ಬೆಂಗಳೂರು, ಜೂನ್ 21; ಕರ್ನಾಟಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಸೋಮವಾರ ಸಂಜೆ ಮೈಸೂರಿಗೆ ಆಗಮಿಸಿರುವ ಅವರು ಅಲ್ಲಿಯೇ ವಾಸ್ತವ್ಯ ಹೂಡಿದ್ದರು.
ಅಂತರಾಷ್ಟ್ರೀಯ ಯೋಗ ದಿನಾಚರಣೆಯ 8ನೇ ಕಾರ್ಯಕ್ರಮ ಮೈಸೂರು ಅರಮನೆ ಆವರಣದಲ್ಲಿ ನಡೆಯಲಿದೆ. ಬೆಳಗ್ಗೆ 6.30ಕ್ಕೆ ಕಾರ್ಯಕ್ರಮ ಆರಂಭವಾಗಲಿದೆ. ಸುಮಾರು 15 ಸಾವಿರ ಜನರ ಜೊತೆ ಪ್ರಧಾನಿ ಮೋದಿ ಯೋಗ ಮಾಡಲಿದ್ದಾರೆ.
ನರೇಂದ್ರ ಮೋದಿ ಸೋಮವಾರ ಸಂಜೆಯ ತನಕ ಬೆಂಗಳೂರಿನಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು. ಬಳಿಕ ಮೈಸೂರಿಗೆ ತೆರಳಿದ್ದರು. ಅಲ್ಲಿ ಸಮಾವೇಶ ಉದ್ದೇಶಿಸಿ ಮಾತನಾಡಿದ್ದರು. ಸುತ್ತೂರು ಮಠ ಮತ್ತು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ್ದರು.
ಪ್ರಧಾನಿ ನರೇಂದ್ರ ಮೋದಿ ಕರ್ನಾಟಕ ಭೇಟಿಯ ವಿವರ, ಕಾರ್ಯಕ್ರಮ, ಫೋಟೋ, ವಿಡಿಯೋಗಳು ಈ ಲೈವ್ ಪುಟದಲ್ಲಿ ನಿಮಗೆ ಸಿಗಲಿವೆ...
Recommended Video
Basavaraj Bommai ಅವರು Modi ಮುಂದೆ ಏನು ಹೇಳಿದ್ದಿಷ್ಟು | *Politics | Oneindia Kannada
Newest FirstOldest First
10:18 AM, 21 Jun
ಪ್ರಧಾನಿ ಮೋದಿ ಮೈಸೂರು ಅರಮನೆಯಲ್ಲಿ ಉಪಹಾರ ಸೇವಿಸಿ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ತೆರಳಿದರು.
9:37 AM, 21 Jun
ಯೋಗ ದಿನಾಚರಣೆ ಕಾರ್ಯಕ್ರಮದ ಬಳಿಕ ಪ್ರಧಾನಿ ನರೇಂದ್ರ ಮೋದಿ ವಸ್ತುಪ್ರದರ್ಶನ ಮೈದಾನದಲ್ಲಿ ಸಮಗ್ರ ಡಿಜಿಟಲ್ ಯೋಗ ಪ್ರದರ್ಶನವನ್ನು ವೀಕ್ಷಿಸಿದರು. ಆಯುಷ್ ಇಲಾಖೆಯು ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಸಹಯೋಗದಲ್ಲಿ ಸಮಗ್ರ ಡಿಜಿಟಲ್ ಯೋಗ ಪ್ರದರ್ಶನವನ್ನು ಏರ್ಪಡಿಸಿತ್ತು. ಈ ಪ್ರದರ್ಶನದಲ್ಲಿ ಯೋಗ ಶಿಕ್ಷಣ ನೀಡುವ ಸಂಸ್ಥೆಗಳು, ಅಕಾಡೆಮಿಗಳ ಭರಪೂರ ಮಾಹಿತಿಯೊಂದಿಗೆ ದೇಶಿಯ ಉತನ್ನಗಳ ಪರಿಚಯವನ್ನು ಖುದ್ದು ಮೋದಿ ವೀಕ್ಷಿಸಿದರು.
"Yoga is a part of our ancient Indian heritage. India's gift to humanity, it is a holistic approach to health and well-being, balancing our mind, body and soul," he says. pic.twitter.com/ZFEP4kJvie
ತ್ಯಾಗರಾಜ ಸ್ಟೇಡಿಯಂನಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಯೋಗಾಸನ ಮಾಡುತ್ತಿದ್ದಾರೆ.
7:24 AM, 21 Jun
ಅರಮನೆ ಆವರಣದಲ್ಲಿ ಎಲ್ಲರೂ ಪಾದ ಹಸ್ತಾಸನವನ್ನು ಪೂರ್ಣಗೊಳಿಸಿದ್ದಾರೆ.
7:22 AM, 21 Jun
ವೇದಿಕೆ ಮೇಲಿನಿಂದ ನೀಡುತ್ತಿರುವ ಸೂಚನೆಗೆ ಅನುಗುಣವಾಗಿ ಮೈಸೂರು ಅರಮನೆ ಆವರಣದಲ್ಲಿ ಎಲ್ಲರೂ ಯೋಗ ಮಾಡುತ್ತಿದ್ದಾರೆ. ಮೋದಿ ಸಹ ಹಲವಾರು ಆಸನಗಳನ್ನು ಸೂಚನೆಗೆ ಅನುಗುಣವಾಗಿ ಮಾಡುತ್ತಿದ್ದಾರೆ.
7:18 AM, 21 Jun
ಮೈಸೂರು ಅರಮನೆ ಆವರಣದಲ್ಲಿ ಮೋದಿ ಯೋಗ ಮಾಡುತ್ತಿದ್ದಾರೆ.
7:11 AM, 21 Jun
ಮೈಸೂರು ಅರಮನೆ ಆವರಣದಲ್ಲಿ ಮೋದಿ ಯೋಗ ಮಾಡುತ್ತಿದ್ದಾರೆ.
7:10 AM, 21 Jun
ವೇದಿಕೆ ಮೇಲಿನಿಂದ ತರಬೇತಿದಾರರು ನೀಡುತ್ತಿರುವ ಸೂಚನೆಯಂತೆ ಅರಮನೆ ಮೈದಾನದಲ್ಲಿ ಎಲ್ಲರೂ ಯೋಗ ಮಾಡುತ್ತಿದ್ದಾರೆ. ಪ್ರಧಾನಿ ಮೋದಿ ಸಹ ಜನರ ಜೊತೆ ಯೋಗ ಮಾಡುತ್ತಿದ್ದಾರೆ.
ವಿಡಿಯೋ; ಮೈಸೂರು ಅರಮನೆ ಆವರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಯೋಗ ಆರಂಭಿಸಿದ್ದಾರೆ.
7:07 AM, 21 Jun
ಕಣ್ಣುಗಳನ್ನು ಮುಚ್ಚಿ, ಕೈಗಳನ್ನು ಜೋಡಿಸಿ ನಮಸ್ಕಾರ ಮುದ್ರೆ ಆರಂಭಿಸಲಾಗಿದೆ. ಮೂರು ಬಾರಿ ಓಂ ಎಂದು ಹೇಳುವ ಮೂಲಕ ನಮಸ್ಕಾರ ಮುದ್ರೆ ಪ್ರಾರಂಭಿಸಲಾಗಿದೆ.
7:06 AM, 21 Jun
ಪ್ರಾರ್ಥನೆಯೊಂದಿಗೆ ಮೈಸೂರಿನ ಅರಮನೆ ಆವರಣದಲ್ಲಿ ಯೋಗಾಭ್ಯಾಸ ಆರಂಭವಾಗಿದೆ.
7:05 AM, 21 Jun
ಭಾಷಣ ಮುಗಿಸಿದ ಪ್ರಧಾನಿ ನರೇಂದ್ರ ಮೋದಿ ವೇದಿಕೆಯಿಂದ ಕೆಳಗೆ ಬಂದು ಮ್ಯಾಟ್ ಮೇಲೆ ಯೋಗ ಮಾಡಲು ಕುಳಿತರು.
7:03 AM, 21 Jun
ನಮ್ಮ ಯುವಕರು ಯೋಗ ಮಾಡಲು ಆಸಕ್ತಿ ತೋರಿಸುತ್ತಿದ್ದಾರೆ. ಕೇಂದ್ರ ಆಯುಷ್ ಸಚಿವಾಲಯ ಯುವಕರು ಯೋಗ ಮಾಡಲು ಉತ್ತೇಜಿಸಲು ಹಲವಾರು ಕಾರ್ಯಕ್ರಮಗಳನ್ನು ಆಯೋಜನೆ ಮಾಡಿದೆ ಎಂದು ಮೈಸೂರಿನಲ್ಲಿ ಪ್ರಧಾನಿ ಮೋದಿ ಹೇಳಿದರು.
7:00 AM, 21 Jun
ಯೋಗದಿಂದಾಗಿ ವಿಶ್ವವೇ ಒಂದಾಗುತ್ತಿದೆ. ಯೋಗದ ಈ ಪ್ರಯೋಗ ಈಗ ಕೇವಲ ಜೀವನದ ಭಾಗವಾಗಿಲ್ಲ. ಯೋಗ ಈಗ ಜೀವನದ ದಾರಿಯಾಗಿದೆ ಎಂದು ಮೋದಿ ಬಣ್ಣಿಸಿದರು.
READ MORE
9:19 AM, 20 Jun
ಭಾರತದ ಪ್ರಧಾನಿ ನರೇಂದ್ರ ಮೋದಿ ಎರಡು ದಿನಗಳ ಕರ್ನಾಟಕ ಪ್ರವಾಸ ಸೋಮವಾರ ಆರಂಭವಾಗಲಿದೆ. ಬೆಂಗಳೂರು, ಮೈಸೂರಿಗೆ ಮೋದಿ ಭೇಟಿ ನೀಡಲಿದ್ದಾರೆ.
9:19 AM, 20 Jun
ಯಲಹಂಕ ವಾಯುನೆಲೆಗೆ ಮೋದಿ ಮಧ್ಯಾಹ್ನ 12 ಗಂಟೆಗೆ ಆಗಮಿಸಲಿದ್ದಾರೆ. ಬಳಿಕ ಹೆಲಿಕಾಪ್ಟರ್ ಮೂಲಕ ಐಐಎಸ್ಸಿಗೆ ಆಗಮಿಸಲಿದ್ದಾರೆ.
9:20 AM, 20 Jun
ಪ್ರಧಾನಿ ನರೇಂದ್ರ ಮೋದಿ 12.30ಕ್ಕೆ ಐಐಎಸ್ಸಿಯಲ್ಲಿ ಸೆಂಟರ್ ಫಾರ್ ಬ್ರೇನ್ ರಿಸರ್ಚ್ ಉದ್ಘಾಟನೆ ಮಾಡಲಿದ್ದಾರೆ. 280 ಕೋಟಿ ರೂ.ಗಳ ಯೋಜನೆ ಇದಾಗಿದೆ.
9:44 AM, 20 Jun
ಪ್ರಧಾನಿ ನರೇಂದ್ರ ಮೋದಿ ಬೆಂಗಳೂರು ಭೇಟಿ ಹಿನ್ನಲೆಯಲ್ಲಿ ವಿಮಾನ ನಿಲ್ದಾಣಕ್ಕೆ ಮುತ್ತಿಗೆ ಹಾಕಲು ಆಗಮಿಸುತ್ತಿದ್ದ ಕೆಪಿಸಿಸಿ ಕಿಸಾನ್ ಸೆಲ್ ಅಧ್ಯಕ್ಷ ಸೇರಿದಂತೆ 30ಕ್ಕೂ ಹೆಚ್ಚು ಜನರನ್ನು ಚಿಕ್ಕಮಗಳೂರಿನ ಪ್ರವಾಸಿ ಮಂದಿರದಲ್ಲಿ ಬಂಧಿಸಲಾಗಿದೆ. 10ಕ್ಕೂ ಹೆಚ್ಚು ವಾಹನಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬೆಂಗಳೂರಿಗೆ ಹೊರಟಿದ್ದರು.
9:55 AM, 20 Jun
ರಾಜ್ಯದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಹಾಗೂ ಮೈಸೂರಿನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪಾಲ್ಗೊಳ್ಳಲು ಕರ್ನಾಟಕಕ್ಕೆ ಆಗಮಿಸುತ್ತಿರುವ ದೇಶದ ಹೆಮ್ಮೆಯ ಪ್ರಧಾನಮಂತ್ರಿಗಳಾದ ಶ್ರೀ @narendramodi ಅವರಿಗೆ ಹೃತ್ಪೂರ್ವಕ ಸ್ವಾಗತ.@BSBommaipic.twitter.com/ofW9BYpANB
ಕರ್ನಾಟಕಕ್ಕೆ ಆಗಮಿಸುತ್ತಿರುವ ಪ್ರಧಾನಿ ಮೋದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ವಾಗತ ಕೋರಿದ್ದಾರೆ.
10:21 AM, 20 Jun
ಕನ್ನಡದಲ್ಲಿ ನರೇಂದ್ರ ಮೋದಿ ಟ್ವೀಟ್:
ಕರ್ನಾಟಕ ರಾಜ್ಯಕ್ಕೆ ಹೋಗುತ್ತಿರುವೆ. ಅಲ್ಲಿ ಬೆಂಗಳೂರು ಮತ್ತು ಮೈಸೂರಿನ ಕಾರ್ಯಕ್ರಮ ಗಳಲ್ಲಿ ಭಾಗವಹಿಸುವೆ. ಮೊದಲ ಕಾರ್ಯಕ್ರಮ @iiscbangalore, ಅಲ್ಲಿ ಮಿದುಳು ಸಂಶೋಧನಾ ಕೇಂದ್ರ ಉದ್ಘಾಟಿಸಲಾಗುವುದು. ಬಾಗ್ಚಿ- ಪಾರ್ಥಸಾರಥಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗಾಗಿ ಶಿಲಾನ್ಯಾಸ ನೆರವೇರಿಸಲಾಗುವುದು.
ಕೆಲವೇ ಕ್ಷಣಗಳಲ್ಲಿ ಪ್ರಧಾನಿ ಮೋದಿ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ.
12:06 PM, 20 Jun
ಬೆಂಗಳೂರಿನಲ್ಲಿ ಪ್ರಧಾನಿ ಮೋದಿ ಉದ್ಘಾಟಿಸಲಿರುವ ಯೋಜನೆಗಳು
12:08 PM, 20 Jun
ಯಲಹಂಕ ವಾಯನೆಲೆಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ
12:19 PM, 20 Jun
ಪ್ರಧಾನಿ ನರೇಂದ್ರ ಮೋದಿ ಸ್ವಾಗತಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
12:35 PM, 20 Jun
ನರೇಂದ್ರ ಮೋದಿ ಸ್ವಾಗತಿಸಿದ ಧಾವರ್ ಚಂದ್ ಗೆಹ್ಲೋಟ್, ಬಸವರಾಜ ಬೊಮ್ಮಾಯಿ, ಬಿ. ಎಸ್. ಯಡಿಯೂರಪ್ಪ, ನಳಿನ್ ಕುಮಾರ್ ಕಟೀಲ್
12:47 PM, 20 Jun
ಮೇಖ್ರಿ ಸರ್ಕಲ್ನಲ್ಲಿ ನೂರಾರು ಕಾರ್ಯಕರ್ತರು ಮೋದಿ ಮೋದಿ ಎಂದು ಘೋಷಣೆ ಕೂಗಿದರು. ಮೋದಿ ಎಲ್ಲರತ್ತ ಕೈ ಬೀಸಿ ಮುಂದೆ ಸಾಗಿದರು.
12:49 PM, 20 Jun
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಜೊತೆ ಮಾತುಕತೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ
1:11 PM, 20 Jun
ಐಐಎಸ್ಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ 280 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಸೆಂಟರ್ ಫಾರ್ ಬ್ರೇನ್ ರಿಸರ್ಚ್ ಉದ್ಘಾಟನೆ ಮಾಡಿದರು.
1:12 PM, 20 Jun
ಮೇರ್ಖಿ ಸರ್ಕಲ್ನಲ್ಲಿ ಮೋದಿ ಬಿಜೆಪಿ ಕಾರ್ಯಕತ್ತ ಕೈ ಬೀಸಿದರು.
1:22 PM, 20 Jun
ಮೋದಿ ಐಐಎಸ್ಸಿ ಕ್ಯಾಂಪಸ್ನಲ್ಲಿನ ಕಾರ್ಯಕ್ರಮ ಮುಗಿಸಿ ಕೊಮ್ಮಘಟ್ಟಕ್ಕೆ ತೆರಳಿದರು.
1:44 PM, 20 Jun
ಪ್ರಧಾನಿ ನರೇಂದ್ರ ಮೋದಿ 201 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಬಾಬಾಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಯೂನಿವರ್ಸಿಟಿ ಆವರಣ ಉದ್ಘಾಟನೆ ಮಾಡಿದರು.
2:14 PM, 20 Jun
ನರೇಂದ್ರ ಮೋದಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ವತಿಯಿಂದ ಕರ್ನಾಟಕ ಸರ್ಕಾರದ ವಿನೂತನ ಉದ್ಯೋಗ ಯೋಜನೆಯಡಿ ಉನ್ನತೀಕರಿಸಲಾಗಿರುವ 150 ಐಟಿಐಗಳನ್ನು ಲೋಕಾರ್ಪಣೆ ಮಾಡಿದರು.
3:10 PM, 20 Jun
ಬೆಂಗಳೂರಿನ ಕೊಮ್ಮಘಟ್ಟದಲ್ಲಿ ನಡೆಯುತ್ತಿರುವ ಸಮಾವೇಶದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಾತನಾಡಲಿದ್ದಾರೆ. ಜ್ಞಾನ ಭಾರತಿ ಕ್ಯಾಂಪಸ್ನಿಂದ ಕೊಮ್ಮಘಟ್ಟಕ್ಕೆ ರಸ್ತೆಯ ಮೂಲಕ ತಲುಪಿರುವ ಮೋದಿ ಮಧ್ಯಾಹ್ನ 3.30ರಿಂದ 4 ಗಂಟೆವರೆಗೆ ಭಾಷಣ ಮಾಡಲಿದ್ದಾರೆ. ನಾಡಗೀತೆ ಹಾಡಿ ಮುಗಿಸಿದ ಬಳಿಕೆ ಮೋದಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
3:34 PM, 20 Jun
ಪ್ರಧಾನಿ ನರೇಂದ್ರ ಮೋದಿ ಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆ ಸೇರದಂತೆ 28,000 ಕೋಟಿ ಮೊತ್ತದ ರೈಲು ಮತ್ತು ರಸ್ತೆ ಮೂಲಭೂತ ಸೌಕರ್ಯ ಯೋಜನೆಗಳಿಗೆ ಚಾಲನೆ ನೀಡಿದರು. ಇದಕ್ಕೂ ಮುನ್ನಾ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿದರು. ಕಿರುಚಿತ್ರದ ಮೂಲಕ ವಿವಿಧ ಯೋಜನೆಗಳ ಮಾಹಿತಿಯನ್ನು ಎಲ್ಇಡಿ ಪರದೆಯಲ್ಲಿ ಅನಾವರಣಗೊಳಿಸಲಾಯಿತು.
3:45 PM, 20 Jun
ಕೊಮ್ಮಘಟ್ಟದಲ್ಲಿ ನಡೆಯುತ್ತಿರುವ ಸಮಾವೇಶ ಉದ್ದೇಶಿಸಿ ನರೇಂದ್ರ ಮೋದಿ ಮಾತನಾಡುತ್ತಿದ್ದಾರೆ. ಕನ್ನಡದಲ್ಲಿಯೇ ಮೋದಿ ಭಾಷಣ ಆರಂಭಿಸಿದರು.
3:46 PM, 20 Jun
ಕರ್ನಾಟಕದ 5 ಹೆದ್ದಾರಿ ಮತ್ತು 7 ರೈಲು ಯೋಜನೆಗಳಿಗೆ ಚಾಲನೆ ನೀಡಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
3:47 PM, 20 Jun
ಬೆಂಗಳೂರು ಏಕ್ ಭಾರತ್, ಶ್ರೇಷ್ಠ ಭಾರತ್ದ ಪ್ರತಿಬಿಂಬ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದರು.
3:48 PM, 20 Jun
ಬೆಂಗಳೂರಿನ ಅಭಿವೃದ್ಧಿ ಲಕ್ಷಾಂತರ ಕನಸುಗಳ ಅಭಿವೃದ್ಧಿಯಾಗಿದೆ. ನಿಮ್ಮ ಸೇವೆಗೆ ನಾನು ಸದಾ ಸಿದ್ಧನಾಗಿದ್ದೇನೆ ಎಂದು ಮೋದಿ ಹೇಳಿದರು.
3:49 PM, 20 Jun
ಸಬ್ ಅರ್ಬನ್ ರೈಲು ಯೋಜನೆ ಬಗ್ಗೆ 40 ವರ್ಷಗಳಿಂದ ಚರ್ಚೆ ನಡೆಯುತ್ತಿತ್ತು. ಈ ಚರ್ಚೆಯನ್ನು ನಾವು ಪೂರ್ಣಗೊಳಿಸಿ ಕೆಲಸ ಆರಂಭ ಮಾಡಿದ್ದೇವೆ ಎಂದು ನರೇಂದ್ರ ಮೋದಿ ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಉದ್ಘಾಟಿಸಿದರು. ರೈಲು ನಿಲ್ದಾನದ ವಿಡಿಯೋವನ್ನು ರೈಲ್ವೆ ಸಚಿವಾಲಯ ಹಂಚಿಕೊಂಡಿದೆ.
4:16 PM, 20 Jun
Bengaluru is a reflection of the spirit of Ek Bharat – Shreshtha Bharat. The development of Bengaluru is the development of millions of dreams. Therefore, in the last 8 years, it has been a continuous effort of the Central Govt to develop Bengaluru further: PM Modi pic.twitter.com/pJBq0ZCDTX
ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಉದ್ಘಾಟಿಸಿದ ನರೇಂದ್ರ ಮೋದಿ. ನಾಗನಹಳ್ಳಿ ಕೋಚಿಂಗ್ ಟರ್ಮಿನಲ್ಗೆ ಅಡಿಗಲ್ಲು ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮೋದಿ, ಅಖಿಲ ವಾಕ್ ಮತ್ತು ಶ್ರವಣ ಸಂಸ್ಥೆಯ ಶ್ರೇಷ್ಠತಾ ಕೇಂದ್ರ ಉದ್ಘಾಟನೆ ಮಾಡಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಚಾಲನೆ ನೀಡಿರುವ 33 ಸಾವಿರ ಕೋಟಿ ವೆಚ್ಚದ ವಿವಿಧ ಯೋಜನೆಗಳು ಪೂರ್ಣಗೊಂಡರೆ, ಕರ್ನಾಕಟದ ಜಿಡಿಪಿ ಶೇ. 2 ರಷ್ಟು ಹೆಚ್ಚಳವಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು
International Yoga Day 2022 Live Updates in Kannada: PM Narendra Modi will lead the 8th International Yoga Day Celebrations in Mysuru on June 21. Check live updates, news and highlights.