ಜಾರ್ಜ್ಗೆ ಇಂಥ ಪ್ರಶ್ನೆ ಕೇಳಬಹುದಾ ಈಶ್ವರಪ್ಪನವರೆ?
ಬೆಂಗಳೂರು, ನ.7 : "ನಿನ್ನ ಮಗಳ ಮೇಲೆ ಅತ್ಯಾಚಾರ ನಡೆದಿದ್ದರೆ ಸುಮ್ಮನಿರುತ್ತಿದ್ದೆಯಾ ಜಾರ್ಜ್?" ರಾಜ್ಯದಲ್ಲಿ ನಡೆದ ಅತ್ಯಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ಗೃಹ ಸಚಿವ ಕೆ.ಜೆ.ಜಾರ್ಜ್ ಅವರಿಗೆ ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಅವರು ಕೇಳಿದ ಪ್ರಶ್ನೆ ಇದು.
ಶುಕ್ರವಾರ
ಬೆಂಗಳೂರಿನಲ್ಲಿ
ಮಾಧ್ಯಮಗಳೊಂದಿಗೆ
ಮಾತನಾಡಿದ
ಕೆ.ಎಸ್.ಈಶ್ವರಪ್ಪ
ತೀರ್ಥಹಳ್ಳಿ
ನಂದಿತಾ
ಕೊಲೆ
ಪ್ರಕರಣ,
ರಾಜ್ಯದಲ್ಲಿ
ನಡೆದ
ಅತ್ಯಾಚಾರ
ಪ್ರಕರಣಗಳ
ಬಗ್ಗೆ
ಮಾತನಾಡುತ್ತಾ,
ಗೃಹ
ಸಚಿವ
ಮತ್ತು
ಸಿಎಂ
ವಿರುದ್ಧ
ವಾಗ್ದಾಳಿ
ನಡೆಸಿದರು.
ಸರ್ಕಾರ
ಕಠಿಣ
ಕ್ರಮ
ಕೈಗೊಳ್ಳಲು
ವಿಫಲವಾಗಿದೆ
ಎಂದು
ದೂರಿದರು.
'ನಿನ್ನ ಮಗಳ ಮೇಲೆ ಅತ್ಯಾಚಾರ ನಡೆದಿದ್ದರೆ ಸುಮ್ಮನಿರುತ್ತಿದ್ದೆಯಾ?' ಎಂದು ಈಶ್ವರಪ್ಪ ಗೃಹ ಸಚಿವ ಜಾರ್ಜ್ರನ್ನು ಏಕವಚನದಲ್ಲಿ ಪ್ರಶ್ನಿಸಿದರು. ಸರ್ಕಾರ ದುಷ್ಟರನ್ನ ರಕ್ಷಿಸಿ, ಶಿಷ್ಟರನ್ನು ಶಿಕ್ಷಿಸುತ್ತಿದೆ ಎಂದು ಆರೋಪಿಸಿದ ಈಶ್ವರಪ್ಪ ಇಂತಹ ಬೇಜವಾಬ್ದಾರಿ ಸರ್ಕಾರವನ್ನು ಇತಿಹಾಸದಲ್ಲಿ ಎಂದೂ ಕಂಡಿಲ್ಲ ಎಂದು ಹೇಳಿದರು. [ಕೆಜೆ ಜಾರ್ಜ್ 7 ವಿವಾದಗಳು]
ತೀರ್ಥಹಳ್ಳಿ ನಂದಿತಾ ಪ್ರಕರಣದಲ್ಲಿ ನ್ಯಾಯ ಕೇಳಲು ಹೋದವರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಆದರೆ, ಅಪರಾಧಿಗಳನ್ನು ಬಂಧಿಸುವ ಯೋಗ್ಯತೆ ರಾಜ್ಯ ಸರ್ಕಾರಕ್ಕಿಲ್ಲ ಎಂದು ಟೀಕಿಸಿದ ಈಶ್ವರಪ್ಪ ಅವರು, ಅಪರಾಧಿಗಳನ್ನು ಧರ್ಮದ ಆಧಾರದಲ್ಲಿ ನೋಡುವುದು ಸರಿಯಲ್ಲ. ಜಾರ್ಜ್ ಅವರು ಅಸಮರ್ಥ ಗೃಹಸಚಿವರಾಗಿದ್ದು, ಸಿಎಂ ಅವರನ್ನು ಸಂಪುಟದಿಂದ ತಕ್ಷಣ ಕೈಬಿಡಬೇಕೆಂದು ಆಗ್ರಹಿಸಿದರು.
ಪ್ರಹ್ಲಾದ್ ಜೋಶಿ ವಿಷಾದ : 'ನಿನ್ನ ಮಗಳ ಮೇಲೆ ಅತ್ಯಾಚಾರ ನಡೆದಿದ್ದರೆ ಸುಮ್ಮನಿರುತ್ತಿದ್ದೆಯಾ?' ಎಂಬ ಈಶ್ವರಪ್ಪ ಹೇಳಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಷಿ ವಿಷಾದ ವ್ಯಕ್ತಪಡಿಸಿದ್ದಾರೆ. ಎಂದಿಗೂ ಇಂತಹ ಹೇಳಿಕೆ ನೀಡಬಾರದು, ಆಕ್ರೋಷದಲ್ಲಿ ಇಂತಹ ಹೇಳಿಕೆ ನೀಡಿದ ಈಶ್ವರಪ್ಪ ಅವರಿಗೆ ಪಕ್ಷದ ವೇದಿಕೆಯಲ್ಲಿ ಈ ಕುರಿತು ಸಲಹೆ ನೀಡುತ್ತೇವೆ ಎಂದು ಜೋಶಿ ತಿಳಿಸಿದ್ದಾರೆ.