ಐಎಎಸ್ ಅಧಿಕಾರಿಗಳ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಕೆ!

ಐಎಎಸ್ ಅಧಿಕಾರಿಗಳ ಮೇಲೆ ಕಿರುಕುಳ ಆರೋಪಿಸಿ ಕೆಎಎಸ್​ ಅಧಿಕಾರಿ ಕೆ. ಮಥಾಯಿ ಅವರು ಬುಧವಾರ (ಮೇ 24)ದಂದು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.

ಬೆಂಗಳೂರು, ಮೇ 24: ಐಎಎಸ್ ಅಧಿಕಾರಿಗಳ ಮೇಲೆ ಕಿರುಕುಳ ಆರೋಪಿಸಿ ಕೆಎಎಸ್​ ಅಧಿಕಾರಿಯೊಬ್ಬರು ಬುಧವಾರ(ಮೇ 24)ದಂದು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.

ನಾಲ್ವರು ಐಎಎಸ್​ ಅಧಿಕಾರಿಗಳಿಂದ ನಿರಂತರ ಕಿರುಕುಳ ಅನುಭವಿಸಿದ್ದೇನೆ ಎಂದು ಸಕಾಲ ನಿರ್ದೇಶಕ ಕೆಎಎಸ್​ ಅಧಿಕಾರಿ ಕೆ. ಮಥಾಯಿ ಅವರು ಲೋಕಾಯುಕ್ತ ನ್ಯಾ. ವಿಶ್ವನಾಥ್​ ಶೆಟ್ಟಿ ಅವರಿಗೆ ದೂರು ನೀಡಿದರು.

ಐಎಎಸ್​ ಅಧಿಕಾರಿಗಳಾದ ಟಿ.ಕೆ.ಅನಿಲ್​ ಕುಮಾರ್​, ಡಾ. ಕಲ್ಪನಾ, ರಮಣರೆಡ್ಡಿ ಮತ್ತು ಲಕ್ಷ್ಮೀ ನಾರಾಯಣ್​ ವಿರುದ್ಧ ಆರೋಪ ಹೊರೆಸಲಾಗಿದೆ.

KAS officer K Mathai, alleges harassment by senior IAS officers

ಮಥಾಯ್​ ಅವರು ಕಳೆದ 9 ವರ್ಷದ ಅವಧಿಯಲ್ಲಿ 29ಕ್ಕೂ ಹೆಚ್ಚು ಬಾರಿ ವರ್ಗಾವಣೆಯಾಗಿದ್ದಾರೆ. ಬಿಬಿಎಂಪಿ ಮತ್ತು ಮಂಡ್ಯದ ಮೂಡಾದಲ್ಲಿನ ಬಹುಕೋಟಿ ಹಗರಣಗಳನ್ನು ಬೆಳಕಿಗೆ ತಂದಿದ್ದರು. ಈ ಬಗ್ಗೆ ಸಿಎಂ ಮತ್ತು ಕಾನೂನು ಸಚಿವ ಜಯಚಂದ್ರಗೆ 101 ಪುಟಗಳ ವರದಿಯನ್ನೂ ಸಹ ಸಲ್ಲಿಸಿದ್ದರು. ಆದರೆ, ಈ ಬಗ್ಗೆ ಹೆಚ್ಚಿನ ತನಿಖೆ ನಡೆಯಲೇ ಇಲ್ಲ.

ದೂರಿನಲ್ಲಿ ಏನಿದೆ? : ಹಿರಿಯ ಅಧಿಕಾರಿಗಳು ವಿನಾ ಕಾರಣ ನನಗೆ ಕಿರುಕುಳ ನೀಡುತ್ತಿದ್ದಾರೆ, ಓಡಾಡಲು ಸರ್ಕಾರಿ ವಾಹನ ನೀಡಿಲ್ಲ. ಬಾಡಿಗೆ ವಾಹನದಲ್ಲಿ ಓಡಾಡಿದರೂ ಅದಕ್ಕೆ ಹಣ ಪಾವತಿ ಮಾಡಿಲ್ಲ. ಕಚೇರಿಗೆ 5 -10 ನಿಮಿಷ ತಡವಾಗಿ ಬಂದಿದ್ದಕ್ಕೆ ನೋಟಿಸ್​ ನೀಡಿದ್ದಾರೆ. ಕಳೆದ 4 ತಿಂಗಳಲ್ಲಿ 6 ಕಡೆ ವರ್ಗಾವಣೆ ಮಾಡಲಾಗಿದೆ, ಸರಿಯಾಗಿ ವೇತನ ನೀಡುತ್ತಿಲ್ಲ. ಅಧಿಕಾರಿಗಳು ನನ್ನನ್ನು ಕೆಲಸದಿಂದ ಅಮಾನತ್ತು ಮಾಡಲು ಹುನ್ನಾರ ನಡೆಸುತ್ತಿದ್ದಾರೆ.

ಸೂಕ್ತ ದಾಖಲಾತಿಗಳೊಂದಿಗೆ ಲೋಕಾಯುಕ್ತಕ್ಕೆ ದೂರು ದಾಖಲಿಸಿದ್ದೇನೆ ಎಂದು ಮಥಾಯ್​ ತಿಳಿಸಿದ್ದಾರೆ.
ಐಎಎಸ್​ ಅಧಿಕಾರಿಯ ವಿರುದ್ದ ಕೆಎಎಸ್​ ಅಧಿಕಾರಿಯೊಬ್ಬರು ದೂರು ದಾಖಲಿಸಿದ ಮೊದಲ ಪ್ರಕರಣ ಇದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+