ಆನಂದ್ ಸಿಂಗ್ ರಿಂದ ನಾಗೇಶ್ ತನಕ ಅತೃಪ್ತರ ಸಂಖ್ಯೆ ಹದಿನಾಲ್ಕಕ್ಕೆ ?!
ಬೆಂಗಳೂರು, ಜುಲೈ 8: ಕಾಂಗ್ರೆಸ್ ನ ಬಳ್ಳಾರಿ ಕ್ಷೇತ್ರದ ಶಾಸಕ ಆನಂದ್ ಸಿಂಗ್ ರಿಂದ ಆರಂಭಗೊಂಡ ಅತೃಪ್ತರ ಲೆಕ್ಕ ಇದೀಗ ಸಚಿವ ಸ್ಥಾನಕ್ಕೆ ನಾಗೇಶ್ ರಾಜೀನಾಮೆ ನೀಡುವ ಮೂಲಕ ಈಗಿನ ಪಟ್ಟಿಯ ಪ್ರಕಾರ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದ ಅತೃಪ್ತರ ಸಂಖ್ಯೆ ಹದಿನಾಲ್ಕಕ್ಕೆ ಏರಿಕೆ ಆಗಿದೆ.
ಸೋಮವಾರದಂದು ಮುಳಬಾಗಲಿನ ಪಕ್ಷೇತರ ಶಾಸಕ ನಾಗೇಶ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಅವರು ಮುಂಬೈಗೆ ತೆರಳಿ, ಅತೃಪ್ತರ ಜತೆಗೆ ಸೇರ್ಪಡೆ ಆಗಲಿದ್ದಾರೆ ಎಂಬ ಮಾತಿದೆ. ಈ ವರೆಗಿನ ಅತೃಪ್ತರ ಪಟ್ಟಿ, ಅಂದರೆ ಸೋಮವಾರದ ಬೆಳಗ್ಗೆ ತನಕದ ಪಟ್ಟಿ ಹೀಗಿದೆ.

ಆನಂದ್ ಸಿಂಗ್- ವಿಜಯನಗರ (ಹೊಸಪೇಟೆ) ಕ್ಷೇತ್ರ- ಕಾಂಗ್ರೆಸ್
ಎಸ್.ಟಿ.ಸೋಮಶೇಖರ್- ಯಶವಂತಪುರ ಕ್ಷೇತ್ರ-ಕಾಂಗ್ರೆಸ್
ರಾಮಲಿಂಗಾ ರೆಡ್ಡಿ- ಬಿಟಿಎಂ ಲೇಔಟ್ ಕ್ಷೇತ್ರ- ಕಾಂಗ್ರೆಸ್
ಮುನಿರತ್ನ- ರಾಜರಾಜೇಶ್ವರಿ ನಗರ ಕ್ಷೇತ್ರ-ಕಾಂಗ್ರೆಸ್
ಬಿ.ಸಿ.ಪಾಟೀಲ-ಹಿರೇಕೆರೂರು ಕ್ಷೇತ್ರ- ಕಾಂಗ್ರೆಸ್
ಪ್ರತಾಪ್ ಗೌಡ ಪಾಟೀಲ್-ಮಸ್ಕಿ- ಕಾಂಗ್ರೆಸ್
ಭೈರತಿ ಬಸವರಾಜ್- ಕೆ.ಆರ್.ಪುರಂ- ಕಾಂಗ್ರೆಸ್
ರಮೇಶ ಜಾರಕಿಹೊಳಿ- ಗೋಕಾಕ್- ಕಾಂಗ್ರೆಸ್
ಮಹೇಶ್ ಕುಮಟಳ್ಳಿ- ಆಥಣಿ- ಕಾಂಗ್ರೆಸ್
ಶಿವರಾಮ್ ಹೆಬ್ಬಾರ್- ಯಲ್ಲಾಪುರ (ಉತ್ತರ ಕನ್ನಡ)- ಕಾಂಗ್ರೆಸ್
ಎಚ್.ವಿಶ್ವನಾಥ್- ಹುಣಸೂರು-ಜೆಡಿಎಸ್
ನಾರಾಯಣ ಗೌಡ-ಕೆ.ಆರ್. ಪೇಟೆ- ಜೆಡಿಎಸ್
ಕೆ.ಗೋಪಾಲಯ್ಯ- ಮಹಾಲಕ್ಷ್ಮಿ ಲೇಔಟ್- ಜೆಡಿಎಸ್
ಎಚ್.ನಾಗೇಶ್-ಮುಳಬಾಗಲು- ಪಕ್ಷೇತರ












Click it and Unblock the Notifications