ಮದ್ಯದ ಬೆಲೆಯನ್ನು ಕಡಿಮೆ ಮಾಡುವಂತೆ ಮುಖ್ಯಮಂತ್ರಿ, ಅಬಕಾರಿ ಸಚಿವರಿಗೆ ಪತ್ರ
ಬೆಂಗಳೂರು, ಜೂನ್ 10: ರಾಜ್ಯ ಮದ್ಯ ಪ್ರೇಮಿಗಳು ಹಗೂ ಕುಡುಕರ ಸಂಘದವರು ಮದ್ಯ ದರ ಏರಿಕೆಗೆ ಅಸಮಾಧಾನ ವ್ಯಕ್ತಪಡಿಸಿದ್ದು, ಮದ್ಯದ ಬ್ರಾಂಡ್ಗಳ ಬೆಲೆ ಇಳಿಕೆ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ್ ಅವರನ್ನು ಒತ್ತಾಯಿಸಿದ್ದಾರೆ.
ಭಾರತೀಯ ನಿರ್ಮಿತ ವಿದೇಶಿ ಮದ್ಯ (ಐಎಂಎಫ್ಎಲ್) ಮತ್ತು ಬಿಯರ್ನ ಸ್ಥಳೀಯ ಬ್ರ್ಯಾಂಡ್ಗಳ ಬೆಲೆಯನ್ನು ಹೆಚ್ಚಿಸದಂತೆ ಮುಖ್ಯಮಂತ್ರಿ ಮತ್ತು ಇತರರಿಗೆ ಕಳುಹಿಸಲಾದ ಇಮೇಲ್ನಲ್ಲಿ ಸಂಘ ಒತ್ತಾಯಿಸಿದೆ.

ವೈದ್ಯರು ಮತ್ತು ರಾಜಕಾರಣಿಗಳು ಸೇರಿದಂತೆ ಸಮಾಜದ ಧಾರ್ಮಿಕ ಮತ್ತು ಸಾಮಾಜಿಕ ಸ್ತರಗಳನ್ನು ಮೀರಿ ಹಲವಾರು ಜನರು ತಮ್ಮ ಭಾಗವಾಗಿ ಮದ್ಯವನ್ನು ಸೇವಿಸುತ್ತಾರೆ. ಆಚರಣೆಗಳು ಮತ್ತು ಧಾರ್ಮಿಕ ಆಚರಣೆಗಳ ಸಮಯದಲ್ಲಿ ಇದನ್ನು ನೈವೇದ್ಯವಾಗು ನೀಡಲಾಗುತ್ತದೆ. ಹೀಗಾಗಿ ಸರ್ಕಾರವು ಮದ್ಯದ ಮೇಲಿನ ತೆರಿಗೆಯನ್ನು ಪರಿಶೀಲಿಸಬೇಕು ಮತ್ತು ಬ್ರ್ಯಾಂಡ್ಗಳು ಕೈಗೆಟುಕುವ ಬೆಲೆಯಲ್ಲಿ ಲಭ್ಯವಾಗುವಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದೆ.
ಬಿಪಿಎಲ್ ಕಾರ್ಡ್ ಹೊಂದಿರುವ ಸಾಮಾನ್ಯ ಬಡವರು, ಕೂಲಿ ಕಾರ್ಮಿಕರಿಗೆ ದಿನವೂ ಮದ್ಯಕ್ಕಾಗಿ 200 - 250 ರೂ. ಬೇಕಾಗುತ್ತದೆ. ತಿಂಗಳಿಗೆ 7500 ರೂ. ಖರ್ಚಾದರೆ, ವಾರ್ಷಿಕ 90 ಸಾವಿರ ರು. ಮದ್ಯಕ್ಕಾಗಿ ಸಾಮಾನ್ಯ ಬಡವ ಖರ್ಚು ಮಾಡುತ್ತಾನೆ. ಹೀಗಾಗಿ ಬಡವರ ಬ್ರಾಂಡ್, ಬಿಯರ್ ಸುಂಕ ಹೆಚ್ಚಿಸಿದರೆ ಆರ್ಥಿಕ ಹೊರೆಯಾಗುತ್ತದೆ ಎಂದು ಮನವಿ ಪತ್ರದಲ್ಲಿ ಹೇಳಲಾಗಿದೆ.
ಬಡವರ ಹಿತಕ್ಕಾಗಿ ದೇಸೀ ಮದ್ಯ ಮತ್ತು ಬಿಯರ್ ಸುಂಕ ಕಡಿಮೆ ಮಾಡಬೇಕೆಂದು ಕುಡುಕರ ಸಂಘದ ವತಿಯಿಂದ ಅಬಕಾರಿ ಸಚಿವರು, ಮುಖ್ಯಮಂತ್ರಿ ಸೇರಿ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಮನವಿ ಪತ್ರವನ್ನು ಇ-ಮೈಲ್ ಮೂಲಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ಅಬಕಾರಿ ಸಚಿವರಿಗೆ ಕಳಿಸಿಕೊಡಲಾಗಿದೆ.












Click it and Unblock the Notifications