ಕರ್ನಾಟಕ ಸಿಎಂ ಫೆವಿಕಾಲ್ ಕಂಪನಿ ಬ್ರಾಂಡ್ ಅಂಬಾಸಿಡರ್
ಬೆಂಗಳೂರು, ಜುಲೈ 19 : ಕರ್ನಾಟಕ ವಿಧಾನಸಭೆಯಲ್ಲಿ ಶುಕ್ರವಾರವೂ ವಿಶ್ವಾಸಮತ ಸಾಬೀತು ಮಾಡುವ ಪ್ರಕ್ರಿಯೆ ನಡೆಯಲಿಲ್ಲ. ವಿಶ್ವಾಸಮತದ ಮೇಲಿನ ಚರ್ಚೆ ಪೂರ್ಣಗೊಳ್ಳದ ಕಾರಣ ಸ್ಪೀಕರ್ ರಮೇಶ್ ಕುಮಾರ್ ಸದನವನ್ನು ಸೋಮವಾರಕ್ಕೆ ಮುಂದೂಡಿದರು.
ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಸರ್ಕಾರ ಬಹುಮತ ಕಳೆದುಕೊಂಡಿದೆ ಎಂದು ಬಿಜೆಪಿ ಆರೋಪ ಮಾಡುತ್ತಿದೆ. ಕುಮಾರಸ್ವಾಮಿ ಮುಖ್ಯಮಂತ್ರಿ ಕುರ್ಚಿಯಲ್ಲಿ ಗಟ್ಟಿಯಾಗಿ ಕೂತಿದ್ದಾರೆ. ಇದನ್ನು ಬಿಜೆಪಿ ನಾಯಕ ಕೆ. ಎಸ್. ಈಶ್ವರಪ್ಪ ಲೇವಡಿ ಮಾಡಿದ್ದಾರೆ.
ಕೆ. ಎಸ್. ಈಶ್ವರಪ್ಪ ಅವರು ಟ್ವೀಟ್ ಮೂಲಕ ಮುಖ್ಯಮಂತ್ರಿಗಳ ಕಾಲೆಳೆದಿದ್ದಾರೆ. "ಫೆವಿಕಾಲ್ ಕಂಪನಿಯವರು ಬ್ರಾಂಡ್ ಅಂಬಾಸಿಡರ್ ಹುಡುಕಾಟದಲ್ಲಿ ಇದ್ದಾಗ ಆಪದ್ಭಾಂದವರಾಗಿ ಸಿಕ್ಕಿದ್ದು ನಮ್ಮ ಮುಖ್ಯಮಂತ್ರಿಗಳು" ಎಂದು ಟೀಕಿಸಿದ್ದಾರೆ.

ಶುಕ್ರವಾರ ಕಲಾಪವನ್ನು ಮುಂದೂಡುವ ಮುನ್ನ ಸ್ಪೀಕರ್ ರಮೇಶ್ ಕುಮಾರ್ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಸಲಹೆಯನ್ನು ಕೇಳಿದರು. ಕೆ. ಎಸ್. ಈಶ್ವರಪ್ಪ ಈ ಕುರಿತು ಟ್ವೀಟ್ ಮಾಡಿದ್ದು, "ಮಾಜಿ ಮುಖ್ಯಮಂತ್ರಿಗಳನ್ನು ಕೇಳಿ ಸ್ಪೀಕರ್ ಸೋಮವಾರಕ್ಕೆ ಸದನ ಮುಂದೂಡಿದ್ದು "ನರಿಯ ನ್ಯಾಯ" ಕೇಳಿದ ಹಾಗಾಯಿತು" ಎಂದು ಹೇಳಿದ್ದಾರೆ.












Click it and Unblock the Notifications