ಬೆಂಗಳೂರು ಹೈದರಾಬಾದ್ ವಂದೇ ಭಾರತ್ ಎಕ್ಸ್ಪ್ರೆಸ್ ವಿರುದ್ಧ ಅಸಮಾಧಾನ, ಕಾರಣ ತಿಳಿಯಿರಿ
ಬೆಂಗಳೂರು, ಅಕ್ಟೋಬರ್ 11: ಇತ್ತೀಚೆಗೆ ಆರಂಭವಾಗಿರುವ ಕಾಚಿಗುಡ- ಯಶವಂತಪುರ ನಡುವಿನ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನ ನಿರ್ವಹಣೆಯ ಬಗ್ಗೆ ಅಸಮಾಧಾನ ವ್ಯಕ್ತವಾಗಿದೆ.
ಬೆಂಗಳೂರು ಮತ್ತು ಹೈದರಾಬಾದ್ ನಡುವೆ ಪ್ರಯಾಣಿಸಲು ಕಾಚಿಗುಡ- ಯಶವಂತಪುರ ವಂದೇ ಭಾರತ್ ಎಕ್ಸ್ಪ್ರೆಸ್ ಅನ್ನು ಆಗಾಗ್ಗೆ ಬಳಸುವ ಐಟಿ ವೃತ್ತಿಪರರು ರೈಲಿನ ಆಗಮನ ಮತ್ತು ನಿರ್ಗಮನ ಸಮಯದ ಬಗ್ಗೆ ದೂರುಗಳನ್ನು ಎತ್ತಿದ್ದಾರೆ.

ರೈಲು ಕಾರ್ಯಾಚರಣೆಯ ಸಮಯ ಪ್ರಾಯೋಗಿಕವಾಗಿಲ್ಲ. 610 ಕಿಲೋಮೀಟರ್ಗಳ ದೂರವನ್ನು ಕ್ರಮಿಸಲು ರೈಲು ಕೇವಲ 8:30 ಗಂಟೆಗಳನ್ನು ತೆಗೆದುಕೊಳ್ಳುತ್ತದೆಯಾದರೂ, ಅದರ ನಿಗದಿತ ಕಾರ್ಯಾಚರಣೆಯ ಸಮಯದ ಕಾರಣದಿಂದಾಗಿ ಕೆಲಸದಿಂದ ಒಂದು ದಿನ ರಜೆ ತೆಗೆದುಕೊಳ್ಳುವಂತೆ ಆಗುತ್ತಿದೆ ಎಂದು ಐಟಿ ಉದ್ಯೋಗಿಗಳು ಹೇಳಿದ್ದಾರೆ.
ಕಾಚಿಗುಡ ಯಶವಂತಪುರ ನಡುವಿನ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಬೆಳಿಗ್ಗೆ 5:30 ಕ್ಕೆ ಕಾಚಿಗುಡದಿಂದ ಹೊರಟು ಮಧ್ಯಾಹ್ನ 2 ಗಂಟೆಗೆ ಯಶವಂತಪುರಕ್ಕೆ ಆಗಮಿಸುತ್ತದೆ. ಇದರಿಂದಾಗಿ ಟ್ರಾಫಿಕ್ನಿಂದ ಸಂಜೆಯ ಮೊದಲು ತಮ್ಮ ಕಚೇರಿಗೆ ತಲುಪಲು ಸಾಧ್ಯವಾಗುತ್ತಿಲ್ಲ. ಇದರಿಂದ ಐಟಿ ನೌಕರರು ಒಂದು ದಿನ ರಜೆ ಹಾಕಬೇಕಾದ ಅನಿವಾರ್ಯವಾಗುತ್ತದೆ ಎಂದು ತಿಳಿಸಿದ್ದಾರೆ.
2:45 ಕ್ಕೆ ಯಶವಂತಪುರದಿಂದ ಹೊರಡುವ ರೈಲು ಮತ್ತು ರಾತ್ರಿ 11:15 ಕ್ಕೆ ಕಾಚೇಗೌಡ ತಲುಪುವ ಮೂಲಕ ಹಿಂದಿರುಗುವ ಪ್ರಯಾಣದ ಸಮಯವೂ ಹೋಲುತ್ತದೆ. ಯಶವಂತಪುರಕ್ಕೆ 2:45 ಕ್ಕೆ ತಲುಪಲು ನೌಕರರು ಬೆಳಿಗ್ಗೆ ತಮ್ಮ ಸ್ಥಳಗಳನ್ನು ಬಿಡಬೇಕು. ಏಕೆಂದರೆ ಟ್ರಾಫಿಕ್ ನಡುವೆ ಯಶವಂತಪುರ ತಲುಪಲು ಸಮಯ ತೆಗೆದುಕೊಳ್ಳುತ್ತದೆ. ಕುಕಟ್ಪಲ್ಲಿ ಮತ್ತು ಮಿಯಾಪುರದಲ್ಲಿ ವಾಸಿಸುವ ಜನರಿಗೆ ಆಗಮನದ ಸಮಯವು ಸೂಕ್ತವಲ್ಲ. ಏಕೆಂದರೆ ರೈಲು ರಾತ್ರಿ 11:15 ಕ್ಕೆ ಕಾಚಿಗೌಡ ತಲುಪುತ್ತದೆ.
ಇತ್ತಿಚೆಗೆ ಆರಂಭಗೊಂಡ ಈ ವಂದೇ ಭಾರತ್ ರೈಲು ನಿಗದಿತ ಕಾರ್ಯಾಚರಣೆಯ ಸಮಯದೊಂದಿಗೆ ರೈಲು ವಾರದಲ್ಲಿ ಆರು ದಿನಗಳು ಕಾರ್ಯನಿರ್ವಹಿಸುತ್ತದೆ. ಬೆಂಗಳೂರು ಮತ್ತು ಹೈದರಾಬಾದ್ ನಡುವೆ ಸುಲಭವಾಗಿ ಪ್ರಯಾಣಿಸಲು ಐಟಿ ವೃತ್ತಿಪರರಿಗೆ ಸಹಾಯವಾಗುವಂತೆ ಕಾಚಿಗುಡ-ಯಶವಂತಪುರ ನಡುವೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಮೊದಲು ಉತ್ತಮ ಪ್ರತಿಕ್ರಯೆ ವ್ಯಕ್ತವಾಗಿತ್ತು.
ಅನೇಕ ಉದ್ಯೋಗಿಗಳು ನಿಯಮಿತ ರೈಲುಗಳನ್ನು ಆರಿಸಿಕೊಂಡಿದ್ದರು. ಇದು ಎರಡೂ ನಗರಗಳ ನಡುವೆ ಪ್ರಯಾಣಿಸಲು 10 ರಿಂದ 11 ಗಂಟೆಗಳನ್ನು ತೆಗೆದುಕೊಳ್ಳುತ್ತಿತ್ತು. ಇವು ಉದ್ಯೋಗಿಗಳಿಗೆ ಹೆಚ್ಚು ಅನುಕೂಲಕರ ಸಮಯವನ್ನು ನೀಡುತ್ತದೆ. ಹೀಗಾಗಿ ವಂದೇ ಭಾರತ್ ರೈಲಿನ ಸಮಯವನ್ನು ಬದಲಾಯಿಸಲು ಅನೇಕ ನೌಕರರು ರೈಲ್ವೆ ಅಧಿಕಾರಿಗಳಿಗೆ ವಿನಂತಿಸಿದ್ದಾರೆ.
-
UGCET ಅಭ್ಯರ್ಥಿಗಳ ಗಮನಕ್ಕೆ: ಇದೇ ತಿಂಗಳು CET ಪರೀಕ್ಷೆ, ರಿಲೀಸಾದ ನಕಲಿ ಲಿಂಕ್ ಬಗ್ಗೆ ಎಚ್ಚರ -
Sleeper Vande Bharat; ಬೆಂಗಳೂರು-ಮುಂಬೈ ಸ್ಲೀಪರ್ ವಂದೇ ಭಾರತ್ಗೆ ಕೇಂದ್ರ ಅಸ್ತು, ಕರ್ನಾಟಕಕ್ಕೆ ಏನೆಲ್ಲ ಲಾಭ? -
ಮೈಸೂರು-ಬೆಂಗಳೂರು ರೈಲು ಪ್ರಯಾಣಿಕರಿಗೆ ಗುಡ್ನ್ಯೂಸ್ ಕೊಟ್ಟ ವಿ.ಸೋಮಣ್ಣ -
Karnataka Rains: ಸಮುದ್ರ ಮಲ್ಮೈ ಸುಳಿಗಾಳಿ, ಏಪ್ರಿಲ್ 14-17ರವರೆಗೆ ಬೆಂಗಳೂರು, ಇತರ ಜಿಲ್ಲೆಗಳಲ್ಲಿ ಮಳೆ -
PUC ವಿಜ್ಞಾನ ವಿಭಾಗದಲ್ಲಿ ಶೇ.91.69ರಷ್ಟು ದಾಖಲೆ ಫಲಿತಾಂಶ: ಇವರೇ 599 ಅಂಕ ಗಳಿಸಿದ ಟಾಪರ್ -
ದ್ವಿತೀಯ ಪಿಯುಸಿ 'ಕಲಾ' ವಿಭಾಗದಲ್ಲಿ ಶೇ.72.86 ರಷ್ಟು ಫಲಿತಾಂಶ: ಟಾಪರ್ಸ್ ಲಿಸ್ಟ್ ಇಲ್ಲಿದೆ -
2nd PUC 'ವಾಣಿಜ್ಯ' ವಿಭಾಗದಲ್ಲಿ ಶೇ.88.4ರಷ್ಟು ಸಾಧನೆ: ಇಬ್ಬರಿಗೆ 600ಕ್ಕೆ 600 ಅಂಕ, ಇವರೇ ಟಾಪರ್ಸ್ -
2nd PUC ಫಲಿತಾಂಶದಲ್ಲಿ ಶೇ. 13ರಷ್ಟು ಏರಿಕೆ; ಕಲಿಕೆಯಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳೇ ಫಸ್ಟ್: ಮಧು ಬಂಗಾರಪ್ಪ -
Chandrika Dixit: ಒಂದು ರಾತ್ರಿ ನನ್ನ ಜೊತೆ ಮಲಗಿದ್ರೆ 50 ಲಕ್ಷ ಕೊಡ್ತೇನೆ; ಚಂದ್ರಿಕಾಗೆ ಖ್ಯಾತ ಉದ್ಯಮಿ ಆಫರ್ -
2025ರ ದ್ವಿತೀಯ PUC ಪರೀಕ್ಷೆಯಲ್ಲಿ ವಿಜ್ಞಾನ, ವಾಣಿಜ್ಯ, ಕಲಾ ವಿಭಾಗದಲ್ಲಿ ಮಿಂಚಿದ ಪ್ರತಿಭೆಗಳು; ಇಲ್ಲಿದೆ ಟಾಪರ್ಗಳ ಪಟ್ಟಿ -
Ankita Jayaram: ನಟನೆಯ ನಡುವೆಯೂ ದ್ವಿತೀಯ ಪಿಯುಸಿಯಲ್ಲಿ ಕರ್ಣ ಧಾರಾವಾಹಿ ಖ್ಯಾತಿಯ ನಟಿ ಅಂಕಿತಾ ಜಯರಾಮ್ ಅಮೋಘ ಸಾಧನೆ -
Gold Rate April 9: ಚಿನ್ನ - ಬೆಳ್ಳಿ ಬೆಲೆಯಲ್ಲಿ ಭರ್ಜರಿ ಇಳಿಕೆ: ಬಂಗಾರ ಖರೀದಿದಾರರಿಗೆ ಸಂತೋಷದ ಸುದ್ದಿ











Click it and Unblock the Notifications