ವಾಹನದಲ್ಲಿ DL, RC ಒರಿಜಿನಲ್ಲೇ ಬೇಕಾ? ಇಲ್ಲಾಂದ್ರೆ ದಂಡ ಬೀಳುತ್ತಾ?
Recommended Video
ಬೆಂಗಳೂರು, ಸೆಪ್ಟೆಂಬರ್ 06: ಮೋಟಾರ್ ವಾಹನ ಕಾಯ್ದೆ ತಿದ್ದುಪಡಿಯ ನಂತರ ವಾಹನ ಚಾಲಕರಲ್ಲಿ ಸಾಕಷ್ಟು ಗೊಂದಲ ಆರಂಭವಾಗಿದೆ. ದಂಡ ಹಾಕುವುದಕ್ಕೂ ಮುನ್ನ ಸಂಚಾರಿ ನಿಯಮಗಳ ಬಗ್ಗೆ ಜನಸಾಮಾನ್ಯರಲ್ಲಿ ಸರಿಯಾದ ಅರಿವು ಮೂಡಿಸಿ, ದುಬಾರಿ ದಂಡ ವಿಧಿಸುವ ಮುನ್ನ ರಸ್ತೆಯನ್ನು ಸರಿಪಡಿಸಿ, ಗುಂಡಿಗಳನ್ನು ಮುಚ್ಚಿ ಎಂಬಿತ್ಯಾದಿ ಆಗ್ರಹಗಳು ಕೇಳಿಬರುತ್ತಿವೆ.
ಇದರೊಟ್ಟಿಗೆ ವಾಹನದ ಮತ್ತು ಚಾಲಕರ ದಾಖಲೆಗಳ ಒರಿಜಿನಲ್ ಪ್ರತಿಯನ್ನೇ ಇಟ್ಟುಕೊಳ್ಳಬೇಕಾ? ಅಥವಾ ಅವುಗಳ ಸ್ಕ್ಯಾನ್ಡ್ ಕಾಪಿಯನ್ನು ಇಟ್ಟುಕೊಂಡರೂ ನಡೆಯುತ್ತದಾ? ಅಕಸ್ಮಾತ್ ಒರಿಜಿನಲ್ ಪ್ರತಿ ಇಲ್ಲವೆಂದರೆ ಅದಕ್ಕೂ ದಂಡ ತೆರಬೇಕಾ? ಎಂಬಿತ್ಯಾದಿ ಅನುಮಾನಗಳು ಜನಸಾಮಾನ್ಯರಲ್ಲಿ ಎದ್ದಿವೆ.
ದೆಹಲಿಯಲ್ಲಿ ವ್ಯಕ್ತಿಯೊಬ್ಬರಿಗೆ 24,000 ರೂ. ದಂಡ ಹಾಕಿದ ಘಟನೆಯ ನಂತರ ವಾಹನ ಸವಾರರಲ್ಲಿ ಆತಂಕ ಮೂಡಿದ್ದು, ದಾಖಲೆಗಳು ಹೇಗಿರಬೇಕು ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲದವರು, ಒರಿಜಿನಲ್ ಪ್ರತಿಗಳನ್ನೇ ವಾಹನದಲ್ಲಿಟ್ಟುಕೊಂಡು ಓಡಾಡುತ್ತಿದ್ದಾರೆ. ಆದರೆ ಅದಕ್ಕೆ ಬೆಂಗಳೂರು ಟ್ರಾಫಿಕ್ ಪೊಲೀಸ್ ಪರಿಹಾರ ನೀಡಿದ್ದಾರೆ.

ಒರಿಜಿನಲ್ ಬೇಕೆಂದಿಲ್ಲ
ಸವಾರರು ತಮ್ಮ ವಾಹನ ಪರವಾನಗಿ(DL) ಮತ್ತು ನೋಂದಣಿ ಪ್ರಮಾಣಪತ್ರ(RC)ಗಳ ಒರಿಜಿನಲ್ ಪ್ರತಿಯನ್ನು ಇಟ್ಟುಕೊಳ್ಳಲೇಬೇಕೆಂದಿಲ್ಲ. ಆದರೆ ಅವುಗಳ ಸ್ಕ್ಯಾನ್ಡ್ ಪ್ರತಿಯನ್ನು ನಿಮ್ಮ ಮೊಬೈಲ್ ನಲ್ಲಿ ಇರಿಸಿಕೊಳ್ಳಲೇ ಬೇಕು. ಮೊಬೈಲ್ ನಲ್ಲಿ ಡಿಜಿಲಾಕರ್ app ಅನ್ನು ಇನ್ ಸ್ಟಾಲ್ ಮಾಡಿಕೊಂಡು, ಅದರಲ್ಲಿ ಡಿಎಲ್, ಆರ್ ಸಿ ಮತ್ತು ಎಮಿಶನ್ ಸರ್ಟಿಫಿಕೇಟ್ ಗಳನ್ನು ಇಟ್ಟುಕೊಳ್ಳಬಹುದು.

ಇನ್ಶುರೆನ್ಸ್ ಹಾರ್ಡ್ ಕಾಪಿ
ಆದರೆ ವಾಹನ ವಿಮೆಯ ಪ್ರತಿಯನ್ನು ಮಾತ್ರ ಒರಿಜಿನಲ್ ಹಾರ್ಡ್ ಕಾಪಿಯನ್ನೇ ಇಟ್ಟುಕೊಳ್ಳಬೇಕೆಂದು ಬೆಂಗಳೂರು ಟ್ರಾಫಿಕ್ ಪೊಲೀಸ್ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ತಿಳಿಸಿದ್ದಾರೆ.

ಒರಿಜಿನಲ್ ಪ್ರತಿ ಯಾವಾಗ ಬೇಕು?
ಸಂಚಾರಿ ಪೊಲೀಸರು ಕೇಳಿದಾಗ ವಾಹನ ಸವಾರರು ಡಿಜಿಲಾಕರ್ ನಲ್ಲಿರುವ ತಮ್ಮ ದಾಖಲೆಗಳ ಸ್ಕ್ಯಾನ್ಡ್ ಕಾಪಿಯನ್ನು ತೋರಿಸಬಹುದು. ಆದರೆ ಸವಾರರ ವಿರುದ್ಧ ಸಂಚಾರ ನಿಯಮ ಉಲ್ಲಂಘನೆಯ ಯಾವುದೇ ಪ್ರಕರಣಗಳಿದ್ದರೆ ಅಂಥ ಸಂದರ್ಭದಲ್ಲಿ ಒರಿಜಿನಲ್ ಪ್ರತಿಯನ್ನು ಪರಿಶೀಲಿಸುವುದು ಅನಿವಾರ್ಯವಾಗುತ್ತದೆ. ಅಂಥ ಸಂದರ್ಭದಲ್ಲಿ ಒರಿಜಿನಲ್ ಪ್ರತಿಯನ್ನೇ ನೀಡಬೇಕಾಗುತ್ತದೆ.

ಬೆಂಗಳೂರು ವ್ಯಕ್ತಿಗೆ 17000 ರೂ. ದಂಡ
ಮೋಟಾರ್ ವೆಹಿಕಲ್ ತಿದ್ದುಪಡಿ ಕಾಯ್ದೆಯ ನೂತನ ನಿಯಮ ಜಾರಿಗೆ ಬಂದ ನಂತರ ಬೆಂಗಳೂರಿನಲ್ಲಿ ಅತೀ ಹೆಚ್ಚು ದಂಡ ಕಟ್ಟಿದವರು ವರ್ತೂರಿನ ಆಕಾಶ್ ಎಂಬ ವ್ಯಕ್ತಿ. ಡ್ರಿಂಕ್ ಅಂಡ್ ಡ್ರೈವ್(ರೂ.10,000/-), ಡಿಎಲ್ ಇಲ್ಲದೆ ವಾಹನ ಚಲಾವಣೆ(ರೂ.5000/-), ಹೆಲ್ಮೆಟ್ ಇಲ್ಲದೆ ವಾಹನ ಚಲಾವಣೆ(ರೂ.2000/-) ಸೇರಿ ಮೂರು ಪ್ರಕರಣಗಳಲ್ಲಿ ಒಟ್ಟು 17000 ರೂ ದಂಡ ವಿಧಿಸಲಾಗಿದೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
ಐಪಿಎಲ್ಗೂ ಮುನ್ನ ಆರ್ಸಿಬಿ ಹೊಸ ದಾಖಲೆ: 16,000 ಕೋಟಿಗೆ ಆದಿತ್ಯ ಬಿರ್ಲಾ ಗ್ರೂಪ್ ಪಾಲಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
Bengaluru: ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಮಾ.27ರಂದು ನಗರದಲ್ಲಿ ಮಾಂಸ ಮಾರಾಟ ಬಂದ್ಗೆ GBA ಆದೇಶ -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
ಬೆಂಗಳೂರು ಇ-ಖಾತಾ ದಂಧೆ ಬಯಲು: ಬ್ರ್ಯಾಂಡ್ ಬೆಂಗಳೂರಿಗೆ ಆರ್ ಅಶೋಕ್ ತೀವ್ರ ಟೀಕೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ?











Click it and Unblock the Notifications