Get Updates
Get notified of breaking news, exclusive insights, and must-see stories!

ನಾಯಕತ್ವದ ಕಿತ್ತಾಟ: ಆಖಾಡಕ್ಕೆ ಇಳಿದ ಹೈಕಮಾಂಡ್, ಸಿದ್ದು ಮತ್ತು ಡಿಕೆಶಿಗೆ ಬುಲಾವ್

ಮುಂದಿನ ಮುಖ್ಯಮಂತ್ರಿ ಯಾರು ಎನ್ನುವ ವಿಚಾರ ಕರ್ನಾಟಕ ಕಾಂಗ್ರೆಸ್ಸಿನಲ್ಲಿ ಅನಾವಶ್ಯಕವಾಗಿ ಗೊಂದಲದ ಗೂಡಾಗಿ ಕೂತಿರುವುದರಿಂದ ಹೈಕಮಾಂಡ್ ಮಧ್ಯಪ್ರವೇಶಿಸಿದೆ.

ಈ ಸಂಬಂಧ ಕೆಪಿಸಿಸಿ ಮುಖಂಡರು ನೀಡುತ್ತಿರುವ ಬಹಿರಂಗ ಹೇಳಿಕೆಗಳು ಕಮ್ಮಿಯಾಗುತ್ತಾ ಬಂದಿದ್ದರೂ, ಒಳೊಗೊಳಗೆ ಇದರ ಬೇಗುದಿ ಹಾಗೆಯೇ ಕುದಿಯುತ್ತಿದೆ. ಪಕ್ಷದ ಆಂತರಿಕ ವಲಯದಲ್ಲಿ ಇನ್ನೂ ಇದು ಚರ್ಚೆಯ ವಿಷಯವಾಗಿದೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ನಿವಾಸದಲ್ಲಿ ಬೆಂಗಳೂರು ಜನಪ್ರತಿನಿಧಿಗಳ ಸಭೆಯಲ್ಲಿ ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ಅವರಿಗೆ ಆಹ್ವಾನ ಇಲ್ಲದೇ ಇದ್ದದ್ದು, ನಾಯಕತ್ವದ ವಿಚಾರ ಇನ್ನೂ ಹೊಗೆಯಾಡುತ್ತಿದೆ ಎನ್ನುವುದಕ್ಕೆ ಸಾಕ್ಷಿ.

ಕೋರ್ಟ್ ಆದೇಶ ಏನಾದರೂ ಹೊರಬಿದ್ದಲ್ಲಿ ಬಿಬಿಎಂಪಿ ಚುನಾವಣೆ ಎದುರಾಗುವ ಸಾಧ್ಯತೆ ಇರುವುದರಿಂದ ಹೈಕಮಾಂಡ್ ಎಚ್ಚೆತ್ತುಕೊಂಡು, ಇಬ್ಬರು ಪ್ರಮುಖ ನಾಯಕರನ್ನು ದೆಹಲಿಗೆ ಬರುವಂತೆ ಹೈಕಮಾಂಡ್ ಸೂಚಿಸಿದೆ.

 ಜಮೀರ್ ಅಹ್ಮದ್ ಅವರಿಂದ ಆರಂಭವಾದ ನಾಯಕತ್ವದ ವಿಚಾರ

ಜಮೀರ್ ಅಹ್ಮದ್ ಅವರಿಂದ ಆರಂಭವಾದ ನಾಯಕತ್ವದ ವಿಚಾರ

ಜಮೀರ್ ಅಹ್ಮದ್ ಅವರಿಂದ ಆರಂಭವಾದ ನಾಯಕತ್ವದ ವಿಚಾರ ಹಲವು ಆಯಾಮಗಳನ್ನು ಪಡೆದುಕೊಂಡಿತ್ತು. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಪರ ಶಾಸಕರು ಹೇಳಿಕೆಗಳನ್ನು ನೀಡಲು ಆರಂಭಿಸಿದ್ದರು. ಒಂದು ಹಂತದಲ್ಲಿ ಈ ವಿಚಾರ ಇಬ್ಬರು ನಾಯಕರ ಪ್ರತಿಷ್ಠೆಯ ವಿಚಾರವಾಗಿ ಉರುಳಲು ಆರಂಭಿಸಿತ್ತು.

 ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರನ್ನು ದೆಹಲಿಗೆ ಬರುವಂತೆ ಸೂಚನೆ

ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರನ್ನು ದೆಹಲಿಗೆ ಬರುವಂತೆ ಸೂಚನೆ

ರಾಜ್ಯದ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಹೈಕಮಾಂಡ್ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರನ್ನು ದೆಹಲಿಗೆ ಬರುವಂತೆ ಸೂಚಿಸಿದೆ. ಮಂಗಳವಾರ (ಜುಲೈ 20) ಇಬ್ಬರು ನಾಯಕರ ಜೊತೆಗೆ ಪ್ರತ್ಯೇಕವಾಗಿ ಮಾತುಕತೆ ನಡೆಸಲಿದ್ದಾರೆ ಎಂದು ವರದಿಯಾಗಿದೆ.

 ಮಾಜಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ

ಮಾಜಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ

ಮಾಜಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರು ಸಿದ್ದರಾಮಯ್ಯ ಮತ್ತು ಡಿಕೆಶಿಯವರ ಜೊತೆ ಮಾತುಕತೆ ನಡೆಸಲಿದ್ದಾರೆ. ಮಂಗಳವಾರ ಬೆಳಗ್ಗೆ ಎಲ್ಲಾ ರಾಜ್ಯಗಳ ಕಾಂಗ್ರೆಸ್ ಅಧ್ಯಕ್ಷರ ಸಭೆಯನ್ನು ರಾಹುಲ್ ಗಾಂಧಿ ಕರೆದಿದ್ದಾರೆ. ಹಾಗಾಗಿ, ಅಂದು ಸಂಜೆಯ ಮೇಲೆ ಇಬ್ಬರು ನಾಯಕರನ್ನು ರಾಹುಲ್ ಗಾಂಧಿ ಭೇಟಿಯಾಗಲಿದ್ದಾರೆ.

Recommended Video

    ಕರ್ನಾಟಕದಲ್ಲಿ ಮುಂದುವರಿದ ವರುಣನ ಆರ್ಭಟ 7 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ | Oneindia Kannada
     ಕಾಂಗ್ರೆಸ್ಸಿಗೆ ಇದ್ದ ಒಂದು ಭರವಸೆಯಾದ ಕೇರಳದಲ್ಲೂ ಸೋಲು

    ಕಾಂಗ್ರೆಸ್ಸಿಗೆ ಇದ್ದ ಒಂದು ಭರವಸೆಯಾದ ಕೇರಳದಲ್ಲೂ ಸೋಲು

    ದಕ್ಷಿಣ ಭಾರತದಲ್ಲಿ ಕಾಂಗ್ರೆಸ್ಸಿಗೆ ಇದ್ದ ಒಂದು ಭರವಸೆಯಾದ ಕೇರಳದಲ್ಲೂ ಚುನಾವಣೆಯಲ್ಲಿ ಸೋತ ನಂತರ, ಉಳಿದಿರುವ ಇನ್ನೊಂದು ರಾಜ್ಯವೆಂದರೆ ಕರ್ನಾಟಕ. ಹಾಗಾಗಿ, ರಾಜ್ಯದ ಇಬ್ಬರು ನಾಯಕರ ನಡುವೆ ಭಿನ್ನಾಭಿಪ್ರಾಯ ಉಂಟಾದರೆ ಚುನಾವಣೆಯ ಮೇಲೆ ಪರಿಣಾಮ ಬೀರಬಹುದು ಎನ್ನುವ ಕಾರಣಕ್ಕಾಗಿ ರಾಹುಲ್ ಗಾಂಧಿ ನೇರವಾಗಿ ಆಖಾಡಕ್ಕೆ ಇಳಿದಿದ್ದಾರೆ.

    More From
    Prev
    Next
    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+