ನೋಂದಣಿ ಸಂಖ್ಯೆ ಇದ್ರೆ ಸಾಕು, ಒಂದೆ ಕ್ಲಿಕ್ನಲ್ಲಿ ಎಲ್ಲ ಮಾಹಿತಿ
ಬೆಂಗಳೂರು, ಸೆಪ್ಟೆಂಬರ್. 16: ಸಾಲ ಮಾಡಿ ಹೊಸ ವಾಹನ ಖರೀದಿಸಿದರೆ ಮುಂದೆ ಬ್ಯಾಂಕ್ ಬಡ್ಡಿ ಕಟ್ಟುವುದರಲ್ಲೇ ಅರ್ಧ ಆಯುಷ್ಯ ಕಳೆದುಹೋಗುತ್ತದೆ ಎಂಬ ಆತಂಕ ಎಲ್ಲರಲ್ಲೂ ಇರುತ್ತದೆ. ಅದು ದ್ವಿಚಕ್ರ ವಾಹನ ಆಗಿರಬಹುದು, ಇಲ್ಲವೇ ನಾಲ್ಕು ಚಕ್ರದ ವಾಹನ ಇರಬಹುದು.
ಆದರೆ ಸೆಕೆಂಡ್ ಹ್ಯಾಂಡ್ ವಾಹನವ ಖರೀದಿ ಮಾಡಲು ಮನಸ್ಸು ಸುಲಭವಾಗಿ ಒಪ್ಪಿಕೊಳ್ಳಲ್ಲ. ಖರೀದಿಸುತ್ತಿರುವ ವಾಹನ ಯಾರ ಹೆಸರಲ್ಲಿದೆ, ಅವರು ಎಷ್ಟನೆಯ ಓನರ್, ಅದು ಯಾವ ಆರ್.ಟಿ.ಓ ದಲ್ಲಿ ನೋಂದಣಿ ಆಗಿದೆ, ಅದರ ದಿನಾಂಕ, ಎಂಜನ್ ನಂ., ಚಾಸಿ ನಂ, ವಾಹನದ ವ್ಯಾಲಿಡಿಟಿ, ಯಾವುದಾದರೂ ಹಣಕಾಸು ಸಂಸ್ಥೆಯ ಸಾಲ ಬಾಕಿ ಇದೆಯೇ... ಇಂಥ ನೂರಾರು ಪ್ರಶ್ನೆಗಳಿರುತ್ತವೆ. ಮಧ್ಯವರ್ತಿಗಳನ್ನು ನಂಬುವಂಥ ಸ್ಥಿತಿಯೂ ಈಗಿಲ್ಲ.[ಎಲ್ ಪಿಜಿ ಜೊತೆ ಆಧಾರ್ ನಂಬರ್ ಸೇರಿಸುವುದು ಹೇಗೆ?]
ಹೊಸ ವಾಹನ ಖರೀದಿ ಮಾಡಲು ಸಾಲ ಮಾಡಲು ಸಿದ್ಧರಿಲ್ಲ, ಹಳೇ ವಾಹನದ ದಾಖಲೆ ನಾವೇ ಪರಿಶೀಲಿಸಿದರೆ ಖರೀದಿ ಮಾಡಬಹುದು ಎಂಬ ಅಂತಿಮ ಹಂತಕ್ಕೆ ಮನಸ್ಸು ಬರುತ್ತದೆ. ಹಾಗಾದರೆ ಕುಳಿತಲ್ಲಿಯೇ ಈ ಎಲ್ಲ ದಾಖಲೆಗಳ ಪರಿಶೀಲನೆ ಸಾಧ್ಯವಿದೆಯೇ?
ಹೌದು ರಾಜ್ಯ ಸರ್ಕಾರ ಮತ್ತು ಆರ್ ಟಿಒ ಒಂದಾಗಿ ಇಂಥದ್ದೊಂದು ವಿನೂತನ ಆಯ್ಕೆಯನ್ನು ಸಾರಿಗೆ ಇಲಾಖೆ ವೆಬ್ ತಾಣದಲ್ಲಿ ಬಿಟ್ಟಿದೆ. ಅದರೆ ಬಳಕೆ ಹೇಗೆ ಎಂದು ನೋಡಿಕೊಂಡು ಬರೋಣ...
ವಾಹನದ ಮಾಹಿತಿ ತಿಳಿದುಕೊಳ್ಳುವುದು ಹೇಗೆ?

ವಾಹನದ ಎಲ್ಲ ಮಾಹಿತಿ ಇಲ್ಲಿ ಲಭ್ಯ
ಮೊದಲು http://rto.kar.nic.in/ ಅಂದರೆ ಆರ್ ಟಿಒದ ವೆಬ್ ತಾಣಕ್ಕೆ ಪ್ರವೇಶ ಪಡೆದುಕೊಳ್ಳಿ. ಆಗ ನಿಮ್ಮ ಎದುರಿಗೆ ನೂರಾರು ಆಯ್ಕೆಗಳು ತೆರೆದುಕೊಳ್ಳುತ್ತವೆ.

ವೆಹಿಕಲ್ ಸರ್ಚ್ ಆಯ್ಕೆ ಮಾಡಿ
ಎಡಬದಿಗೆ ಕಾಣುವ ಆಯ್ಕೆಗಳಲ್ಲಿ ವೆಹಿಕಲ್ ಸರ್ಚ್ ಆಯ್ಕೆಯನ್ನು ಕ್ಲಿಕ್ ಮಾಡಿದಾಗ ಅದು ಮತ್ತೊಂದು ಪೇಜ್ ಗೆ ನಿಮ್ಮನ್ನು ಕರೆದುಕೊಂಡು ಹೋಗುತ್ತದೆ.

ಹುಡುಕುವುದು ಹೇಗೆ
ವಾಹನದ ನೋಂದಣಿ ಸಂಖ್ಯೆ, ಚಾಸಿ ಸಂಖ್ಯೆ, ಎಂಜಿನ್ ನಂಬರ್ ಯಾವುದು ನಿಮ್ಮ ಬಳಿ ಇದ್ದರೂ ವಾಹನದ ಸಕಲ ಮಾಹಿತಿ ಲಭ್ಯವಾಗುತ್ತದೆ. ಮೂರರಲ್ಲಿ ಒಂದು ಆಯ್ಕೆ ಆಯ್ದುಕೊಂಡು ಮುಂದುವರಿಯಬೇಕಾಗುತ್ತದೆ.

ನೋಂದಣಿ ಸಂಖ್ಯೆ ಆಯ್ದುಕೊಂಡರೆ
ಉದಾಹರಣೆಗೆ ನಿಮಗೆ ಕೆಎ 01 ಎ 999 ನೋಂದಣಿ ಸಂಖ್ಯೆಯ ವಾಹನದ ಮಾಹಿತಿ ಬೇಕು ಎಂದಾದರೆ, ಮೊದಲು ಕಾಣುವ ಬಾಕ್ಸ್ ನಲ್ಲಿ ಕೆಎ 01ಎ ಮತ್ತು ಎರಡನೇ ಬಾಕ್ಸ್ ನಲ್ಲಿ 999ನ್ನು ದಾಖಲು ಮಾಡಬೇಕು.

ನಿರ್ದೇಶನ ಪಾಲಿಸಿ
ಆಲ್ ಲೈನ್ ತಾಣ ನಿಮಗೆ ಕೆಳಗೆ ಬಾಕ್ಸ್ ನಲ್ಲಿ ತೋರಿಸಿದ ಅಂಕಿಗಳನ್ನು ತುಂಬಲು ಹೇಳುತ್ತದೆ. ಅದರಂತೆ ವಾಹನದ ನೋಂದಣಿ ಸಂಖ್ಯೆ ಮತ್ತು ತಿಳಿಸಿದ ಕೋಡ್ ನ್ನು ದಾಖಲು ಮಾಡಿ ಸರ್ಚ್ ಬಟನ್ ಕ್ಲಿಕ್ ಮಾಡಬೇಕು. ಆಗ ಎಲ್ಲ ಮಾಹಿತಿ ಲಭ್ಯವಾಗುತ್ತದೆ.
-
ಏಪ್ರಿಲ್ 11ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Bengaluru power cut: ಬೆಂಗಳೂರಿನ ಹಲವೆಡೆ ಹೆಚ್ಚಾಯ್ತು ದಿಢೀರ್ ಪವರ್ ಕಟ್, ಹೈರಾಣಾದ ಜನ: ಬೆಸ್ಕಾಂ ಕೊಟ್ಟ ಉತ್ತರ ಇಲ್ಲಿದೆ -
Ramya: ಬೀದಿ ನಾಯಿಗಳ ಮೇಲಿನ ಕ್ರೌರ್ಯಕ್ಕೆ ನಟಿ ರಮ್ಯಾ ಕಣ್ಣೀರು: ಬೆಂಗಳೂರಿನ ಫ್ರೀಡಂಪಾರ್ಕ್ ಪ್ರತಿಭಟನೆಯಲ್ಲಿ ಭಾಗಿ -
Karnataka Rains: ಸಮುದ್ರ ಮಲ್ಮೈ ಸುಳಿಗಾಳಿ, ಏಪ್ರಿಲ್ 14-17ರವರೆಗೆ ಬೆಂಗಳೂರು, ಇತರ ಜಿಲ್ಲೆಗಳಲ್ಲಿ ಮಳೆ -
Aditya: ನಿನ್ನೆ ಮೊನ್ನೆ ಬಂದೋರೆಲ್ಲ ದರ್ಶನ್ಗೆ ಕ್ಲೋಸ್ ಅಂತಿದ್ದಾರೆ, ಅವನು ಎಂದಿಗೂ ನನ್ನ ದೋಸ್ತ್: ನಟ ಆದಿತ್ಯ -
ಮುಂಬೈ ವಿರುದ್ಧದ ಹೈವೋಲ್ಟೇಜ್ ಕದನಕ್ಕೆ ಆರ್ಸಿಬಿ ಪ್ಲೇಯಿಂಗ್ 11ನಲ್ಲಿ ಮಹತ್ವದ ಬದಲಾವಣೆ ಸಾಧ್ಯತೆ -
Dhurandhar 2 Pakistan: ಅರಬ್ ರಾಷ್ಟ್ರದ ಸಾಲ ತೀರಿಸಲು ದುರಂಧರ್ 2 ಬಿಡುಗಡೆಗೆ ಮುಂದಾಯ್ತಾ ಪಾಕಿಸ್ತಾನ, ಟ್ವಿಸ್ಟ್ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
ಗಂಡ-ಹೆಂಡತಿ ಜಗಳ ಇಡೀ ದಿನ ತೋರಿಸಿದರೆ ಸಮಾಜಕ್ಕೆ ಏನು ಪ್ರಯೋಜನ: ಮಾಧ್ಯಮಗಳಿಗೆ ಸಿಎಂ ಪ್ರಶ್ನೆ -
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
ಮೈಸೂರು-ಬೆಂಗಳೂರು ರೈಲು ಪ್ರಯಾಣಿಕರಿಗೆ ಗುಡ್ನ್ಯೂಸ್ ಕೊಟ್ಟ ವಿ.ಸೋಮಣ್ಣ












Click it and Unblock the Notifications