ಕೊಲ್ಲೂರಲ್ಲಿ ಕೇಮಾರು ಶ್ರೀ ಉಪವಾಸ ಸತ್ಯಾಗ್ರಹ

ಕೊಲ್ಲೂರು, ನ. 3: ಸೌಪರ್ಣಿಕಾ ನದಿಯನ್ನು ಮಾಲಿನ್ಯ ಮುಕ್ತಗೊಳಿಸಲು ಕೇಮಾರು ಶ್ರೀ ನೇತೃತ್ವದಲ್ಲಿ ನವೆಂಬರ್ 9 ರಂದು ಹಮ್ಮಿಕೊಂಡಿದ್ದ ಒಂದು ದಿನದ ಉಪವಾಸ ಸತ್ಯಾಗ್ರಹದಲ್ಲಿ ಅನೇಕರು ಪಾಲ್ಗೊಂಡರು.

'ದೇವರು ಕ್ಷಮಿಸುತ್ತಾನೆ, ಆದರೆ ಪಕೃತಿ ಕ್ಷಮಿಸುವುದಿಲ್ಲ' ಎಂಬ ಘೋಷ ವಾಕ್ಯದಡಿ ಕೊಲ್ಲೂರು ಮೂಕಾಂಬಿಕಾ ದೇವಾಲಯದ ಎದುರು ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಕೇಮಾರು ಶ್ರೀ, ಜಿಲ್ಲಾಡಳಿತ ಇನ್ನು ಮುಂದಾದರೂ ಈ ಬಗ್ಗೆ ಗಮನ ಹರಿಸಬೇಕಿದೆ. ಪ್ರವಾಸಿಗರ ಮತ್ತು ನಾಗರಿಕರ ಆರೋಗ್ಯ ಕಾಪಾಡುವುದು ಸರ್ಕಾರ ಮತ್ತು ಅಧಿಕಾರಿಗಳ ಹೊಣೆಯಾಗಿದೆ ಎಂದು ಹೇಳಿದರು.[ಸೌಪರ್ಣಿಕಾ ನದಿ ಉಳಿಸಲು ಉಪವಾಸ ಸತ್ಯಾಗ್ರಹ]

swamiji

ಪುರಾತನ ಐಹಿತ್ಯ ಸಾರುವ ದೇವಾಲಯಗಳು, ನದಿಗಳು ಇಂದು ಮಾನವನ ಆಧುನಿಕತೆ ಎಂಬ ಹುಚ್ಚಿಗೆ ಸಿಕ್ಕಿ ಬಲಿಯಾಗುತ್ತಿವೆ. ಸರ್ಕಾರದ ಮೇಲೆ ಒತ್ತಡ ತರಲು ಈ ಹೋರಾಟ ಹಮ್ಮಿಕೊಳ್ಳಲಾಗಿದೆ. ಇದು ಒಂದು ದಿನಕ್ಕೆ ಮುಗಿಯುವ ಹೋರಾಟವಲ್ಲ ಎಂದು ಹೇಳಿದರು.

ಕೊಡಚಾದ್ರಿ ಪರಿಸರ ಸಂರಕ್ಷಣಾ ಟ್ರಸ್ಟ್ , ಪರಶುರಾಮ ಸೇನೆ ಕೊಲ್ಲೂರು ಮತ್ತು ಹಿಂದು ಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+