Get Updates
Get notified of breaking news, exclusive insights, and must-see stories!

ಚುನಾವಣಾ ಸಿಬ್ಬಂದಿ ಕ್ಷೇಮಾಭಿವೃದ್ಧಿ ನೀತಿ ಪ್ರಕಟ!

ಬೆಂಗಳೂರು, ಮೇ 10: ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಸಿಬ್ಬಂದಿ ತುರ್ತು ಪರಿಸ್ಥಿತಿಯಲ್ಲಿ ಎದುರಿಸಬಹುದಾದ ಪರಿಸ್ಥಿತಿಗಳ ಕುರಿತು ಕೇಂದ್ರ ಚುನಾವಣಾ ಆಯೋಗ ತನ್ನ ನೀತಿಯನ್ನು ಪ್ರಕಟಿಸಿದೆ.

ಚುನಾವಣಾ ಕರ್ತವ್ಯದಲ್ಲಿರುವ ಅಧಿಕಾರಿಯು ನಿಧನ ಹೊಂದಿದ ಸಂದರ್ಭದಲ್ಲಿ ಆ ಅಧಿಕಾರಿಯ ಹತ್ತಿರದ ರಕ್ತ ಸಂಬಂಧಿಗೆ 10 ಲಕ್ಷ ರೂಗಳನ್ನು ಸಂದಾಯ ಮಾಡಬೇಕು. ಮರಣವು ಯಾವುದೇ ಹಿಂಸಾತ್ಮಕ ಚಟುವಟಿಕೆ, ಉಗ್ರಗಾಮಿಗಳು ಅಥವಾ ಪ್ರಕೃತಿ ವಿಕೋಪ, ಬಾಂಬ್ ಶಸ್ತ್ರಗಳ ದಾಳಿ, ಸಮಾಜ-ಘಾತುಕ ಅಂಶಗಳಿಂದ ಸಂಭಂವಿಸಿದ್ದಲ್ಲಿ, ಪರಿಹಾರದ ಮೊತ್ತವು ದ್ವಿಗುಣಗೊಳಿಸಿ 20 ಲಕ್ಷ ರೂಗಳನ್ನು ನೀಡಬೇಕು.

​ಅಂಗವಿಕಲತೆ, ದೃಷ್ಟಿ ಕಳೆದುಕೊಳ್ಳುವುದು ಇತ್ಯಾದಿ ಶಾಶ್ವತ ಶಾರೀರಿಕ ದೌರ್ಬಲ್ಯಗಳು ಉಂಟಾದ ಸಂದರ್ಭದಲ್ಲಿ ಕನಿಷ್ಠ 5 ಲಕ್ಷ ರೂಗಳನ್ನು ಅನುಗ್ರಹ ಪೂರಕ ಪರಿಹಾರವಾಗಿ ಸಂದಾಯ ಮಾಡುವುದು ಇಂತಹ ಅವಘಡಗಳು ಉಗ್ರಗಾಮಿಗಳು ಅಥವಾ ಸಮಾಜ ಘಾತುಕ ಶಕ್ತಿಗಳಿಂದ ಸಂಭವಿಸಿದಲ್ಲಿ ಈ ಪರಿಹಾರವನ್ನೂ ದ್ವಿಗುಣಗೊಳಿಸಬೇಕು.

EC ensures welfare of staff who deployed to election duty

ಇದರೊಂದಿಗೆ ರಾಜ್ಯ ಸರ್ಕಾರವು ಸರ್ಕಾರಿ ನೌಕರರಿಗೆ ಕೆಸಿಎಸ್‍ಆರ್ ನಿಯಮಗಳನ್ವಯ ಡಿ.ಸಿ.ಆರ್.ಜಿ. ನಿವೃತ್ತಿ ವೇತನ, ಕೆಜಿಐಡಿ, ಸಾಮೂಹಿಕ ಜೀವವಿಮೆ(ಜಿ.ಐ.ಎಸ್.) ಸೇರಿದಂತೆ ಲಭ್ಯವಿರುವ ಇತರೆ ಎಲ್ಲಾ ಅರ್ಹ ಸವಲತ್ತುಗಳನ್ನು ನೀಡಲಾಗುತ್ತಿದೆ.

ತುರ್ತು ವೈದ್ಯಕೀಯ ಸಂದರ್ಭದಲ್ಲಿ ವೈದ್ಯಕೀಯ ನೆರವು ನೀಡಲು ವೈದ್ಯರ ತಂಡವನ್ನು ನಿಯೋಜಿಸಬೇಕು. ಕರ್ತವ್ಯ ನಿರತ ಚುನಾವಣಾ ಸಿಬ್ಬಂದಿಗೆ ತುರ್ತು ಸಂದರ್ಭದಲ್ಲಿ ವೈದ್ಯಕೀಯ ನೆರವು ದೊರೆಯಬೇಕು.

ಚುನಾವಣಾ ಸಿಬ್ಬಂದಿಗೆ ಮತದಾನದ ದಿನವಷ್ಟೇ ಅಲ್ಲದೆ, ಚುನಾವಣಾ ಕಾರ್ಯಕ್ಕೆ ತೆರಳುವ ಮತ್ತು ಅಲ್ಲಿಂದ ಮರಳುವ ದಿನಗಳಂದು ರವಾನೆ ಕೇಂದ್ರಗಳಲ್ಲಿ ಹಾಗೂ ತರಬೇತಿ ದಿನಗಳಂದು ಸೂಕ್ತ ವೈದ್ಯಕೀಯ ವ್ಯವಸ್ಥೆ ಕಲ್ಪಿಸಬೇಕು. ಇದಕ್ಕೆ ಪೂರಕವಾಗಿ ಜಿಲ್ಲಾ ಆರೋಗ್ಯಾಧಿಕಾರಿಯನ್ನು ನೋಡಲ್ ಅಧಿಕಾರಿಯನ್ನಾಗಿ ನಿಯೋಜಿಸಬೇಕು ಎಂದು ಶಿಫಾರಸು ಮಾಡಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+