ಲೋಕಸಭೆ: 52 ವರ್ಷದಲ್ಲಿ ರಾಜ್ಯದಲ್ಲಿ ಉಪಚುನಾವಣೆಗಳೆಷ್ಟು?
ಬೆಂಗಳೂರು, ಏ. 1: ನಿರ್ಲಜ್ಜ ರಾಜಕಾರಣಿಗಳ ಸ್ವಾರ್ಥ ಸಾಧನೆಗಾಗಿ ಕರ್ನಾಟಕದಲ್ಲಿ ಇತ್ತೀಚೆಗೆ ಉಪಚುನಾವಣೆ/ಮರು ಚುನಾವಣೆಗಳು ಯಾವುದೇ ಎಗ್ಗುಸಿಗ್ಗಿಲ್ಲದೆ ಅವ್ಯಾಹತವಾಗಿ ನಡೆದಿದೆ. ಅದು ವಿಧಾನಸಭೆಯೂ ಆಗಬಹುದು/ ಅಥವಾ ಲೋಕಸಭಾ ಚುನಾವಣೆಯಾದರೂ ಆಗಬಹುದು.
ಈಗ 16ನೇ ಲೋಕಸಭೆಯ ಚುನಾವಣಾ ಪರ್ವವಾಗಿರುವುದರಿಂದ ಲೋಕಸಭೆಗೆ ಕಳೆದ 52 ವರ್ಷಗಳಲ್ಲಿ ಕರ್ನಾಟಕದಲ್ಲಿ ಎಷ್ಟು ಉಪಚುನಾವಣೆಗಳು ನಡೆದಿವೆ? ಎಂಬ ಪ್ರಶ್ನೆ ಮುಂದಿಟ್ಟುಕೊಂಡು ನೋಡಿದಾಗ ಕೆಲ ಕುತೂಹಲಕಾರಿ ಅಂಶಗಳು ಪತ್ತೆಯಾಗುತ್ತವೆ. ಹಾಲಿ ಸಂಸದರ ಸಾವಿನಿಂದಾಗಿ ಉಪಚುನಾವಣೆ ನಡೆದರೆ ಅದು ಅನಿವಾರ್ಯ. ಆದರೆ ಈಗಾಗಲೇ ಚುನಾಯಿತರಾದ ಜನಪ್ರತಿನಿಧಿಗಳು ಸ್ವಾರ್ಥ ಸಾಧನೆಗಾಗಿ ಕ್ಷೇತ್ರ ತೆರವು ಗೊಳಿಸಿ, ಮರು ಚುನಾವಣೆಗೆ ವೇದಿಕೆಯೊದಗಿಸುವುದು ಎಷ್ಟು ಸಮಂಜಸ ಎಂಬುದು ಡೇ-1 ನಿಂದ ಜಿಜ್ಞಾಸೆ ಮೂಡಿಸಿದೆ.

ರಾಜ್ಯದಲ್ಲಿ ಮೊದಲ ಉಪಚುನಾವಣೆ ನಡೆದಿದ್ದು 1962ರ ಜೂನ್ ತಿಂಗಳಲ್ಲಿ. ಅಂದಿನ ಕಾಂಗ್ರೆಸ್ ಸಂಸದ ಎಂವಿ ಕೃಷ್ಣಪ್ಪ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದಾಗ ಮೊದಲ ಬಾರಿಗೆ ಉಪಚುನಾವಣೆ ನಡೆದಿತ್ತು. ಅಲ್ಲಿಂದೀಚೆಗೆ ಇದುವರೆಗೂ 18 ಉಪಚುನಾವಣೆಗಳು ನಡೆದಿವೆ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]
1962-67 ಅವಧಿಯ ಲೋಕಸಭೆಗೆ ಗರಿಷ್ಠ ಬಾರಿಗೆ ಅಂದರೆ 5 ಬಾರಿ ಉಪಚುನಾವಣೆಗಳು ನಡೆದಿವೆ. ಇನ್ನು, 4 ಮತ್ತು 15ನೆಯ ಲೋಕಸಭೆಗೆ ತಲಾ 3 ಬಾರಿ ಉಪಚುನಾವಣೆಗಳು ನಡೆದಿವೆ. 5 ಮತ್ತು 14ನೆಯ ಲೋಕಸಭೆಗೆ ತಲಾ 2 ಉಪಚುನಾವಣೆಗಳು ನಡೆದಿವೆ. (ಮತ್ತೆ ಕಣಕ್ಕಿಳಿದ ಎಚ್ಡಿಕೆ ಸಂಸದೀಯ ಸಾಧನೆ ಏನು?)
ದಾಖಲಾರ್ಹ ಸಂಗತಿಯೆಂದರೆ 1952, 1957, 1984, 1989, 1991 ಮತ್ತು 1996ರ ಲೋಕಸಭೆಗೆ ಒಂದೇ ಒಂದು ಉಪಚುನಾವಣೆಯೂ ನಡೆಯಲಿಲ್ಲ! 1980ರಲ್ಲಿ ಗುಲ್ಬರ್ಗಾ ಕ್ಷೇತ್ರದಿಂದ ಗೆಲುವು ಸಾಧಿಸಿದ್ದ ಎನ್ ಧರಂ ಸಿಂಗ್ ಅವರು ಜಯ ಸಾಧಿಸಿದ ಮರುಘಳಿಗೆಯಲ್ಲೇ ಸಂಸದನ ಸ್ಥಾನಕ್ಕೆ ರಾಜೀನಾಮೆ ನೀಡಿ, ಪಕ್ಷ ನಿಷ್ಠೆ ಮೆರೆದಿದ್ದರು.
ಹೆಚ್ಚು ಹೆಚ್ಚು ಉಪಚುನಾವಣೆಗಳನ್ನು ಕಂಡ ಕ್ಷೇತ್ರಗಳೆಂದರೆ ಮಂಡ್ಯ (3 ಬಾರಿ), ತುಮಕೂರು (2 ಬಾರಿ), ಗುಲ್ಬರ್ಗಾ (2 ಬಾರಿ) ಮತ್ತು ಚಿಕ್ಕಮಗಳೂರು (2 ಬಾರಿ). ಹಾಗೆಯೇ, ಬೀದರ್, ಬೆಂಗಳೂರು, ಬಿಜಾಪುರ, ಚಿಕ್ಕಬಳ್ಳಾಪುರ, ಶಿವಮೊಗ್ಗ, ಬೆಂಗಳೂರು ಗ್ರಾಮಾಂತರ ಮತ್ತು ಮಧುಗಿರಿ ಕ್ಷೇತ್ರಗಳಲ್ಲಿ ತಲಾ ಒಂದು ಬಾರಿ ಉಪಚುನಾವಣೆಗಳು ನಡೆದಿವೆ.
-
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Gold Rate Today: ಬೆಂಗಳೂರಿನಲ್ಲಿ ಚಿನ್ನದ ದರ ಮತ್ತೆ ಏರಿಕೆ: 15,000 ರೂಪಾಯಿ ಗಡಿ ದಾಟಿದ 24 ಕ್ಯಾರೆಟ್ ಚಿನ್ನ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
Rishab Shetty: ಅಧ್ಯಾಯ ಎರಡು ಇಲ್ಲಿಂದ ಶುರು; ಸ್ಯಾಂಡಲ್ವುಡ್ನಲ್ಲಿ ಸಂಚಲನ ಮೂಡಿಸಿದ ರಿಷಬ್ ಶೆಟ್ಟಿ ಪೋಸ್ಟ್ -
ಹೊಸತೊಡಕು: ಮಧ್ಯರಾತ್ರಿಯಿಂದಲೇ ಮಾಂಸ ಖರೀದಿ ಭರಾಟೆ, ಎಷ್ಟಿದೆ ಇಂದಿನ ಚಿಕನ್-ಮಟನ್ ದರ? -
World Happiness Report 2026: ಫಿನ್ಲೆಂಡ್ ಜಗತ್ತಿನ ಅತ್ಯಂತ ಸಂತೋಷದಾಯಕ ದೇಶ: ನಮ್ಮ ಭಾರತಕ್ಕೆ ಸಿಕ್ಕ ಸ್ಥಾನವೆಷ್ಟು? -
ಈ ಸಂವತ್ಸರಕ್ಕೇಕೆ ಈ ಹೆಸರು? ‘ಪರಾಭವ’ ಅಂದ್ರೆ ‘ಸೋಲು’ ಎಂಬ ಅರ್ಥವಲ್ಲವೇ? -
Rashmika Mandanna: ಮನೆಮಗಳಾಗಿ ಇಲ್ಲಿಗೆ ಬಂದೆ, ಈಗ ಸೊಸೆಯಾಗಿ ನಿಂತಿದ್ದೇನೆ: ರಶ್ಮಿಕಾ ಮಂದಣ್ಣ ಭಾವುಕ -
ಕೇಂದ್ರೀಯ ವಿದ್ಯಾಲಯ 1ನೇ ತರಗತಿ ಪ್ರವೇಶಾತಿ 2026: ಇಂದಿನಿಂದಲೇ ಅರ್ಜಿ ಸಲ್ಲಿಕೆ ಶುರು, ಪೋಷಕರೇ ಈಗಲೇ ಗಮನಿಸಿ












Click it and Unblock the Notifications