Get Updates
Get notified of breaking news, exclusive insights, and must-see stories!

ದೊಡ್ಲ, ಹೆರಿಟೇಜ್, ತಿರುಮಲ ಸಹಕಾರಿ ಸಂಸ್ಥೆಗಳಲ್ಲ.. ತಿಳಿಯಿರಿ ಎಂದ ನೆಟ್ಟಿಗರು!

ಬೆಂಗಳೂರು: 'ನಂದಿನಿ ವಿಚಾರಕ್ಕೆ ಕೈಹಾಕುತ್ತಿದ್ದಾರೆ..' ಎಂಬ ವಿಷಯ ಕೇಳಿ ಕನ್ನಡಿಗರು ಕೆಂಡವಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಕಳೆದ ಕೆಲದಿನದಿಂದ ನಂದಿನಿ (KMF) ವಿಚಾರ ಟ್ರೆಂಡ್ ಕ್ರಿಯೇಟ್‌ ಮಾಡಿದೆ. ಬಿಜೆಪಿ ನಾಯಕರು ಇದನ್ನ ನೋಡಿ ಚಿಂತಿತರಾಗಿದ್ದು, ಈ ವಿಚಾರ ತಣ್ಣಗಾಗಿಸುವಂತೆ ರಾಜ್ಯ ನಾಯಕರಿಗೆ ಹೈಕಮಾಂಡ್ ಸೂಚಿಸಿದೆ. ಆದರೂ ನಂದಿನಿ & ಅಮುಲ್ (Amul) ಚರ್ಚೆ ದೊಡ್ಡದಾಗುತ್ತಲೇ ಇದೆ.

ನಂದಿನಿ ಮತ್ತು ಅಮುಲ್ ವಿಚಾರ ದೊಡ್ಡದಾಗುತ್ತಿದ್ದಂತೆ ಪ್ರಸಕ್ತ ಕರ್ನಾಟಕ ವಿಧಾನಸಭೆ ಚುನಾವಣೆ ಮೇಲೂ ಪ್ರಭಾವ ಬೀರುವ ಲಕ್ಷಣಗಳು ಗೋಚರಿಸುತ್ತಿವೆ. ಹೀಗಾಗಿ ಬಿಜೆಪಿ ಹೈಕಮಾಂಡ್ ರಾಜ್ಯ ನಾಯಕರಿಗೆ ಸೂಚನೆ ನೀಡುತ್ತಿದ್ದಂತೆ ನಂದಿನಿ & ಅಮುಲ್ ಕುರಿತು ಚರ್ಚೆ ಆರಂಭ ಮಾಡಿದ್ದವರಿಗೆ ತಿರುಗೇಟು ನೀಡುತ್ತಿದ್ದಾರೆ ಕಮಲ ಪಾಳಯದ ನಾಯಕರು. ಹೀಗೆ ತಿರುಗೇಟು ನೀಡಲು ಬಿಜೆಪಿ ಮಾಡಿದ್ದ ಟ್ವೀಟ್ ಕೂಡ ಮತ್ತೊಂದು ಹಂತದ ಚರ್ಚೆಗೆ ವೇದಿಕೆ ಒದಗಿಸಿದ್ದು, ತಿರುಗುಬಾಣ ಆಗುತ್ತಿದೆ ಅಂತಾ ನೆಟ್ಟಿಗರು ಮಾತನಾಡುತ್ತಿದ್ದಾರೆ.

KMF and Amul fight drags again in social media after BJP leaders reaction

ಟ್ವೀಟ್ ಬಗ್ಗೆ ಚರ್ಚೆ ಶುರು!

ಹಾಲಿನ ಬಗ್ಗೆ ಹುಸಿ ಪ್ರೀತಿ ತೋರುವವರು ಗೋಮಾತೆಯ ರಕ್ಷಣೆಗೆ ಎಂದಾದರೂ ನಿಂತಿದ್ದರೇ? 2010ರಲ್ಲಿ ಮೊದಲ ಬಾರಿ ರಾಜ್ಯದಲ್ಲಿ ಗೋಹತ್ಯೆ ನಿಷೇಧ ಮಸೂದೆ ಮಂಡಿಸಿದವರು ಶ್ರೀ @BSYBJP ಅವರು. @INCKarnataka ಪರಂಪರೆ ಅಂದಿನ ರಾಜ್ಯಪಾಲರು ಅದಕ್ಕೆ ಸಹಿ ಮಾಡಲಿಲ್ಲ. 2020ರಲ್ಲಿ ಮತ್ತೆ ಕಾಯ್ದೆ ಜಾರಿಗೆ ತಂದದ್ದೂ ನಾವೇ ಎಂದು ಪೋಸ್ಟ್ ಹಾಕಲಾಗಿತ್ತು. ಸರಿಣಿ ಟ್ವೀಟ್ ಮುಂದುವರಿದು, ದೊಡ್ಲ (ತೆಲಂಗಾಣ)
ಹೆರಿಟೇಜ್ (ಆಂಧ್ರ), ಆರೋಕ್ಯ (ತಮಿಳುನಾಡು), ಮಿಲ್ಕಿ ಮಿಸ್ಟ್ (ತ. ನಾಡು), ತಿರುಮಲ (ತ. ನಾಡು), ಹಟ್ಸನ್ (ತ.ನಾಡು). ಎಲ್ಲವೂ ನಂದಿನಿ‌ ಎದುರಿಸಿದ ಬ್ರ್ಯಾಂಡ್‌ಗಳೇ. ಹಾಲಿನ ಹುಡಿ ಉತ್ಪಾದನೆ ಸಾಮರ್ಥ್ಯವನ್ನು ದಿನಕ್ಕೆ 320 ಟನ್‌ಗೆ ಹೆಚ್ಚಿಸಿದ್ದು ನಾವು... ಎಂದು ಬಿಜೆಪಿ ಟ್ವೀಟ್‌ನಲ್ಲಿ ಬರೆಯಲಾಗಿತ್ತು.

ಖಾಸಗಿ ಬೇರೆ.. ಸಹಕಾರಿ ಬೇರೆಯಂತೆ!

ರಾಜ್ಯ ಬಿಜೆಪಿ ಅಧಿಕೃತ ಟ್ವಿಟ್ಟರ್ ಖಾತೆ ಮಾಡಿದ್ದ ಟ್ವೀಟ್‌ಗೆ ಇದೀಗ ನೆಟ್ಟಿಗರು ತಿರುಗೇಟು ನೀಡುತ್ತಿದ್ದಾರೆ, 'ಇವು ಯಾವುವೂ ಸಹಕಾರಿ ಸಂಸ್ಥೆಗಳಲ್ಲ. ಪ್ರೈವೇಟ್ ಎಂಟಿಟಿಗಳು! ಇವಕ್ಕೆ ಸಮಸ್ಯೆ ಅರ್ಥನೇ ಆಗಿಲ್ಲ ಕಣ್ರೋ...' ಎನ್ನುತ್ತಾ ಒಬ್ಬ ಟ್ವಿಟ್ಟರ್ ಬಳಕೆದಾರ ಪ್ರತಿಕ್ರಿಯೆ ನೀಡಿದ್ದರೆ, ಮತ್ತಷ್ಟು ಜನ ಇದೇ ರೀತಿ ಸಹಕಾರಿ ಸಂಸ್ಥೆ ಹಾಗೂ ಖಾಸಗಿ ಸಂಸ್ಥೆ ಬೇರೆ ಬೇರೆ ಅಲ್ವಾ ಎಂದು ಪ್ರತಿಕ್ರಿಯಿಸಿದ್ದಾರೆ.

KMF and Amul fight drags again in social media after BJP leaders reaction

'ಯಾಕೆ ಮಿಕ್ಕೆಲ್ಲಾ ಕಂಪನಿ ಬಿಟ್ಟು...'

ಅಂದಹಾಗೆ ಟ್ವಿಟ್ಟರ್ ಬಳಕೆದಾರರೊಬ್ಬರು ಅಮುಲ್ ಬಗೆಗಿನ ಸಮರ್ಥನೆ ಬಗ್ಗೆ ಪ್ರತಿಕ್ರಿಯೆ ನೀಡುತ್ತಾ, 'ಯಾಕೆ ಮಿಕ್ಕೆಲ್ಲಾ ಕಂಪನಿ ಬಿಟ್ಟು ಅಮುಲ್ ಮೇಲೆ ವಿರೋಧ ಅಂದ್ರೆ ನೋಡಿ. ಒಂದಷ್ಟು ಖಾಸಗಿ ಕಂಪನಿಗಳ ಪೋಟೋ ಹೆಸರು ಬರೆದು ಸಮರ್ಥನೆಗೆ ಇಳಿದಿರೋ ಮೂರ್ಖರೇ ಖಾಸಗಿ ಕಂಪೆನಿಗಳಿಗೂ ಸರ್ಕಾರದ ಅಧೀನದಲ್ಲಿ ನಡೆಯುವ ಸಹಕಾರಿ ಸಂಸ್ಥೆಗಳಿಗೂ ವ್ಯತ್ಯಾಸ ಅರಿಯಿರಿ. ನೀವು ಹೇಳಿದವು ಸರ್ಕಾರದ ಬೆಂಬಲದಿಂದ ಒಳಗೆ ಬರ್ತಿಲ್ಲ. ಆದ್ರೆ ಅಮುಲ್...' ಎಂದು ಟ್ವೀಟ್ ಮಾಡಿದ್ದಾರೆ.

'ನಂದಿನಿ ಮಟ್ಟ ಹಾಕಲು ಬಳಸುವುದಿಲ್ಲವೇ?'

ಹಾಗೇ ಮತ್ತೊಬ್ಬ ಟ್ವಿಟ್ಟರ್ ಬಳಕೆದಾರ, 'ಅಮೂಲ್ ಖಾಸಗಿ ಸಂಸ್ಥೆ(ಆರೋಕ್ಯ. ಡೋಡ್ಲ.etc..) ಆಗಿದ್ರೆ ಯಾರು ವಿರೋಧ ಮಾಡ್ತಾ ಇರ್ಲಿಲ್ಲ ಆದ್ರೆ ಎರಡು ಸಹಕಾರಿ ಸಂಸ್ಥೆಗಳು ಪೈಪೋಟಿ ಬಿದ್ದು ಯಾವುದೇ ಸಂಸ್ಥೆ ನಷ್ಟ ಉಂಟಾದರೆ ನೇರ ತೊಂದರೆ ಅದನ್ನು ಅವಲಂಬಿತ ಜನರಿಗೆ. ಅಮೂಲ್ ತನ್ನ ಅಗಾದ ಸಂಪತ್ತಲ್ಲಿ ಒಂದುಚೂರನ್ನು ನಂದಿನಿ ಮಟ್ಟ ಹಾಕಲು ಬಳಸುವುದಿಲ್ಲವೇ.' ಎಂದು ಪ್ರಶ್ನಿಸಿದ್ದಾರೆ.

ಒಟ್ನಲ್ಲಿ ಇದನ್ನೆಲ್ಲಾ ನೋಡುತ್ತಿದ್ದರೆ ಈಗಿನ ಪರಿಸ್ಥಿತಿಯಲ್ಲಿ ನಂದಿನಿ ಮತ್ತು ಅಮುಲ್ ವಿಚಾರ ತಣ್ಣಗಾಗುವ ಲಕ್ಷಣ ಕಾಣುತ್ತಿಲ್ಲ. ಇನ್ನಷ್ಟು ದಿನ ಸೋಷಿಯಲ್ ಮೀಡಿಯಾದಲ್ಲಿ ಇದೇ ವಿಚಾರ ಚರ್ಚೆಗೆ ಆಹಾರ ಆದರೂ ಆಗಬಹುದು. ಮತ್ತೊಂದು ಕಡೆ ಬಿಜೆಪಿ ಮತ್ತು ಕಾಂಗ್ರೆಸ್ ಕೂಡ ಈ ವಿಚಾರದಲ್ಲಿ ಆರೋಪ, ಪ್ರತ್ಯಾರೋಪದಲ್ಲಿ ತೊಡಗಿರುವುದು ಚುನಾವಣೆ ಕಾವು ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+