ಕೆಮ್ಮು, ನೆಗಡಿ, ಶೀತ, ಜ್ವರದಿಂದ ರಕ್ಷಣೆ ಆರೋಗ್ಯ ಇಲಾಖೆಯ ನಿಯಮ ಪಾಲಿಸಿ
ಬೆಂಗಳೂರು, ಡಿಸೆಂಬರ್ 12: 'ಮಾಂಡೌಸ್' ಚಂಡಮಾರುತದ ಪರಿಣಾಮ ಚಳಿ, ಮಳೆ, ತಂಪು ಗಾಳಿ ಬೀಸುವಿಕೆ ಹೆಚ್ಚಾಗಿದೆ. ಅನೇಕ ಕಡೆಗಳಲ್ಲಿ ಮಳೆಯು ಮುಂದುವರಿದ ಪರಿಣಾಮ ಜನರ ಆರೋಗ್ಯ ಹದಗೆಡುತ್ತಿದ್ದು, ಅನಾರೋಗ್ಯಕ್ಕೆ ತುತ್ತಾಗದಂತೆ ಆರೋಗ್ಯ ಇಲಾಖೆ ಕೆಲವು ಸಲಹೆಗಳನ್ನು ನೀಡಿದೆ.
ಮಾಂಡೌಸ್ ಚಂಡಮಾರುತ ಅಪ್ಪಳಿಸಿ ದುರ್ಬಲಗೊಂಡಿದೆ. ಬಂಗಾಳಕೊಲ್ಲಿಯಲ್ಲಿ ಮತ್ತೊಂದು ಚಂಡಮಾರುತ ಸೃಷ್ಟಿಯಾಗುವ ಸಾಧ್ಯತೆ ಇದೆ. ಹೀಗೆ ಮಳೆ, ಗಾಳಿ, ಚಳಿ ಹೆಚ್ಚಾಗುತ್ತಿದ್ದಂತೆ ಜನರಿಗೆ ಶೀತ, ಜ್ವರ ಇನ್ನಿತರ ಕಾರಣಗಳಿಂದ ಅನಾರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಅದರಲ್ಲೂ ಮಕ್ಕಳು, ಗರ್ಭಿಣಿಯರು, ವೃದ್ಧರಿಗೆ ಇಂತಹ ಅನಾರೋಗ್ಯ ಸಮಸ್ಯೆ ಹೆಚ್ಚು. ಈ ಕಾರಣಕ್ಕೆ ನಿಮ್ಮ ಕುಟುಂಬದ ಆರೋಗ್ಯ ದೃಷ್ಟಿಯಿಂದ ಹಲವು ಆರೋಗ್ಯ ಕ್ರಮ ಅನುಸರಿಸುವಂತೆ ರಾಜ್ಯ ಆರೋಗ್ಯ ಸೂಚಿಸಿದೆ.
ಆರೋಗ್ಯಕ್ಕಾಗಿ ಪಾಲಿಸಬೇಕಾದ ಅಂಶಗಳೇನು?
* ಸದಾ ಬೆಚ್ಚಗಿನ ನೀರು, ಸೂಪ್ ಕುಡಿಯಬೇಕು
* ಸುಲಭವಾಗಿ ಜೀರ್ಣವಾಗುವ ಮತ್ತು ಬಿಸಿ ಆಹಾರ ಪದಾರ್ಥ ಸೇವಿಸಬೇಕು.
* ಸಾಧ್ಯವಾದಷ್ಟು ಸ್ವೇಟರ್, ಸಾಕ್ಸ್, ಕೈಗವಸು ಸೇರಿದಂತೆ ಬೆಚ್ಚಿನ ಧಿರಿಸು ಧರಿಸಬೇಕು. ಮನೆಯಲ್ಲಿಯೂ ಬೆಚ್ಚಗಿರಬೇಕು.
* ಸ್ನಾನಕ್ಕೆ ಬಿಸಿ ನೀರು/ ಇಲ್ಲವೇ ತುಸು ಬೆಚ್ಚಗಿನ ನೀರು ಬಳಸಬೇಕು.
* ಅನಗತ್ಯ ಹೊರಗಿನ ಸಂಚಾರ ನಿಲ್ಲಿಸಬೇಕು.
* ಕಿವಿಗಳಿಗೆ ಸ್ಕಾರ್ಪ್ ಕಟ್ಟಿಕೊಳ್ಳುವುದು ಮತ್ತು ಹೊರ ಹೋಗುವಾಗ ಮಾಸ್ಕ್ ಧರಿಸಬೇಕು.
* ಕೆಮ್ಮು, ಶೀತ, ಜ್ವರ ಇರುವವರಿಂದ ದೂರವಿರಬೇಕು.

* ಸೀನುವಾಗ ಕರವಸ್ತ್ರ ಬಳಸಿ, ಇಲ್ಲವೇ ಕೈ, ಮೊಣಕೈ ಅಡ್ಡಿ ವಿಟ್ಟುಕೊಂಡು ಸೀನಬೇಕು.
* ಕೈಗಳನ್ನು ಆಗಾಗ ತೊಳೆಯಿರಿ. ಜ್ವರ, ಇನ್ನಿತರ ಖಾಯಿಲೆ ಲಕ್ಷಣ ಕಂಡು ಬಂದರೆ ಕೂಡಲೇ ಹತ್ತಿರದ ಆಸ್ಪತ್ರೆ ವೈದ್ಯರನ್ನು ಸಂಪರ್ಕಿಸಬೇಕು.
ಆರೋಗ್ಯಕ್ಕಾಗಿ ಮಾಡಬಾರದ ಕೆಲಸಗಳೇನು?
* ತಣ್ಣಗಿನ ಪಾನೀಯ, ನೀರು, ಐಸ್ಕ್ರೀಂ ಸೇವಿಸಬೇಡಿ
* ಮಳೆಯಲ್ಲಿ ನೆನೆಯುವುದು ಇಲ್ಲವೇ ಶೀತಗಾಳಿಗೆ ಮೈ ಒಡ್ಡುವುದನ್ನು ನಿಲ್ಲಿಸಬೇಕು.
* ಹೊರಗಿನ ಗಿರಿಧಾಮ ಇನ್ನಿತರ ಕಡೆಗಳಲ್ಲಿನ ಪ್ರವಾಸ ಆದಷ್ಟು ನಿರ್ಬಂಧಿಸಿ.
* ಮಸಾಲಯುಕ್ತ/ಜಂಕ್ ಫುಡ್ಗಳನ್ನು ಸೇವಿಸಬಾರದು ಎಂದು ಆರೋಗ್ಯ ಇಲಾಖೆ ತಿಳಿಸಿದೆ.
-
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ












Click it and Unblock the Notifications