Get Updates
Get notified of breaking news, exclusive insights, and must-see stories!

ಬಿಜೆಪಿಯಿಂದ ಹಣ ಪಡೆದ ಮುಸ್ಲಿಮರು ಕಾಂಗ್ರೆಸ್‌ಗೆ ಮತ ಹಾಕಿದರು: ಮಾಜಿ ಸಚಿವ ಎಂಟಿಬಿ ನಾಗರಾಜ್ ವಿವಾದ

ಬೆಂಗಳೂರು, ಜೂನ್‌ 13: ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಸೋಲಿಗೆ ಮುಸ್ಲಿಂ ಸಮುದಾಯವೇ ಕಾರಣ ಎಂದು ಬಿಜೆಪಿ ಮುಖಂಡ ಹಾಗೂ ಮಾಜಿ ಸಚಿವ ಎಂಟಿಬಿ ನಾಗರಾಜ್ ಹೇಳಿದ್ದಾರೆ. ಇದು ರಾಜ್ಯದಲ್ಲಿ ವಿವಾದವನ್ನು ಹುಟ್ಟುಹಾಕುವ ಎಲ್ಲ ಲಕ್ಷಣಗಳು ಕಾಣುತ್ತಿವೆ.

ಬಿಜೆಪಿಯಿಂದ ಹಣ ಪಡೆದರೂ ಮುಸ್ಲಿಂ ಸಮುದಾಯದವರು ಕಾಂಗ್ರೆಸ್‌ಗೆ ಮತ ಹಾಕಿದ್ದಾರೆ ಎಂದು ನಾಗರಾಜ್ ಆರೋಪಿಸಿದ್ದಾರೆ.

Muslims who received money from BJP voted for Congress: Ex-minister MTB Nagaraj

ಹೊಸಕೋಟೆಯಲ್ಲಿ ಭಾನುವಾರ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, 'ಮುಸ್ಲಿಮರಿಗೆ ಹಣ ನೀಡಬೇಡಿ ಎಂದು ಬಹಳಷ್ಟು ಜನರು ಹೇಳಿದ್ದರು' ಎಂದು ನಾಗರಾಜ್ ಹೇಳಿದ್ದಾರೆ.

'ಅವರಲ್ಲಿ ಕೆಲವರು ಕುರಾನ್ ಮತ್ತು ಅಲ್ಲಾಹನ ಮೇಲೆ ವಾಗ್ದಾನ ಮಾಡಿದರು. ದೇವರ ಹೆಸರಿನಲ್ಲಿ ಭರವಸೆ ನೀಡಿದರು. ಈ ಹಿನ್ನೆಲೆಯಲ್ಲಿ ಬಿಜೆಪಿಯಿಂದ ಹಣ ತೆಗೆದುಕೊಂಡರು. ಆದರೆ, ಕಾಂಗ್ರೆಸ್‌ಗೆ ಮತ ನೀಡಿದರು' ಎಂದು ಅವರು ತಿಳಿಸಿದ್ದಾರೆ.

'ಪ್ರತಿದಿನ ನಮಾಜ್ ಮಾಡುವ ಮತ್ತು ದೇವರನ್ನು ಪ್ರಾರ್ಥಿಸುವ ಈ ಜನರನ್ನು ನಾನು ಕೇಳುತ್ತೇನೆ. ನೀವು ಕಾಂಗ್ರೆಸ್‌ಗೆ ಮತ ನೀಡುವುದಿದ್ದರೆ ನಮ್ಮಿಂದ ಬಿಜೆಪಿ ಏಕೆ ಹಣ ತೆಗೆದುಕೊಂಡಿದ್ದೀರಿ? ನಮಗೆ ಉತ್ತರಿಸಿ' ಎಂದು ಎಂಟಿಬಿ ನಾಗರಾಜ್‌ ಹೇಳಿದ್ದಾರೆ.

ನೀವು ಕಾಂಗ್ರೆಸ್‌ಗೆ ಮತ ಹಾಕಬಹುದು. ಅದು ಬೇರೆ ಪ್ರಶ್ನೆ. ಆದರೆ ನಮ್ಮ ಜನರು ನಿಮಗೆ ನೀಡಿದ ವಸ್ತುಗಳನ್ನು ಮತ್ತು ಹಣವನ್ನು ಹೇಗೆ ತೆಗೆದುಕೊಂಡಿರಿ ಎಂದು ಪ್ರಶ್ನಿಸಿದ್ದಾರೆ.

ಎಂಟಿಬಿ ನಾಗರಾಜ್ ಅವರು ವಿಧಾನಸಭಾ ಚುನಾವಣೆಯಲ್ಲಿ ಹೊಸಕೋಟೆಯಿಂದ ಸ್ಪರ್ಧಿಸಿದ್ದರು. ಕಾಂಗ್ರೆಸ್‌ನ ಶರತ್ ಬಚ್ಚೇಗೌಡ ವಿರುದ್ಧ 5,075 ಮತಗಳಿಂದ ಸೋತಿದ್ದಾರೆ. ನಾಗರಾಜ್ ಭಾಷಣದ ತುಣುಕುಗಳು ಮಂಗಳವಾರ ಸಾಮಾಜಿಕ ಮಾಧ್ಯಮ ಮತ್ತು ವಾಟ್ಸಾಪ್‌ಗಳಲ್ಲಿ ವ್ಯಾಪಕವಾಗಿ ಹರಡುತ್ತಿವೆ.

ಕಾಂಗ್ರೆಸ್ ಅಭ್ಯರ್ಥಿ ಶರತ್ ಬಚ್ಚೇಗೌಡ ಅವರು ಸತತ ಎರಡನೇ ಬಾರಿಗೆ ಪ್ರತಿಸ್ಪರ್ಧಿ ಎಂಟಿಬಿ ನಾಗರಾಜ್ ಅವರನ್ನು ಸೋಲಿಸಿದ್ದಾರೆ.

ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರವನ್ನು ಸರ್ಕಾರವನ್ನು ಕೆಡವಲು ಬಿಜೆಪಿ ರೂಪಿಸಿದ ಆಪರೇಷನ್ ಕಮಲದಲ್ಲಿ ನಾಗರಾಜ್ ಅವರು ರಾಜೀನಾಮೆ ನೀಡಿದ್ದರು. ಆ ನಂತರ ಬಿಜೆಪಿಗೆ ಸೇರಿ ಸಚಿವರೂ ಆಗಿದ್ದರು.

2೦19 ರ ಡಿಸೆಂಬರ್‌ನಲ್ಲಿ ನಡೆದ ಉಪಚುನಾವಣೆಯಲ್ಲಿ ಶರತ್ ಬಚ್ಚೇಗೌಡ ಅವರು ಎಂಟಿಬಿ ನಾಗರಾಜ್ ಅವರನ್ನು ಸೋಲಿಸಿದರು. ಎಂಎಲ್‌ಎ ಚುನಾವಣೆಯಲ್ಲಿ ಸೋತರೂ, ಎಂಎಲ್‌ಸಿ ಸ್ಥಾನವನ್ನು ಗಿಟ್ಟಿಸಿ ಸಚಿವರಾಗಿಯೂ ಎಂಟಿಬಿ ಅಧಿಕಾರ ವಹಿಸಿಕೊಂಡರು.

ಹೊಸಕೋಟೆಯಲ್ಲಿ ಬಚ್ಚೇಗೌಡ ಕುಟುಂಬ ಮತ್ತು ಎಂಟಿಬಿ ಕುಟುಂಬದವರು ಪ್ರತಿಸ್ಪರ್ಧಿಗಳಾಗಿದ್ದಾರೆ. ಶರತ್‌ ಅವರ ತಂದೆ ಬಚ್ಚೇಗೌಡರು ಐದು ಬಾರಿ ಗೆದ್ದಿದ್ದಾರೆ. 1978, 1985, 1994, 1999 ಮತ್ತು 2008ರಲ್ಲಿ ಎಂಎಲ್‌ಎ ಆಗಿ ಆಯ್ಕೆಯಾಗಿದ್ದಾರೆ. ಎಂಟಿಬಿ ನಾಗರಾಜ್‌ ಅವರು 2004, 2013 ಮತ್ತು 2018 ರಲ್ಲಿ ಗೆದ್ದಿದ್ದಾರೆ.

ಭಾರತದ ಶ್ರೀಮಂತ ರಾಜಕಾರಣಿಗಳಲ್ಲಿ ಒಬ್ಬರಾದ ಎಂಟಿಬಿ ನಾಗರಾಜ್ ಅವರು 2018 ಮತ್ತು 2013 ರಲ್ಲಿ ಬಚ್ಚೇಗೌಡರ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯಾಗಿ ಹೊಸಕೋಟೆಯಿಂದ ಗೆದ್ದಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+