Karnataka Dam Water Level: ಇಂದು ವಿವಿಧ ಜಲಾಶಯಗಳಲ್ಲಿ ಒಳಹರಿವು- ಹೊರಹರಿವು ಎಷ್ಟಿದೆ? ಪಟ್ಟಿ
ಬೆಂಗಳೂರು, ಆಗಸ್ಟ್ 05: ಕರ್ನಾಟಕ ರಾಜ್ಯದಲ್ಲಿ ಕಳೆದ ತಿಂಗಳಿನಿಂದ ಸುರಿಯುತ್ತಿರುವ ಮಳೆ ಮುಂದುವರಿದಿದೆ. ಪಶ್ಚಿಮ ಘಟ್ಟಗಳು, ಕಾಡು, ಕಾಣಿವೆ ಭಾಗದಲ್ಲಿ ನಿರಂತರ ಸುರಿದ ಮಳೆಯಿಂದಾಗಿ ಕಳೆದ ವರ್ಷ ಬತ್ತಿಹೋಗಿದ್ದ ಕೆರೆ, ನದಿ, ಜಲಾಶಯಗಳಲ್ಲಿ ಜೀವ ಕಳೆ ಬಂದಿದೆ. ಮಳೆಯಿಂದಾಗಿ ರಾಜ್ಯದ ಬಹುತೇಕ ಎಲ್ಲ ಅಣೆಕಟ್ಟುಗಳು ಭರ್ತಿಯಾಗಿವೆ. ಕೆಲವು ಡ್ಯಾಂಗಳ ಒಳ ಹರಿವು ಮತ್ತು ಹೊರ ಹರಿವು ಏರಿಕೆ ಆಗಿದೆ.
ಈ ಕುರಿತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ಜಲಾಶಯಗಳ ಇಂದಿನ ನೀರಿನ ಮಟ್ಟದ ವಿವರ ನೀಡಿದೆ. ಲಿಂಗನಕ್ಕಿ, ಭದ್ರಾ, ಆಲಮಟ್ಟಿ, ಕೆಆರ್ಎಸ್, ಕಬಿನಿ, ಹಾರಂಗಿ, ವಾಣಿವಿಲಾಸ ಜಲಾಶಯ ಸೇರಿದಂತೆ ರಾಜ್ಯದ ನಾನಾ ಕಡೆಗಳಲ್ಲಿ ಅಣೆಕಟ್ಟುಗಳು ತುಂಬಿ ಹರಿಯುತ್ತಿವೆ. ಆಗಸ್ಟ್ 05ರಂದು ಈ ಜಲಾಶಯಗಳಲ್ಲಿ ಹೆಚ್ಚಿನ ಒಳಹರಿವು ಕಂಡು ಬಂದಿದೆ.

ಜಲಾಶಯಗಳ ಜಲಾನಯನ ಪ್ರದೇಶಗಳಲ್ಲಿ ಸುರಿದ ವಿಪರಿತ ಮಳೆಯಿಂದಾಗಿ ನದಿಗಳ ಒಳಹರಿವು ಹೆಚ್ಚಾಗಿದೆ. ಅದರಿಂದ ಆಯಾ ನದಿಗಳಿಗೆ ಅಡ್ಡಲಾಗಿ ಕಟ್ಟಿರುವ ಜಲಾಶಯಗಳಲ್ಲಿ ಸಾವಿರಾರು ಕ್ಯೂಸೆಕ್ ನೀರು ತುಂಬಿಕೊಂಡ ಪರಿಣಾಮ ಕೆಆರ್ಎಸ್, ಲಿಂಗನಮಕ್ಕಿ, ಹಾರಂಗಿ, ಭದ್ರಾ ಜಲಾಶಯಗಳಿಂದ ನೀರು ಹೊರ ಬಿಡಲಾಗುತ್ತಿದೆ.
ಸದ್ಯ ರಾಜ್ಯದಲ್ಲಿ ಭರ್ತಿಯಾಗಿರುವ ಪ್ರಮುಖ ಜಲಾಶಯಗಳ ಇಂದಿನ ನೀರಿನ ಪ್ರಮಾಣ, ಒಳ ಮತ್ತು ಹೊರ ಹರಿವಿನ ಪ್ರಮಾಣದ ಮಾಹಿತಿ ಇಲ್ಲಿದೆ.
ಕರ್ನಾಟಕ ಅಣೆಕಟ್ಟುಗಳ ಇಂದಿನ ನೀರಿನ ಮಟ್ಟ
KRS ಜಲಾಶಯದ ವಿವರ
ಒಟ್ಟು ಸಾಮರ್ಥ್ಯ - 49 ಟಿಎಂಸಿ
ಇಂದಿನ ಮಟ್ಟ- 35.53 ಟಿಎಂಸಿ
ಒಳ ಹರಿವು - 34,029 ಕ್ಯೂಸೆಕ್
ಹೊರ ಹರಿವು- 34,773 ಕ್ಯೂಸೆಕ್
* ಹೇಮಾವತಿ ಜಲಾಶಯ
ಒಟ್ಟು ಸಾಮರ್ಥ್ಯ- 37. 10 ಟಿಎಂಸಿ
ಇಂದಿನ ನೀರಿನ ಮಟ್ಟ - 30.73 ಟಿಎಂಸಿ
ಒಳಹರಿವು - 12,887 ಕ್ಯೂಸೆಕ್
ಹೊರಹರಿವು - 5,575 ಕ್ಯೂಸೆಕ್
* ತುಂಗಭದ್ರಾ ಜಲಾಶಯ
ಒಟ್ಟು ಸಾಮರ್ಥ್ಯ - 105.79 ಟಿಎಂಸಿ
ಇಂದಿನ ಮಟ್ಟ - 99.82 ಟಿಎಂಸಿ
ಹೊರಹರಿವು - 1,24,376 ಕ್ಯೂಸೆಕ್
ಒಳಹರಿವು - 1,14,526 ಕ್ಯೂಸೆಕ್
* ಹಾರಂಗಿ ಜಲಾಶಯ
ಒಟ್ಟು ನೀರಿನ ಸಾಮರ್ಥ್ಯ- 8.50 ಟಿಎಂಸಿ
ಇಂದಿನ ಸಂಗ್ರಹ - 8.38 ಟಿಎಂಸಿ
ಒಳಹರಿವು -5,171 ಕ್ಯೂಸೆಕ್
ಹೊರಹರಿವು - 6,000 ಕ್ಯೂಸೆಕ್

ಒಟ್ಟು ಸಾಮರ್ಥ್ಯ- 151 ಟಿಎಂಸಿ
ಇಂದಿನ ಮಟ್ಟ - 141.75 ಟಿಎಂಸಿ
ಒಳಹರಿವು - 31,051 ಕ್ಯೂಸೆಕ್
ಹೊರಹರಿವು - 10,998 ಕ್ಯೂಸೆಕ್
* ಮಲಪ್ರಭಾ ಜಲಾಶಯ
ಒಟ್ಟು ನೀರಿನ ಸಾಮರ್ಥ್ಯ - 37.73 ಟಿಎಂಸಿ
ಇಂದಿನ ಸಂಗ್ರಹ - 33.32 ಟಿಎಂಸಿ
ಒಳಹರಿವು - 6794 ಕ್ಯೂಸೆಕ್
ಹೊರಹರಿವು - 6794 ಕ್ಯೂಸೆಕ್
* ಕಬಿನಿ ಜಲಾಶಯ
ಡ್ಯಾಮ್ನ ಒಟ್ಟು ಸಾಮರ್ಥ್ಯ - 19.52 ಟಿಎಂಸಿ
ಇಂದಿನ ಮಟ್ಟ - 18.46 ಟಿಎಂಸಿ
ಹೊರಹರಿವು - 4892 ಕ್ಯೂಸೆಕ್
ಒಳಹರಿವು - 12,225 ಕ್ಯೂಸೆಕ್
* ಆಲಮಟ್ಟಿ ಜಲಾಶಯ
ಡ್ಯಾಮ್ನ ಒಟ್ಟು ಸಾಮರ್ಥ್ಯ - 123.8 ಟಿಎಂಸಿ
ಇಂದಿನ ಮಟ್ಟ - 120 ಟಿಎಂಸಿ
ಹೊರಹರಿವು - 2,52,555ಕ್ಯೂಸೆಕ್
ಒಳಹರಿವು - 3,03,608 ಕ್ಯೂಸೆಕ್
-
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ -
By-Election: ದಾವಣಗೆರೆ ದಕ್ಷಿಣದಲ್ಲಿ ಮೊದಲ ಬಾರಿ ಬಿಜೆಪಿ ಗೆಲುವು ನಿಶ್ಚಿತ; ಬಸವರಾಜ ಬೊಮ್ಮಾಯಿ ವಿಶ್ವಾಸ -
ಆರ್ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ಕೇವಲ 42 ಎಸೆತಗಳಲ್ಲಿ 94 ರನ್ ಸಿಡಿಸಿದ ಅಭಿಷೇಕ್ ಶರ್ಮಾ: ಭಾರೀ ವೈರಲ್












Click it and Unblock the Notifications