ಇಂದು ಮಹಾದಾಯಿ ನ್ಯಾಯಮಂಡಳಿ ತೀರ್ಪು
ಬೆಂಗಳೂರು, ಜುಲೈ 25 : ಕಳಸಾ-ಬಂಡೂರಿ ನಾಲೆಯಿಂದ ಮಲಪ್ರಭಾ ಜಲಾಶಯಕ್ಕೆ 7 ಟಿಎಂಸಿ ನೀರು ತಿರುಗಿಸಲು ಅನುಮತಿ ನೀಡುವಂತೆ ಕರ್ನಾಟಕ ಸರ್ಕಾರ ಮಹಾದಾಯಿ ನ್ಯಾಯಮಂಡಳಿ ಮುಂದೆ ಅರ್ಜಿ ಸಲ್ಲಿಸಿದೆ. ಇಂದು ಅರ್ಜಿಯ ತೀರ್ಪು ಪ್ರಕಟವಾಗಲಿದೆ.
ಉತ್ತರ
ಕರ್ನಾಟಕ
ಭಾಗದಲ್ಲಿ
ಕಳಸಾ-ಬಂಡೂರಿ
ಯೋಜನೆ
ಅನುಷ್ಠಾನಕ್ಕೆ
ಒತ್ತಾಯಿಸಿ
ಒಂದು
ವರ್ಷದಿಂದ
ಹೋರಾಟ
ನಡೆಯುತ್ತಿದೆ.
ಇಂದು
ನ್ಯಾಯಾಧೀಕರಣದ
ಮಧ್ಯಂತರ
ತೀರ್ಪು
ತಮ್ಮ
ಪರವಾಗಿ
ಬರಲಿದೆ
ಅನ್ನುವ
ವಿಶ್ವಾದಲ್ಲಿದ್ದಾರೆ
ರೈತರು.[ನ್ಯಾಯಾಧೀಕರಣದತ್ತ
ಹರಿದ
ಮಹದಾಯಿ
ವಿವಾದ]
ಹುಬ್ಬಳ್ಳಿ- ಧಾರವಾಡ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಕುಡಿಯುವ ಹಾಗೂ ನೀರಾವರಿ ಸೌಲಭ್ಯಕ್ಕೆ ಮುಂಗಾರು ಸಮಯದಲ್ಲಿ ಮಹಾದಾಯಿಯಿಂದ ಮಲಪ್ರಭಾ ಜಲಾಶಯಕ್ಕೆ 7 ಟಿಎಂಸಿ ಅಡಿ ನೀರೆತ್ತಲು ಒಪ್ಪಿಗೆ ನೀಡುವಂತೆ ಅರ್ಜಿಯಲ್ಲಿ ಮನವಿ ಮಾಡಲಾಗಿದೆ.[ಮಹದಾಯಿ ನ್ಯಾಯಾಧೀಕರಣಕ್ಕೆ ಅರ್ಜಿ ಸಲ್ಲಿಸಿದ ಕರ್ನಾಟಕ]
ನ್ಯಾಯಾಧೀಕರಣದ ಮೊರೆ : 7.56 ಟಿಎಂಸಿ ನೀರನ್ನು ಮಲಪ್ರಭೆಗೆ ತಿರುಗಿಸಿಕೊಂಡು ಹುಬ್ಬಳ್ಳಿ-ಧಾರವಾಡ, ಗದಗ ಮುಂತಾದ ಜಿಲ್ಲೆಗಳ ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುವ ಕಳಸಾ-ಬಂಡೂರಿ ಯೋಜನೆಗೆ ಗೋವಾ ಸರ್ಕಾರ ವಿರೋಧ ವ್ಯಕ್ತಪಡಿಸುತ್ತಿದೆ. ಆದ್ದರಿಂದ, ಸರ್ಕಾರ ನ್ಯಾಯಾಧೀಕರಣದ ಮೊರೆ ಹೋಗಿದೆ.[ಏನಿದು ಕಳಸಾ-ಬಂಡೂರಿ ಯೋಜನೆ]
ಅರ್ಜಿಯ ಪ್ರಮುಖ ಅಂಶಗಳು : ಕರ್ನಾಟಕದಲ್ಲಿ 136 ತಾಲೂಕುಗಳಲ್ಲಿ ಬರ ಪರಿಸ್ಥಿತಿ ಇದೆ. ಇವುಗಳಲ್ಲಿ 20 ತಾಲೂಕುಗಳು ಮಲಪ್ರಭಾ ಕಣಿವೆಯ ಭಾಗದಲ್ಲಿವೆ. ಮಹದಾಯಿ ಕಣಿವೆಯಲ್ಲಿ ಒಟ್ಟು 108 ಟಿಎಂಸಿ ನೀರಿನ ಲಭ್ಯತೆ ಇದೆ. ಗೋವಾ ರಾಜ್ಯ ಸದ್ಯ 9.395 ಟಿಎಂಸಿ ಬಳಕೆ ಮಾಡುತ್ತಿದೆ. ಕುಡಿಯುವ ನೀರು ಪೂರೈಕೆ ಮಾಡಲು 7 ಟಿಎಂಸಿ ನೀರನ್ನು ಬಳಕೆ ಮಾಡಿಕೊಳ್ಳಲು ಅನುಮತಿ ನೀಡಬೇಕು ಎಂದು ಅರ್ಜಿಯಲ್ಲಿ ಸರ್ಕಾರ ಮನವಿ ಮಾಡಿದೆ.