ಬೆಳಗಾವಿ ನೆಲದಲ್ಲಿ ರಾತ್ರಿ ಕನ್ನಡಿಗರ ಅಬ್ಬರ, ಬೆಚ್ಚಿಬಿದ್ದು ಊರುಬಿಟ್ಟ ಮರಾಠಿ ಪುಂಡರು... Karnataka Rajyotsava
ಕನ್ನಡಿಗರು ತಾಳ್ಮೆ ಇರುವವರು, ಆದರೆ 7 ಕೋಟಿ ಕನ್ನಡಿಗರು ಒಮ್ಮೆ ತಾಳ್ಮೆ ಕಳೆದುಕೊಂಡರೆ ಶತ್ರುಗಳ ಕಥೆ ಮುಗಿಯಿತು ಅಂತಾ ಅರ್ಥ. ಹೀಗೆ ದೊಡ್ಡ ದೊಡ್ಡ ಸಾಮ್ರಾಜ್ಯ ಸ್ಥಾಪನೆ ಮಾಡಿ 5,000 ವರ್ಷ ಇತಿಹಾಸ ಹೊಂದಿದವರು ಕನ್ನಡಿಗರು. ಆದರೆ, ಕನ್ನಡಿಗರ ಜೊತೆ ಮರಾಠಿ ಪುಂಡರು ಪದೇ ಪದೇ ಜಗಳ ಮಾಡಲು ಬಂದು ಸರಿಯಾಗಿ ಪೆಟ್ಟು ತಿಂದು ಹೋಗುತ್ತಾರೆ. ಅದೇ ರೀತಿಯಾಗಿ ಈಗ ಕರ್ನಾಟಕದ ಗಡಿನಾಡು ಬೆಳಗಾವಿ ಜಿಲ್ಲೆಯಲ್ಲಿ ಮರಾಠಿ ಪುಂಡರು ಕನ್ನಡಿಗರ ಅಬ್ಬರ ನೋಡಿ ಬೆಚ್ಚಿ ಬಿದ್ದಿದ್ದಾರೆ!
ಹೌದು ಕನ್ನಡ ಭಾಷೆ & ಕನ್ನಡ ನಾಡಿನ ಸಂಸ್ಕೃತಿ ಬಗ್ಗೆ ಜಗತ್ತಿಗೆ ಗೊತ್ತು. ಸಾವಿರಾರು ವರ್ಷಗಳಿಂದ ಕನ್ನಡಿಗರ ಜೊತೆ ವ್ಯವಹರಿಸುತ್ತಿರುವ ವಿವಿಧ ದೇಶಗಳಲ್ಲಿ ಕನ್ನಡ ಭಾಷೆ ಇತಿಹಾಸ ಸಾರುವ ಸಾಕ್ಷ್ಯ ಸಿಕ್ಕಿದೆ. ಇಂತಿಪ್ಪ ಕನ್ನಡ ನಾಡು ಹರಿದು ಹಂಚಿ ಹೋಗಿ, ಹಲವು ರಾಜ್ಯಗಳಲ್ಲಿ ಸೇರಿತ್ತು. ಆದರೆ ಹೀಗೆ ಬೇರೆ ಆಗಿದ್ದ ಕನ್ನಡ ನಾಡು ಒಗ್ಗೂಡಿ ಕರ್ನಾಟಕ ಎಂಬ ಹೆಸರು ಪಡೆದು 50 ವರ್ಷ ಕಳೆದಿದೆ. ಈ ಸಂಭ್ರಮದಲ್ಲಿ ಕನ್ನಡ ನಾಡಿನ ಕೀರ್ತಿ ಕೂಡ ಇಡೀ ಜಗತ್ತಿನಾದ್ಯಂತ ನಳನಳಿಸಿದೆ. ಹೀಗಿದ್ದಾಗ ಮರಾಠಿ ಪುಂಡರು ನಮ್ಮ ಬೆಳಗಾವಿ ನೆಲದಲ್ಲಿ ಮತ್ತೆ ಕಿರಿಕ್ ಶುರು ಮಾಡಿದ್ದರು...

ಮರಾಠಿ ಪುಂಡರಿಗೆ ತಕ್ಕಪಾಠ!
ಬೆಳಗಾವಿ ಕನ್ನಡ ನಾಡಿನ ಪ್ರಮುಖ ಪ್ರದೇಶವಾಗಿದ್ದರೂ ಪದೇ ಪದೇ ಇಲ್ಲಿ ಮರಾಠಿ ಪುಂಡರು ಕಿರಿಕ್ ಮಾಡುತ್ತಾರೆ. ಹೀಗಾಗಿ ಮರಾಠಿ ಪುಂಡರಿಗೆ ತಕ್ಕಪಾಠ ಕಲಿಸಲು ಕನ್ನಡಿಗರು ಒಗ್ಗೂಡಿದ್ದು, ನಿನ್ನೆ ರಾತ್ರಿ ಪೂರ್ತಿ ಬೆಳಗಾವಿಯಲ್ಲಿ ಭರ್ಜರಿಯಾಗಿ ಸಂಭ್ರಮಾಚರಣೆ ನಡೆಸಿದ್ದಾರೆ ಕನ್ನಡಿಗರು. ಆದರೆ ಹೀಗೆ ಕನ್ನಡಿಗರು ಅಬ್ಬರಿಸುವ ಸಮಯದಲ್ಲಿ ಬೆಚ್ಚಿ ಬಿದ್ದು ಓಡಿ ಹೋಗಿದ್ದರು ಮರಾಠಿ ಪುಂಡರು!












Click it and Unblock the Notifications