'ಕಸ ಹಾಕಿ ಗೊರೂರನ್ನು ಮಂಡೂರು ಮಾಡಬೇಡಿ'
ರಾಮನಗರ, ನ.28 : ಮಾಗಡಿ ತಾಲೂಕಿನ ಗೊರೂರಿನಲ್ಲಿ ಕಸ ವಿಲೇವಾರಿ ಘಟಕ ಸ್ಥಾಪನೆಗೆ ಸರ್ವೆ ಮಾಡಲು ಗ್ರಾಮಸ್ಥರು ಅಡ್ಡಿ ಪಡಿಸುತ್ತಿದ್ದು, ಭಾರೀ ಪ್ರತಿಭಟನೆ ನಡೆಯುತ್ತಿದೆ. ಪ್ರತಿಭಟನೆ ವೇಳೆ ಮೂವರು ಅಸ್ವಸ್ಥಗೊಂಡಿದ್ದು, ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಗ್ರಾಮಸ್ಥರು ಬೆದರಿಕೆ ಹಾಕುತ್ತಿದ್ದಾರೆ.
ಮಾಗಡಿ
ತಾಲೂಕಿನ
ಗೊರೂರಿನ
45
ಎಕರೆ
ಪ್ರದೇಶದಲ್ಲಿ
ಬೃಹತ್
ಬೆಂಗಳೂರು
ಮಹಾನಗರ
ಪಾಲಿಕೆ
(ಬಿಬಿಎಂಪಿ)
ತ್ಯಾಜ್ಯ
ವಿಲೇವಾರಿ
ಘಟಕ
ನಿರ್ಮಾಣ
ಮಾಡಲು
ಚಿಂತನೆ
ನಡೆಸಿದೆ.
ಟೈರ್ಗಳಿಗೆ
ಬೆಂಕಿ
ಹಚ್ಚಿ
ಗ್ರಾಮಸ್ಥರು
ಬಿಬಿಎಂಪಿ
ಮತ್ತು
ಸರ್ಕಾರದ
ವಿರುದ್ಧ
ಘೋಷಣೆಗಳನ್ನು
ಕೂಗುತ್ತಿದ್ದು,
ಇಲ್ಲಿ
ಘಟಕ
ನಿರ್ಮಿಸಬಾರದು
ಎಂದು
ಒತ್ತಾಯಿಸುತ್ತಿದ್ದಾರೆ.
[ಬೆಂಗಳೂರು
ಕಸಕ್ಕೆ
ಮಾಗಡಿ
ಗ್ರಾಮಸ್ಥರ
ವಿರೋಧ]
ಬಂಡೆಮಠದ ಬಸವಲಿಂಗ ಸ್ವಾಮೀಜಿ ನೇತೃತ್ವದಲ್ಲಿ ಗ್ರಾಮಸ್ಥರು ಧರಣಿ ನಡೆಸುತ್ತಿದ್ದಾರೆ. ಇಂದು ಸ್ಥಳದಲ್ಲಿ ಸರ್ವೆ ನಡೆಸಲು ತಹಶೀಲ್ದಾರ್ ಶಿವಕುಮಾರ್ ನೇತೃತ್ವದ ಅಧಿಕಾರಿಗಳು ಆಗಮಿಸಲಿದ್ದು, ಇದನ್ನು ವಿರೋಧಿಸಿ ಬೃಹತ್ ಪ್ರತಿಭಟನೆ ನಡೆಯುತ್ತಿದೆ. [ಮಂಡೂರಿಗೆ ಕಸ ವಿಲೇವಾರಿ ಸ್ಥಗಿತ]
ಸರ್ವೆ ಮಾಡುವವರು ಗ್ರಾಮಕ್ಕೆ ಆಗಮಿಸದಂತೆ ಗ್ರಾಮಸ್ಥರು ರಸ್ತೆಯಲ್ಲಿ ಮಲಗಿ, ಟೈರ್ಗಳಿಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನೆ ವೇಳೆ ಮೂವರು ಅಸ್ವಸ್ಥಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಪೊಲೀಸರು ಪರಿಸ್ಥಿತಿ ತಿಳಿಗೊಳಿಸಲು ಲಘು ಲಾಠಿ ಪ್ರಹಾರ ನಡೆಸಿದ್ದಾರೆ.
ಪೊಲೀಸರು ಬಂಡೆಮಠದ ಬಸವಲಿಂಗ ಸ್ವಾಮೀಜಿ ಸೇರಿದಂತೆ ಹಲವು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಅ.30ರಂದು ಗೊರೂರಿನಲ್ಲಿ ಸರ್ವೆಗೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದರು, ಪರಿಸ್ಥಿತಿ ವಿಕೋಪಕ್ಕೆ ಹೋದ ಹಿನ್ನಲೆಯಲ್ಲಿ ಅಧಿಕಾರಿಗಳು ಸ್ಥಳದಿಂದ ವಾಪಸ್ ಆಗಿದ್ದರು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮಂಡೂರು ಜನರಿಗೆ ಕೊಟ್ಟ ಮಾತಿನಂತೆ ಮಂಡೂರು ಘಟಕಕ್ಕೆ ಕಸ ವಿಲೇವಾರಿ ಮಾಡುವುದನ್ನು ಸ್ಥಗಿತಗೊಳಿಸಿದೆ. ಆದ್ದರಿಂದ ಬೇರೆ ಘಟಕ ನಿರ್ಮಾಣ ಮಾಡಲು ಮುಂದಾಗಿದ್ದು ಅದಕ್ಕಾಗಿ ಗೊರೂರಿನಲ್ಲಿ ಸ್ಥಳ ಗುರುತಿಸಿದೆ.