ಚಿಕ್ಕಮಗಳೂರಿನಲ್ಲಿ ನಿಲ್ಲದ ಕಾಡ್ಗಿಚ್ಚಿನ ಅಬ್ಬರ
ಚಿಕ್ಕಮಗಳೂರು, ಮಾರ್ಚ್ 13: ಚಿಕ್ಕಮಗಳೂರಿನಲ್ಲಿ ಕಾಡ್ಗಿಚ್ಚಿನ ಅಬ್ಬರ ಮುಂದುವರೆದಿದೆ, ನಿನ್ನೆ ರಾತ್ರಿ ಕೊಪ್ಪ ತಾಲೂಕಿನ ಸಂಸೆ ಬಳಿ ಕಾಡಿಗೆ ಬೆಂಕಿ ಬಿದ್ದಿದೆ.
40 ವರ್ಷಗಳ ಕಾಲ ಸೊಂಪಾಗಿ ಬೆಳೆದಿದ್ದ ದಟ್ಟ ಅರಣ್ಯ ಕೆಲವೇ ಗಂಟೆಗಳಲ್ಲಿ ಬೆಂಕಿಗೆ ಆಹುತಿಯಾಗಿ ಅಪಾರ ಅರಣ್ಯ ಸಂಪತ್ತು ನಾಶವಾಗಿದೆ.
ಹೊನ್ನೆ, ಬೀಟೆ, ತೇಗ, ನಂದಿ ಸೇರಿದಂತೆ ಇನ್ನೂ ಹಲವು ಬೆಳೆ ಬಾಳುವ ಮರಗಳು ಹಾಗೂ ಅಪರೂಪದ ಸಸ್ಯರಾಶಿ ಬೆಂಕಿಯಲ್ಲಿ ಉರಿದು ಬೂದಿ ಆಗಿದೆ. ರಾತ್ರಿ ಇಡೀ ಅರಣ್ಯ ಉರಿದರು ಸ್ಥಳಕ್ಕೆ ಅರಣ್ಯ ಸಿಬ್ಬಂದಿ ಬರಲೇ ಇಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಅರಣ್ಯಾಧಿಕಾರಿಗಳು ಸಮಯಕ್ಕೆ ಬಂದಿದ್ದರೆ ಹೆಚ್ಚು ನಷ್ಟವಾಗದಂತೆ ತಡೆಯುವ ಅಭವ ಇತ್ತು ಎಂದು ಸ್ಥಳೀಯರು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.












Click it and Unblock the Notifications