ಹಾಸನ ಲೋಕಸಭಾ ಕ್ಷೇತ್ರ, ಯಾರು ಏನು ಎತ್ತ?
ಅರಕಲಗೂಡು, ಮಾ. 11 : ಶಕ್ತಿ ರಾಜಕಾರಣಕ್ಕೆ ಹೆಸರಾಗಿದ್ದು ಹಾಸನ ಜಿಲ್ಲೆ. ಜಿಲ್ಲೆಯಲ್ಲಿ ಹೇಮಾವತಿ, ಯಗಚಿ, ಕಾವೇರಿ ಹೊಳೆ ಸಾಕಷ್ಟು ನೀರು ಹರಿದಿದೆ. ಅದೇ ರೀತಿ ಜಿಲ್ಲೆಯಿಂದ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಗುರುತು ಮಾಡಬಹುದಾದ ರಾಜಕಾರಣಿಗಳನ್ನ ಕೊಟ್ಟಿದೆ. ಸಾಂಸ್ಕೃತಿಕವಾಗಿ ಮತ್ತು ಸಾಹಿತ್ಯಿಕ ಕ್ಷೇತ್ರದಲ್ಲಿಯೂ ಹಾಸನ ಸಾಕಷ್ಟು ಹೆಸರು ಮಾಡಿದೆ. ಆದಾಗ್ಯೂ ಹಾಸನ ಎಂದಾಕ್ಷಣ ನೆನಪಾಗುವುದು ರಾಜಕಾರಣಕ್ಕೆ!
ಹೊಳೆನರಸೀಪುರದ ಎಚ್ ಡಿ ದೇವೇಗೌಡ ರಾಜ್ಯದ ಸಂಸದರಾಗಿ, ಶಾಸಕರಾಗಿ, ಮುಖ್ಯಮಂತ್ರಿಯಾಗಿ, ದೇಶದ ಅತ್ಯುನ್ನತ ಹುದ್ದೆ ಪ್ರದಾನಿ ಪಟ್ಟಕ್ಕೇರಿದ ಮೇಲೆ ಇಲ್ಲಿ ಅವರು ಸಾಗಿದ್ದೇ ಹಾದಿ, ಆನೆ ನಡೆದದ್ದೇ ಹಾದಿಯೆಂಬಂತೆ. ಗೌಡರ ರಾಜಕಾರಣವನ್ನು ಪ್ರಶ್ನಿಸಿ ನಿಂತವರು ಕಡಿಮೆಯೇ ಜಿಲ್ಲೆಯಲ್ಲಿ. ದಿವಂಗತ ಪುಟ್ಟಸ್ವಾಮಿಗೌಡ ಒಬ್ಬರನ್ನು ಬಿಟ್ಟರೆ ದೇವೇಗೌಡರಿಗೆ ಸೋಲುಣಿಸಿದ ಮತ್ತೊಬ್ಬ ಧೀರ ಜಿಲ್ಲೆಯಲ್ಲಿ ಬರಲಿಲ್ಲವೆನ್ನಬಹುದು. ಪುಟ್ಟಸ್ವಾಮಿಗೌಡರ ನಿಧನಾನಂತರ ಜಿಲ್ಲೆಯಲ್ಲಿ ದೇವೇಗೌಡ ಮತ್ತು ಅವರ ಪುತ್ರ ರೇವಣ್ಣ ದರ್ಬಾರಿಗೆ ಎದುರಾಡಿದವರಿಲ್ಲ ಎನ್ನಬಹುದು.

ಪಕ್ಷದೊಳಗೆ ಗುಸು ಗುಸು ಇತ್ತಾದರೂ ಎದುರಿಸಲಾರದೇ ಪಕ್ಷ ಬಿಟ್ಟು ಹೋದರೇ ವಿನಃ ಯಾರೂ ಚಕಾರವೆತ್ತಲಿಲ್ಲವೆನ್ನಿ. ಅಷ್ಟೇ ಏಕೆ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಮತ್ತು ಕಾಂಗ್ರೆಸ್ ಸರ್ಕಾರದಿಂದ ಜಿಲ್ಲೆಗೆ ಉಸ್ತುವಾರಿ ಮಂತ್ರಿಗಳಾದವರೂ ಸಹ ಗೌಡರನ್ನು ಹೊಗಳಿ ಅಟ್ಟಕ್ಕೇರಿಸಿದರೆ ವಿನಃ ಎದುರು ಹಾಕಿಕೊಳ್ಳುವ ಧೈರ್ಯ ತೋರಲಿಲ್ಲ. ದೇವೇಗೌಡ ಮತ್ತು ರೇವಣ್ಣ ಇಚ್ಛಾಶಕ್ತಿಯುಳ್ಳ ರಾಜಕಾರಣಿಗಳು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಅದು ಜಿಲ್ಲೆಯ ಜನತೆಗೆ ಎಷ್ಟರ ಮಟ್ಟಿಗೆ ಅನುಕೂಲವಾಗಿದೆ? ಇದು ಎಲ್ಲರಿಗೂ ತಿಳಿದ ಸಂಗತಿ. ಹಾಗೆಯೇ ಜಿಲ್ಲೆಯ ಶಕ್ತಿಯ ತವರು ಹೊಳೆನರಸೀಪುರ ಎಂಬುದರಲ್ಲಿಯೂ ಎರಡು ಮಾತಿಲ್ಲ!
ಯಾರು ಯಾವ ಪಕ್ಷದಿಂದ? : ಇದೀಗ ಅಂತಹ ಶಕ್ತಿ ಕೇಂದ್ರಕ್ಕೆ ಪೆಟ್ಟು ಕೊಡುವ ದಿಸೆಯಲ್ಲಿ ರೆಬೆಲ್ ಖ್ಯಾತಿಯ ಅರಕಲಗೂಡು ಶಾಸಕ ಎ ಮಂಜುವನ್ನು ದೆಹಲಿ ಹೈಕಮಾಂಡ್ ಲೋಕಸಭಾ ಚುನಾವಣಾ ಕಣಕ್ಕೆ ಇಳಿಸಿದೆ. ಅದೇ ರೀತಿ ಬಿಜೆಪಿಯ ಸಂಭಾವ್ಯರ ಪಟ್ಟಿಯಲ್ಲಿರುವ ಅರಕಲಗೂಡು ತಾಲೂಕಿನ ಮರಡಿ ಗ್ರಾಮದವರಾದ ನಿವೃತ್ತ ಇಂಜಿನಿಯರ್ ಮರಡಿ ಸೋಮಶೇಖರ್ ಕಣಕ್ಕಿಳಿಯುವ ನಿರೀಕ್ಷೆಯಿದೆ. ಬೆಂಗಳೂರು ಗ್ರಾಮಾಂತರದ ಮೇಲೆ ಎಚ್ ಡಿ ದೇವೇಗೌಡ ಕಣ್ಣಿಟ್ಟಿದ್ದರೂ ಹಾಸನದಿಂದಲೇ ಸ್ಪರ್ಧಿಸಲು ನಿರ್ಧರಿಸಿದ್ದರಿಂದ, ಅರಕಲಗೂಡು ಶಾಸಕ ಎ ಟಿ ರಾಮಸ್ವಾಮಿಯವರು ಈ ಬಾರಿ ಅವಕಾಶ ಕಳೆದುಕೊಂಡಿದ್ದಾರೆ. ಹಾಗೆಯೇ ಬಹುಜನ ಸಮಾಜ ಪಕ್ಷದಿಂದ ಜಿಲ್ಲಾಧ್ಯಕ್ಷರಾಗಿರುವ ಅರಕಲಗೂಡಿನ ಬಿ ಸಿ ರಾಜೇಶ್ ಅಭ್ಯರ್ಥಿಯಾಗುವುದು ನಿಕ್ಕಿಯಾಗುತ್ತಿದೆ. [ಜೆಡಿಎಸ್ ಮೊದಲ ಪಟ್ಟಿ]
ಈ ಲೋಕಸಭೆ ಕ್ಷೇತ್ರದಲ್ಲಿ 8 ವಿಧಾನಸಭೆ ಕ್ಷೇತ್ರಗಳಿದ್ದು, ಒಂದು ಭಾಗ ಚಿಕ್ಕಮಗಳೂರಿನ ಕಡೂರನ್ನು ಒಳಗೊಂಡಿದೆ. ಶ್ರವಣಬೆಳಗೊಳ, ಅರಸಿಕೆರೆ, ಬೇಲೂರು, ಹಾಸನ, ಹೊಳೆನರಸೀಪುರ, ಅರಕಲಗೂಡು, ಸಕಲೇಶಪುರ ಇವು ಇತರ ವಿಧಾನಸಭೆ ಕ್ಷೇತ್ರಗಳು. ಕಳೆದ ಬಾರಿಯ (2009) ಚುನಾವಣೆಯಲ್ಲಿ 80 ವರ್ಷದ ಎಚ್ ಡಿ ದೇವೇಗೌಡರು (496,429) ತಮ್ಮ ಪ್ರತಿಸ್ಪರ್ಧಿ ಬಿಜೆಪಿಯ ಕೆ.ಎಚ್. ಹನುಮೇಗೌಡರನ್ನು (205,316) 2.9 ಲಕ್ಷ ಮತಗಳ ಅಂತರದಿಂದ ಸೋಲಿಸಿದ್ದರು. [ಅಂಕಿಅಂಶ : ಇಂಡಿಯಾವೋಟ್ಸ್]
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications