ಬೆಳಗಾವಿ ಗಡಿ ಪ್ರಕರಣದ ವಕೀಲರಿಗೆ ದಿನಕ್ಕೆ 60 ಲಕ್ಷ ರೂ. ವೆಚ್ಚ, ಯಾಕೆ?
ಬೆಳಗಾವಿ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದೊಂದಿಗೆ ಸುಪ್ರೀಂ ಕೋರ್ಟ್ನಲ್ಲಿ ಪ್ರಕರಣದಲ್ಲಿ ರಾಜ್ಯದ ಪರ ವಾದಿಸುವ ವಕೀಲರಿಗೆ ವೃತ್ತಿಪರ ಶುಲ್ಕವಾಗಿ ಸರ್ಕಾರವು ದಿನಕ್ಕೆ 60 ಲಕ್ಷ ರೂಪಾಯಿಗಳಷ್ಟು ಹಣ ವ್ಯಯಿಸುತ್ತಿದೆ.
ಬೆಂಗಳೂರು, ಜನವರಿ 25: ಬೆಳಗಾವಿ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದೊಂದಿಗೆ ಸುಪ್ರೀಂ ಕೋರ್ಟ್ನಲ್ಲಿ ನಡೆಯುತ್ತಿರುವ ಕಾನೂನು ಹೋರಾಟವು ಸರ್ಕಾರದ ಬೊಕ್ಕಸಕ್ಕೆ ದೊಡ್ಡ ರಂಧ್ರವನ್ನೇ ಮಾಡಿಬಿಟ್ಟಿದೆ. ಪ್ರಕರಣದ ಹೋರಾಟದಲ್ಲಿ ತೊಡಗಿರುವ ವಕೀಲರಿಗೆ ವೃತ್ತಿಪರ ಶುಲ್ಕವಾಗಿ ರಾಜ್ಯವು ದಿನಕ್ಕೆ 60 ಲಕ್ಷ ರೂಪಾಯಿಗಳಷ್ಟು ಹಣ ವ್ಯಯಿಸುತ್ತಿದೆ.
ಜ.18ರಂದು ಹೊರಡಿಸಿದ ಸರ್ಕಾರಿ ಆದೇಶದ ಪ್ರಕಾರ, ಹಿರಿಯ ವಕೀಲ ಮುಕುಲ್ ರೋಹಟಗಿ ನೇತೃತ್ವದ ಕಾನೂನು ತಂಡವು ಶುಲ್ಕ ಮತ್ತು ಇತರ ವೆಚ್ಚಗಳಲ್ಲಿ ಸುಪ್ರೀಂ ಕೋರ್ಟ್ ಮುಂದೆ ಹಾಜರಾಗಲು ತಲಾ 60 ಲಕ್ಷ ರೂಪಾಯಿಗಳನ್ನು ಪಡೆದಿದೆ ಎಂದು ತಿಳಿದು ಬಂದಿದೆ. ಈ ತಂಡದಲ್ಲಿ ವಕೀಲರಾದ ಶ್ಯಾಮ್ ದಿವಾನ್, ಉದಯ್ ಹೊಳ್ಳ, ಮಾರುತಿ ಬಿ ಝಿರಲಿ, ವಿಎನ್ ರಘುಪತಿ ಮತ್ತು ರಾಜ್ಯದ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವಡಗಿ ಇದ್ದಾರೆ.
ಈ ಶುಲ್ಕಗಳು ಸ್ಟಾರ್ ಹೋಟೆಲ್ಗಳಲ್ಲಿ ವಕೀಲರ ವಸತಿ ಮತ್ತು ಎಕಾನಮಿ ಮತ್ತು ಎಕ್ಸುಕ್ಯೂಟಿ ಕ್ಲಾಸ್ಗಳಲ್ಲಿ ವಿಮಾನದ ಪ್ರಯಾಣದ ವೆಚ್ಚಗಳನ್ನು ಹೊರತುಪಡಿಸುತ್ತವೆ. ಹೋಟೆಲ್ ಮತ್ತು ವಿಮಾನ ಪ್ರಯಾಣದ ವ್ಯವಸ್ಥೆಗಳನ್ನು ಸರ್ಕಾರವು ಮಾಡುತ್ತದೆ. ಇಲ್ಲವೆ ನಿಜವಾದ ಆಧಾರದ ಮೇಲೆ ಮರುಪಾವತಿ ಮಾಡುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಸಿದ್ಧತೆಗಾಗಿ ದಿನಕ್ಕೆ 5.5 ಲಕ್ಷ ರೂಪಾಯಿ
ಸುಪ್ರೀಂ ಕೋರ್ಟ್ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲು ಮುಕುಲ್ ರೋಹಟಗಿ ಅವರಿಗೆ ದಿನಕ್ಕೆ 22 ಲಕ್ಷ ರೂಪಾಯಿ ಹಾಗೂ ಸಮಾವೇಶ, ಇತರೆ ಕೆಲಸ ಸೇರಿದಂತೆ ಪ್ರಕರಣದ ಸಿದ್ಧತೆಗಾಗಿ ದಿನಕ್ಕೆ 5.5 ಲಕ್ಷ ರೂಪಾಯಿಗಳನ್ನು ನೀಡಲಾಗಿದೆ ಎಂದು ತಿಳಿದು ಬಂದಿದೆ. ಅದೇ ರೀತಿ ಶ್ಯಾಮ್ ದಿವಾನ್ ಅವರಿಗೆ ದಿನಕ್ಕೆ 6 ಲಕ್ಷ ರೂ.ಗಳನ್ನು ಶುಲ್ಕವಾಗಿ ಪಡೆದಿದ್ದಾರೆ. ಇದಲ್ಲದೆ ಕೇಸಿನ ತಯಾರಿ ಮತ್ತು ಇತರ ಕೆಲಸಗಳಿಗಾಗಿ ದಿನಕ್ಕೆ 1.5 ಲಕ್ಷ ರೂ. ಪ್ರಯಾಣ ವೆಚ್ಚವನ್ನು ಒಳಗೊಂಡಂತೆ ಹೊರ ರಾಜ್ಯಗಳ ಭೇಟಿಗಾಗಿ ದಿನಕ್ಕೆ 10 ಲಕ್ಷ ರೂಪಾಯಿಗಳನ್ನು ನೀಡಲಾಗಿದೆ.

ಪ್ರಕರಣದ ತಯಾರಿಗಾಗಿ 1.25 ಲಕ್ಷ
ಸುಪ್ರೀಂ ಕೋರ್ಟ್ಗೆ ಹಾಜರಾಗಲು ಅಡ್ವೊಕೇಟ್ ಜನರಲ್ಗೆ ದಿನಕ್ಕೆ 3 ಲಕ್ಷ ರೂಪಾಯಿ ಅದು ಬಿಟ್ಟರೆ ಪ್ರಕರಣದ ತಯಾರಿಗಾಗಿ 1.25 ಲಕ್ಷ ರೂಪಾಯಿ, ಹೊರ ರಾಜ್ಯ ಭೇಟಿಗೆ 2 ಲಕ್ಷ ರೂಪಾಯಿಗಳನ್ನು ನೀಡಲಾಗಿದೆ. ಉದಯ ಹೊಳ್ಳ ಅವರಿಗೆ ಸರ್ಕಾರ ದಿನಕ್ಕೆ 2 ಲಕ್ಷ ರೂಪಾಯಿ ನೀಡಿದೆ. ಇದು ಪ್ರಕರಣದ ಸಿದ್ಧತೆಗಾಗಿ 75,000 ರೂಪಾಯಿ, ಅರ್ಜಿಗಳ ಇತ್ಯರ್ಥಕ್ಕೆ 1.5 ಲಕ್ಷ ರೂಪಾಯಿ ಮತ್ತು ಹೊರ ರಾಜ್ಯಗಳ ಭೇಟಿಗಾಗಿ 1.5 ಲಕ್ಷ ರೂಪಾಯಿಗಳನ್ನು ಹೊರತುಪಡಿಸುತ್ತದೆ.

ಪ್ರಕರಣದ ಸಿದ್ಧತೆಗಾಗಿ ದಿನಕ್ಕೆ 60,000
ಇನ್ನೂ ಮತ್ತೋರ್ವ ವಕೀಲ ಮಾರುತಿ ಝಿರಲಿ ಅವರಿಗೆ ಪ್ರತಿ ಹಾಜರಾತಿಗೆ 1 ಲಕ್ಷ ರೂಪಾಯಿ, ಪ್ರಕರಣದ ಸಿದ್ಧತೆಗಾಗಿ ದಿನಕ್ಕೆ 60,000 ರೂಪಾಯಿ ಮತ್ತು ಹೊರ ರಾಜ್ಯಗಳ ಭೇಟಿಗೆ ದಿನಕ್ಕೆ 50,000 ರೂಪಾಯಿ ಅಡ್ವೊಕೇಟ್-ಆನ್-ರೆಕಾರ್ಡ್ ರಘುಪತಿ ಪ್ರತಿ ಪ್ರದರ್ಶನಕ್ಕೆ 35,000 ರೂಪಾಯಿ, ಪ್ರಕರಣದ ತಯಾರಿಗಾಗಿ 15,000 ರೂಪಾಯಿ ಮತ್ತು ಹೊರ ರಾಜ್ಯಗಳ ಭೇಟಿಗಾಗಿ ದಿನಕ್ಕೆ 30,000 ರೂಪಾಯಿ ಪಡೆಯುತ್ತಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಮಹಾರಾಷ್ಟ್ರದಿಂದ 2004ರಲ್ಲಿ ಅರ್ಜಿ
ಬೆಳಗಾವಿ ಮತ್ತು ಕರ್ನಾಟಕದ ಸುಮಾರು 865 ಹಳ್ಳಿಗಳ ಮೇಲೆ ಹಕ್ಕು ಕೋರಿ ಮಹಾರಾಷ್ಟ್ರ 2004ರಲ್ಲಿ ಸಲ್ಲಿಸಿದ ಅರ್ಜಿಯ ವಿಲೇವಾರಿಯನ್ನು ಸುಪ್ರೀಂ ಕೋರ್ಟ್ ಇನ್ನೂ ನಿರ್ಧರಿಸಿಲ್ಲ. ಕಳೆದ ವರ್ಷ ನವೆಂಬರ್ 30ರಂದು ಸುಪ್ರೀಂ ಕೋರ್ಟ್ ವಾದ ಆಲಿಸಲು ನಿಗದಿಯಾಗಿತ್ತು. ಮುಂದಿನ ತಿಂಗಳು ವಿಚಾರಣೆ ಕೈಗೆತ್ತಿಕೊಳ್ಳುವ ನಿರೀಕ್ಷೆಯಿದೆ.
-
Viral Video: 11 ವರ್ಷದ ಬಾಲಕನಿಂದ ಯಶಸ್ವಿ ವಿಮಾನ ಲ್ಯಾಂಡಿಂಗ್; ನೆಟ್ಟಿಗರ ಮನಗೆದ್ದ ಈ ಪುಟ್ಟ ಪೋರ -
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್












Click it and Unblock the Notifications