ಕುಮಾರಸ್ವಾಮಿ ನೇತೃತ್ವದ ಸಂಸದರ ಸಭೆಗೆ ಹಲವು ಪ್ರಮುಖರು ಗೈರು
ಬೆಂಗಳೂರು, ಡಿಸೆಂಬರ್ 04: ಕುಮಾರಸ್ವಾಮಿ ನೇತೃತ್ವದ ಸಂಸದರ ಸಭೆಗೆ ಹಲವು ಪ್ರಮುಖ ಸಂಸದರು, ರಾಜ್ಯಸಭಾ ಸದಸ್ಯರು ಗೈರಾಗಿದ್ದಾರೆ.
ಬಿಜೆಪಿಯಿಂದ ಕೇಂದ್ರ ಸಚಿವ ಡಿವಿ.ಸದಾನಂದಗೌಡ, ನಿರ್ಮಲಾ ಸೀತಾರಾಮನ್, ರಮೇಶ್ ಜಿಗಜಣಗಿ, ಅನಂತ್ಕುಮಾರ್ ಹೆಗಡೆ ಇವರುಗಳು ಗೈರಾಗಿದ್ದರೆ. ಕಾಂಗ್ರೆಸ್ನ ಮಲ್ಲಿಕಾರ್ಜುನ ಖರ್ಗೆ, ಜೆಡಿಎಸ್ ಸಂಸದ ದೇವೇಗೌಡ ಅವರು ಸಹ ಸಭೆಗೆ ಗೈರಾಗಿದ್ದಾರೆ.
ಜಲ ವಿವಾದಗಳು, ರೈಲ್ವೆ ಇಲಾಖೆ ಯೋಜನೆಗಳು, ಎನ್ಡಿಆರ್ಎಫ್ ಅನುದಾನ, ಕೊಡಗು ಸಂತ್ರಸ್ಥರಿಗೆ ನೆರವು ಇನ್ನೂ ಹಲವು ಕೇಂದ್ರ ಮತ್ತು ರಾಜ್ಯ ಸಂಬಂಧಿ ವಿಚಾರಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲು ಸಭೆ ಕರೆಯಲಾಗಿತ್ತು.

ಕುಮಾರಸ್ವಾಮಿ ನೇತೃತ್ವದಲ್ಲಿ ನಡೆಯುತ್ತಿರುವ ಈ ಸಭೆಯಲ್ಲಿ ಸಚಿವರಾದ ಡಿ.ಕೆ.ಶಿವಕುಮಾರ್, ಕೆ.ಜೆ.ಜಾರ್ಜ್, ಕೃಷ್ಣಬೈರೇಗೌಡ, ಪುಟ್ಟರಂಗ ಶೆಟ್ಟಿ, ಶಿವಾನಂದ ಪಾಟೀಲ್ ಇನ್ನೂ ಹಲವು ಭಾಗವಹಿಸಿದ್ದಾರೆ.












Click it and Unblock the Notifications