ಪಿಯುಸಿ: ವಿದ್ಯಾರ್ಥಿಗಳ ವಿಶ್ವಾಸ ಹೆಚ್ಚಿಸಿದ ಪ್ರಶ್ನೆ ಪತ್ರಿಕೆಗಳು
ಬೆಂಗಳೂರು, ಮಾ. 12: ದ್ವಿತೀಯ ಪಿಯು ವಿದ್ಯಾರ್ಥಿಗಳು ತಮ್ಮ ಮೊದಲ ಪರೀಕ್ಷೆಯನ್ನು ಬರೆದಿದ್ದಾರೆ. ಕೆಮೆಸ್ಟ್ರಿ ಮತ್ತು ಬಿಸಿನೆಸ್ ಸ್ಟಡೀಸ್ ಪರೀಕ್ಷೆಗಳು ಸರಳವಾಗಿದ್ದ ಪರಿಣಾಮ ವಿದ್ಯಾರ್ಥಿಗಳಲ್ಲಿ ಯಾವ ಭಯ ಮೂಡಲಿಲ್ಲ.
ಕೆಮೆಸ್ಟ್ರಿ ಪೇಪರ್ ನಲ್ಲಿ ಸಾಮಾನ್ಯ ವಿದ್ಯಾರ್ಥಿಯೂ ಸುಲಭವಾಗಿ 40-45 ಅಂಕ ಗಳಿಸಬಹುದು. ಪ್ರಶ್ನೆ ಪತ್ರಿಕೆ ಮಾದರಿಯೂ ಕಳೆದ ವರ್ಷದಂತೆ ಇದ್ದರೂ ಕ್ಲಿಷ್ಟತೆ ಕೊಂಚ ಹೆಚ್ಚಾಗಿತ್ತು. ವಿದ್ಯಾರ್ಥಿಗಳ ಆಯ್ಕೆಗೆ ಬಿಟ್ಟ ಪ್ರಶ್ನೆಗಳಲ್ಲಿ ಕೆಲ ಗೊಂದಲಕಾರಿ ಅಂಶಗಳಿದ್ದವು. ಆದರೆ ಹಿಂದಿನ ಪ್ರಶ್ನೆ ಪತ್ರಿಕೆಗಳನ್ನು ಸಮಗ್ರವಾಗಿ ಅಭ್ಯಾಸ ಮಾಡಿದವರಿಗೆ ಯಾವ ತೊಂದರೆಯಾಗಿಲ್ಲ ಎಂದು ದಿಕ್ಷಾ ನೆಟ್ ವರ್ಕ್ ನ ಉಪಾಧ್ಯಕ್ಷ ಡಾ. ಮಿಲಿಂದ್ ತಿಳಿಸಿದ್ದಾರೆ. (ಪಿಯು ಪರೀಕ್ಷೆ ವೇಳಾಪಟ್ಟಿ)

ನಮಗೆ ಸಂಭ್ರಮಿಸಿಲು ಅವಕಾಶ ದೊರೆತಿದೆ. ಕೆಮೆಸ್ಟ್ರಿ ಪತ್ರಿಕೆ ಸರಳವಾಗಿತ್ತು. ಎಲ್ಲ ಪ್ರಶ್ನೆಗಳು ಉತ್ತರಿಸುವಂತಿದ್ದು 70 ಅಧಿಕ ಅಂಕ ಬರಲಿದೆ ಎಂದು ದೀಕ್ಷಾ ನೆಟ್ ವರ್ಕ್ ಮದನ್ ತಿಳಿಸಿದ್ದಾರೆ. ಕಳೆದ ವರ್ಷದ ಪತ್ರಿಕೆಗೆ ಹೋಲಿಸಿದರೆ ಅಂಥ ವ್ಯತ್ಯಾಸಗಳಿರಲಿಲ್ಲ ಎಂದು ಮತ್ತೊಬ್ಬ ವಿದ್ಯಾರ್ಥಿ ಕಾರ್ತಿಕ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬಿಸಿನೆಸ್ ಸ್ಟಡೀಸ್ ಪತ್ರಿಕೆ ಸಹ ಸರಳವಾಗಿದ್ದು ಸಾಮಾನ್ಯ ವಿದ್ಯಾರ್ಥಿ ಸುಲಭವಾಗಿ 50 ಅಂಕ ಗಳಿಸಬಹುದು. ಶೇ. 80 ಕ್ಕೂ ಅಧಿಕ ಪ್ರಶ್ನೆಗಳು ಕ್ವಶ್ಚನ್ ಬ್ಯಾಂಕ್ ಆಧಾರದಲ್ಲಿಯೇ ಕೇಳಿದ್ದು ವಿಶೇಷ.[ಏಪ್ರಿಲ್ 29ರಿಂದ ಸಿಇಟಿ ಪರೀಕ್ಷೆ]
ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಮಾಡಿದ್ದು ನಮಗೆ ಲಾಭವಾಯಿತು. ಎಲ್ಲ ಪ್ರಶ್ನೆಗಳು ನೇರವಾಗಿ ಇದ್ದುದರಿಂದ ಉತ್ತರಿಸಲು ಹರಸಾಹಸ ಪಡಬೇಕಾಗಿ ಬರಲಿಲ್ಲ ಎಂದು ದೀಕ್ಷಾ ನೆಟ್ ವರ್ಕ್ ನ ವಿದ್ಯಾರ್ಥಿ ಸುಕೃತ್ ಹೇಳುತ್ತಾರೆ. ಮಾರ್ಚ್ 13 ರಂದು ಕನ್ನಡ, ತಮಿಳು ಮತ್ತು ಮಲೆಯಾಳಂ ಪರೀಕ್ಷೆಗಳು ನಡೆಯಲಿವೆ.
-
ಮಾರ್ಚ್ 14ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ರಾಜ್ಯದಲ್ಲಿ 4,824 ಕೋಟಿ ರೂ. ಕೈಗಾರಿಕಾ ಹೂಡಿಕೆಗೆ ಸರ್ಕಾರ ಅಸ್ತು; 14,525 ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ -
Horoscope March 14: ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಣೆ, ದಾಂಪತ್ಯ ಜೀವನದಲ್ಲಿ ಸಂತಸ, ದಿನ ಭವಿಷ್ಯ -
ಇರಾನ್ ಪರಮಾಣು ವಿಜ್ಞಾನಿ ಕಥೆ ಮುಗಿಸಿದ ಇಸ್ರೇಲ್, ಮತ್ತಷ್ಟು ತಿಕ್ಕಾಟ ಶುರು | Operation Roaring Lion -
ಹೊಸೂರು ವಿಮಾನ ನಿಲ್ದಾಣ: ಬೆಂಗಳೂರು ಸಮೀಪ 2,979 ಎಕರೆ ಭೂಮಿ ಸ್ವಾಧೀನ; ಕನ್ನಡದಲ್ಲೇ ಮಾತನಾಡಿದ ತಮಿಳುನಾಡು ಶಾಸಕ -
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್












Click it and Unblock the Notifications