ಕರ್ನಾಟಕ ಬಂದ್ : ಬಿಎಂಟಿಸಿ, ಕೆಎಸ್ಆರ್ಟಿಸಿ ಬಸ್ ಸಂಚಾರವಿಲ್ಲ
ಬೆಂಗಳೂರು, ಸೆಪ್ಟೆಂಬರ್ 23 : ಕನ್ನಡ ಒಕ್ಕೂಟ ಕರೆ ನೀಡಿರುವ ಸೆ.26ರ ಕರ್ನಾಟಕ ಬಂದ್ಗೆ ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿ ನೌಕರರ ಸಂಘ ಬೆಂಬಲ ನೀಡಿದ್ದು, ಶನಿವಾರ ಬಸ್ ಸಂಚಾರ ಸ್ಥಗಿತಗೊಳ್ಳಲಿದೆ. ವಕೀಲರು, ಬಿಬಿಎಂಪಿ ನೌಕರರು ಬಂದ್ಗೆ ಬೆಂಬಲ ಸೂಚಿಸಿದ್ದಾರೆ.
ಬೆಂಗಳೂರಿನ
ಖಾಸಗಿ
ಹೋಟೆಲ್ನಲ್ಲಿ
ಬುಧವಾರ
ಪತ್ರಿಕಾಗೋಷ್ಠಿ
ನಡೆಸಿದ
ಕನ್ನಡ
ಒಕ್ಕೂಟದ
ಮುಖಂಡರು
ಸೆ.26ರ
ಕರ್ನಾಟಕ
ಬಂದ್
ಬಗ್ಗೆ
ಮಾಹಿತಿ
ನೀಡಿದರು.
ಈ
ಸಂದರ್ಭದಲ್ಲಿ
ಮಾತನಾಡಿದ
ಎಐಟಿಯುಸಿ
ಕಾರ್ಯದರ್ಶಿ
ನಾಗರಾಜ್
ಅವರು,
ಕೆಎಸ್ಆರ್ಟಿಸಿ,
ಬಿಎಂಟಿಸಿ,
ಈಶಾನ್ಯ
ಹಾಗೂ
ವಾಯುವ್ಯ
ಸಾರಿಗೆ
ಬಸ್
ಸೇವೆ
ಶನಿವಾರ
ಸ್ಥಗಿತಗೊಳ್ಳಲಿದೆ
ಎಂದು
ಹೇಳಿದರು.
[ಕರ್ನಾಟಕ
ಬಂದ್
:
ವಾಟಾಳ್
ನಾಗರಾಜ್
ಸಂದರ್ಶನ]
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರು, 'ಶನಿವಾರ ಬೆಳಗ್ಗೆ ಟೌನ್ಹಾಲ್ ಮುಂಭಾಗ ಬೃಹತ್ ಪ್ರತಿಭಟನೆ ನಡೆಸಲಾಗುತ್ತದೆ. ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಗುತ್ತದೆ' ಎಂದರು. [ಬಂದ್ ಗೆ ಬೆಂಬಲ ನೀಡಿದ ಜೆಡಿಎಸ್]
ವಕೀಲರ ಬೆಂಬಲ : ಸೆ.26ರ ಕರ್ನಾಟಕ ಬಂದ್ಗೆ ವಕೀಲರು ಬೆಂಬಲ ನೀಡಲಿದ್ದಾರೆ. ಶನಿವಾರ ಕೋರ್ಟ್ನಲ್ಲಿ ಯಾವುದೇ ಕಲಾಪಗಳು ನಡೆಯುವುದಿಲ್ಲ ಎಂದು ವಕೀಲರ ಸಂಘದ ಮಾಜಿ ಅಧ್ಯಕ್ಷ ಬಿ.ಎನ್.ಸುಬ್ಬಾರೆಡ್ಡಿ ಹೇಳಿದರು.
ಬೆಂಬಲ ನೀಡಿರುವ ಸಂಘಟನೆಗಳು : ಕರ್ನಾಟಕ ಬಂದ್ಗೆ ಕೆಎಸ್ಆರ್ಟಿಸಿ, ಬಿಎಂಟಿಸಿ ನೌಕರರ ಸಂಘ, ಕರ್ನಾಟಕ ರಕ್ಷಣಾ ವೇದಿಕೆಯ ಶಿವರಾಮೇಗೌಡ ಬಣ, ಲಾರಿ ಮಾಲೀಕರ ಸಂಘ, ವಕೀಲರ ಸಂಘ, ಪೆಟ್ರೋಲ್ ಬಂಕ್ ಮಾಲೀಕರ ಸಂಘ, ಕನ್ನಡ ಸಾಹಿತ್ಯ ಪರಿಷತ್ ಸೇರಿದಂತೆ 1000ಕ್ಕೂ ಅಧಿಕ ಸಂಘಟನೆಗಳು ಬೆಂಬಲ ನೀಡಿವೆ.
ಇಂದಿನ ಪತ್ರಿಕಾಗೋಷ್ಠಿಯಲ್ಲಿ ವಾಟಾಳ್ ನಾಗರಾಜ್, ಕಸಾಪ ಅಧ್ಯಕ್ಷ ಪುಂಡಲೀಕ ಹಾಲಂಬಿ, ಬಿ.ಎನ್.ಸುಬ್ಬಾರೆಡ್ಡಿ, ಸಾ.ರಾ ಗೋವಿಂದು, ಶಿವರಾಮೇಗೌಡ ಸೇರಿದಂತೆ ಹಲವು ನಾಯಕರು ಪಾಲ್ಗೊಂಡಿದ್ದರು.