ಶುಕ್ರವಾರದ ಕರ್ನಾಟಕದ ಜಿಲ್ಲಾ ಸುದ್ದಿಗಳ ಸಂಗ್ರಹ
ಶಿವಮೊಗ್ಗ, ಜೂ. 19 : ಮೀನುಗಾರಿಕಾ ಇಲಾಖೆ ವತಿಯಿಂದ ಭದ್ರಾವತಿ ತಾಲೂಕಿನ ಬಿ.ಆರ್. ಪ್ರಾಜೆಕ್ಟ್ನಲ್ಲಿರುವ ಮೀನುಗಾರಿಕೆ ತರಬೇತಿ ಕೇಂದ್ರದಲ್ಲಿ ಒಳನಾಡು ಮೀನುಗಾರಿಕೆ ತರಬೇತಿಗಾಗಿ ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ. 40 ಅಭ್ಯರ್ಥಿಗಳಿಗೆ ಪ್ರವೇಶವಿದ್ದು, ಅರ್ಜಿ ಸಲ್ಲಿಸಲು ಜುಲೈ 10 ಕೊನೆಯ ದಿನವಾಗಿದೆ.
ತರಬೇತಿಯಲ್ಲಿ
ಪಾಲ್ಗೊಳ್ಳಲು
ಪುರುಷರಿಗೆ
ಮಾತ್ರ
ಅವಕಾಶವಿದೆ.
ತರಬೇತಿಯು
ಒಂದು
ತಿಂಗಳ
ಅವಧಿಯದಾಗಿದ್ದು,
ಪ್ರತಿ
ಅಭ್ಯರ್ಥಿಗೆ
ಮಾಸಿಕ
2,000
ರೂ.ಗಳ
ಶಿಷ್ಯ
ವೇತನ
ನೀಡಲಾಗುತ್ತದೆ.
ಮೀನು
ಮರಿ
ಉತ್ಪಾದನೆ,
ಪಾಲನೆ,
ಹಂಚಿಕೆ,
ಮೀನು
ಸಾಕಣೆ,
ಬಲೆ
ಹೆಣೆಯುವುದು,
ದುರಸ್ತಿ
ಮಾಡುವುದು,
ಹರಿಗೋಲು
ನಡೆಸುವುದು
ಮುಂತಾದ
ವಿಷಯಗಳ
ಕುರಿತು
ತರಬೇತಿ
ನೀಡಲಾಗುವುದು.
ಅರ್ಜಿ ನಮೂನೆಗಳನ್ನು ಜಿಲ್ಲಾ ಮಟ್ಟದ ಅಥವಾ ತಾಲೂಕು ಮಟ್ಟದ ಮೀನುಗಾರಿಕೆ ಕಛೇರಿಗಳಲ್ಲಿ ಪಡೆಯಬಹುದಾಗಿದ್ದು, ಭರ್ತಿ ಮಾಡಿದ ಅರ್ಜಿ ನಮೂನೆಗಳನ್ನು ಮೀನುಗಾರಿಕೆ ಸಹಾಯಕ ನಿರ್ದೇಶಕರು (ಶ್ರೇಣಿ-1), ಮೀನುಗಾರಿಕೆ ತರಬೇತಿ ಕೇಂದ್ರ, ಬಿ. ಆರ್. ಪ್ರಾಜೆಕ್ಟ್, ಶಿವಮೊಗ್ಗ ಇವರಿಗೆ ಸಲ್ಲಿಸಬೇಕು.
ಮಂಗಳೂರು : ಬಂಟರ ಯಾನೆ ನಾಡವರ ಮಾತೃಸಂಘದ ವತಿಯಿಂದ ವಿಶ್ವ ಯೋಗದಿನಾಚರಣೆ ಅಂಗವಾಗಿ ಉಚಿತಯೋಗ ಶಿಬಿರವನ್ನು ಜೂನ್ 21ರಂದು ಬೆಳಗ್ಗೆ 10 ಗಂಟೆಗೆ ಬಂಟ್ಸ್ ಹಾಸ್ಟೆಲ್ನ ಎ.ಬಿ.ಶೆಟ್ಟಿ ಸಭಾಂಗಣದ ಹೊರಭಾಗ ಹಾಗೂ ವೆಂಕಪ್ಪ ಪೂಂಜ ಸಭಾ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಪತಂಜಲಿ ಯೋಗ ಸಮಿತಿ, ಭಾರತ ಸ್ವಾಭಿಮಾನ ಟ್ರಸ್ಟ್ ಸಹಭಾಗಿತ್ವದಲ್ಲಿ ಯೋಗ ಶಿಕ್ಷಕ ಎಂ.ಜಗದೀಶ್ ಶೆಟ್ಟಿ ಹಾಗೂ ಬಳಗದವರಿಂದ ಯೋಗ ಶಿಬಿರ ನಡೆಯಲಿದೆ. ಆಸನ, ಪ್ರಾಣಾಯಾಮ, ಸೂರ್ಯ ನಮಸ್ಕಾರ, ಧ್ಯಾನ, ಬೊಜ್ಜು ಕರಗಿಸುವ ಬಗ್ಗೆ, ಮಧುಮೇಹಿಗಳ ಆಹಾರ ಕ್ರಮದ ಬಗ್ಗೆ ಮಾಹಿತಿ ನೀಡಲಾಗುತ್ತದೆ ಎಂದು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಮಾಲಾಡಿ ಅಜಿತ್ಕುಮಾರ್ ರೈ ಹೇಳಿದ್ದಾರೆ.
ಮೈಸೂರು
:
ಡಿ.ಎಸ್.ನಾಗಭೂಷಣ
ಅವರು
ಸಂಪಾದಿಸಿರುವ
'ನಮ್ಮ
ಸಮಾಜವಾದಿಗಳು'
ಪುಸ್ತಕ
ಬಿಡುಗಡೆ
ಕಾರ್ಯಕ್ರಮ
ಜೂನ್
21ರಂದು
ಸಂಜೆ
4
ಗಂಟೆಗೆ
ಡಾ.ಬಿ.ಅರ್.ಅಂಬೇಡ್ಕರ್
ಸಂಶೋಧನ
ಹಾಗೂ
ವಿಸ್ತರಣ
ಕೇಂದ್ರ,
ಮೈಸೂರು
ವಿಶ್ವವಿದ್ಯಾನಿಲಯ,
ಮಾನಸಗಂಗೋತ್ರಿ,
ಇವರ
ಸಂಯುಕ್ತ
ಆಶ್ರಯದಲ್ಲಿ
ಹಾಗೂ
ಸಮಾಜವಾದಿ
ಅಧ್ಯಯನ
ಕೇಂದ್ರ,
ಮೈಸೂರು
ಇವರ
ಸಹಕಾರದೊಂದಿಗೆ
ಹಮ್ಮಿಕೊಳ್ಳಲಾಗಿದೆ.
ಮುಖ್ಯಮಂತ್ರಿಗಳ ಮಾದ್ಯಮ ಸಲಹೆಗಾರರಾದ ದಿನೇಶ್ ಅಮೀನ್ಮಟ್ಟು ಅವರು ಪುಸ್ತಕ ಬಿಡುಗಡೆ ಮಾಡಲಿದ್ದು, ಪುಸ್ತಕ ಕುರಿತು ಚಿಂತಕಾರದ ಬಂಜಗೆರೆ ಜಯಪ್ರಕಾಶ್ ಮಾತನಾಡಲಿದ್ದಾರೆ. ಮುಖ್ಯ ಅಥಿತಿಗಳಾಗಿ ಪ್ರೊ.ಕಾಳೇಗೌಡ ನಾಗವಾರ ಮತ್ತು ಡಾ.ಎಸ್.ನರೇಂದ್ರಕುಮಾರ್ ಭಾಗವಹಿಸಲಿದ್ದಾರೆ.
ಹಾಸನ : ಚನ್ನರಾಯಪಟ್ಟಣ ತಾಲ್ಲೂಕಿನ ಗೊಲ್ಲರಹೊಸಹಳ್ಳಿ ಗ್ರಾಮದ ಮಾಯಣ್ಣಗೌಡರವರ ತೋಟದ ಮನೆಯಲ್ಲಿ ಅಡಗಿ ಕೂತಿದ್ದ 4 ವರ್ಷದ ಹೆಣ್ಣು ಚಿರತೆಯನ್ನು ಸತತ 12 ಗಂಟೆಗಳ ಕಾರ್ಯಾಚರಣೆ ಬಳಿಕ ಸೆರೆಹಿಡಿಯಲಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು, ಪಶುವೈದ್ಯರು ಅರವಳಿಕೆ ತಜ್ಞರ ಸಹಕಾರದಿಂದ ಚಿರತೆಯನ್ನು ಸೆರೆಹಿಡಿದಿದ್ದಾರೆ. ಗುರುವಾರ ಬೆಳಗ್ಗೆ 9 ಗಂಟೆಯಿಂದ ರಾತ್ರಿ 9ರ ತನಕ ಚಿರತೆ ಹಿಡಿಯುವ ಕಾರ್ಯಾಚರಣೆ ನಡೆಯಿತು.