Get Updates
Get notified of breaking news, exclusive insights, and must-see stories!

Elephant Arjuna: ಗುಂಡು ತಗುಲಿ ಅರ್ಜುನ ಆನೆ ಸಾವು? ಸ್ಪಷ್ಟನೆ ಕೊಟ್ಟ ಪಶು ವೈದ್ಯಾಧಿಕಾರಿ

ಮೈಸೂರು ದಸರಾ ಅಂಬಾರಿ ಹೊರುತ್ತಿದ್ದ ಅರ್ಜುನ ಆನೆ ಕಾಡಾನೆ ಹಿಡಿಯುವ ಕಾರ್ಯಾಚರಣೆ ವೇಳೆ ಸಾವನ್ನಪ್ಪಿದ್ದು, ಹಲವು ವಿವಾದಗಳನ್ನು ಹುಟ್ಟು ಹಾಕಿದೆ. ವಯಸ್ಸಾದ ಆನೆಯನ್ನು ಕಾರ್ಯಾಚರಣೆಗೆ ಬಳಸಿದ್ದು ತಪ್ಪು ಎಂದು ಕೆಲವರು ಹೇಳಿದ್ದರು, ಆದರೆ ಅರ್ಜುನನಿಗೆ ಗುಂಡು ತಗುಲಿ ಸಾವನ್ನಪ್ಪಿದೆ ಎಂದು ಮತ್ತೊಂದು ಆರೋಪ ಕೇಳಿಬಂದಿತ್ತು.

ಅರ್ಜುನನ ಸಾವಿಗೆ ನ್ಯಾಯ ಕೊಡಬೇಕು, ಅರಣ್ಯ ಇಲಾಖೆ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಲಾಗಿತ್ತು. ಆನೆ ಹಿಡಿಯುವ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಪಶು ವೈದ್ಯಾಧಿಕಾರಿ ಈಗ ಅರ್ಜುನ ಆನೆ ಸಾವಿನ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

Elephant Arjuna

ಯಸ್ಲೂರು ಅರಣ್ಯ ವ್ಯಾಪ್ತಿಯಲ್ಲಿ ಆನೆ ಹಿಡಿಯುವ ಕಾರ್ಯಾಚರಣೆಯಲ್ಲಿ ತೊಡಗಿದ್ದ ಪಶು ವೈದ್ಯಾಧಿಕಾರಿ ಎಚ್.ರಮೇಶ್ ಅವರು ಸ್ಪಷ್ಟನೆ ನೀಡಿದ್ದು, ಕಾಡಾನೆಗಳ ಕಾದಾಟದಲ್ಲಿ ಅರ್ಜುನ ಗಾಯಗೊಂಡು ಸಾವನ್ನಪ್ಪಿದೆ, ಯಾವುದೇ ಗುಂಡಿನ ಗಾಯವಾಗಿಲ್ಲ ಎಂದು ಹೇಳಿದ್ದಾರೆ.

ಪಶು ವೈದ್ಯರು ಹೇಳಿದ್ದೇನು?

ಕಳೆದ ಐದೂವರೆ ವರ್ಷದಿಂದ ಅರಣ್ಯ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಡಾ.ರಮೇಶ್ ಅವರು ಆನೆ ಸೆರೆ ಕಾರ್ಯಾಚರಣೆ ವೇಳೆ ಅರ್ಜುನನ ಸಾವಿಗೆ ಕಾರಣವಾದ ಘಟನೆಯ ಕುರಿತು ಭಾನುವಾರ ಮಾಧ್ಯಮಗಳ ಜೊತೆ ಮಾತನಾಡಿದರು. ಅನೇಕ ವರದಿಗಳು ಆನೆಯು ಬುಲೆಟ್ ಗಾಯಗಳಿಂದ ಸಾವನ್ನಪ್ಪಿದೆ ಎಂದು ಹೇಳಲಾಗಿತ್ತು. ಈ ಬಗ್ಗೆ ಅವರು ಸ್ಪಷ್ಟನೆ ನೀಡಿದರು.

"ನಾನು, ಅರ್ಜುನ ಆನೆ ಮಾವುತ ವಿನು, ಭೀಮ ಹೆಸರಿನ ಆನೆ ಮಾವುತ ಮೂವರು ಅರ್ಜುನನ ಮೇಲೆ ಕುಳಿತಿದ್ದೆವು. ಪ್ರಶಾಂತ್ ಎನ್ನುವ ಆನೆ ಮೇಲೆ ಕೊಡಗಿನ ಅರಣ್ಯಾಧಿಕಾರಿ ರಂಜನ್ ಇದ್ದರು. ಸೆರೆಹಿಡಿಯಲು ವಿಕ್ರಾಂತ್ ಎಂಬ ಹೆಸರಿನ ಆನೆಯನ್ನು ಗುರಿಯಾಗಿಸಿಕೊಂಡು ಸೆರೆ ಹಿಡಿಯಲು ಕಾರ್ಯಾಚರಣೆ ನಡೆಯುತ್ತಿತ್ತು ಎಂದರು.

ಒಬ್ಬ ವೈದ್ಯನಾಗಿ, ನಾನು ಎರಡು ಪ್ರಾಣಿಗಳಿಗೆ ಎರಡು ಪ್ರತ್ಯೇಕ ಡೋಸ್ ಟ್ರ್ಯಾಂಕ್ವಿಲೈಜರ್ ಅನ್ನು ಸಿದ್ಧಪಡಿಸಿದೆ, ಪ್ರತಿ ಆನೆಯ ತೂಕವನ್ನು ಪರಿಗಣಿಸಿ. ನಾನು ಡಾರ್ಟ್ ಗನ್‌ಗೆ ಲೋಡ್ ಮಾಡಿದ ಒಂದು ಡೋಸ್ ಟ್ರ್ಯಾಂಕ್ವಿಲೈಜರ್ ಅನ್ನು ಒಯ್ಯುತ್ತಿದ್ದೆ. ಲಂಟಾನ ಹೆಚ್ಚಾಗಿ ಬೆಳೆದ ಕಾರಣ ಎದುರಾದ ಆನೆ ಮುಖ ಸರಿಯಾಗಿ ಕಾಣಲಿಲ್ಲ. ಆನೆ ಹಿಂಬದಿಯಿಂದ ಕಂಡ ಕಾರಣ ಅದನ್ನು ಸಣ್ಣ ಆನೆ ಎಂದು ಭಾವಿಸಿದ್ದೆವು. ಅದು ದೊಡ್ಡ ಆನೆ ಎಂದು ಖಚಿತವಾದಾಗ ಅದನ್ನು ಡಾರ್ಟ್ ಮಾಡುವ ಬಗ್ಗೆ ರಂಜನ್ ಮತ್ತು ನಾವು ಮಾತನಾಡಿಕೊಂಡೆವು.

ನಾನು ಅರವಳಿಕೆ ಮದ್ದು ಸಿದ್ಧಮಾಡಿಕೊಂಡೆ, ಆದರೆ ಆನೆ ಏಕಾಏಕಿ ದಾಳಿ ಮಾಡಿತು. ಅದು ಎದುರಾಗಿ ಬಂದ ಕಾರಣ ಮುಖಕ್ಕೆ ಡಾಟ್ ಮಾಡಲು ಆಗಲಿಲ್ಲ, ಆನೆಯ ಮುಖದ ಭಾಗಕ್ಕೆ ಅರವಳಿಕೆ ಮದ್ದು ನೀಡಲು ಆಗಲ್ಲ, ಅಕಸ್ಮಾತ್ ಹಾಗೆ ಮಾಡಿದರೆ ಆನೆ ಜೀವಕ್ಕೆ ಅಪಾಯ ಉಂಟಾಗುತ್ತದೆ. ಅರ್ಜುನನ ಮೇಲೆ ದಾಳಿ ಮಾಡಿದಾಗ ನಾವು ಕೆಳಗೆ ಬೀಳುವಂತೆ ಆಯಿತು, ಈ ವೇಲೆ ನನ್ನ ಕೈಯಲ್ಲಿದ್ದ ಅರವಳಿಕೆ ಟ್ರಿಗರ್ ಆಗಿ ಫೈರ್ ಆಯಿತು, ಅದು ಗಾಳಿಯಲ್ಲಿ ಮೇಲೆ ಹಾರಿ ಕಾರ್ಯಾಚರಣೆಯಲ್ಲಿ ತೊಡಗಿದ್ದ ಮತ್ತೊಂದು ಆನೆ ಪ್ರಶಾಂತ ಮೇಲೆ ಬಿದ್ದಿತು ಎಂದು ಅವರು ಹೇಳಿದರು.

ನಮ್ಮನ್ನೆಲ್ಲಾ ಉಳಿಸಿ ಆತ ಪ್ರಾಣ ಬಿಟ್ಟ

ಪ್ರಶಾಂತ್‌ಗೆ ಅರವಳಿಕೆ ಮದ್ದು ಹಾರಿಸಿರುವ ಬಗ್ಗೆ ತಿಳಿಯುತ್ತಿದ್ದಂತೆ ಆನೆ ಕಡೆ ಬಂದು ಅದರ ಪರಿಣಾಮ ಕಡಿಮೆ ಮಾಡಲು ಔಷಧ ನೀಡಲು ಮುಂದಾದರು. ಅರ್ಜುನನ ಮಾವುತ ವಿನು ಕೂಡ ಅವನೊಂದಿಗೆ ಸೇರಿಕೊಂಡನು. "ಕೆಲವೇ ಸೆಕೆಂಡುಗಳಲ್ಲಿ ಪ್ರಶಾಂತ ಆನೆ ಚೇತರಿಸಿಕೊಂಡಿತು, ಆದರೆ, ಮತ್ತೊಂದೆಡೆ, ಕಾಡು ಆನೆ ಮತ್ತೆ ಅರ್ಜುನನೊಂದಿಗೆ ಕಾಳಗಕ್ಕೆ ಮರಳಿತ್ತು. ಈ ಸಮಯದಲ್ಲಿ, ನಾನು ಕಾಡು ಆನೆಯನ್ನು ಶಾಂತಗೊಳಿಸಲು ಮತ್ತೊಂದು ಡಾರ್ಟ್ ಅನ್ನು ಹಾರಿಸಿದೆ. ಆದರೆ, ಅದು ಯಶಸ್ವಿಯಾಗಲಿಲ್ಲ. ಅರ್ಜುನ ನಮ್ಮ ಜೀವ ಉಳಿಸಿ ಆತ ಜೀವ ಕಳೆದುಕೊಂಡ" ಎಂದರು.

ಈ ಸಂದರ್ಭದಲ್ಲಿ ಅರ್ಜುನನ ಮೇಲೆ ಗುಂಡು ಹಾರಿಸುವ ಯಾವುದೇ ಅವಕಾಶವಿಲ್ಲ ಎಂದು ಪಶುವೈದ್ಯರು ತಿಳಿಸಿದ್ದಾರೆ. "ನಾವು ಗುಂಡುಗಳನ್ನು ಹಾರಿಸಬಹುದಾದ ಬಂದೂಕನ್ನು ಮಾತ್ರ ಒಯ್ಯುತ್ತಿದ್ದೆವು. ಇದು ಆನೆಗಳನ್ನು ಕೊಲ್ಲುವುದಿಲ್ಲ. ಮತ್ತು ಯಾರೂ ಗುಂಡು ಹಾರಿಸಲಿಲ್ಲ. ಅರ್ಜುನನಿಗೆ ಗುಂಡು ತಗುಲಿರಲಿಲ್ಲ," ಎಂದು ಹೇಳಿದರು.

"ಅರ್ಜುನನ ಸಾವಿನಿಂದ ನನಗೂ ತುಂಬಾ ನೋವಾಗಿದೆ. ದಸರಾ ಆಚರಣೆಯಲ್ಲಿ ಜನರು ಅರ್ಜುನನನ್ನು ನೋಡುತ್ತಿದ್ದರೆ, ನಾವು ಪ್ರತಿದಿನ ಆನೆಗಳೊಂದಿಗೆ ವಾಸಿಸುತ್ತೇವೆ. ನಾವು ಅನುಭವಿಸುತ್ತಿರುವ ನಷ್ಟವನ್ನು ಪದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಿಲ್ಲ" ಎಂದು ಅವರು ಭಾವುಕರಾದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+