‘ರೋಟರಿ-ಕಸಾಪ ಕಾವ್ಯ ಪ್ರಶಸ್ತಿ’ಗೆ ಕವನ ಸಂಕಲನ ಆಹ್ವಾನ
ಕುಮಟಾ, ನ.13: ಕನ್ನಡ ಸಾಹಿತ್ಯ ಪರಿಷತ್ತು ನೂರರ ಸಂಭ್ರಮವನ್ನು ಆಚರಿಸುವ ಸಂದರ್ಭದಲ್ಲಿ ಇಲ್ಲಿನ ತಾಲ್ಲೂಕ್ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ರೋಟರಿ ಕ್ಲಬ್ ವಿಶೇಷವಾಗಿ ಪ್ರಥಮ ಬಾರಿಗೆ ಉದಯೋನ್ಮುಖ ಕವಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ರಾಷ್ಟ್ರ ಮಟ್ಟದ 'ರೋಟರಿ-ಕಸಾಪ ಕಾವ್ಯ ಪ್ರಶಸ್ತಿ' ಸ್ಥಾಪಿಸಿದ್ದು ಪ್ರಶಸ್ತಿಗಾಗಿ ಕವನ ಸಂಕಲನವನ್ನು ಆಹ್ವಾನಿಸಿದೆ.
ಪ್ರಶಸ್ತಿಯು 10,000 ರೂ.ನಗದು, ಫಲಕ, ಪ್ರಶಸ್ತಿ ಪತ್ರ ಗಳಿಂದೊಡಗೂಡಿದೆ ಎಂದು ಕಸಾಪ ತಾಲ್ಲೂಕಾಧ್ಯಕ್ಷ ಎನ್.ಆರ್.ಗಜು, ರೋಟರಿ ಅಧ್ಯಕ್ಷ ಮ್ಹೌಸಿನ್ ಖಾಜಿ ಮತ್ತು ಕಾರ್ಯದರ್ಶಿ ವಸಂತ ರಾವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸ್ಪರ್ಧಾ ನಿಯಮಗಳು:
* ರಾಷ್ಟ್ರದಾದ್ಯಂತ ಸಮಸ್ತ ಕನ್ನಡ ಕವಿಗಳಿಗೆ ತೆರೆದ ಸ್ಪರ್ಧೆ. ಯಾವುದೇ ಪ್ರವೇಶ ಧನ ಇಲ್ಲ.
* ಕವಿಗಳು ತಮ್ಮ ಪ್ರಥಮ ಪ್ರಕಟಣೆಗೆ ಸಿದ್ಧವಾದ ಒಂದು ಕವನ ಸಂಕಲನ ಕಳುಹಿಸಬೇಕು.
* ಸಂಕಲನವು ಕನಿಷ್ಠ 40 ರಿಂದ 70 ಪುಟಗಳ ಮಿತಿಯಲ್ಲಿರಬೇಕು.
* ಖಂಡ ಕಾವ್ಯ, ಚುಟುಕು, ಹನಿಗವನಗಳನ್ನು ಪರಿಗಣಿಸಲಾಗುವುದಿಲ್ಲ.

* ಕವನ ಸಂಕಲನವನ್ನು ಡಿ.ಟಿ.ಪಿ. ಮಾಡಿಯೇ ಕಳುಹಿಸತಕ್ಕದ್ದು. ಕೈ ಬರಹ, ಕಾರ್ಬನ್ ನಕಲು, ಪತ್ರಿಕಾ ಪ್ರಕಟಿತ ಕಟಿಂಗ್ ಯಾವುದನ್ನೂ ಪರಿಗಣಿಸುವುದಿಲ್ಲ.
* ಸಂಕಲನದ ಯಾವುದೇ ಭಾಗದಲ್ಲಿಯೂ ತಮ್ಮ ಹೆಸರನ್ನು ನಮೂದಿಸಬಾರದು.
* ಯಾವುದೇ ಕಾರಣಕ್ಕು ಪ್ರತಿಯನ್ನು ಹಿಂದಿರುಗಿಸಲಾಗುವುದಿಲ್ಲ.
* ಬೇರೆ ಪ್ರತ್ಯೇಕ ಹಾಳೆಯಲ್ಲಿ ತಮ್ಮ ವಿಳಾಸ, ದೂರವಾಣಿ ಸಂಖ್ಯೆ, ಇತ್ತೀಚೆಗಿನ ಭಾವಚಿತ್ರ, ಜನ್ಮದಿನಾಂಕ, ಮೊದಲ ಪ್ರಕಟಣೆಯೆಂಬ ಸ್ವ-ದೃಢೀಕರಣ ಪತ್ರ ಕಳುಹಿಸತಕ್ಕದ್ದು.
* ಆಯ್ಕೆಗೊಂಡರೆ ಮುಂದೆ ಪ್ರಕಟಿಸುವಾಗ ಮುದ್ರಿತ ರಕ್ಷಾ ಕವಚದ ಮೇಲೆ "ಕುಮಟಾ ರೋಟರಿ-ಕಸಾಪ ಕಾವ್ಯ ಪ್ರಶಸ್ತಿ" ವಿಜೇತ ಕೃತಿ ಎಂದು ಮುದ್ರಿಸಬೇಕು.
* ಕಳುಹಿಸಲು ಕೊನೆಯ ದಿನಾಂಕ: ಡಿಸೆಂಬರ್ 10. 2014.,
* ಪ್ರಶಸ್ತಿಯನ್ನು ಜನೇವರಿ 2015 ರಲ್ಲಿ ರೋಟರಿಯ ನಾದಶ್ರೀ ಕಲಾಕೇಂದ್ರದಲ್ಲಿ ವಿಶೇಷ ಸಮಾರಂಭ ಏರ್ಪಡಿಸಿ ವಿತರಿಸಲಾಗುವುದು.
* ನಿರ್ಣಾಯಕರ ನಿರ್ಣಯವೇ ಅಂತಿಮ. ಈ ಕುರಿತಾದ ಯಾವುದೇ ಸಂಪರ್ಕಕ್ಕೆ ಅವಕಾಶ ಇಲ್ಲ.
* ಸ್ಪರ್ಧೆಗೆ ಕವನ ಸಂಕಲನವನ್ನು ಈ ವಿಳಾಸಕ್ಕೆ ಕಳುಹಿಸಬೇಕು:
ಎನ್.ಆರ್.ಗಜು, ಅಧ್ಯಕ್ಷರು,
ಕನ್ನಡ ಸಾಹಿತ್ಯ ಪರಿಷತ್ತು,
"ಅಮೃತ" ಗಿಬ್ ಪ್ರೌಢಶಾಲೆಯ ಹತ್ತಿರ,
ಕುಮಟಾ, ಉತ್ತರ ಕನ್ನಡ,
ಕರ್ನಾಟಕ 581 343
ಸಂಪರ್ಕ: 97414 72378
-
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
LPG: ಗೃಹಬಳಕೆ ಸಿಲಿಂಡರ್ ಬಳಕೆದಾರರಿಗೆ ಬಿಗ್ ಅಪ್ಡೇಟ್: ಎಲ್ಪಿಜಿ ಅಭಾವ ನೀಗಿಸಲು ಕೇಂದ್ರದಿಂದ ಹೊಸ ಪ್ಲಾನ್ -
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ












Click it and Unblock the Notifications