ಸದನದಲ್ಲಿ ಬಿಜೆಪಿ ಯಾಮಾರುತ್ತಿದೆಯಾ, ಕಾದು ನೋಡುವ ತಂತ್ರವಾ?
ಪ್ರಾಥಮಿಕ ಶಾಲೆಯಲ್ಲಿ ಓದಿತ್ತಿರಬೇಕಾದರೆ, ಗುರುರಾಜ್ ಭಟ್ ಎನ್ನುವ ಗಣಿತದ ಮೇಸ್ಟ್ರು ಇದ್ದರು. ಅವರ ಕ್ಲಾಸ್ ನಲ್ಲಿ ನಾವೆಲ್ಲಾ ಎಷ್ಟು ಗಂಭೀರವಾಗಿ ಇರುತ್ತಿದ್ದೆವು ಎಂದರೆ, ಶೀನಲೂ ಭಯಪಡುತ್ತಿದ್ದೆವು. ತಮ್ಮ ಕ್ಲಾಸ್ ನಲ್ಲಿ ಮಕ್ಕಳು ಶಿಸ್ತಿನಿಂದ ಇರುವಂತೆ ನೋಡಿಕೊಳ್ಳುತ್ತಿದ್ದರು.
ಈ ವಿಚಾರ ಇಲ್ಯಾಕೆ ಎಂದರೆ, ಹಾಲೀ ಮಾನ್ಸೂನ್ ಅಧಿವೇಶನದಲ್ಲಿ ಬಿಜೆಪಿ ಸದಸ್ಯರು ನಡೆದುಕೊಳ್ಳುತ್ತಿರುವ ರೀತಿ. ಯಾವ ಆರೋಪಕ್ಕೂ ತಲೆಕೆಡಿಸಿಕೊಳ್ಳದೇ, ತಾವಾಯಿತು, ಸದನದ ಕಲಾಪವಾಯಿತು ಎನ್ನುವಷ್ಟರ ಮಟ್ಟಿಗೆ ಬಿಜೆಪಿಯವರು ಶಿಸ್ತಿನ ಸಿಪಾಯಿಗಳಂತೆ ಕಂಗೊಳಿಸುತ್ತಿದ್ದಾರೆ.
ಚರ್ಚೆ,ಸಿಟ್ಟು,ಇವತ್ತೇ ಕಡೆ, ಎಲ್ಲವೂ ಮುಗಿಯುತ್ತದೆ: ರಮೇಶ್ ಕುಮಾರ್
ಹಾಗಂತ, ಬಿಜೆಪಿಯಲ್ಲಿ ಮಾತಿನ ವೀರರು, ಶೂರರು ಇಲ್ಲವೆಂದಲ್ಲ. ಇರುವ 105 ಜನ ಶಾಸಕರಲ್ಲಿ ಬೇಕಾದಷ್ಟು ಜನ ಮಾತುಮಲ್ಲರು ಸಿಗುತ್ತಾರೆ. ಆದರೆ, ಅವರು ಶಿಸ್ತಿನಿಂದ ಅಧಿವೇಶನದಲ್ಲಿ ಪಾಲ್ಗೊಳ್ಳುತ್ತಿರುವ ಹಿಂದೆ, ಯಾವ ಉದ್ದೇಶವಿದೆ ಎನ್ನುವುದನ್ನು ತಿಳಿದುಕೊಳ್ಳಲು ದೊಡ್ಡ ಸಾಹಸವನ್ನೇನು ಮಾಡಬೇಕಾಗಿಲ್ಲ.
ಅದೇನೇ ಇರಲಿ, ಜುಲೈ ಹನ್ನೆರಡರಿಂದ ಆರಂಭವಾದ ಮಳೆಗಾಲದ ಅಧಿವೇಶನದಲ್ಲಿ ಇಂದು, ನಾಳೆ ಎಂದುಕೊಂಡು ವಿಶ್ವಾಸಮತಯಾಚನೆ ದಿನ ಗಣೇಶನ ಮದುವೆಯ ರೀತಿಯಲ್ಲಿ ಮುಂದೂಡಲ್ಪಡುತ್ತಲೇ ಇದೆ. ಸಿಕ್ಕಿದ್ದೇ ಚಾನ್ಸ್ ಎಂದುಕೊಂಡು ಆಡಳಿತ ಪಕ್ಷದವರು ಬಿಜೆಪಿಯ ವಿರುದ್ದ ಮುಗಿಬೀಳುತ್ತಿದ್ದಾರೆ.

ಮಂಗಳವಾರ ಜುಲೈ 23, ಸಂಜೆ ಆರು ಗಂಟೆಗೆ ಮಹೂರ್ತ ಫಿಕ್ಸ್ ಆಗಿದೆ
ಮೊದಲು ಜುಲೈ ಹನ್ನೆರಡು ಶುಕ್ರವಾರ ವಿಶ್ವಾಸಮತಯಾಚನೆ ನಡೆಯಬಹುದು ಎಂದು ಹೇಳಲಾಗಿತ್ತು, ಇದಾದ ನಂತರ ಸೋಮವಾರ ಜುಲೈ 15, ಅದು ಸಾಧ್ಯವಾಗದಿದ್ದಾಗ ಗುರುವಾರ ಜುಲೈ 18, ಅಲ್ಲೂ ಆಡಳಿತ ಪಕ್ಷದವರು ಮೇಲುಗೈ ಸಾಧಿಸಿದಾಗ ಸೋಮವಾರ ಜುಲೈ 22ಕ್ಕೆ ಮುಂದೂಡಲ್ಪಟ್ಟಿತು. ಅದೂ ಆಗಲಿಲ್ಲ, ಈಗ ಮಂಗಳವಾರ ಜುಲೈ 23, ಸಂಜೆ ಆರು ಗಂಟೆಗೆ ಮಹೂರ್ತ ಫಿಕ್ಸ್ ಆಗಿದೆ.

ಬಿಜೆಪಿಯವರು ಏರು ಧನ್ವಿಯಲ್ಲೂ ಮಾತನಾಡುತ್ತಿಲ್ಲ
ಅಧಿವೇಶನ ಆರಂಭವಾಗಿ ಇಷ್ಟು ದಿನವಾದರೂ, ಬಿಜೆಪಿಯವರು ಸದನದ ಬಾವಿಗೆ ಬಂದು ಪ್ರತಿಭಟನೆ ಮಾಡುವುದು ಅತ್ಲಾಗಿರಲಿ, ಏರು ಧನ್ವಿಯಲ್ಲೂ ಮಾತನಾಡುತ್ತಿಲ್ಲ. ಕಾರಣ ಅತ್ಯಂತ ಸ್ಪಷ್ಟ. ಎಲ್ಲಿ ಮಾತನಾಡಿ ಎಡವಟ್ಟಾಗಿ, ಸ್ಪೀಕರ್ ಹೊರಹಾಕುತ್ತಾರೋ ಎನ್ನುವ ಭಯ. ಒಂದು ವೇಳೆ ಹಾಗೆ ಆದರೆ, ಸಂಖ್ಯಾಬಲದಲ್ಲಿ ಏರುಪೇರಾಗುವ ಭೀತಿ.

ಮುಂಗೋಪಕ್ಕೆ ಹೆಸರಾಗಿರುವ ವಿರೋಧ ಪಕ್ಷದ ನಾಯಕ ಯಡಿಯೂರಪ್ಪ
ಮುಂಗೋಪಕ್ಕೆ ಹೆಸರಾಗಿರುವ ವಿರೋಧ ಪಕ್ಷದ ನಾಯಕ ಯಡಿಯೂರಪ್ಪ, ತಾಳ್ಮೆ ಕಳೆದುಕೊಳ್ಳದೇ ಶಾಂತರೀತಿಯಿಂದ ಇದ್ದಾರೆ. ಗಂಟೆ ಗಂಟೆಗೂ ಪ್ರಚೋದನೆಗೆ ಒಳಗಾಗದಂತೆ ತಮ್ಮ ಶಾಸಕರಿಗೆ ಕಣ್ಸನ್ನೆ ಮಾಡುತ್ತಿದ್ದಾರೆ. ಇದರ ಲಾಭವನ್ನು ಭರ್ಜರಿಯಾಗಿ ಪಡೆದುಕೊಳ್ಳುತ್ತಿರುವ ಆಡಳಿತ ಪಕ್ಷದವರು ಬಿಜೆಪಿಯವರನ್ನು ಟೀಕಿಸುತ್ತಾ, ಕಾಲೆಳೆಯುತ್ತಿದ್ದಾರೆ.

ಸ್ಪೀಕರ್ ರಮೇಶ್ ಕುಮಾರ್, ಶಾಸಕರ ಕಾಲಿಗೆ ಬೀಳುವುದೊಂದೇ ಬಾಕಿ
ಸ್ಪೀಕರ್ ರಮೇಶ್ ಕುಮಾರ್, ಶಾಸಕರ ಕಾಲಿಗೆ ಬೀಳುವುದೊಂದೇ ಬಾಕಿ, ಮಿಕ್ಕೆಲ್ಲಾ ಸಹನೆಯ ಅಸ್ತ್ರವನ್ನು ಈಗಾಗಲೇ ಪ್ರಯೋಗಿಸಿದ್ದಾಗಿದೆ. ಆದರೆ, ಅದ್ಯಾವುದೂ ಕೆಲಸಕ್ಕೆ ಬರುತ್ತಿಲ್ಲ. ಆಡಳಿತ ಪಕ್ಷದ ಸದಸ್ಯರೇ ಸದನದ ಬಾವಿಯ ಹತ್ತಿರ ಪ್ರತಿಭಟನೆ ಮಾಡುತ್ತಿದ್ದಾರೆಂದರೆ, ಎಲ್ಲವೂ ಪ್ರೀ ಪ್ಲಾನ್ಡ್ ಎನ್ನುವುದನ್ನು ಅರಿಯಲು ವಿಶೇಷ ಬುದ್ದಿವಂತಿಕೆ ಬೇಕಾಗಿಲ್ಲ.

ಕಲಾಪ 'ವ್ಯರ್ಥ ಪ್ರಲಾಪ'ದಲ್ಲಿ ಸಾಗುತ್ತಿರುವುದಂತೂ ಸ್ಪಷ್ಟ
ಕಲಾಪ 'ವ್ಯರ್ಥ ಪ್ರಲಾಪ'ದಲ್ಲಿ ಸಾಗುತ್ತಿರುವುದಂತೂ ಸ್ಪಷ್ಟ. ಸ್ಪೀಕರ್ ಅವರಿಗೆ ಎಷ್ಟೇ ಒತ್ತಡ ತಂದರೂ, ಆಡಳಿತ ಪಕ್ಷದವರು ವಿಶ್ವಾಸಮತಯಾಚನೆಯನ್ನು ಇನ್ನೊಂದು ದಿನಕ್ಕೆ ಮುಂದೂಡುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಇಷ್ಟೆಲ್ಲಾ ಗ್ರೌಂಡ್ ವರ್ಕ್ ಮಾಡಿ, ಕೊನೇ ಕ್ಷಣದಲ್ಲಿ ತೊಂದರೆಯಾಗಬಾರದೆಂದು ಬಿಜೆಪಿಯವರು ಶಿಸ್ತು, ಸಂಯಮದಿಂದಿದ್ದಾರೆ.

ಇದುವರೆಗಿನ ಕಲಾಪದಲ್ಲಿ ಬಿಜೆಪಿಯವರು ಯಾಮಾರುತ್ತಲೇ ಬಂದಿದ್ದಾರೆ
ಆಡಳಿತ ಪಕ್ಷದವರು ಎಷ್ಟೇ ಪ್ರಚೋದಿಸಿದರೂ ಬಿಜೆಪಿಯವರು ಸುಮ್ಮನಿದ್ದಾರೆ, ಇದುವರೆಗಿನ ಕಲಾಪದಲ್ಲಿ ಬಿಜೆಪಿಯವರು ಯಾಮಾರುತ್ತಲೇ ಬಂದಿದ್ದಾರೆ. ಮಂಗಳವಾದರೂ ವಿಶ್ವಾಸ ನಿರ್ಣಯ ಮತಕ್ಕೆ ಹೋಗುತ್ತಾ, ಅಥವಾ ಇನ್ನೊಂದು ದಿನಾಂಕನಾ ಕಾದು ನೋಡಬೇಕಿದೆ. ಯಾಕೆಂದರೆ, ಸೋಮವಾರ ಇದನ್ನೆಲ್ಲಾ ಮುಗಿಸುತ್ತೇನೆ ಎಂದಿದ್ದ ರಮೇಶ್ ಕುಮಾರ್, ಈಗ ಮಂಗಳವಾರ ಗ್ಯಾರಂಟಿ ಎಂದಿದ್ದಾರೆ.
-
ಹಿಂದುಳಿದ, ದುರ್ಬಲ ವರ್ಗದ ಮಕ್ಕಳಿಗೆ ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಶೇ. 25 ರಷ್ಟು ಉಚಿತ ಪ್ರವೇಶಕ್ಕೆ ಅರ್ಜಿ ಆಹ್ವಾನ -
ನಟಿ ನೋರಾ ಫತೇಹಿ ವೃತ್ತಿಜೀವನಕ್ಕೆ ಕುತ್ತು ತಂದ 'ಸೆರಗ ಸರ್ಸೆ' ವಿವಾದ: ಗಡಿಪಾರು ಮಾಡುವಂತೆ ಗೃಹ ಸಚಿವಾಲಯಕ್ಕೆ ದೂರು -
ಮಾರ್ಚ್ 23ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು












Click it and Unblock the Notifications