ಶಾಸಕರ ಕಚೇರಿಯಿಂದ ಜನರ ವಾಟ್ಸ್ಆಪ್ಗೆ ವೋಟರ್ ಐಡಿ; ಹೊತ್ತಿತು ವಿವಾದದ ಕಿಡಿ! ಯಾರು ಆ ಶಾಸಕ?
ಬೆಂಗಳೂರು,ಏಪ್ರಿಲ್29: ಮತದಾರರ ಮಾಹಿತಿ ಕಳವು ಪ್ರಕರಣ ಇಡೀ ದೇಶದಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಚಿಲುಮೆ ಎಂಬ ಎನ್ಜಿಒ ಒಳಗೊಂಡ ಚುನಾವಣಾ ಮಾಹಿತಿಯ ಕಳ್ಳತನದ ವಿವಾದವು ರಾಜ್ಯವನ್ನು ಬೆಚ್ಚಿಬೀಳಿಸಿದ ಬೆನ್ನಲ್ಲೇ ಇದೀಗ ಮತ್ತೊಂದು ಬೆಳವಣಿಗೆ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಹೌದು, ಮಲ್ಲೇಶ್ವರಂನ ಕೆಲವು ಮತದಾರರು ತಮ್ಮ ಮತದಾರರ ಗುರುತಿನ ಚೀಟಿಯ (ಐಡಿ) ಆಯ್ದ ಭಾಗಗಳನ್ನು ಒಳಗೊಂಡ ವಾಟ್ಸಾಪ್ನಲ್ಲಿ ಶಾಸಕರ ಕಚೇರಿಯಿಂದ ಕಳುಹಿಸಲಾದ ಸಂದೇಶವನ್ನು ನೋಡಿ ದಿಗ್ಭ್ರಮೆಗೊಂಡಿದ್ದಾರೆ.

ಈ ಕುರಿತು ಸಾಕಷ್ಟು ಆಶ್ಚರ್ಯವನ್ನ ವ್ಯಕ್ತಪಡಿಸಿರುವ ಕೆಲವು ನಿವಾಸಿಗಳು ಆಕ್ರಮ ನಡೆದಿದೆ ಎಂದು ಆರೋಪಿಸಿದ್ದಾರೆ. ಕ್ಯಾಬಿನೆಟ್ ಸಚಿವರೂ ಆಗಿರುವ ಮಲ್ಲೇಶ್ವರಂ ಶಾಸಕರಾದ ಅಶ್ವತ್ ನಾರಾಯಣ ಅವರು ಮತದಾರರ ಮೊಬೈಲ್ ಸಂಖ್ಯೆಯನ್ನು ಹೇಗೆ ಪ್ರವೇಶಿಸುತ್ತಾರೆ ಎಂದು ಪ್ರಶ್ನಿಸಿದ್ದಾರೆ.
Hello .@drashwathcn I received an sms with my voter details signed in your name. Can you please tell me how you have illegally obtained details connecting my voter id with my phone number? Can you please tell me how much money you have spent on this exercise?
— Venu Madhav Govindu (@venugovindu) April 27, 2023
ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಚಿತ್ರ ಸ್ವರೂಪದಲ್ಲಿ ಮತದಾರರ ಪಟ್ಟಿಗೆ ಪ್ರವೇಶವನ್ನು ಹೊಂದಿದ್ದರೂ, ಚುನಾವಣಾ ಆಯೋಗವು ಯಾವುದೇ ಅಭ್ಯರ್ಥಿಗಳೊಂದಿಗೆ ಮೊಬೈಲ್ ಸಂಖ್ಯೆಗಳನ್ನು ಹಂಚಿಕೊಳ್ಳುವುದಿಲ್ಲ ಅಥವಾ ಮತದಾರರ ಐಡಿಗೆ ಸಂಖ್ಯೆಗಳನ್ನು ಲಿಂಕ್ ಮಾಡಿರುವುದಿಲ್ಲ.
ಆದರೆ, ಕುತೂಹಲಕಾರಿ ಎಂದರೇ ಮಲ್ಲೇಶ್ವರಂ ಶಾಸಕರು ಮೊಬೈಲ್ ಸಂಖ್ಯೆಗಳಿಗೆ ಪ್ರವೇಶವನ್ನು ಹೊಂದಿದ್ದಾರೆ ಎಂದು ಜನತೆ ಆರೋಪಿಸಿದ್ದು, ಶಾಸಕರೊಬ್ಬರು ತಮ್ಮ ಮೊಬೈಲ್ ಸಂಖ್ಯೆಯನ್ನು ಅಕ್ರಮವಾಗಿ ಪ್ರವೇಶಿಸಿದ್ದಾರೆ ಎಂದು ಮತದಾರೊಬ್ಬರು ಈಗಾಗಲೇ ಚುನಾವಣಾಧಿಕಾರಿಗೆ ದೂರು ನೀಡಿದ್ದಾರೆ ಎಂದು ವರದಿಯಾಗಿದೆ.
ಈ ಕುರಿತು ವೇಣು ಮಾಧವ್ ಟ್ವೀಟ್ ಮಾಡಿದ್ದು, ನನ್ನ ಮತದಾರರ ವಿವರಗಳೊಂದಿಗೆ ನಿಮ್ಮ ಹೆಸರಿನಲ್ಲಿ ಸಹಿ ಮಾಡಿದ ಎಸ್ಎಂಎಸ್ ನನಗೆ ಬಂದಿದೆ. ನನ್ನ ವೋಟರ್ ಐಡಿಯನ್ನು ನನ್ನ ಫೋನ್ ಸಂಖ್ಯೆಯೊಂದಿಗೆ ಸಂಪರ್ಕಿಸುವ ವಿವರಗಳನ್ನು ನೀವು ಹೇಗೆ ಅಕ್ರಮವಾಗಿ ಪಡೆದಿದ್ದೀರಿ ಎಂದು ದಯವಿಟ್ಟು ನನಗೆ ತಿಳಿಸುವಿರಾ? ಇದಕ್ಕೆ ನೀವು ಎಷ್ಟು ಹಣವನ್ನು ಖರ್ಚು ಮಾಡಿದ್ದೀರಿ ಎಂದು ದಯವಿಟ್ಟು ನನಗೆ ಹೇಳಬಹುದೇ? ಎಂದು ಪ್ರಶ್ನಿಸಿದ್ದಾರೆ.
ಈ ಸಂದೇಶಗಳು ಗೌಪ್ಯತೆಯ ಉಲ್ಲಂಘನೆಯಾಗಿದೆ ಎಂದು ಸಿಟಿಜನ್ಸ್ ಫಾರ್ ಸ್ಯಾಂಕಿ ತಂಡದ ಸದಸ್ಯ ವಿನಯ್ ಕುಮಾರ್ ಹೇಳಿದ್ದಾರೆ. ಶಾಸಕರ ಮೊಬೈಲ್ ಸಂಖ್ಯೆಗಳಿಗೆ ಪ್ರವೇಶ ಪಡೆಯುವುದು ಹೇಗೆ ಎಂದು ಪ್ರಶ್ನಿಸಿದ ಅವರು, ಸಂದೇಶಗಳನ್ನು ಸ್ವೀಕರಿಸಿದ ಹೆಚ್ಚಿನ ಮತದಾರರು ಅವರಿಗೆ ನೋಂದಣಿ ಮಾಡಿಲ್ಲ ಎಂದು ಹೇಳಿದರು.
ಇನ್ನೂ ರಾಜ್ಯ ರಾಜಕಾರಣದಲ್ಲಿ ಚಿಲುಮೆ ಸಂಸ್ಥೆ ಒಳಗೊಂಡ ಚುನಾವಣಾ ಮಾಹಿತಿಯ ಕಳ್ಳತನದ ವಿವಾದವು ರಾಜ್ಯವನ್ನು ಬೆಚ್ಚಿಬೀಳಿಸಿದ ಬೆನ್ನಲ್ಲೇ ಈ ಬೆಳವಣಿಗೆಗಳು ನಡೆದಿದ್ದು, ಮತ್ತೊಂದು ವಿವಾದದ ಕಿಡಿ ಹೊತ್ತಿಕೊಂಡಿದೆ ಎನ್ನಲಾಗಿದೆ.
ಇನ್ನೂ ಈ ಹಿಂದೆ ತಮ್ಮ ಸಂಪರ್ಕ ಸಂಖ್ಯೆಗಳನ್ನು ಸ್ವತಃ ಮತದಾರರು ಹಂಚಿಕೊಂಡವರಿಗೆ ಮಾತ್ರ ಅವರು ಸಂದೇಶಗಳನ್ನು ಕಳುಹಿಸಿದ್ದಾರೆ ಎಂದು ಶಾಸಕರ ಕಚೇರಿ ತಿಳಿಸಿದೆ ಎನ್ನಲಾಗಿದೆ.












Click it and Unblock the Notifications