ಡಾ ರಾಜ್ ಆಶಯಕ್ಕೆ ವಿರುದ್ಧವಾಗಿ ಗೀತಾ ಜೆಡಿಎಸ್ ಅಭ್ಯರ್ಥಿ
ಶಿವಮೊಗ್ಗ, ಮಾರ್ಚ್ 4: ಜನಾನುರಾಗಿ ದಿವಂಗತ ಡಾ. ರಾಜ್ ಕುಮಾರ್ ಅವರು ರಾಜಕೀಯ ಪ್ರವೇಶವನ್ನು ತಮ್ಮ ಜೀವನುದ್ದಕ್ಕೂ ದೂರವಿಟ್ಟಿದ್ದರು. ಆದರೆ ಜೆಡಿಎಸ್ ಪಕ್ಷವು ಅವರ ಆಶಯಕ್ಕೆ ವಿರುದ್ಧವಾಗಿ ನಡೆದುಕೊಳ್ಳುವತ್ತ ದೃಢ ಹೆಜ್ಜೆ ಹಾಕುತ್ತಿದೆ.
ಜಿಲ್ಲೆಯ ರಾಜಕೀಯ ಧಣಿ ಬಂಗಾರಪ್ಪ ಅವರ ಕುಡಿ, ವರನಟ ಡಾ. ರಾಜ್ ಕುಮಾರ್ ಕುಟುಂಬದ ಸೊಸೆ ಗೀತಾ ಶಿವರಾಜ್ ಕುಮಾರ್ ಅವರು ಈ ಬಾರಿ ಶಿವಮೊಗ್ಗದ ಲೋಕಸಭಾ ಚುನಾವಣೆ ಕಣದಿಂದ ಸ್ಪರ್ಧಿಸುವುದು ಬಹುತೇಕ ಅಖೈರಾಗಿದೆ. ಇಂದು ಬೆಳಗ್ಗೆಯಿಂದ ಟಿವಿ ಮಾಧ್ಯಮಗಳು ಸಹ ಇದನ್ನು ಖಚಿತ ದನಿಯಲ್ಲಿ ಬಿತ್ತರಿಸುತ್ತಿವೆ.

ಜೆಡಿಎಸ್ ಅಧಿನಾಯಕ, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ಸೇರಿದಂತೆ ಅನೇಕಾನೇಕ ರಾಜಕೀಯ ನಾಯಕರು ಡಾ. ರಾಜ್ ಕುಮಾರ್ ಅವರ ಖ್ಯಾತಿಯನ್ನು ಬಳಸಿಕೊಳ್ಳಲು ಅವರನ್ನು ರಾಜಕೀಯಕ್ಕೆ ಕರೆತರಲು ಶತಾಯಗತಾಯ ಯತ್ನಿಸಿದ್ದವು. ಡಾ. ರಾಜ್ ಅವರು ಖ್ಯಾತಿಯ ಉತ್ತುಂಗದಲ್ಲಿದ್ದಾಗ ಅಣ್ಣಾವ್ರು ಈ ಬಾರಿ ಮನಸ್ಸು ಮಾಡಿ ಕಣಕ್ಕಿಳಿದರೆ ಅವರು ನಾಡಿನ ಮುಖ್ಯಮಂತ್ರಿಯಾಗುವುದು ಗ್ಯಾರಂಟಿ ಎಂದು ಘಂಟಾಘೋಷವಾಗಿ ಹೇಳುತ್ತಿದ್ದ ಕಾಲವೊಂದಿತ್ತು.
ಆದರೆ ಡಾ ರಾಜ್ ಅವರು ರಾಜಕೀಯ ಅಂದರೆ ದುಃಸ್ವಪ್ನ ಕಂಡವರಂತೆ ರಾಜಕೀಯ ಪ್ರಸ್ತಾಪ ಬಂದಾಗಲೆಲ್ಲಾ ದಿವ್ಯಮೌನ ಪರಿಪಾಲಿಸುತ್ತಿದ್ದರು. ಅಷ್ಟರಮಟ್ಟಿಗೆ ಅವರು ರಾಜಕೀಯದಿಂದ ದೂರವೇ ಉಳಿದುಬಿಟ್ಟರು. ಮುಂದೆ ಅವರ ಕುಟಂಬದವರೂ ಸಹ ನೇರವಾಗಿ ರಾಜಕೀಯಕ್ಕೆ ಎಂದೂ ಎಂಟ್ರಿ ಕೊಟ್ಟವರಲ್ಲ. ಶಿವಣ್ಣ/ ರಾಘಣ್ಣ ಆದಿಯಾಗಿ ಯಾರೂ ವಿಧಾನಸೌದದತ್ತ ತಲೆಯಿಟ್ಟು ಮಲಗಲಿಲ್ಲ.
ಆದರೆ ಈಗ ದೊಡ್ಡ ಗೌಡ್ರು ದೊಡ್ಡ ಮಟ್ಟದ ಸಾಹಸಕ್ಕೆ ಕೈಹಾಕಿದ್ದು, ಡಾ. ರಾಜ್ ಅವರ ಸೊಸೆ ಯಾನೆ ಶಿವಮೊಗ್ಗದ ಪುತ್ರಿ ಗೀತಾ ಶಿವರಾಜ್ ಕುಮಾರ್ ಅವರನ್ನು ಕಣಕ್ಕಿಳಿಸುವುದು ಶತಃಸಿದ್ಧ ಎಂಬ ಮಾತುಗಳು ಕೇಳಿಬಂದಿವೆ. ರಾಜಕೀಯವಾಗಿ ಇದು ತಮ್ಮ ಕೊನೆಯ ಹೋರಾಟ ಎನ್ನುತ್ತಿರುವ ದೇವೇಗೌಡರು ಈ ಬಾರಿ ಕರ್ನಾಟಕದಿಂದ ಜೆಡಿಎಸ್ ಹೆಚ್ಚು ಸ್ಥಾನ ಗೆಲ್ಲಬೇಕು ಎಂಬ ಉಮೇದಿಗೆ ಬಿದ್ದಿದ್ದಾರೆ. [ಚುನಾವಣೆ ಸ್ಪರ್ಧಿಸಲ್ಲ ಎಂದಿದ್ದ ಗೀತಾ ಶಿವರಾಜ್]
ಹಾಗಾಗಿ, ಮೊದಲು ಬಂಗಾರಪ್ಪನವರ ಪತ್ನಿ ಶಕುಂತಲಾ ಅವರನ್ನು ಕಣಕ್ಕಿಳಿಯುವಂತೆ ವಿನಂತಿಸಿದರು. ಆದರೆ ಅವರು ರಾಜಕೀಯ ಯಜಮಾನರಿಗೇ ಸಾಕು. ನನ್ನ ಕಾಲಕ್ಕೆ ಬೇಡ ಎಂದು ನಿರಾಕರಿಸಿಬಿಟ್ಟರು. ಇದೀಗ ಅವರ ಸೊಸೆ ಗೀತಾರನ್ನು ಕಣಕ್ಕಿಯುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ಆದರೆ ಮತದಾರ ಇದಕ್ಕೆ ಏನನ್ನುತ್ತಾನೆ? ಮೇ ವರೆಗೂ ಕಾದುನೋಡಬೇಕು.
-
Weekly Horoscope March 16-22: ಈ ಯುಗಾದಿಗೆ ಯಾವ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ? ಇಲ್ಲಿದೆ ಈ ವಾರದ ನಿಮ್ಮ ರಾಶಿ ಫಲ -
Ragi Mudde: ಕರ್ನಾಟಕದ ರಾಗಿ ಮುದ್ದೆ ಸವಿಯಬೇಕು: ಮಂಡ್ಯದಲ್ಲಿ ಬಯಕೆ ಬಿಚ್ಚಿಟ್ಟ ಕೇಂದ್ರ ಸಚಿವ ಮನ್ಸುಖ್ ಮಾಂಡವೀಯ -
ರೈತರ ಹಿತಾಸಕ್ತಿಗೆ ಧಕ್ಕೆಯಿಲ್ಲ: 1 ರೂಪಾಯಿಗೆ ಲೀಟರ್ ಹಾಲು ವಿವಾದಕ್ಕೆ ಸ್ಪಷ್ಟನೆ ಕೊಟ್ಟ FlipKart -
Yash: ಯಶ್ ಡಿಪ್ರೆಶನ್ನಲ್ಲಿದ್ದಾರೆ, ಕೆಜಿಎಫ್ ರೀತಿಯ ಸಿನಿಮಾ ನೀಡಲು ಆಗ್ತಿಲ್ಲ: ಜ್ಯೋತಿಷಿ ವೇಣುಸ್ವಾಮಿ -
Gold Rate: ಬೆಂಗಳೂರಿನಲ್ಲಿ ಇಳಿಕೆಯಾಯ್ತು ಚಿನ್ನ-ಬೆಳ್ಳಿ ಬೆಲೆ; ಇಲ್ಲಿದೆ ದರ ಪಟ್ಟಿ -
ವೈಭವ್ ಸೂರ್ಯವಂಶಿ ಅದೃಷ್ಟದ ಮೇಲೆ ಸವಾರಿ ಮಾಡುತ್ತಿದ್ದಾರೆ: ಕೊಡಗಿನ ರಾಬಿನ್ ಉತ್ತಪ್ಪ ಎಚ್ಚರಿಕೆಯ ಸಲಹೆ -
Double-Decker Flyover: ಸಿಲ್ಕ್ ಬೋರ್ಡ್ ಟ್ರಾಫಿಕ್ಗೆ ಮುಕ್ತಿ: ಇದೇ ತಿಂಗಳಲ್ಲಿ ಡಬಲ್ ಡೆಕ್ಕರ್ ಫ್ಲೈಓವರ್ ಸಂಚಾರಕ್ಕೆ ಮುಕ್ತ -
ಮಾರ್ಚ್ 15 ದಿನ ಭವಿಷ್ಯ: ಈ ರಾಶಿಯವರಿಗೆ ಒಲಿಯಲಿದೆ ಅದೃಷ್ಟ; ನಿಮ್ಮ ಜಾತಕ ಹೇಗಿದೆ ತಿಳಿಯಿರಿ -
Gold Rate: ಆಭರಣ ಪ್ರಿಯರ ಗಮನಕ್ಕೆ; ಮಾರುಕಟ್ಟೆಯಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ ಗೊತ್ತಾ? ಇಲ್ಲಿದೆ ಮಾಹಿತಿ -
ಪುನೀತ್ ನಟನೆಯ "ಆಕಾಶ್" ರೀರಿಲೀಸ್: ಅಭಿಮಾನಿಗಳ ಜತೆ ಸಿನಿಮಾ ವೀಕ್ಷಿಸಿ ಕುಣಿದು ಕುಪ್ಪಳಿಸಿದ ನಟಿ ರಮ್ಯಾ -
Horoscope March 14: ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಣೆ, ದಾಂಪತ್ಯ ಜೀವನದಲ್ಲಿ ಸಂತಸ, ದಿನ ಭವಿಷ್ಯ -
Ajith Kumar: ನಟ ಅಜಿತ್ ಕುಮಾರ್ಗೆ ಮಹೀಂದ್ರಾದಿಂದ ರೇಸಿಂಗ್ ಕಾರ್ ಗಿಫ್ಟ್; ಇದರ ಫೀಚರ್ಸ್ ಕೇಳಿದ್ರೆ ಫಿದಾ ಆಗ್ತೀರಿ












Click it and Unblock the Notifications