South Tax Movement: ತೆರಿಗೆ ಹಂಚಿಕೆ ಅನ್ಯಾಯದ ವಿರುದ್ಧ ಕನ್ನಡಿಗರ 'ನನ್ನ ತೆರಿಗೆ ನನ್ನ ಹಕ್ಕು' ಅಭಿಯಾನ: ಸಿಎಂ ಬೆಂಬಲ
ತೆರಿಗೆ ಹಂಚಿಕೆಯಲ್ಲಿ ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ಸಿಡಿದೆದ್ದಿರುವ ಕನ್ನಡಿಗರು 'ನನ್ನ ತೆರಿಗೆ ನನ್ನ ಹಕ್ಕು' ಅಭಿಯಾನ ಆರಂಭಿಸಿದ್ದಾರೆ. ಎಕ್ಸ್ನಲ್ಲಿ #ನನ್ನತೆರಿಗೆನನ್ನಹಕ್ಕು #southtaxmovement ಹ್ಯಾಷ್ಟ್ಯಾಗ್ ಬಳಸಿ ಅಭಿಯಾನ ಮಾಡುತ್ತಿದ್ದು, ಟ್ರೆಂಡಿಂಗ್ನಲ್ಲಿದೆ.
ಕರ್ನಾಟಕದಿಂದ ಸಂಗ್ರಹಿಸುತ್ತಿರುವ ತೆರಿಗೆ ಹಣವನ್ನು ಉತ್ತರ ಭಾರತದ ರಾಜ್ಯಗಳಿಗೆ ಬಹುಪಾಲು ಹಂಚಿಕೆ ಮಾಡುತ್ತಿದ್ದು, ಕರ್ನಾಟಕ ರಾಜ್ಯಕ್ಕೆ ಕೇಂದ್ರ ಅನ್ಯಾಯ ಮಾಡುತ್ತಿದೆ ಎಂದು ಕನ್ನಡಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಹಲವು ವರ್ಷಗಳಿಂದ ಉತ್ತರ ಭಾರತದ ರಾಜ್ಯಗಳಿಗೆ ಲಕ್ಷಾಂತರ ಕೋಟಿ ರೂಪಾಯಿ ಖರ್ಚು ಮಾಡಿದ್ದರೂ ಅಭಿವೃದ್ಧಿಯಾಗಿಲ್ಲ ಎಂದಿದ್ದಾರೆ.

ಕರ್ನಾಟಕ ಮಾತ್ರವಲ್ಲದೆ ದಕ್ಷಿಣ ಭಾರತದ ರಾಜ್ಯಗಳಿಗೆ ಕೇಂದ್ರ ಸರ್ಕಾರ ನಿರಂತರವಾಗಿ ಅನ್ಯಾಯ ಮಾಡುತ್ತಲೇ ಬಂದಿದ್ದು, ನಾವು ದುಡಿದು ಅವರನ್ನು ಸಾಕುವಂತಾಗಿದೆ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬೇರೆ ರಾಜ್ಯದ ಜನ ತಮ್ಮ ಜನಸಂಖ್ಯೆ ಕಡಿಮೆ ಮಾಡುವಲ್ಲಿ ವಿಫಲ ಆದ್ರೆ ಆ ಶಿಕ್ಷೆ ನಮ್ಮ ರಾಜ್ಯಕ್ಕೆ ಏಕೆ? 15ನೆಯ ಫೈನಾನ್ಸ್ ಕಮಿಷನ್ ರದ್ದು ಮಾಡಿ. ಜನಸಂಖ್ಯೆ ಆಧಾರದ ಮೇಲೆ ತೆರಿಗೆ ಹಂಚುವುದನ್ನು ನಿಲ್ಲಿಸಿ.
— ಚೇತನ್ ಕನ್ನಡದವ 💛❤️ (@Kannadiga_Chetu) February 4, 2024
ನಮ್ಮ ರಾಜ್ಯದ ತೆರಿಗೆ ನಮ್ಮ ರಾಜ್ಯಕ್ಕೆ ಮಾತ್ರ ಬಳಕೆ ಆಗ್ಬೇಕು ✊💛❤️#SouthTaxMovement #ನನ್ನತೆರಿಗೆನನ್ನಹಕ್ಕು pic.twitter.com/O77bj5RMoN
"ಬೇರೆ ರಾಜ್ಯದ ಜನ ತಮ್ಮ ಜನಸಂಖ್ಯೆ ಕಡಿಮೆ ಮಾಡುವಲ್ಲಿ ವಿಫಲ ಆದ್ರೆ ಆ ಶಿಕ್ಷೆ ನಮ್ಮ ರಾಜ್ಯಕ್ಕೆ ಏಕೆ? 15ನೆಯ ಫೈನಾನ್ಸ್ ಕಮಿಷನ್ ರದ್ದು ಮಾಡಿ. ಜನಸಂಖ್ಯೆ ಆಧಾರದ ಮೇಲೆ ತೆರಿಗೆ ಹಂಚುವುದನ್ನು ನಿಲ್ಲಿಸಿ. ನಮ್ಮ ರಾಜ್ಯದ ತೆರಿಗೆ ನಮ್ಮ ರಾಜ್ಯಕ್ಕೆ ಮಾತ್ರ ಬಳಕೆ ಆಗ್ಬೇಕು" ಎಂದು ಟ್ವಿಟರ್ ಬಳಕೆದಾರ ಚೇತನ್ ಕನ್ನಡದವ ಎನ್ನುವವರು ಒತ್ತಾಯಿಸಿದ್ದಾರೆ.
ನಮ್ಮ ರಾಜ್ಯದಿಂದ ಸಂಸದರಾಗಿರುವ @nsitharaman ಅವರು ಕರ್ನಾಟಕಕ್ಕೆ ಕೊಟ್ಟ ಕೊಡುಗೆ ಇದೇನಾ?
— ಕನ್ನಡಿಗ ಸಾಗರ್ ರವಿನಾಥ್ l Sagar Ravinath (@Sagar_Ravinath) February 4, 2024
ನಮ್ಮ ತೆರಿಗೆ ಹಣ ನಮ್ಮ ರಾಜ್ಯಕ್ಕೆ ಸರಿಯಾದ ಪಾಲು ಕೊಡಲಿ. ಉತ್ತರ ಭಾರತದವರನ್ನು ಸಾಕಿ ಸಲಹೋಕಾ ನಾವು ಒಕ್ಕೂಟ ಸೇರಿದ್ದು?#ನನ್ನತೆರಿಗೆನನ್ನಹಕ್ಕು#SouthTaxMovement pic.twitter.com/FYOdustouS
ಕನ್ನಡಿಗ ಸಾಗರ್ ರವಿನಾಥ್ ಎನ್ನುವವರು ಟ್ವೀಟ್ ಮಾಡಿ, "ನಮ್ಮ ರಾಜ್ಯದಿಂದ ಸಂಸದರಾಗಿರುವ ನಿರ್ಮಲಾ ಸೀತಾರಾಮನ್ ಅವರು ಕರ್ನಾಟಕಕ್ಕೆ ಕೊಟ್ಟ ಕೊಡುಗೆ ಇದೇನಾ? ನಮ್ಮ ತೆರಿಗೆ ಹಣ ನಮ್ಮ ರಾಜ್ಯಕ್ಕೆ ಸರಿಯಾದ ಪಾಲು ಕೊಡಲಿ. ಉತ್ತರ ಭಾರತದವರನ್ನು ಸಾಕಿ ಸಲಹೋಕಾ ನಾವು ಒಕ್ಕೂಟ ಸೇರಿದ್ದು?" ಎಂದು ಪ್ರಶ್ನೆ ಮಾಡಿದ್ದಾರೆ.
ಕರ್ಣಾಟ ಬಲ ಎನ್ನುವ ಟ್ವಿಟರ್ ಹ್ಯಾಂಡಲ್ನಲ್ಲಿ ತೆರಿಗೆ ಹಂಚಿಕೆ ಬಗ್ಗೆ ಅಂಕಿ ಅಂಶಗಳ ಬಗ್ಗೆ ವಿವರಣೆ ನೀಡಿದ್ದು, ರಾಜ್ಯಕ್ಕೆ ಆಗುತ್ತಿರುವ ಅನ್ಯಾಯವನ್ನು ಪ್ರಶ್ನೆ ಮಾಡಿದ್ದಾರೆ.
ತೆರಿಗೆ ಹಂಚಿಕೆಯಲ್ಲಿ ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯ ಖಂಡಿಸಿ ಕನ್ನಡಿಗರು ನಡೆಸುತ್ತಿರುವ #ನನ್ನತೆರಿಗೆನನ್ನಹಕ್ಕು ಟ್ವಿಟ್ಟರ್ ಅಭಿಯಾನಕ್ಕೆ ನನ್ನ ಪೂರ್ಣ ಬೆಂಬಲವಿದೆ. ಕನ್ನಡಿಗರು ಬೆವರು ಸುರಿಸಿ ಕಟ್ಟುವ ತೆರಿಗೆ ನಮ್ಮವರ ಕಷ್ಟಕಾಲಕ್ಕೆ ಉಪಯೋಗಕ್ಕೆ ಬರದೆ ಉತ್ತರದ ರಾಜ್ಯಗಳ ಪಾಲಾಗುತ್ತಿದೆ.
— Siddaramaiah (@siddaramaiah) February 4, 2024
ದಕ್ಷಿಣ ಭಾರತದ…
ಸಿಎಂ ಸಿದ್ದರಾಮಯ್ಯ ಬೆಂಬಲ
ಕನ್ನಡಿಗರ ಹೋರಾಟಕ್ಕೆ ಸಿಎಂ ಸಿದ್ದರಾಮಯ್ಯ ಕೂಡ ಬೆಂಬಲ ನೀಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, "ತೆರಿಗೆ ಹಂಚಿಕೆಯಲ್ಲಿ ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯ ಖಂಡಿಸಿ ಕನ್ನಡಿಗರು ನಡೆಸುತ್ತಿರುವ #ನನ್ನತೆರಿಗೆನನ್ನಹಕ್ಕು ಟ್ವಿಟ್ಟರ್ ಅಭಿಯಾನಕ್ಕೆ ನನ್ನ ಪೂರ್ಣ ಬೆಂಬಲವಿದೆ. ಕನ್ನಡಿಗರು ಬೆವರು ಸುರಿಸಿ ಕಟ್ಟುವ ತೆರಿಗೆ ನಮ್ಮವರ ಕಷ್ಟಕಾಲಕ್ಕೆ ಉಪಯೋಗಕ್ಕೆ ಬರದೆ ಉತ್ತರದ ರಾಜ್ಯಗಳ ಪಾಲಾಗುತ್ತಿದೆ.
ದಕ್ಷಿಣ ಭಾರತದ ರಾಜ್ಯಗಳ ತೆರಿಗೆಯ ಋಣದಲ್ಲಿರುವ ಉತ್ತರದ ರಾಜ್ಯಗಳು ಎಂದಿಗೂ ನಮಗೆ ಮಾಡೆಲ್ ಆಗಲಾರವು. ಈ ಹುಸಿ ಕಲ್ಪನೆಯಿಂದ ಎಲ್ಲರೂ ಹೊರಬರಬೇಕು. ಶ್ರಮದಿಂದ ಸದೃಢ ರಾಷ್ಟ್ರ ಕಟ್ಟುತ್ತಿರುವ ಕರ್ನಾಟಕವೇ ಭಾರತಕ್ಕೆ ಮಾಡೆಲ್.
ಕೂತು ತಿನ್ನುವವನಿಗೆ ಮೃಷ್ಟಾನ್ನ ಕೊಟ್ಟು, ದುಡಿಯುವ ಮಗನಿಗೆ ಬರೆ ಎಳೆದರು ಎಂಬಂತಿದೆ ದೇಶದಲ್ಲಿ ಕನ್ನಡಿಗರ ಸ್ಥಿತಿ. ಇದು ಬದಲಾಗಲೇಬೇಕು. ನ್ಯಾಯಕ್ಕಾಗಿ ಧ್ವನಿಯೆತ್ತಿರುವ ನಾಡಿನ ಪ್ರಜ್ಞಾವಂತರಿಗೆ ನನ್ನ ಧನ್ಯವಾದಗಳು. ನಿಮ್ಮ ಜೊತೆ ನಾನಿದ್ದೇನೆ, ನಮ್ಮೆಲ್ಲರ ಧ್ವನಿ ಒಟ್ಟಾದರೆ ದಿಲ್ಲಿವರೆಗೆ ಕೇಳುವುದು ಶತಸಿದ್ಧ." ಎಂದು ಅಭಿಯಾನದಲ್ಲಿ ಭಾಗವಹಿಸಿದ್ದಾರೆ.
ಟ್ವಿಟರ್ ಅಭಿಯಾನದಲ್ಲಿ ಗಮನ ಸೆಳೆದ ಕೆಲವು ಟ್ವೀಟ್ಗಳು;
ಕರ್ನಾಟಕದ ರಾಜಕಾರಣಿಗಳು ಕರ್ನಾಟಕಕ್ಕೆ ತೆರಿಗೆ ವಿಚಾರದಲ್ಲಿ ಆಗುತ್ತಿರುವ ಅನ್ಯಾಯದ ಬಗ್ಗೆ ಪಕ್ಷ ಮರೆತು ಪ್ರಶ್ನೆ ಮಾಡಬೇಕು.#ನನ್ನತೆರಿಗೆನನ್ನಹಕ್ಕು #SouthTaxMovement
— ಅರುಣ್ ಜಾವಗಲ್ | Arun Javgal (@ajavgal) February 4, 2024
ಕಡಿಮೆ ಪಾಲು ಏಕೆ?
— ಆನಂದ್ ಗು_Anand G (@Anand_GJ) February 4, 2024
ಕರ್ನಾಟಕ: ೬.೧೧ ಕೋಟಿ.
೧೯೭೧ರಲ್ಲಿ ಭಾರತದ ೫.೩೬%.. ೨೦೧೧ರಲ್ಲಿ ೫.೦೫%.
೧೯೭೧ರಂತೆ ೬.೪೮ ಕೋಟಿ ಇರಬೇಕು.
ಉತ್ತರಪ್ರದೇಶ: ೨೦.೯೯ ಕೋಟಿ.
೧೯೭೧ರಲ್ಲಿ ಭಾರತದ ೧೬.೧೬%.. ೨೦೧೧ರಲ್ಲಿ ೧೭.೩೬%.
೧೯೭೧ರಂತೆ ೧೯.೫೪ ಕೋಟಿ ಇರಬೇಕಿತ್ತು.
ಅದು ಗುರಿ ಸಾಧಿಸಿದ್ದಕ್ಕೆ ಬಹುಮಾನ.#SouthTaxMovement#ನನ್ನತೆರಿಗೆನನ್ನಹಕ್ಕು
ಕಡಿಮೆ ಪಾಲು ಏಕೆ?
— ಆನಂದ್ ಗು_Anand G (@Anand_GJ) February 4, 2024
ಕರ್ನಾಟಕ: ೬.೧೧ ಕೋಟಿ.
೧೯೭೧ರಲ್ಲಿ ಭಾರತದ ೫.೩೬%.. ೨೦೧೧ರಲ್ಲಿ ೫.೦೫%.
೧೯೭೧ರಂತೆ ೬.೪೮ ಕೋಟಿ ಇರಬೇಕು.
ಉತ್ತರಪ್ರದೇಶ: ೨೦.೯೯ ಕೋಟಿ.
೧೯೭೧ರಲ್ಲಿ ಭಾರತದ ೧೬.೧೬%.. ೨೦೧೧ರಲ್ಲಿ ೧೭.೩೬%.
೧೯೭೧ರಂತೆ ೧೯.೫೪ ಕೋಟಿ ಇರಬೇಕಿತ್ತು.
ಅದು ಗುರಿ ಸಾಧಿಸಿದ್ದಕ್ಕೆ ಬಹುಮಾನ.#SouthTaxMovement#ನನ್ನತೆರಿಗೆನನ್ನಹಕ್ಕು
-
Gas Bill: ಹೋಟೆಲ್ ಬಿಲ್ನಲ್ಲಿ ಗ್ರಾಹಕರಿಗೆ 'ಗ್ಯಾಸ್ ಶುಲ್ಕ' ವಿಧಿಸುವಂತಿಲ್ಲ: ಕೇಂದ್ರದಿಂದ ಖಡಕ್ ಎಚ್ಚರಿಕೆ -
Petrol Diesel Shortage: ಪೆಟ್ರೋಲ್, ಡೀಸೆಲ್ ಖಾಲಿಯಾಗುತ್ತೆ ಅನ್ನೋ ಸುಳ್ಳು ವದಂತಿಗಳಿಗೆ ಕಿವಿಕೊಡಬೇಡಿ; ಇಂಡಿಯನ್ ಆಯಿಲ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
Bengaluru: 50 ವಾರ್ಡ್ಗಳಲ್ಲಿ ಕಸ ವಿಲೇವಾರಿ ಸ್ಥಗಿತ; ವೇತನ ವಿಳಂಬಕ್ಕೆ ಮುನಿದು ಸಾಮೂಹಿಕ ರಜೆ ಹಾಕಿದ ಕಾರ್ಮಿಕರು -
ಪ್ರಧಾನಿ ಮೋದಿಗೆ ಕರೆ ಮಾಡಿದ ಟ್ರಂಪ್: ಶಾಂತಿ ಸ್ಥಾಪನೆಗೆ ಭಾರತದ ಬೆಂಬಲ, ಮಹತ್ವ ಮಾತುಕತೆ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ











Click it and Unblock the Notifications