ಮುಗಿದ ಮೊದಲ ಹಂತದ ಜಿಪಂ, ತಾಪಂ ಚುನಾವಣೆ
ಬೆಂಗಳೂರು, ಫೆಬ್ರವರಿ 13 : ಮೊದಲ ಹಂತದ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗೆ ಮತದಾನ ಮುಗಿದಿದೆ. ಕರ್ನಾಟಕ ಸರ್ಕಾರ ಪಂಚಾಯತ್ ರಾಜ್ ಕಾಯ್ದೆಗೆ ತಿದ್ದುಪಡಿ ತಂದ ಬಳಿಕ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದೆ.
ಶನಿವಾರ
ಬೆಳಗ್ಗೆ
7
ಗಂಟೆಗೆ
ಮತದಾನ
ಆರಂಭವಾಗಿದ್ದು,
ಸಂಜೆ
5
ಗಂಟೆಯ
ತನಕ
ಮತದಾನ
ನಡೆಯಿತು.
ಇದೇ
ಮೊದಲ
ಬಾರಿಗೆ
ತಾಲೂಕು
ಮತ್ತು
ಜಿಲ್ಲಾ
ಪಂಚಾಯಿತಿ
ಚುನಾವಣೆಯಲ್ಲಿಯೂ
ನೋಟಾ
ಮತದಾನ
ಮಾಡಲು
ಎಲೆಕ್ಟ್ರಾನಿಕ್
ಮತ
ಯಂತ್ರದಲ್ಲಿ
ಅವಕಾಶ
ಕಲ್ಪಿಸಲಾಗಿತ್ತು.
[ತಾಲೂಕು
ಮತ್ತು
ಜಿಲ್ಲಾ
ಪಂಚಾಯಿತಿ
ಚುನಾವಣೆ
ವಿವರಗಳು]
ಮೊದಲ ಹಂತದಲ್ಲಿ 15 ಜಿಲ್ಲೆಗಳಲ್ಲಿ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿಗಳಿಗೆ ಚುನಾವಣೆ ನಡೆಯಿತು. 552 ಕ್ಷೇತ್ರಗಳಿಗೆ ನಡೆದ ಚುನಾವಣೆ 2087 ಅಭ್ಯರ್ಥಿಗಳು ಹಣೆಬರಹ ನಿರ್ಧಾರವಾಗಿದೆ. 1,945 ತಾಲೂಕು ಪಂಚಾಯಿತಿ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ, 6288 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಿದೆ.
ಸಂಜೆ, 4.30: ಉತ್ತರ ಕನ್ನಡ ಜಿಲ್ಲೆ ಹಲಗೇರಿ ತಾಪಂ ಕ್ಷೇತ್ರದ ಮತಯಂತ್ರದಲ್ಲಿ ಅಭ್ಯರ್ಥಿಗಳ ಹೆಸರು ಅದಲು ಬದಲು. ಫೆಬ್ರವರಿ 15 ರಂದು ಮರುಮತದಾನ ಮಾಡಲು ಆದೇಶ, ಸ್ಥಳಕ್ಕೆ ಚುನಾವಣಾಧಿಕಾರಿಗಳ ಭೇಟಿ. ಮನೆಮನೆ, ಹಲಗೇರಿ, ಹೆಗಡೆ ಮತಗಟ್ಟೆಯಲ್ಲಿ ಮರು ಮತದಾನಕ್ಕೆ ಆದೇಶ.
ಮಧ್ಯಾಹ್ನ, 2.30: ಧಾರವಾಡ ಜಿಲ್ಲಾ ಉಸ್ತುವಾರಿ ಮಂತ್ರಿ ವಿನಯ ಕುಲಕರ್ಣಿ ವಿರುದ್ಧ ಪ್ರತಿಭಟನ ನಡೆಸುತ್ತಿದ್ದ ವಿಧಾನಸಭೆ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಮತ್ತು ಸಂಸದ ಪ್ರಹ್ಲಾದ್ ಜೋಷಿ ಸೇರಿದಂತೆ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.
ಸಮಯ, 11.45: ಧಾರವಾಡ ಜಿಲ್ಲೆ ಹೆಬ್ಬಳ್ಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿ ಯೋಗೇಶಗೌಡ ಗೌಡರ ಬಂಧನಕ್ಕೆ ಜಿಲ್ಲಾ ಉಸ್ತುವಾರಿ ಮಂತ್ರಿ ವಿನಯ ಕುಲಕರ್ಣಿ ಕುಮ್ಮಕ್ಕು ನೀಡಿದ್ದಾರೆ ಎಂದು ಆರೋಪಿಸಿ ಹುಬ್ಬಳ್ಳಿಯಲ್ಲಿ ಶನಿವಾರ ಬಿಜೆಪಿ ಪ್ರತಿಭಟನೆ ನಡೆಸುತ್ತಿದೆ.
ಸಮಯ, 11.00: ಬೆಳಗಾವಿ ಜಿಲ್ಲೆ ಖಾನಾಪುರದ ಐಬಿಯಲ್ಲಿ ಚುನಾವಣೆ ಕಾರ್ಯಕ್ಕೆ ನಿಯುಕ್ತ ಗೊಂಡಿದ್ದ ಅಧಿಕಾರಿಗಳು ಮದ್ಯಗೋಷ್ಠಿ ಮಾಡಿದ ಬಗ್ಗೆ ಮಾಹಿತಿ
ಸಮಯ 10.30: ಧಾರವಾಢ ಜಿಲ್ಲೆ ಕಲಘಟಗಿಯ ಮಿಶ್ರಕೋಟಿ ಗ್ರಾಮದ ನೀರಿನ ಟ್ಯಾಂಕ್ ಬಳಿ ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರಚಾರ. ಮಾಧ್ಯಮದವರು ಮತ್ತು ಅಧಿಕಾರಿಗಳನ್ನು ಕಂಡು ಕಾಲುಕಿತ್ತ ಕಾರ್ಯಕರ್ತರು.
ಸಮಯ 10.15 : ಧಾರವಾಡ ಜಿಲ್ಲೆ ಅರೆಕುರಹಟ್ಟಿ ಜನರಿಂದ ಮತದಾನ ಬಹಿಷ್ಕಾರ, ಅಧಿಕಾರಿಗಳಿಂದ ಮನವೊಲಿಕೆ ಯತ್ನ
ಸಮಯ 9.15 : ತುಮಕೂರಿನಲ್ಲಿ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗೆ ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ ಮಠದ ಆವರಣದಲ್ಲಿರುವ ಶಾಲೆಯಲ್ಲಿ ಮತದಾನ ಮಾಡಿದರು.
ಸಮಯ 8.50 : ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಗುರಗುಂಟಾ ಜಿಲ್ಲಾ ಪಂಚಾಯತಿ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿ ಜಯಲಕ್ಷ್ಮೀ ಅವಿರೋಧವಾಗಿ ಆಯ್ಕೆಯಾಗಿದ್ದಾರೆ
ಸಮಯ 8.40 : 1,945 ತಾಲೂಕು ಪಂಚಾಯಿತಿ ಕ್ಷೇತ್ರಗಳ ಪೈಕಿ 11 ಕಡೆ ಅವಿರೋಧ ಆಯ್ಕೆ ನಡೆದಿದೆ. 1,934 ಕ್ಷೇತ್ರಗಳಿಗೆ ಮತದಾನ ಪ್ರಗತಿಯಲ್ಲಿದೆ
ಸಮಯ 8.30 : 15 ಜಿಲ್ಲೆಗಳ 552 ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಪೈಕಿ ಎರಡು ಕಡೆ ಅವಿರೋಧ ಆಯ್ಕೆ ನಡೆದಿದೆ. ಆದ್ದರಿಂದ 550 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ.
ಸಮಯ 8 ಗಂಟೆ : ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಹಂಚಿನಕೇರಿಯಲ್ಲಿ ಮತಯಂತ್ರದಲ್ಲಿ ದೋಷ, ಅರ್ಧ ಗಂಟೆ ವಿಳಂಬವಾಗಿ ಮತದಾನ ಆರಂಭ
ಸಮಯ 7.30 : ಮೊದಲ ಹಂತದಲ್ಲಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ತುಮಕೂರು, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ಹಾವೇರಿ, ಉತ್ತರ ಕನ್ನಡ, ಧಾರವಾಡ, ಗದಗ, ಬಾಗಲಕೋಟೆ, ಬೆಳಗಾವಿ ಜಿಲ್ಲೆಗಳಲ್ಲಿ ಮತದಾನ ನಡೆಯುತ್ತಿದೆ.