ಬಿಎಸ್ವೈ ವಿರುದ್ಧದ ಪ್ರಕರಣ ರದ್ದು, ಸುಪ್ರೀಂಗೆ ಸರ್ಕಾರದ ಮೇಲ್ಮನವಿ?
ಬೆಂಗಳೂರು, ಏಪ್ರಿಲ್ 20 : ಕರ್ನಾಟಕ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ ಅವರ ವಿರುದ್ಧದ ಪ್ರಕರಣ ರದ್ದುಗೊಳಿಸಿದ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸರ್ಕಾರ ಸುಪ್ರೀಂಕೋರ್ಟ್ ಮೆಟ್ಟಿಲೇರುವ ಸಾಧ್ಯತೆ ಇದೆ. ಯಡಿಯೂರಪ್ಪ ಅವರ ವಿರುದ್ಧದ 4 ದೂರುಗಳನ್ನು ಹೈಕೋರ್ಟ್ ರದ್ದುಗೊಳಿಸಿತ್ತು.
ಕರ್ನಾಟಕ
ಹೈಕೋರ್ಟ್
2015ರ
ನವೆಂಬರ್
30
ರಂದು
ಯಡಿಯೂರಪ್ಪ
ಅವರ
ವಿರುದ್ಧದ
4
ಪ್ರಕರಣಗಳನ್ನು
ರದ್ದುಗೊಳಿಸಿ
ಆದೇಶ
ನೀಡಿತ್ತು.
ಸದ್ಯ,
ಸರ್ಕಾರ
ಈ
ತೀರ್ಪನ್ನು
ಸುಪ್ರೀಂಕೋರ್ಟ್ನಲ್ಲಿ
ಪ್ರಶ್ನಿಸಲು
ಸಿದ್ಧತೆ
ನಡೆಸುತ್ತಿದ್ದು,
ಕಾನೂನು
ತಜ್ಞರ
ಜೊತೆ
ಸಮಾಲೋಚನೆ
ನಡೆಸಿದೆ.
[ಯಡಿಯೂರಪ್ಪಗೆ
ರಿಲೀಫ್
:
4
ಪ್ರಕರಣ
ರದ್ದು]
ಪ್ರಕರಣದ ವಿವರ : 2010ರ ಜನವರಿ 22 ಮತ್ತು 24ರಂದು ವಕೀಲ ಸಿರಾಜಿನ್ ಬಾಷಾ ಅವರು ಯಡಿಯೂರಪ್ಪ ಅವರ ವಿರುದ್ಧ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ 4 ಖಾಸಗಿ ದೂರು ಸಲ್ಲಿಸಿದ್ದರು. 2011ರಲ್ಲಿ ರಾಜ್ಯಪಾಲರಾಗಿದ್ದ ಎಚ್.ಆರ್.ಭಾರದ್ವಾಜ್ ಅವರು ಯಡಿಯೂರಪ್ಪ ವಿರುದ್ಧ ತನಿಖೆಗೆ ಅನುಮತಿ ನೀಡಿದ್ದರು. [ಯಡಿಯೂರಪ್ಪಗೆ ರಿಲೀಫ್ ನೀಡಿದ ಪ್ರಕರಣಗಳು]
ಯಡಿಯೂರಪ್ಪ ಅವರು ಇದನ್ನು ಹೈಕೋರ್ಟ್ನಲ್ಲಿ ಪ್ರಶ್ನಿಸಿದ್ದರು. ಸಚಿವ ಸಂಪುಟದ ಶಿಫಾರಸು ಪಡೆಯದೇ ರಾಜ್ಯಪಾಲರು ಅನುಮತಿ ನೀಡುವಂತಿಲ್ಲ ಎಂದು ಹೇಳಿದ್ದ ಕೋರ್ಟ್, ತನಿಖೆಗೆ ನೀಡಿದ್ದ ಅನುಮತಿಯನ್ನು ರದ್ದುಗೊಳಿಸಿತ್ತು. ಇದರಿಂದಾಗಿ 4 ಪ್ರಕರಣಗಳು ರದ್ದಾಗಿದ್ದವು. [ಯಡಿಯೂರಪ್ಪ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲೇರಲಿದೆ ಸರ್ಕಾರ]
2ನೇ ಮೇಲ್ಮನವಿ : ಯಡಿಯೂರಪ್ಪ ಅವರ ವಿರುದ್ಧದ 15 ಪ್ರಕರಣಗಳನ್ನು ರದ್ದುಗೊಳಿಸಿರುವ ಕರ್ನಾಟಕ ಹೈಕೋರ್ಟ್ ತೀರ್ಪನ್ನು ಸುಪ್ರೀಂಕೋರ್ಟ್ನಲ್ಲಿ ಪ್ರಶ್ನಿಸಲು ಸರ್ಕಾರ ಸಿದ್ಧತೆ ನಡೆಸಿದೆ ಎಂಬ ಮಾಹಿತಿ ಕಳೆದ ವಾರ ಬಹಿರಂಗವಾಗಿತ್ತು.
2016ರ ಜನವರಿ 5ರಂದು ಕರ್ನಾಟಕ ಹೈಕೋರ್ಟ್ನ ನ್ಯಾಯಮೂರ್ತಿ ರತ್ನಕಲಾ ಅವರ ಏಕಸದಸ್ಯ ಪೀಠ, 2015ರ ಜೂನ್ 19 ರಿಂದ 27ರ ತನಕ ಲೋಕಾಯುಕ್ತ ಪೊಲೀಸರು ಅಕ್ರಮ ಡಿನೋಟಿಫಿಕೇಷನ್ ಪ್ರಕರಣದಲ್ಲಿ ಯಡಿಯೂರಪ್ಪ ಅವರ ವಿರುದ್ದ ದಾಖಲಿಸಿದ್ದ 15 ಎಫ್ಐಆರ್ಗಳನ್ನು ರದ್ದುಪಡಿಸಿದ್ದರು.
15 ಪ್ರಕರಣಗಳ ತೀರ್ಪು ಮತ್ತು 4 ಪ್ರಕರಣ ರದ್ದುಗೊಳಿಸಿರುವ ತೀರ್ಪನ್ನು ಸುಪ್ರೀಂಕೋರ್ಟ್ನಲ್ಲಿ ಸರ್ಕಾರ ಪ್ರಶ್ನಿಸುವ ಸಾಧ್ಯತೆ ಇದೆ. ಯಡಿಯೂರಪ್ಪ ಅವರು ಬಿಜೆಪಿ ರಾಜ್ಯಾಧ್ಯಕ್ಷರಾಗುತ್ತಿದ್ದಂತೆ ಮೇಲ್ಮನವಿ ಸಲ್ಲಿಸಲಾಗುತ್ತಿದೆ. ಇದು ದ್ವೇಷದ ರಾಜಕಾರಣವೇ?.