Get Updates
Get notified of breaking news, exclusive insights, and must-see stories!

ಬೆಂಗಳೂರು ಸೇರಿದಂತೆ ಮುಂದಿನ ಮೂರು ದಿನಗಳ ಕಾಲ ರಾಜ್ಯದಲ್ಲಿ ಸುರಿಯಲಿದೆ ಭಾರೀ ಮಳೆ- ಅಂಕಿಅಂಶ, ಮಾಹಿತಿ, ವಿವರ

ಬೆಂಗಳೂರು, ಸೆಪ್ಟೆಂಬರ್‌ 19: ಬೆಂಗಳೂರಿನ ಹಲವೆಡೆ ಸೋಮವಾರ ರಾತ್ರಿ ಮಳೆಯಾಗಿದ್ದು, ಮರುದಿನ ಬೆಳಗ್ಗೆ ರಸ್ತೆಗಳು ಜಲಾವೃತಗೊಂಡಿವೆ. ಮುಂದಿನ 24 ಗಂಟೆಗಳ ಕಾಲ ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿದ್ದು, ಮಳೆ ಅಥವಾ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಹವಾಮಾನ ಇಲಾಖೆ ಪ್ರಕಾರ, ಮೇಲ್ಮೈ ಗಾಳಿಯು ಪ್ರಬಲವಾಗುವ ಸಾಧ್ಯತೆಯಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 29 ಮತ್ತು 20 ಡಿಗ್ರಿ ಸೆಲ್ಸಿಯಸ್ ಆಗಿರಬಹುದು.

Heavy rain will fall in Karnataka including Bengaluru for the next three days - information, details

ಭಾರೀ ಮಳೆಯಿಂದಾಗಿ ಎಂಜಿ ರಸ್ತೆಯ ಕ್ವೀನ್ಸ್ ವೃತ್ತ, ವಿಂಡ್ಸರ್ ಮ್ಯಾನರ್ ಸೇತುವೆ, ಕಂಟೋನ್ಮೆಂಟ್ ರೈಲ್ವೆ ಕೆಳಸೇತುವೆ, ಶೇಷಾದ್ರಿಪುರದ ನೆಹರು ವೃತ್ತ, ಬಳ್ಳಾರಿ ರಸ್ತೆಯ ಬಿಡಿಎ ಜಂಕ್ಷನ್ ಮತ್ತು ಜಯಮಹಲ್‌ನ ಸಿಕ್ಯೂಎಎಲ್ ಕ್ರಾಸ್‌ನಲ್ಲಿ ಜಲಾವೃತವಾಗಿದೆ ಎಂದು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

ಎಚ್‌ಎಎಲ್ ವಿಮಾನ ನಿಲ್ದಾಣ ಸಂಚಾರ ಪೊಲೀಸರ ಪ್ರಕಾರ, ಕ್ರೋಮಾ ಸರ್ವಿಸ್ ರಸ್ತೆಯನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ ಎಂದು ಪ್ರಯಾಣಿಕರಿಗೆ ಸೂಚಿಸಲಾಗಿದೆ. ಜಲಾವೃತಗೊಂಡ ರಸ್ತೆಯ ದೃಶ್ಯಗಳನ್ನು ಹಂಚಿಕೊಂಡಿರುವ ಪೊಲೀಸರು, ಪ್ರಯಾಣಿಕರಿಗೆ ಪರ್ಯಾಯವಾಗಿ ಪಾಣತ್ತೂರು ರೈಲ್ವೆ ಕೆಳಸೇತುವೆಯನ್ನು ಬಳಸಲು ಮನವಿ ಮಾಡಿಕೊಂಡಿದ್ದಾರೆ.

ಚಾಮರಾಜಪೇಟೆ, ಮೆಜೆಸ್ಟಿಕ್, ಮಲ್ಲೇಶ್ವರಂ, ಗಾಂಧಿಬಜಾರ್, ಶ್ರೀರಾಂಪುರ ಸೇರಿದಂತೆ ನಗರದ ಹಲವೆಡೆ ಸೋಮವಾರ ಸಂಜೆ ಸುರಿಯಿತು. ಈ ಹಿನ್ನೆಲೆಯಲ್ಲಿ ಗಣೇಶ ಮೂರ್ತಿ ವಿಲೇವಾರಿ ಮಾಡಲು ಭಕ್ತರು ಪರದಾಡಿದ್ದಾರೆ. ಶ್ರೀರಾಂಪುರ ಬಳಿಯ ಅಂಡರ್‌ಪಾಸ್‌ ಜಲಾವೃತಗೊಂಡು ಪ್ರಯಾಣಿಕರಿಗೆ ತೀವ್ರ ತೊಂದರೆ ಆಗಿದೆ ಎಂದು ವರದಿಯಾಗಿದೆ.

Heavy rain will fall in Karnataka including Bengaluru for the next three days - information, details

ವರ್ತೂರಿನ ಬಳಗೆರೆ ಬಳಿಯ ಕ್ರೋಮ್ ಸರ್ವಿಸ್ ರಸ್ತೆಯ ಕೆಳಸೇತುವೆ ಜಲಾವೃತವಾಗಿದೆ. ಕ್ರೋಮಾ ಸರ್ವಿಸ್ ರಸ್ತೆಯನ್ನು ತಪ್ಪಿಸಿ, ಪರ್ಯಾಯವಾಗಿ ಪಾಣತ್ತೂರು ರಸ್ತೆಯನ್ನು ಬಳಸಲು ನಗರ ಸಂಚಾರ ಪೊಲೀಸರು ಪ್ರಯಾಣಿಕರಿಗೆ ಸೂಚಿಸಿದ್ದಾರೆ.

ಮುಂದಿನ 3 ದಿನಗಳ ಕಾಲ ಭಾರೀ ಮಳೆ

ಮಂಗಳವಾರ ಸಂಜೆಯಿಂದ ಬೆಂಗಳೂರಿನಲ್ಲಿ ಸಾಧಾರಣವಾಗಿರುವ ಸಾಧ್ಯತೆ ಇದೆ. ಮುಂದಿನ ಮೂರು ದಿನಗಳ ಕಾಲ ರಾಜ್ಯದ ಹಲವೆಡೆ ಭಾರೀ ಮಳೆಯಾಗಲಿದೆ ಎಂದು ಕರ್ನಾಟಕ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ, ದಕ್ಷಿಣ ಮತ್ತು ಉತ್ತರ ಒಳನಾಡಿನಲ್ಲಿ ಇಂದು ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಗಂಟೆಗೆ 30 ರಿಂದ 40 ಕಿಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ.

ನಿನ್ನೆ ಸುರಿದ ಮಳೆ ಪ್ರಮಾಣ

ಉತ್ತರ ಕನ್ನಡ: 70 ಮಿ.ಮೀ
ದಕ್ಷಿಣ ಕನ್ನಡ: 62 ಮಿ.ಮೀ
ಕೋಲಾರ: 60.5 ಮಿ.ಮೀ
ಬೆಂಗಳೂರು ನಗರ: 45 ಮಿ.ಮೀ
ರಾಮನಗರ: 40.5 ಮಿ.ಮೀ
ಬೆಳಗಾವಿ: 40.5 ಮಿ.ಮೀ
ಬೆಂಗಳೂರು ಗ್ರಾಮಾಂತರ: 36.5 ಮಿ.ಮೀ
ಮೈಸೂರು: 35 ಮಿ.ಮೀ
ಉಡುಪಿ: 35 ಮಿ.ಮೀ
ಮಂಡ್ಯ: 33 ಮಿ.ಮೀ
ಬಳ್ಳಾರಿ: 33 ಮಿ.ಮೀ
ಕೊಡಗು: 31 ಮಿ.ಮೀ
ಹಾಸನ: 26 ಮಿ.ಮೀ
ಚಿಕ್ಕಮಗಳೂರು: 25.5 ಮಿ.ಮೀ

Heavy rain will fall in Karnataka including Bengaluru for the next three days - information, details

ಹೆಚ್ಚು ಮಳೆ ಸುರಿದ ಪ್ರದೇಶಗಳು

ವಲ್ಗೋಲಿ, ಉತ್ತರ ಕನ್ನಡ: 70 ಮಿ.ಮೀ
ಖಾರ್ವಾ, ಉತ್ತರ ಕನ್ನಡ: 66.5 ಮಿಮೀ
ಮಂಕಿ-ಬಿ(ಅನಾಥವಾಡಿ), ಉತ್ತರ ಕನ್ನಡ: 63.5 ಮಿ.ಮೀ
ಸುಬ್ರಹ್ಮಣ್ಯ, ದಕ್ಷಿಣ ಕನ್ನಡ: 62 ಮಿ.ಮೀ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+