ಕೋಲಾರ, ಹಾಸನ, ರಾಯಚೂರಿನಲ್ಲಿ ವಿಮಾನ ನಿಲ್ದಾಣಗಳ ಅಭಿವೃದ್ಧಿ
ಬೆಂಗಳೂರು, ಸೆಪ್ಟೆಂಬರ್ 08: ನಾಗರಿಕ ವಿಮಾನಯಾನ ಸಚಿವಾಲಯವು ದೇಶಾದ್ಯಂತದ ನೂತನ ವಿಮಾನ ನಿಲ್ದಾಣ ಸ್ಥಳಗಳನ್ನು ನಿರ್ಮಿಸಲು ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಅವುಗಳಲ್ಲಿ ಕರ್ನಾಟಕದ ಕೋಲಾರ, ಹಾಸನ ಹಾಗೂ ರಾಯಚೂರು ಜಿಲ್ಲೆಗಳು ಸ್ಥಾನ ಪಡೆದಿವೆ.
ಅವುಗಳು ಕಡಿಮೆ ಸೇವೆ ಅಥವಾ ಸೇವೆ ಸಲ್ಲಿಸದ ವಾಯು ನೆಲೆಗಳಾಗಿ ಅರ್ಹತೆ ಪಡೆದಿವೆ. ಕೇಂದ್ರ ಸರ್ಕಾರದ ಉಡಾನ್ ಯೋಜನೆಯ ಮುಂದಿನ ಸುತ್ತಿನಲ್ಲಿ ಅವುಗಳನ್ನು ಅಭಿವೃದ್ಧಿಪಡಿಸಲು ಪ್ರಸ್ತಾಪಿಸಿದೆ. ಇಲ್ಲಿ ಕರ್ನಾಟಕದ ಹಾಸನ, ಕೋಲಾರ ಮತ್ತು ರಾಯಚೂರು ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು, ಶೀಘ್ರದಲ್ಲೇ ವಿಮಾನ ನಿಲ್ದಾಣಗಳನ್ನು ಅಭಿವೃದ್ಧಿಪಡಿಸಬಹುದು ಎನ್ನಲಾಗಿದೆ.
ಲೋಕಸಭೆಯಲ್ಲಿ ವನ್ಯಜೀವಿ (ರಕ್ಷಣೆ) ತಿದ್ದುಪಡಿ ಮಸೂದೆ ಅಂಗೀಕಾರ
ವನ್ಯಜೀವಿ ಅಭಯಾರಣ್ಯಗಳು, ಪ್ರವಾಸಿ ತಾಣಗಳು ಮತ್ತು ಧಾರ್ಮಿಕ ಸ್ಥಳಗಳಿಗೆ ಅವುಗಳ ಸಾಮೀಪ್ಯವನ್ನು ಆಧರಿಸಿ ಸರ್ಕಾರವು ಈ ಸ್ಥಳಗಳನ್ನು ವಿಶ್ಲೇಷಿಸಿದೆ. ಹಾಸನ ಮತ್ತು ಕೋಲಾರ ಆಧ್ಯಾತ್ಮಿಕ ಸ್ಥಳಗಳಿಗೆ ಹತ್ತಿರವಾಗಿದ್ದರೆ, ರಾಯಚೂರು ಪ್ರವಾಸಿ ತಾಣಗಳಿಗೆ ಹತ್ತಿರವಾಗಿದೆ. ಪಟ್ಟಿಯು ವನ್ಯಜೀವಿ ಅಭಯಾರಣ್ಯಗಳಿಗೆ ಸಮೀಪದಲ್ಲಿ 10 ಸ್ಥಳಗಳನ್ನು ಹೊಂದಿದ್ದು, ಪ್ರವಾಸಿ ತಾಣಗಳಿಗೆ ಸಮೀಪದಲ್ಲಿ 29 ಮತ್ತು ಆಧ್ಯಾತ್ಮಿಕ ಸ್ಥಳಗಳಿಗೆ ಸಮೀಪದಲ್ಲಿ 15 ಒಟ್ಟು 54 ವಿಮಾನ ನಿಲ್ದಾಣಗಳನ್ನು ಪಟ್ಟಿಮಾಡಿದೆ.
ಈ ಪಟ್ಟಿಯಲ್ಲಿ ಮಧ್ಯಪ್ರದೇಶದಿಂದ 11 ಸ್ಥಾನಗಳು, ರಾಜಸ್ಥಾನದಿಂದ 10 ಮತ್ತು ಬಿಹಾರದಿಂದ ಏಳು ಸ್ಥಾನಗಳನ್ನು ಒಳಗೊಂಡಿದೆ. ಭಾರತದ ವನ್ಯಜೀವಿ ಮತ್ತು ಪ್ರವಾಸಿ ತಾಣಗಳ ಸಮೀಪವಿರುವ ಪ್ರಸ್ತಾವಿತ ವಿಮಾನ ನಿಲ್ದಾಣಗಳನ್ನು ಉಡಾನ್ನ ಮುಂದಿನ ಸುತ್ತುಗಳಲ್ಲಿ ಪರಿಗಣಿಸಲಾಗುವುದು ಎಂದು ನಾಗರಿಕ ವಿಮಾನಯಾನ ಸಚಿವಾಲಯ ಹೇಳಿದೆ. ಕಾರ್ಯನಿರ್ವಹಣೆಯಿಲ್ಲದ ವಿಮಾನ ನಿಲ್ದಾಣಗಳನ್ನು ಪ್ರವಾಸಿ, ವನ್ಯಜೀವಿ, ಧಾರ್ಮಿಕ ಸ್ಥಳಗಳು ಮತ್ತು 54 ವಿಮಾನ ನಿಲ್ದಾಣಗಳಿಗೆ ಅದರ ಸಾಮೀಪ್ಯಕ್ಕಾಗಿ ವಿಶ್ಲೇಷಿಸಲಾಗಿದೆ. ಇವನ್ನು ಸಂಭಾವ್ಯ ವಿಮಾನ ನಿಲ್ದಾಣಗಳೆಂದು ಗುರುತಿಸಲಾಗಿದೆ.
ಉಡಾನ್ ಎಂದರೆ ಉದೇ ದೇಶ್ ಕಾ ಆಮ್ ನಾಗರಿಕ್, ಇದು ಅಭಿವೃದ್ಧಿ ಮತ್ತು ಉತ್ತಮ ಪ್ರಾದೇಶಿಕ ಸಂಪರ್ಕಕ್ಕಾಗಿ ದೇಶದಾದ್ಯಂತ ಕಡಿಮೆ ಸೇವೆಯ ವಿಮಾನ ಮಾರ್ಗಗಳನ್ನು ಗುರುತಿಸುತ್ತದೆ. ಈ ಕಾರ್ಯಕ್ರಮವು ಸಬ್ಸಿಡಿ ದರದಲ್ಲಿ ವಿಮಾನಗಳನ್ನು ಒದಗಿಸುವುದರಿಂದ ಸಮಾಜದ ಎಲ್ಲಾ ವರ್ಗಗಳಿಗೆ ವಿಮಾನ ಪ್ರಯಾಣವನ್ನು ಕೈಗೆಟುಕುವಂತೆ ಮಾಡುವ ಉದ್ದೇಶ ಹೊಂದಿದೆ.
ನಾಗರಿಕ ವಿಮಾನಯಾನ ಸಚಿವಾಲಯದ ಪ್ರಮುಖ ಕಾರ್ಯಕ್ರಮವನ್ನು ಪ್ರಾರಂಭಿಸಿದ ಐದು ವರ್ಷಗಳಲ್ಲಿ, ಇದು ಆಗಸ್ಟ್ 4 ರ ಹೊತ್ತಿಗೆ 1 ಕೋಟಿ ಪ್ರಯಾಣಿಕರಿಗೆ ಪ್ರಯೋಜನವನ್ನು ನೀಡಿದೆ ಎಂದು ಟ್ರಾವೆಲ್ ಡೈಲಿ ಮೀಡಿಯಾದ ವರದಿ ತಿಳಿಸಿದೆ.