Munirathna Naidu: ಒಕ್ಕಲಿಗರು & ದಲಿತರನ್ನು ಹೊಡೆದು ಓಡಿಸು ಅಂತಿದ್ದರಾ ಮುನಿರತ್ನ ನಾಯ್ಡು?
ಮುನಿರತ್ನಂ ನಾಯ್ಡು ವಿರುದ್ಧ ಭಾರಿ ಗಂಭೀರ ಆರೋಪಗಳೇ ಕೇಳಿಬರುತ್ತಿವೆ. ಅದರಲ್ಲೂ ಮುನಿರತ್ನಂ ನಾಯ್ಡು ದಲಿತರು & ಒಕ್ಕಲಿಗರ ಮೇಲೆ ಎಷ್ಟೆಲ್ಲಾ ದ್ವೇಷ ಇಟ್ಟುಕೊಂಡಿದ್ದರು? ಎಂಬುದಕ್ಕೆ ಅವರ ಜೊತೆಗಾರರ ಆರೋಪಗಳೇ ಸಾಕ್ಷಿ ಆಗುತ್ತಿವೆ. ಅದರಲ್ಲೂ ಮುನಿರತ್ನಂ ನಾಯ್ಡು ಮನೆ ಮುಂದೆ, ಶಾಸಕರ ಸಹಾಯ ಕೇಳಿಕೊಂಡು ಬರುತ್ತಿದ್ದವರನ್ನು ಜಾತಿ ಕೇಳಿ ಮಾತನಾಡಿಸುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ. ಅದರಲ್ಲೂ ಒಕ್ಕಲಿಗರು & ದಲಿತರನ್ನ ಹೊಡೆದು ಓಡಿಸು ಅಂತಿದ್ದರಂತೆ ಶಾಸಕ ಮುನಿರತ್ನಂ ನಾಯ್ಡು ಅವರು! ಹಾಗಾದ್ರೆ ಹೀಗೆ ಆರೋಪ ಮಾಡಿದ್ದು ಯಾರು?
ಕನ್ನಡ ನಾಡಿನ ಜನ ಪ್ರತಿನಿಧಿ ಮಾಡಿದ ತಪ್ಪಿನ ಕಾರಣ ಈಗ, ಕನ್ನಡ ನಾಡಿನ ಮಾನಕ್ಕೆ ಕೂಡ ಧಕ್ಕೆ ಎದುರಾಗಿದೆ ಎನ್ನುವ ಗಂಭೀರವಾದ ಆರೋಪ ಇದೀಗ ದೇಶಾದ್ಯಂತ ಕೇಳಿ ಬರುತ್ತಿದೆ. ಕರ್ನಾಟಕದ ಶಾಸಕ ಮುನಿರತ್ನಂ ನಾಯ್ಡುಗೆ ಸಂಬಂಧಿಸಿದ ಆಡಿಯೋ ಎಂದು ಆರೋಪಿಸಿ ಸೋಷಿಯಲ್ ಮೀಡಿಯಾದಲ್ಲಿ ಧ್ವನಿ ವೈರಲ್ ಆಗುತ್ತಿದೆ, ಹಾಗೇ ಆಕ್ರೋಶವೂ ವ್ಯಕ್ತವಾಗಿದೆ. ಮುನಿರತ್ನಂ ನಾಯ್ಡು ದಲಿತರು & ಒಕ್ಕಲಿಗರನ್ನ ನಿಂದಿಸಿದ್ದಾರೆ ಎಂಬ ಆರೋಪ ದೇಶಾದ್ಯಂತ ಸಂಚಲನ ಸೃಷ್ಟಿ ಮಾಡಿದೆ. ಅಲ್ಲದೆ ಮುನಿರತ್ನಂ ನಾಯ್ಡು ಬಗ್ಗೆ ಈಗ ಮತ್ತಷ್ಟು ಗಂಭೀರವಾದ ಆರೋಪಗಳು ಕೇಳಿ ಬರುತ್ತಿದ್ದು, ಒಕ್ಕಲಿಗರು & ದಲಿತರನ್ನು ಹೊಡೆದು ಓಡಿಸು ಅಂತಿದ್ದರಾ ಶಾಸಕ ಮುನಿರತ್ನ ನಾಯ್ಡು?

ದಲಿತರನ್ನು ಬೈಯುತ್ತಿದ್ದ ಶಾಸಕ ನಾಯ್ಡು?
ರಾಜರಾಜೇಶ್ವರಿ ನಗರದ ಶಾಸಕರಾದ ಮುನಿರತ್ನಂ ನಾಯ್ಡು ವಿರುದ್ಧ ಒಂದೊಂದೇ ಗಂಭೀರ ಆರೋಪ ಇದೀಗ ಹೊರ ಬರುತ್ತಿವೆ. ಈ ಆರೋಪಗಳು ಕನ್ನಡ ನಾಡಲ್ಲಿ ಸಂಚಲನ ಸೃಷ್ಟಿಸಿವೆ. ಮುನಿರತ್ನಂ ನಾಯ್ಡು ಮೊದಲಿನಿಂದ ಕೂಡ ತಮ್ಮ ಕೆಟ್ಟ ಕೆಟ್ಟ ಭಾಷೆಗೆ ಫೇಮಸ್, ಹೀಗೆ ಅವರ ಮನೆ ಮುಂದೆ ಒಕ್ಕಲಿಗರು & ದಲಿತರು ಹೋದ್ರೆ ಅವರನ್ನ ಶಾಸಕ ಮುನಿರತ್ನಂ ನಾಯ್ಡು ಕೆಟ್ಟದಾಗಿ ಬೈಯುತ್ತಾರೆ ಅನ್ನೋದು ಮಾಜಿ ಕಾರ್ಪೋರೇಟರ್ & ಸ್ವತಃ ಮುನಿರತ್ನ ಅವರ ಆಪ್ತನಾಗಿದ್ದ ವೇಲು ನಾಯ್ಕರ್ ಆರೋಪ.
ಹೀಗಿದ್ದಾಗಲೇ ಮುನಿರತ್ನಂ ನಾಯ್ಡು ಆಂಧ್ರಗೆ ಎಸ್ಕೇಪ್ ಆಗುತ್ತಿದ್ದರು ಎನ್ನುವಾಗ ಕರ್ನಾಟಕದ ಪೊಲೀಸರು ಚೇಸ್ ಮಾಡಿ, ಸಿನಿಮೀಯ ರೀತಿ ಅರೆಸ್ಟ್ ಕೂಡ ಮಾಡಿದ್ದರು. ಮತ್ತೊಂದು ಕಡೆ ಮುನಿರತ್ನಂ ನಾಯ್ಡು ತಮ್ಮ ಮನೆ ಎದುರು ಬರುತ್ತಿದ್ದ ಜನರ ಜಾತಿ ಕೇಳಿ, ದಲಿತರನ್ನ ಹೊಡಿ ಎನ್ನುತ್ತಿದ್ದರು ಎಂಬ ಭಾರಿ ಗಂಭೀರ ಆರೋಪ ಈಗ ಕೇಳಿಬಂದಿದೆ. ಇದ ಜೊತೆ ಒಕ್ಕಲಿಗರು ಅಥವಾ ಗೌಡರು ಮುನಿರತ್ನಂ ನಾಯ್ಡು ಮನೆ ಬಳಿಗೆ ಬಂದರೆ, ಎರಡು ಬಿಡು ಅಂತಿದ್ದರು ಎಂದು ವೇಲು ನಾಯ್ಕರ್ ಆರೋಪಿಸಿದ್ದಾರೆ.
ಒಕ್ಕಲಿಗ ಸಮುದಾಯ VS ಮುನಿರತ್ನಂ?
ಒಟ್ನಲ್ಲಿ ಶಾಸಕ ಮುನಿರತ್ನಂ ನಾಯ್ಡು ಮೇಲೆ ಒಂದಾದ ನಂತರ ಒಂದು ಸಂಕಷ್ಟ ಇದೀಗ ಎದುರಾಗುತ್ತಿದೆ. ಅದರಲ್ಲೂ ಮುನಿರತ್ನಂ ನಾಯ್ಡು ಅಶ್ಲೀಲವಾಗಿ ಮಾತನಾಡಿದ್ದಾರೆ ಎಂಬ ಆರೋಪ ಇರುವ, ಆಡಿಯೋ ಒಂದು ಸಂಚಲನ ಸೃಷ್ಟಿ ಮಾಡಿದೆ. ಹೀಗಾಗಿ ಇದೆಲ್ಲಾ ಎಲ್ಲಿಗೆ ಬಂದು ನಿಲ್ಲುತ್ತೆ? ದಲಿತರನ್ನು ನಿಂದಿಸಿರುವ ಆರೋಪ ಹೊತ್ತಿರುವ ಮುನಿರತ್ನಂ ನಾಯ್ಡು ಜೈಲಿಗೆ ಶಿಫ್ಟ್ ಆಗುತ್ತಾರಾ? ಅನ್ನೋದನ್ನ ಕಾದು ನೋಡಬೇಕಿದೆ. ಮತ್ತೊಂದು ಕಡೆ ಶಾಸಕ ಮುನಿರತ್ನಂ ನಾಯ್ಡು ವಿರುದ್ಧ ಒಕ್ಕಲಿಗ ಸಮುದಾಯ ಕೂಡ ಆಕ್ರೋಶ ಹೊರ ಹಾಕಿದ್ದು, ತೀವ್ರ ಹೋರಾಟಕ್ಕೆ ಸಿದ್ಧತೆ ನಡೆಸುತ್ತಿದೆ.
-
Gold Rate: ಬೆಂಗಳೂರಿನಲ್ಲಿ ಇಳಿಕೆಯಾಯ್ತು ಚಿನ್ನ-ಬೆಳ್ಳಿ ಬೆಲೆ; ಇಲ್ಲಿದೆ ದರ ಪಟ್ಟಿ -
Horoscope March 14: ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಣೆ, ದಾಂಪತ್ಯ ಜೀವನದಲ್ಲಿ ಸಂತಸ, ದಿನ ಭವಿಷ್ಯ -
BCCI: ಕರ್ನಾಟಕದ ಕ್ರಿಕೆಟ್ ದಿಗ್ಗಜರಾದ ರಾಹುಲ್ ದ್ರಾವಿಡ್, ರೋಜರ್ ಬಿನ್ನಿಗೆ ಬಿಸಿಸಿಐ ಅತ್ಯುನ್ನತ ಪ್ರಶಸ್ತಿ -
Yash: ಯಶ್ ಡಿಪ್ರೆಶನ್ನಲ್ಲಿದ್ದಾರೆ, ಕೆಜಿಎಫ್ ರೀತಿಯ ಸಿನಿಮಾ ನೀಡಲು ಆಗ್ತಿಲ್ಲ: ಜ್ಯೋತಿಷಿ ವೇಣುಸ್ವಾಮಿ -
Ajith Kumar: ನಟ ಅಜಿತ್ ಕುಮಾರ್ಗೆ ಮಹೀಂದ್ರಾದಿಂದ ರೇಸಿಂಗ್ ಕಾರ್ ಗಿಫ್ಟ್; ಇದರ ಫೀಚರ್ಸ್ ಕೇಳಿದ್ರೆ ಫಿದಾ ಆಗ್ತೀರಿ -
Double-Decker Flyover: ಸಿಲ್ಕ್ ಬೋರ್ಡ್ ಟ್ರಾಫಿಕ್ಗೆ ಮುಕ್ತಿ: ಇದೇ ತಿಂಗಳಲ್ಲಿ ಡಬಲ್ ಡೆಕ್ಕರ್ ಫ್ಲೈಓವರ್ ಸಂಚಾರಕ್ಕೆ ಮುಕ್ತ -
ಪುನೀತ್ ನಟನೆಯ "ಆಕಾಶ್" ರೀರಿಲೀಸ್: ಅಭಿಮಾನಿಗಳ ಜತೆ ಸಿನಿಮಾ ವೀಕ್ಷಿಸಿ ಕುಣಿದು ಕುಪ್ಪಳಿಸಿದ ನಟಿ ರಮ್ಯಾ -
Viral Video: ಮಗನ ಸಾಧನೆ ಕಂಡು ಭಾವುಕರಾದ ಪೋಷಕರು; ಕ್ಯೂಟ್ ವಿಡಿಯೋ ವೈರಲ್ -
ಸರ್ಕಾರಿ ಜಮೀನು ಒತ್ತುವರಿ ತಡೆಗೆ ಪ್ರತಿ ಮೂರು ತಿಂಗಳಿಗೊಮ್ಮೆ ಸ್ಥಳಕ್ಕೆ ಭೇಟಿ ನೀಡುತ್ತಿರಿ: ಸಚಿವ ಕೃಷ್ಣ ಬೈರೇಗೌಡ ಸೂಚನೆ -
Karnataka Weather: ರಾಜ್ಯವನ್ನು ಸುಡುತ್ತಿದೆ ರಣಬಿಸಿಲು; ಕರಾವಳಿ, ಮಲೆನಾಡಿಗೆ ಇಂದು ಮಳೆ ಮುನ್ಸೂಚನೆ -
Trisha Krishnan: ದಳಪತಿ ವಿಜಯ್ ಜೊತೆಗಿನ ಸಂಬಂಧ, ಡಿವೋರ್ಸ್ ಬಗ್ಗೆ ಮಾಧ್ಯಮಗಳ ಪ್ರಶ್ನೆ: ನಟಿ ತ್ರಿಶಾ ಕೊಟ್ಟ ಉತ್ತರವೇನು? -
92,00,00,000 ರೂಪಾಯಿ ಬಹುಮಾನ, ಈತನ ಬಗ್ಗೆ ಸುಳಿವು ನೀಡಿದರೆ ನಿಮಗೂ ಸಿಗಲಿದೆ ಹಣ... Mojtaba Khamenei












Click it and Unblock the Notifications