ಚಲನಚಿತ್ರ, ಕಿರುತೆರೆ ರಂಗದವರಿಗೆ ಸಿಹಿ ಸುದ್ದಿ: ಆರ್ಥಿಕ ನೆರವು ಪಡೆಯಲು ಅವಧಿ ವಿಸ್ತರಣೆ!

ಬೆಂಗಳೂರು,

ಜು.
09:
ಕೊರೊನಾ
ವೈರಸ್
ಎರಡನೇ
ಅಲೆ
ಹಿನ್ನೆಲೆಯಲ್ಲಿ
ಜಾರಿಯಾಗಿದ್ದ
ಲಾಕ್‌ಡೌನ್‌ನಿಂದ
ಸಂಕಷ್ಟಕ್ಕೆ
ಸಿಲುಕಿದ್ದ
ಚಲನಚಿತ್ರ
ಮತ್ತು
ಕಿರುತೆರೆ
ಕಲಾವಿದರು
ಮತ್ತು
ತಂತ್ರಜ್ಞರು
ಹಾಗೂ
ಸಿನಿಮಾ
ಗೃಹದ
ಕಾರ್ಮಿಕರಿಗೆ
ರಾಜ್ಯ
ಸರ್ಕಾರ
ಘೋಷಣೆ
ಮಾಡಿದ್ದ
3
ಸಾವಿರ
ರೂ.
ಮೊತ್ತದ
ವಿಶೇಷ
ಆರ್ಥಿಕ
ಪ್ಯಾಕೇಜ್‌
ಪಡೆಯಲು
ಅರ್ಜಿ
ಸಲ್ಲಿಸಲು
ಅವಧಿ
ವಿಸ್ತರಿಸಲಾಗಿದೆ.
ಸೇವಾಸಿಂಧು
ಪೋರ್ಟಲ್
ಮೂಲಕ
ಅರ್ಜಿ
ಸಲ್ಲಿಸುವ
ಅವಧಿಯನ್ನು
ಜುಲೈ
31ರ
ವರೆಗೆ
ವಿಸ್ತರಿಸಿ
ಸರ್ಕಾರ
ಆದೇಶ
ಮಾಡಿದೆ.
ಮೊದಲ
ಆದೇಶದಂತೆ
ಇಂದು
(ಜು.09)
ಅರ್ಜಿ
ಸಲ್ಲಿಸಲು
ಕೊನೆಯ
ದಿನವಾಗಿತ್ತು.

id="toptextpromo">
id='are-slot-1'
class='oiad
oi-axt
oiadv'>

ಆಧಾರ್

ಕಾರ್ಡ್
ಸಂಖ್ಯೆ
ಆಧರಿಸಿ
ನೇರವಾಗಿ
ಅರ್ಹ
ಫಲಾನುಭವಿಗಳ
ಬ್ಯಾಂಕ್
ಖಾತೆಗಳಿಗೆ
ನೇರವಾಗಿ
ಹಣ
ವರ್ಗಾವಣೆ
ಮಾಡಲಾಗುತ್ತದೆ.
ಆರ್ಥಿಕ
ಸಹಾಯ
ಪಡೆಯಲು
ಸೇವಾಸಿಂಧು
ವೆಬ್‌ಪೋರ್ಟಲ್‌ನಲ್ಲಿ
ಜುಲೈ
9ರ
ವರೆಗೆ
ಅರ್ಜಿ
ಸಲ್ಲಿಸಲು
ಮೊದಲು
ಅವಕಾಶ
ಮಾಡಿಕೊಡಲಾಗಿತ್ತು.
ಅವಧಿಯನ್ನು
ವಿಸ್ತರಿಸುವಂತೆ
ವಿವಿಧ
ಸಂಘಗಳು
ಮನವಿ
ಸಲ್ಲಿಸಿದ
ಹಿನ್ನೆಲೆಯಲ್ಲಿ
ಇದೀಗ
ಅರ್ಜಿ
ಸಲ್ಲಿಕೆ
ಅವಧಿಯನ್ನು
ಜುಲೈ
31ರ
ವರೆಗೆ
ವಿಸ್ತರಿಸಲಾಗಿದೆ.

id='are-slot-2'
class='oiad
oi-axt
oiadv'>

ಲಾಕ್‌ಡೌನ್‌ನಿಂದ ಕಲಾವಿದರಿಗೆ ಸಂಕಷ್ಟ

ಲಾಕ್‌ಡೌನ್‌ನಿಂದ ಕಲಾವಿದರಿಗೆ ಸಂಕಷ್ಟ

"ಕೊರೊನಾ ವೈರಸ್ ಎರಡನೇ ಮೊದಲ ಅಲೆಗಿಂತ ಭೀಕರವಾಗಿತ್ತು. ಹೀಗಾಗಿ ರಾಜ್ಯಾದ್ಯಂತ ಕಠಿಣ ಲಾಕ್‌ಡೌನ್ ಹೇರಲಾಗಿದ್ದರಿಂದ ಚಲನಚಿತ್ರಕಲಾವಿದರೂ ಸೇರಿದಂತೆ ಎಲ್ಲ ಕ್ಷೇತ್ರಗಳ ಜನರಿಗೆ ತೀವ್ರ ಆರ್ಥಿಕ ಸಂಕಷ್ಟ ಎದುರಾಗಿತ್ತು. ಎರಡನೇ ಅಲೆ ನಿರ್ವಹಿಸುವ ಹಿನ್ನೆಲೆಯಲ್ಲಿ ಸರ್ಕಾರ ವಿಧಿಸಿದ್ದ ನಿರ್ಬಂಧದಿಂದಾಗಿ ಬಾಧಿತರಾಗಿದ್ದ ಸಮಾಜ ವಿವಿಧ ವರ್ಗದವರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಕಳೆದ ಜೂನ್ 3 ರಂದು ಪರಿಹಾರದ ಎರಡನೇ ಪ್ಯಾಕೇಜ್ ಘೋಷಣೆ ಮಾಡಿದ್ದರು."

"ಅದರಲ್ಲಿ ಚಲನಚಿತ್ರೋದ್ಯಮ ಹಾಗೂ ಕಿರುತೆರೆ ಮಾಧ್ಯರಮದಲ್ಲಿ ತೊಡಗಿಕೊಂಡಿರುವ ನೋಂದಾಯಿತ ಅಸಂಘಟಿತ ಕಾರ್ಮಿಕರಿಗೆ ತಲಾ 3 ಸಾವಿರ ರೂ. ಪರಿಹಾರವನ್ನು ನೀಡಲಾಗುತ್ತಿದೆ" ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಡಾ. ಪಿ.ಎಸ್. ಹರ್ಷ ತಿಳಿಸಿದ್ದಾರೆ.

ನೇರ ಅರ್ಜಿ ಸ್ವೀಕರಿಸುವುದಿಲ್ಲ!

ನೇರ ಅರ್ಜಿ ಸ್ವೀಕರಿಸುವುದಿಲ್ಲ!

"ನೇರವಾಗಿ ಯಾವುದೇ ಅರ್ಜಿಯನ್ನು ಸ್ವೀಕರಿಸುವುದಿಲ್ಲ. ಅವಧಿ ವಿಸ್ತರಣೆ ಬಳಿಕ ಅರ್ಜಿ ಸಲ್ಲಿಸುವವರು ಕಡ್ಡಾಯವಾಗಿ ಸೇವಾಸಿಂಧು ಪೋರ್ಟಲ್‌ನಲ್ಲಿಯೇ ಸಲ್ಲಿಸಬೇಕು. ಅರ್ಜಿ ಇಲ್ಲವೇ ಶಿಫಾರಸ್ಸು ಪತ್ರಗಳನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಯಾವುದೇ ಕಚೇರಿಗಳಲ್ಲಿ ನೇರವಾಗಿ ಸ್ವೀಕರಿಸಲಾಗುವುದಿಲ್ಲ. ಅರ್ಜಿ ನಮೂನೆ ಮತ್ತು ಇನ್ನಿತರ ಷರತ್ತುಗಳಿಗಾಗಿ www.sevasindhu.karnataka.gov.in ಗೆ ಭೇಟಿ ಕೊಟ್ಟು ಪಡೆದುಕೊಳ್ಳಬಹುದು." ಎಂದು ಇಲಾಖೆ ಆಯುಕ್ತ ಡಾ. ಪಿ.ಎಸ್. ಹರ್ಷ ಮಾಹಿತಿ ಕೊಟ್ಟಿದ್ದಾರೆ.

ಅರ್ಜಿ ಸಲ್ಲಿಸಲು ಸಹಾಯವಾಣಿ ಸಹಾಯ

ಅರ್ಜಿ ಸಲ್ಲಿಸಲು ಸಹಾಯವಾಣಿ ಸಹಾಯ

ಸರ್ಕಾರದ ವಿಶೇಷ ಆರ್ಥಿಕ ನೆರವಿಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಬೇಕಾದಲ್ಲಿ ಅಥವಾ ಆನ್‌ಲೈನ್‌ನಲ್ಲಿ ಅರ್ಜಿಯನ್ನು ಸಲ್ಲಿಸಲು ವಾರ್ತಾ ಇಲಾಖೆ ಸಹಾಯವಾಣಿ ತೆರೆದಿದೆ. ಅಗತ್ಯವಿದಲ್ಲಿ ಸಹಾಯವಾಣಿಗೆ ಕರೆ ಮಾಡಿದರೆ ತಾಂತ್ರಿಕ ಮಾರ್ಗದರ್ಶನವನ್ನು ಕೊಡಲಾಗುವುದು. ಈ ಬಗ್ಗೆ ಕರ್ನಾಟಕ ಚಲನಚಿತ್ರ ಅಕಾಡೆಮಿಯಲ್ಲಿ ಸ್ಥಾಪಿಸಿರುವ ಸಹಾಯವಾಣಿ ಸಂಖ್ಯೆ 89046 45529 ಸಂಪರ್ಕಿಸಬಹುದು ಇಲ್ಲವೆ [email protected] ಗೆ ಇಮೇಲ್ ಮೂಲಕ ಪಡೆದುಕೊಳ್ಳಬಹುದು ಎಂದು ಇಲಾಖೆ ಮಾಹಿತಿ ಕೊಟ್ಟಿದೆ.

Recommended Video

    ಪ್ರತಿಯೊಬ್ಬರಿಗೂ ಕೈಲಾದ ಸಹಾಯ ಮಾಡುತ್ತಿರುವ ಬಿಜೆಪಿ ಶಾಸಕ | Oneindia Kannada
    ಆರ್ಥಿಕ ಸಹಾಯ ಪಡೆಯಲು ಮಾರ್ಗಸೂಚಿ

    ಆರ್ಥಿಕ ಸಹಾಯ ಪಡೆಯಲು ಮಾರ್ಗಸೂಚಿ

    1. ಎರಡನೇ ಅಲೆಯ ಕೋವಿಡ್-19 ರ ಹಿನ್ನೆಲೆಯಲ್ಲಿ ಘೋಷಣೆಯಾಗಿರುವ ಎರಡನೇ ಪ್ಯಾಕೇಜ್‌ ಅಡಿಯಲ್ಲಿ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಚಲನಚಿತ್ರ ಮತ್ತು ಕಿರುತೆರೆ ರಂಗದವರಿಗೆ ಒಂದು ಬಾರಿ ಮಾತ್ರ 3 ಸಾವಿರ ರೂ.ಗಳ ನೆರವನ್ನು ನೀಡಲಾಗುವುದು.

    2. ಕೋವಿಡ್-19 ರ ಹಿನ್ನೆಲೆಯಲ್ಲಿ ಘೋಷಣೆಯಾಗಿದ್ದ ಮೊದಲ ಪ್ಯಾಕೇಜ್‍ನಲ್ಲಿ ಇಲ್ಲವೇ ಎರಡನೇ ಪ್ಯಾಕೇಜ್‌ ಅಡಿಯಲ್ಲಿ ಈಗಾಗಲೇ ಆರ್ಥಿಕ ನೆರವನ್ನು ಪಡೆದುಕೊಂಡಿರುವವರು ಅರ್ಜಿ ಸಲ್ಲಿಸಲು ಅರ್ಹರಾಗಿರುವುದಿಲ್ಲ.

    3. ಆರ್ಥಿಕ ಸಂಕಷ್ಟದಲ್ಲಿರುವ ಚಲನಚಿತ್ರ ರಂಗವನ್ನು ಮತ್ತು ಕಿರುತೆರೆ (ಟೆಲಿವಿಷನ್) ಮಾಧ್ಯಮವನ್ನು ಪ್ರತಿನಿಧಿಸುವ 18 ವರ್ಷ ಮೇಲ್ಪಟ್ಟ ಹಾಗೂ ಈ ಎರಡೂ ವಲಯಗಳನ್ನು ಪ್ರತಿನಿಧಿಸುವ ಸಂಘಗಳಲ್ಲಿ 2021ನೇ ಮಾರ್ಚ್ 31ರ ಒಳಗೆ ನೊಂದಾಯಿತರಾಗಿದ್ದು ಅಧಿಕೃತ ಗುರುತಿನ ಚೀಟಿ ಮತ್ತು ಚಾಲ್ತಿ ಸದಸ್ಯತ್ವ ಸಂಖ್ಯೆ ಹೊಂದಿರುವ ವೃತ್ತಿ ನಿರತರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ.

    4. ಚಲನಚಿತ್ರ ಮಂದಿರಗಳಲ್ಲಿ ಕೆಲಸ ಮಾಡುವ ಅಸಂಘಟಿತ ವಲಯದವರು ಭವಿಷ್ಯ ನಿಧಿ (ಪ್ರಾವಿಡೆಂಟ್ ಫಂಡ್) ಸಂಖ್ಯೆಯೊಂದಿಗೆ ಚಲನಚಿತ್ರ ಮಂದಿರದ ಮಾಲೀಕರ ಪತ್ರದೊಂದಿಗೆ ಅರ್ಜಿ ಸಲ್ಲಿಸಬೇಕು.

    5. ಪ್ರತಿನಿಧಿಸುವ ಸಂಸ್ಥೆಯ ಅಧಿಕೃತ ಶೀರ್ಷಿಕೆ ಪತ್ರದಲ್ಲಿ (ಲೆಟರ್ ಹೆಡ್) ದೃಢೀಕರಿಸಿರುವ ಪಾಸ್‍ ಪೋರ್ಟ್‍ ಅಳತೆಯ ಭಾವಚಿತ್ರ ಸಹಿತ ಮೊಹರು ಮತ್ತು ಸಹಿ ಇರುವ ಅಧಿಕೃತ ಪತ್ರವನ್ನು ಆಯಾ ಸಂಸ್ಥೆಯಿಂದ ಕಡ್ಡಾಯವಾಗಿ ಪಡೆದುಕೊಂಡು ಸೇವಾಸಿಂಧು ಪೋರ್ಟಲ್‍ನಲ್ಲಿ ಅಪ್ಲೋಡ್ ಮಾಡಬೇಕು.

    6. ಅರ್ಜಿ ಸಲ್ಲಿಸುವವರು ತಮ್ಮ ಹೆಸರು, ಖಾಯಂ ಮತ್ತು ಹಾಲಿ ವಿಳಾಸ, ದೂರವಾಣಿ / ಮೊಬೈಲ್ ಸಂಖ್ಯೆ, ಪ್ರತಿನಿಧಿಸುವ ಸಂಸ್ಥೆಯ ಗುರುತಿನ ಚೀಟಿ, ಸಂಘದ ಸದಸ್ಯತ್ವ ಸಂಖ್ಯೆಯ ಜೊತೆಗೆ ನಿರ್ವಹಿಸುವ ಕೆಲಸದ ವಿವರವನ್ನು ನೀಡಬೇಕು. ಇದರ ಜೊತೆಗೆ, ಕಡ್ಡಾಯವಾಗಿ ಬ್ಯಾಂಕ್ ವಿವರ ಮತ್ತು ಆಧಾರ್ ಕಾರ್ಡ್ ಸಂಖ್ಯೆಯನ್ನು ಸ್ಪಷ್ಟವಾಗಿ ನಮೂದಿಸಬೇಕು.

    7. ವಿವಿಧ ಸಂಸ್ಥೆಗಳನ್ನು ಪ್ರತಿನಿಧಿಸುತ್ತಿದ್ದರೂ ಕೂಡಾ ಓರ್ವ ವ್ಯಕ್ತಿ ಒಂದೇ ಸಂಸ್ಥೆಯ ಅಡಿಯಲ್ಲಿ ಆರ್ಥಿಕ ನೆರವನ್ನು ಪಡೆದುಕೊಳ್ಳಲು ಅರ್ಹರಿರುತ್ತಾರೆ. ಆಧಾರ್ ಕಾರ್ಡ್ ಆಧರಿಸಿ ಆರ್ಥಿಕ ಸೌಲಭ್ಯವನ್ನು ನೀಡುವುದರಿಂದ ಪುನಾರಾವರ್ತಿವಾಗಿ ಒಂದಕ್ಕಿಂತಲೂ ಹೆಚ್ಚು ಸ್ಥಳಗಳಲ್ಲಿ ಅರ್ಜಿ ಸಲ್ಲಿಸಿದವರ ಅರ್ಜಿಯನ್ನು ನೇರವಾಗಿ ತಿರಸ್ಕರಿಸಲ್ಪಡುತ್ತದೆ.

    8. ಅರ್ಜಿ ಸಲ್ಲಿಸುವವರು ತಮ್ಮ ಸೇವಾನುಭವ ಹೊಂದಿರುವ ಬಗ್ಗೆ ಮಾಹಿತಿ ನೀಡುವುದರ ಜೊತೆಗೆ, 1ನೇ ಜನವರಿ 2018ರ ಬಳಿಕ ಕೆಲಸ ಮಾಡಿರುವ ಚಲನಚಿತ್ರ ಅಥವಾ ಧಾರಾವಾಹಿ ವಿವರಗಳನ್ನು ಸಲ್ಲಿಸುವುದು ಕಡ್ಡಾಯ. ಪೂರಕವಾಗಿ ಒಂದು ಇಲ್ಲವೇ ಎರಡು ಛಾಯಾಚಿತ್ರಗಳನ್ನು ಅಪ್ಲೋಡ್ ಮಾಡಬೇಕು.

    9. ವೃದ್ಯಾಪ್ಯ ವೇತನ ಪಡೆಯುತ್ತಿರುವವರೂ ಸೇರಿದಂತೆ ಸರ್ಕಾರಿ ಸ್ವಾಮ್ಯಕ್ಕೆ ಒಳಪಡುವ ದೂರದರ್ಶನ / ಆಕಾಶವಾಣಿ, ರಾಜ್ಯ ಸರ್ಕಾರ ಅಥವಾ ಕೇಂದ್ರ ಸರ್ಕಾರ / ಸರ್ಕಾರಿ ಸ್ವಾಮ್ಯದ ನಿಗಮ / ಮಂಡಳಿ / ಪ್ರಾಧಿಕಾರ / ಅಕಾಡೆಮಿ / ಸರ್ಕಾರಿ ಅನುದಾನಿತ ಸಂಸ್ಥೆಗಳು / ಅರೆ ಸರ್ಕಾರಿ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರು ಇಲ್ಲವೇ ನಿವೃತ್ತಿ ಹೊಂದಿ ಪಿಂಚಣಿ ಪಡೆಯುತ್ತಿರುವವರು ಅರ್ಜಿ ಸಲ್ಲಿಸಲು ಅರ್ಹರಲ್ಲ.

    10. ಸೇವಾಸಿಂಧು ಪೋರ್ಟಲ್ನಲ್ಲಿ ಜೇಷ್ಠತೆ ಆಧರಿಸಿ ಫಲಾನುಭವಿಗಳ ಖಾತೆಗೆ ನೇರ ಹಣ ವರ್ಗಾವಣೆಯ ಮೂಲಕ ಪರಿಹಾರ ಮೊತ್ತವನ್ನು ವರ್ಗಾಯಿಸಲಾಗುವುದು.

    11. ತಪ್ಪು ಮಾಹಿತಿ, ನಕಲಿ ಅಥವಾ ತಿರುಚಿದ ದಾಖಲೆ ಹಾಗೂ ಇನ್ನಿತರ ರೀತಿಯಲ್ಲಿ ಆರ್ಥಿಕ ನೆರವನ್ನು ಪಡೆದವರ ಮೇಲೆ ಹಾಗೂ ಅಂತಹವರಿಗೆ ಶಿಫಾರಸ್ಸು ಪತ್ರ ನೀಡಿದ ಸಂಘದ ಪದಾಧಿಕಾರಿಗಳ ವಿರುದ್ಧ ವಿಪತ್ತು ನಿರ್ವಹಣಾ ಅಧಿನಿಯಮದನ್ವಯ ಕ್ರಿಮಿನಲ್ ಮೊಕದ್ದಮೆಯನ್ನು ದಾಖಲಿಸಿ ಕಾನೂನು ಕ್ರಮ ಜರುಗಿಸಲಾಗುವುದು. ಜೊತೆಗೆ, ನೀಡಿರುವ ಆರ್ಥಿಕ ನೆರವನ್ನು ಹಿಂಪಡೆಯಲು ಅಥವಾ ಮುಟ್ಟುಗೋಲು ಹಾಕಿಕೊಳ್ಳಲಾಗುವುದು.

    12. ಅರ್ಜಿಗಳಿಗೆ ಸಂಬಂಧಿಸಿದಂತೆ ಸರ್ಕಾರ ಕೈಗೊಳ್ಳುವ ತೀರ್ಮಾನವೇ ಅಂತಿಮವಾಗಿರುತ್ತದೆ.

    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+