಮಚಂದ್ರ ಕಲಬುರ್ಗಿ ಮನೆಗೆ ಭೇಟಿ ನೀಡಿದ ಮುತಾಲಿಕ್ ಅವರ ಕುಟುಂಬಸ್ಥರಿಗೆ ಧೈರ್ಯ ತುಂಬಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+